ಭಾರತದ ವಾಯವ್ಯ, ಮಧ್ಯ, ಪೂರ್ವ ಭಾಗಗಳಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗೆ: ಬಿಸಿ ಅಲೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ನವದೆಹಲಿ: ಭಾರತದ ಹಲವಾರು ಭಾಗಗಳು ಬೇಸಿಗೆಯ ಉಷ್ಣತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಭಾರತೀಯ ಹವಾಮಾನ ಇಲಾಖೆಯು ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತಕ್ಕೆ ಗುರುವಾರ ಬಿಸಿ (ಶಾಖ) ಅಲೆಯ ಎಚ್ಚರಿಕೆಯನ್ನು ನೀಡಿದೆ. ಬುಧವಾರದ ವೇಳೆಗೆ ಈ ಭಾಗಗಳಲ್ಲಿ ಗರಿಷ್ಠ ತಾಪಮಾನ 40 ರಿಂದ 45 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಗಮನಿಸಿದೆ. ಭಾರತದಲ್ಲಿ … Continued

ರಾಮ- ಸೀತೆಯರ ಪ್ರೀತಿ ಅಲೌಕಿಕ, ಧರ್ಮಸಮ್ಮತ : ರಾಘವೇಶ್ವರ ಸ್ವಾಮೀಜಿ

ಕುಮಟಾ: ರಾಮ- ಸೀತೆಯರ ಪ್ರೀತಿಯನ್ನು ಕ್ಷುದ್ರ ದೃಷ್ಟಿಯಿಂದ ನೋಡದೇ ಅದನ್ನು ಮೂಲ ಪ್ರಕೃತಿ ಮತ್ತು ಪರಮ ಪುರುಷನ ಪ್ರೀತಿಯಾಗಿ ಲೌಕಿಕ ದೃಷ್ಟಿಯಿಂದ ನೋಡಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಐದು ದಿನಗಳ ನಡೆಯುತ್ತಿರುವ ‘ರಾಮಸೇತು’ ರಾಮಕಥಾ ಸರಣಿಯ … Continued

ಮಲ್ಲಾಪುರದಲ್ಲಿ ಏಪ್ರಿಲ್‌ 30ರಂದು ಭಾವಗೀತೆ-ಭಕ್ತಿಗೀತೆಗಳ ಪ್ರಸ್ತುತಿ ಭಾವಧಾರಾ ಕಾರ್ಯಕ್ರಮ

ಕುಮಟಾ: ಕೂಜಳ್ಳಿಯ ಷಡಕ್ಷರಿ ಗವಾಯಿಗಳ ಅಕಾಡೆಮಿ ವತಿಯಿಂದ ಭಾವಗೀತೆ ಹಾಗೂ ಭಕ್ತಿಗೀತೆಗಳ ಕಾರ್ಯಕ್ರಮ ಭಾವಧಾರಾ ಏಪ್ರಿಲ್‌  30ರಂದು ಕೂಜಳ್ಳಿ ಸಮೀಪದ ಮಲ್ಲಾಪುರದ ಗುರುಮಠದಲ್ಲಿ ನಡೆಯಲಿದೆ. ಏಪ್ರಿಲ್‌ 30ರಂದು ಮಧ್ಯಾಹ್ನ 3ರಿಂದ ರಾತ್ರಿ 8ರ ವರೆಗೆ ಕಾರ್ಯಕ್ರಮ ನಡೆಯಲಿದ್ದು ಅನೇಕ ಹಿರಿಯ-ಕಿರಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಶ್ರೀಲತಾ ಗುರುರಾಜ ಆಡುಕಳ, ಗಣೇಶ ಭಟ್‌ ಕಡತೋಕ, ಅಶ್ವಿನಿ ಕುಮಟಾ, ಧನ್ಯಾ … Continued

UPIನಲ್ಲಿ ಹಣ ಪಾವತಿ ಮಾಡುವ ಭಾರತದ ಬಳಕೆದಾರರು, ವ್ಯಾಪಾರಿಗಳಿಗೆ ಶೀಘ್ರದಲ್ಲೇ ಕ್ಯಾಶ್‌ಬ್ಯಾಕ್ ಆಫರ್‌ ನೀಡಲಿದೆ ವಾಟ್ಸಾಪ್‌…!

ಹೆಚ್ಚಿನ ಬಳಕೆದಾರರು ಮತ್ತು ವ್ಯಾಪಾರಿಗಳನ್ನು ತನ್ನ ಪಾವತಿ ವೇದಿಕೆಗೆ (payments platform) ಸೆಳೆಯುವ ಪ್ರಯತ್ನದಲ್ಲಿ, ವಾಟ್ಸಪ್‌ (WhatsApp) ಈ ತಿಂಗಳಿನಿಂದ ಕ್ಯಾಶ್‌ಬ್ಯಾಕ್ ಯೋಜನೆಯನ್ನು ಹೊರತರಲಿದೆ. ರಾಯಿಟರ್ಸ್ ವರದಿ ಮಾಡಿದಂತೆ, ವಾಟ್ಸಪ್‌ (WhatsApp)ನ ಕ್ಯಾಶ್‌ಬ್ಯಾಕ್ ಪ್ರೋಗ್ರಾಂ ಅದರ ಪಾವತಿ ಸೇವೆಗಾಗಿ ಬಳಕೆದಾರರ ನೆಲೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ಇದು ಭಾರತದ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಮೂಲಸೌಕರ್ಯವನ್ನು … Continued

ದೆಹಲಿ ಜಹಾಂಗೀರ್ ಪುರಿ ಗಲಭೆ: ಕತ್ತಿ ಝಳಪಿಸಿದ್ದ ಪ್ರಮುಖ ಆರೋಪಿ ಸೇರಿ ಇಬ್ಬರ ಬಂಧನ

ನವದೆಹಲಿ: ವಾಯುವ್ಯ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಈ ತಿಂಗಳಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಇನ್ನೂ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಈ ಪ್ರಕರಣದಲ್ಲಿ ಸುಮಾರು 30 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳಾದ ಜಹಾಂಗೀರಪುರಿ ನಿವಾಸಿಗಳಾದ ಜಾಫರ್ (34) ಮತ್ತು ಬಾಬುದ್ದೀನ್ ಅಲಿಯಾಸ್ ಬಾಬು (43) … Continued

ಸಿಎಂ ಬೊಮ್ಮಾಯಿ ನಾಳೆ ದೆಹಲಿಗೆ

ಬೆಂಗಳೂರು: ನವದೆಹಲಿಯಲ್ಲಿ ಎಲ್ಲ ಹೈಕೋರ್ಟ್‍ಗಳ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಮುಖ್ಯಮಂತ್ರಿಗಳ ಸಭೆ ಶನಿವಾರ ನಡೆಯಲಿದ್ದು, ನಾಳೆ ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶನಿವಾರ ಎಲ್ಲ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ. ತಮಗೂ ಕೂಡ ಆಹ್ವಾನ ಬಂದಿರುವುದರಿಂದ ಈ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದೇನೆ ಎಂದು ತಿಳಿಸಿದರು. … Continued

ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖ್ಯಸ್ಥರ ಸ್ಥಾನಕ್ಕೆ ಕಮಲನಾಥ್ ರಾಜೀನಾಮೆ

ಭೋಪಾಲ: ಮಧ್ಯಪ್ರದೇಶ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹದ ವದಂತಿಗಳ ನಡುವೆ, ಕಮಲ್ ನಾಥ್ ಅವರು ಗುರುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಮತ್ತು ಇನ್ನು ಮುಂದೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವುದಿಲ್ಲ ಎಂದು ಹೇಳಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸಿಎಲ್‌ಪಿ ನಾಯಕರಾಗಿ ಅವರ ಕೊಡುಗೆಯನ್ನು ಶ್ಲಾಘಿಸಿ ಅವರ ರಾಜೀನಾಮೆಯನ್ನು … Continued

ಕಪ್ಪು ಸಮುದ್ರದ ಪ್ರಮುಖ ನೌಕಾ ನೆಲೆ ರಕ್ಷಣೆಗೆ ತರಬೇತಿ ಪಡೆದ ಮಿಲಿಟರಿ ಡಾಲ್ಫಿನ್‌ಗಳನ್ನು ನಿಯೋಜಿಸಿರುವ ರಷ್ಯಾ…..!

ರಷ್ಯಾವು ಕಪ್ಪು ಸಮುದ್ರದಲ್ಲಿ ತನ್ನ ನೌಕಾ ನೆಲೆಯನ್ನು ರಕ್ಷಿಸಲು ರಷ್ಯಾವು ಡಾಲ್ಫಿನ್‌ಗಳ ಸೈನ್ಯವನ್ನು ನಿಯೋಜಿಸಿದೆ…! ಅಮೆರಿಕ ನೇವಲ್ ಇನ್‌ಸ್ಟಿಟ್ಯೂಟ್ (USNI) ಪ್ರಕಾರ, ಎರಡು ತೇಲುವ ಡಾಲ್ಫಿನ್ ಪೆನ್ನುಗಳನ್ನು ಸೆವಾಸ್ಟೊಪೋಲ್ ಬಂದರಿನ ಪ್ರವೇಶದ್ವಾರದಲ್ಲಿ ಇರಿಸಲಾಗಿದೆ, ಇದು ಕಪ್ಪು ಸಮುದ್ರದಲ್ಲಿ ನೆಲೆಗೊಂಡಿರುವ ರಷ್ಯಾದ ಅತ್ಯಂತ ಮಹತ್ವದ ನೌಕಾಪಡೆಯಾಗಿದೆ. ಅಮೆರಿಕ ನೇವಲ್ ಇನ್‌ಸ್ಟಿಟ್ಯೂಟ್ ವರದಿಯು ರಷ್ಯಾದ ನೌಕಾ ನೆಲೆಯ ಉಪಗ್ರಹ … Continued

ಮದುವೆ ಕಾರ್ಯಕ್ರಮದಲ್ಲಿ ಜೀವಂತ ನಾಗರ ಹಾವಿನೊಂದಿಗೆ ‘ನಾಗಿನ್ ಡ್ಯಾನ್ಸ್’ : ಐವರು ಪೊಲೀಸ್‌ ವಶಕ್ಕೆ…ವೀಕ್ಷಿಸಿ

ಜೀವಂತ ನಾಗರಹಾವು ಬಳಸಿ ಮದುವೆ ಮೆರವಣಿಗೆಯಲ್ಲಿ ‘ಮೈನ್ ನಾಗಿನ್’ ಹಾಡಿಗೆ ನೃತ್ಯ ಮಾಡಿದ ಐವರನ್ನು ಒಡಿಶಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊವು ಬುಧವಾರ ಮಯೂರ್‌ಭಂಜ್ ಜಿಲ್ಲೆಯ ಕರಂಜಿಯಾ ಪಟ್ಟಣದ ಬೀದಿಗಳಲ್ಲಿ ಬಾರಾತಿಗಳು ತಮ್ಮ ಬಿದಿರಿನ ಬುಟ್ಟಿಯ ಮುಚ್ಚಳವನ್ನು ತೆರೆದು ಹಾವನ್ನು ಪ್ರದರ್ಶಿಸುವ ಮೂಲಕ ಬಾಡಿಗೆಗೆ ಪಡೆದ ಹಾವಿನೊಂದಿಗೆ ನೃತ್ಯ ಮಾಡುವುದನ್ನು … Continued

ಯಾದಗಿರಿ: ಆಟೋ ಹತ್ತಿದ ಯುವತಿಯನ್ನು ಬೇರೆಡೆ ಕರೆದೊಯ್ದು ರೇಪ್​-ವೀಡಿಯೋ ಚಿತ್ರೀಕರಿಸಿ ಯುವತಿಗೆ ಬೆದರಿಕೆ:ದೂರು ದಾಖಲು

ಯಾದಗಿರಿ: ಆಟೋದಲ್ಲಿ ತೆರಳುತ್ತಿದ್ದ ಯುವತಿ ಮೇಲೆ ಹಾಡಹಗಲೇ ಆಟೋ ಚಾಲಕ ಮತ್ತು ಆತನ ಸ್ನೇಹಿತ ಅತ್ಯಾಚಾರವೆಸಗಿ ಅದನ್ನು ವೀಡಿಯೋ ಚಿತ್ರೀಕರಿಸಿ ಹೆದರಿಸಿದ ಪೈಶಾಚಿಕ ಕೃತ್ಯ ಯಾದಗಿರಿ ತಾಲೂಕಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಈ ಕುರಿತು ಸಂತ್ರಸ್ತೆ ಚಿಕ್ಕಪ್ಪ ದೂರು ದಾಖಲಿಸಿದ್ದಾರೆ. ಮನೆ ಕೆಲಸ ಮಾಡಿಕೊಂಡಿದ್ದ ಯಾದಗಿರಿ ತಾಲೂಕಿನ ಹಳ್ಳಿಯೊಂದರ ಯುವತಿಯೊಬ್ಬಳು ಏ.26ರಂದು ಯಾದಗಿರಿ ನಗರಕ್ಕೆ ತೆರಳಲೆಂದು … Continued