ಭಾರತದ ಜೊತೆ ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಚೀನಾ ಅಸಮಾಧಾನ? ಇದಕ್ಕೆ ಕಾರಣ ಏನು ಗೊತ್ತೆ…?

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಹಲವಾರು ವಾಯುನೆಲೆಗಳು ಮತ್ತು ಇತರ ಮಿಲಿಟಿರಿ ನೆಲೆಗಳು ಹಾನಿಗೊಳಗಾದವು. ಅದರ ನಂತರ ಪಾಕಿಸ್ತಾನ ಅಮೆರಿಕಕ್ಕೆ ಮಧ್ಯಪ್ರವೇಶಿಸುವಂತೆ ದುಂಬಾಲು ಬಿದ್ದ ನಂತರ ಕದನ ವಿರಾಮ ಘೋಷಣೆಯಾಯಿತು. ಅಮೆರಿಕ ಈ ಕದನ ವಿರಾಮದ ಕ್ರೆಡಿಟ್‌ ತೆಗೆದುಕೊಳ್ಳಲು ಪ್ರಯತ್ನಿಸಿದರೆ ಪಾಕಿಸ್ತಾನದ ನಡೆಗೆ ಅದರ ಆಪ್ತಮಿತ್ರ ಚೀನಾ ಈಗ ತೀವ್ರ ಅಸಮಾಧಾನಗೊಂಡಿತು ಎಂಬ ವರದಿಗಳಿವೆ.
ಕದನ ವಿರಾಮ ಘೋಷಣೆಯಾದ ನಂತರ ಆ ದಿನ ಭಾರತ, ಪಾಕಿಸ್ತಾನ, ಅಮೆರಿಕ ಹಾಗೂ ಚೀನಾದ ಹೇಳಿಕೆಗಳನ್ನು ಬಿಡುಗಡೆ ಮಾಡಿದವು. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಅವರು ತಕ್ಷಣದ ಕದನ ವಿರಾಮವನ್ನು ಕೋರಿ ಭಾರತದ ಡಿಜಿಎಂಒಗೆ ಫೋನ್ ಕರೆ ಮಾಡಿದ್ದಾರೆ ಎಂಬ ಭಾರತದ ಹೇಳಿಕೆಯಲ್ಲಿ ನಿರಾಕರಿಸಲಾಗದ ಸಂಗತಿಯಿದ್ದರೂ, ಅಮೆರಿಕ ಮತ್ತು ಚೀನಾ ತಮ್ಮದೇ ಆದ ಉದ್ದೇಶಗಳಿಂದಾಗಿ ಬೇರೆ ಬೇರೆ ಹೇಳಿಕೆಗಳನ್ನು ನೀಡಿದವು..
ಕದನ ವಿರಾಮಕ್ಕೆ “ಮಧ್ಯಸ್ಥಿಕೆ ವಹಿಸಿದ್ದು” ತಮ್ಮ ಆಡಳಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಣೆ ಮಾಡಿದ ಮೊದಲಿಗರು. ಆದರೆ ಭಾರತ ಈ ಹೇಳಿಕೆಯಿಂದ ದೂರ ಉಳಿಯಿತು. ಅಧ್ಯಕ್ಷ ಟ್ರಂಪ್ ಒಮ್ಮೆಗೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮದ ಘೋಷಣೆ ಮಾಡಿದರು.ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಷಿಯಲ್‌ ನಲ್ಲಿ ಅಧ್ಯಕ್ಷ ಟ್ರಂಪ್, “ಅಮೆರಿಕ ಮಧ್ಯಸ್ಥಿಕೆಯಲ್ಲಿ ದೀರ್ಘ ಮಾತುಕತೆಯ ನಂತರ, ಭಾರತ ಮತ್ತು ಪಾಕಿಸ್ತಾನ ಸಂಪೂರ್ಣ ಮತ್ತು ತಕ್ಷಣದ ಕದನ ವಿರಾಮದ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಪ್ರಕಟಿಸಲು ನನಗೆ ಸಂತೋಷವಾಗಿದೆ. ಎರಡೂ ದೇಶಗಳಿಗೆ ಅಭಿನಂದನೆಗಳು” ಎಂದು ಬರೆದಿದ್ದಾರೆ.

ಪಾಕಿಸ್ತಾನದ ಬಗ್ಗೆ ಅಸಮಾಧಾನಗೊಂಡ ಚೀನಾ ?
ಮೇ 9 ರಂದು ಅಮೆರಿಕ, ಪಾಕಿಸ್ತಾನ ಮತ್ತು ಭಾರತದಲ್ಲಿ ಹಾಟ್‌ಲೈನ್‌ಗಳು ಕಾರ್ಯನಿರತವಾಗಿದ್ದರಿಂದ, ಚೀನಾದ ಹಾಟ್‌ಲೈನ್‌ಗಳು ಬ್ಯುಸಿಯಲ್ಲಿಯೇ ಇದ್ದವು. ಇದು ಪಾಕಿಸ್ತಾನವು ತನ್ನ “ಸರ್ವಕಾಲಿಕ ಮಿತ್ರ” ಎಂದು ಕರೆಯುವ ಚೀನಾಕ್ಕೆ ಇಷ್ಟವಾಗಲಿಲ್ಲ ಎಂದು ಹೇಳಲಾಗುತ್ತದೆ. ಡೊನಾಲ್ಡ್ ಟ್ರಂಪ್ ಅವರ ಘೋಷಣೆ ಮತ್ತು ಕದನ ವಿರಾಮಕ್ಕೆ ಅಮೆರಿಕ ಕ್ರೆಡಿಟ್ ತೆಗೆದುಕೊಂಡಿದ್ದು, ಜಾಗತಿಕ ಶಾಂತಿ ದೂತನಾಗಿ ಬಿಂಬಿಸಿಕೊಳ್ಳಲು ಬಯಸುವ ಚೀನಾದ ಕೋಪಕ್ಕೆ ಕಾರಣ ಎಂದು ಹೇಳಲಾಗಿದೆ.
ದಕ್ಷಿಣ ಏಷ್ಯಾ ತನ್ನ ಪ್ರಭಾವದ ವಲಯದಲ್ಲಿದೆ ಎಂದು ಎಲ್ಲರೂ ಪರಿಗಣಿಸಬೇಕು ಎಂದು ಬಯಸುವ ಚೀನಾವನ್ನು ಮಧ್ಯಸ್ಥಿಕೆಗಾಗಿ ಆಹ್ವಾನಿಸುವ ಬದಲು, ಸಂಘರ್ಷದ ಶಮನಕ್ಕೆ ಅಮೆರಿಕದ ಮೊರೆ ಹೋಗಿದ್ದಕ್ಕಾಗಿ ಪಾಕಿಸ್ತಾನದ ಬಗ್ಗೆ ಚೀನಾ ಅಸಮಾಧಾನಗೊಂಡಿದೆ ಎಂದು ಹೇಳಲಾಗಿದೆ.
ಇದು ಗೊತ್ತಾದ ನಂತರ ಚೀನಾ ಪಾಕಿಸ್ತಾನಕ್ಕೆ ಕರೆ ಮಾಡಿತು. ಅದರ ನಂತರ, ಘಟನೆಗಳ ಕಾಲಾನುಕ್ರಮದ ಪ್ರಕಾರ, ಟ್ರಂಪ್ ಘೋಷಿಸಿದ ಕದನ ವಿರಾಮವನ್ನು ಪಾಕಿಸ್ತಾನ ನಿರ್ಲಕ್ಷಿಸುವಂತೆ ಮಾಡಿತು. ಚೀನಾದ ಜೊತೆ ಮಾತುಕತೆಯ ನಂತರ ಹಾಗೂ ಕದನ ವಿರಾಮ ಒಪ್ಪಿಕೊಂಡ ಕೆಲವೇ ಗಂಟೆಗಳ ಬಳಿಕ ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಗುಜರಾತ್‌ಗಳ ಮೇಲೆ ಪಾಕಿಸ್ತಾನದ ಡ್ರೋನ್‌ಗಳು ಭಾರತದ ವಾಯುಪ್ರದೇಶವನ್ನು ಉಲ್ಲಂಘಿಸಿತು. ಪಾಕಿಸ್ತಾನವು ಚೀನಾದೊಂದಿಗೆ ಮಾತುಕತೆ ನಡೆಸುತ್ತಿರುವ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಕಚೇರಿಯಿಂದ ಹೇಳಿಕೆ ಬಿಡುಗಡೆಯಾಯಿತು. ಚೀನಾವು ಪಾಕಿಸ್ತಾನಕ್ಕೆ ಬಹಿರಂಗ ಬೆಂಬಲ ನೀಡಿರುವುದನ್ನು ಒತ್ತಿಹೇಳಿ ನೀಡಿದ ಹೇಳಿಕೆಯ ಸಮಯವು ರಾಜತಾಂತ್ರಿಕ ವಲಯಗಳಲ್ಲಿ ಹುಬ್ಬೇರುವಂತೆ ಮಾಡಿತು.

ಪ್ರಮುಖ ಸುದ್ದಿ :-   ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?

ಸ್ವಲ್ಪ ಸಮಯದ ನಂತರ, ಪಾಕಿಸ್ತಾನ ಮತ್ತು ಪಿಒಕೆಯಿಂದ ಡ್ರೋನ್‌ಗಳು ದಾಳಿ ಮಾಡುತ್ತಲೇ ಇದ್ದಾಗ, ಚೀನಾದ ವಿದೇಶಾಂಗ ಸಚಿವಾಲಯವು ಮತ್ತೊಂದು ಹೇಳಿಕೆಯನ್ನು ಬಿಡುಗಡೆ ಮಾಡಿತು, ಅದರ ವಿದೇಶಾಂಗ ಸಚಿವ ವಾಂಗ್ ಯಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತನಾಡಿದದ ನಂತರ ಈ ಹೇಳಿಕೆಯನ್ನು ಬಿಡುಗಡೆ ಮಾಡಿತು. ಅದರಲ್ಲಿ ದೋವಲ್ ಏನು ಹೇಳಿದರು ಎಂಬುದರ ಬಗ್ಗೆ ಸ್ವಲ್ಪ ಉಲ್ಲೇಖದೊಂದಿಗೆ ಚೀನಾ ಬಿಡುಗಡೆ ಮಾಡಿದ ಈ ಹೇಳಿಕೆಗೆ ಭಾರತ ಪ್ರತಿಕ್ರಿಯಿಸಿಲ್ಲ.
ಕದನ ವಿರಾಮದಲ್ಲಿ ಚೀನಾದ ಒಳಗೊಳ್ಳುವಿಕೆಯನ್ನು ಪ್ರದರ್ಶಿಸುವ ಈ ಹೇಳಿಕೆಗಳ ಬಿಡುಗಡೆಯ ನಂತರವೇ, ಪಾಕಿಸ್ತಾನದ ಡ್ರೋನ್‌ಗಳು ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯ ಮೇಲಿನ ಉಲ್ಲಂಘನೆಗಳನ್ನು ನಿಲ್ಲಿಸಿದವು. ಕೆಲವು ರಕ್ಷಣಾ ವಿಶ್ಲೇಷಕರು ಪಾಕಿಸ್ತಾನದ ಈ ಕ್ರಮವು ಚೀನಾವನ್ನು ತೃಪ್ತಿಪಡಿಸುವ ಸಾಂಕೇತಿಕ ಸೂಚನೆ ಎಂಬುದಾಗಿ ವಿಶ್ಲೇಷಿದ್ದಾರೆ.
ಎರಡು ದಿನಗಳ ನಂತರ ಚೀನಾದ ವಿದೇಶಾಂಗ ಸಚಿವಾಲಯ ಮತ್ತೊಂದು ಹೇಳಿಕೆಯನ್ನು ಬಿಡುಗಡೆ ಮಾಡಿತು, ಅದರಲ್ಲಿ ಅದು, “ಭಾರತ ಮತ್ತು ಪಾಕಿಸ್ತಾನ ಕದನ ವಿರಾಮವನ್ನು ಗಟ್ಟಿಗೊಳಿಸುತ್ತವೆ ಮತ್ತು ಮುಂದುವರಿಸುತ್ತವೆ, ಮತ್ತಷ್ಟು ಸಂಘರ್ಷವನ್ನು ತಪ್ಪಿಸುತ್ತವೆ, ಸಂವಾದ ಮತ್ತು ಮಾತುಕತೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿಭಾಯಿಸುತ್ತವೆ ಮತ್ತು ರಾಜಕೀಯ ಇತ್ಯರ್ಥದ ಹಾದಿಗೆ ಮರಳುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದೆ. ಚೀನಾವು ಪಾಕಿಸ್ತಾನ ಮತ್ತು ಭಾರತ ಎರಡರೊಂದಿಗೂ ಸಂಪರ್ಕದಲ್ಲಿರಲಿದೆ ಮತ್ತು “ಪ್ರದೇಶವನ್ನು ಶಾಂತಿಯುತ ಮತ್ತು ಸ್ಥಿರವಾಗಿಡಲು” ಪ್ರಯತ್ನಗಳನ್ನು ಮುಂದುವರಿಸುತ್ತದೆ ಎಂದು ಅದು ಹೇಳಿತು.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಇಶಾಕ್ ದಾರ್ ಮತ್ತು ಅಜಿತ್ ದೋವಲ್ ಅವರೊಂದಿಗೆ ನಡೆಸಿದ ಮಾತುಕತೆಗಳು ಅಂತಿಮವಾಗಿ “ಉಲ್ಬಣವನ್ನು ಕಡಿಮೆ ಮಾಡಲು ಮತ್ತು ಸಂಪೂರ್ಣ, ಶಾಶ್ವತವಾದ ಕದನ ವಿರಾಮವನ್ನು ತರಲು” ಸಹಾಯ ಮಾಡಿದೆ ಎಂದು ಚೀನಾ ಕದನ ವಿರಾಮಕ್ಕಾಗಿ ತನಗೆ ತಾನು ಕೃತಜ್ಞತೆ ಸಲ್ಲಿಸಿಕೊಂಡಿದೆ.

ಪಾಕಿಸ್ತಾನದಿಂದ ಚೀನಾ ತೃಪ್ತಿಪಡಿಸಲು ಹೇಳಿಕೆ…
ಭಾರತದ ನಿಖರತೆ ಮತ್ತು ಪಾಕಿಸ್ತಾನಿ ವಾಯುನೆಲೆಗಳ ಮೇಲೆ ಮಾಪನಾಂಕ ನಿರ್ಣಯಿಸಿದ ದಾಳಿಗಳ ತೀವ್ರತೆ, ಪ್ರಮಾಣ, ನಿಖರತೆ ಮತ್ತು ಸಾಮರ್ಥ್ಯದ ಬಗ್ಗೆ ಆಘಾತ ಮತ್ತು ಅಪನಂಬಿಕೆಯಲ್ಲಿ ಉಳಿದಿರುವ ಪಾಕಿಸ್ತಾನವು ಕದನ ವಿರಾಮದ ಸಂಜೆ ಎರಡು ಸೆಟ್ ಹೇಳಿಕೆಗಳನ್ನು ಬಿಡುಗಡೆ ಮಾಡಿತು. ಅದರಲ್ಲಿ ಒಂದು ಟ್ರಂಪ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ನಂತರ, ಮತ್ತು ಇನ್ನೊಂದು ಚೀನಾದ ಆದೇಶದ ಮೇರೆಗೆ ಎಂದು ಹೇಳಲಾಗಿದೆ.
ನಂತರ ಪಾಕಿಸ್ತಾನವು ಹಲವಾರು ಗಂಟೆಗಳ ಕಾಲ ಕದನ ವಿರಾಮವನ್ನು ಉಲ್ಲಂಘಿಸಿ, ತಾನು ಅಮೆರಿಕದ ಜೊತೆಗೆ ತೋರಿದ ಬದ್ಧತೆ ನಿರ್ಲಕ್ಷಿಸಿ, ಚೀನಾದಿಂದ ಬಂದ ಫೋನ್ ಕರೆಯ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿತು. ಹೇಳಿಕೆಯ ಪ್ರಕಾರ, ಪಾಕಿಸ್ತಾನದ ವಿದೇಶಾಂಗ ದಾರ್ ಚೀನಾದ ವಿದೇಶಾಂಗ ಸಚಿವರಿಗೆ ಪ್ರಾದೇಶಿಕ ಪರಿಸ್ಥಿತಿ ಮತ್ತು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಮಿಲಿಟರಿ ಸಂಘರ್ಷದ ಬಗ್ಗೆ ವಿವರಿಸಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹೇಳಿಕೆಯ ಪ್ರಕಾರ, ಚೀನಾದ ವಿದೇಶಾಂಗ ಸಚಿವರು “ಪಾಕಿಸ್ತಾನದ ಸಂಯಮವನ್ನು ಒಪ್ಪಿಕೊಂಡರು ಮತ್ತು ಸವಾಲಿನ ಸಂದರ್ಭಗಳಲ್ಲಿ ಅದರ ಜವಾಬ್ದಾರಿಯುತ ವಿಧಾನವನ್ನು ಶ್ಲಾಘಿಸಿದರು”, “ಪಾಕಿಸ್ತಾನದ ಆಲ್-ವೆದರ್ ಸ್ಟ್ರಾಟೆಜಿಕ್ ಕೋಆಪರೇಟಿವ್ ಪಾಲುದಾರ ಮತ್ತು ಆಪ್ತ ಸ್ನೇಹಿತನಾಗಿ ಚೀನಾವು ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಪಾಕಿಸ್ತಾನದ ಪರವಾಗಿ ದೃಢವಾಗಿ ನಿಲ್ಲುತ್ತದೆ ಎಂದು ವಾಂಗ್ ಯಿ ಪುನರುಚ್ಚರಿಸಿದರು” ಎಂದು ಹೇಳಿದರು.

ಪ್ರಮುಖ ಸುದ್ದಿ :-   ಜೂನ್ 22ರ ವರೆಗೆ ದೇಶಾದ್ಯಂತ ಟೆಲಿಗ್ರಾಂ ಬಂದ್‌ ; ನೀಟ್ ಮರುಪರೀಕ್ಷೆ ಅಕ್ರಮ ತಡೆಗೆ ಕ್ರಮ : ತೊಂದರೆಗೆ ಕ್ಷಮೆ ಕೋರಿದ ಎನ್‌ಟಿಎ

ಇದೆಲ್ಲವೂ ನಡೆಯುತ್ತಿರುವಾಗ, ಭಾರತದ ವಿದೇಶಾಂಗ ಕಾರ್ಯದರ್ಶಿ, ಹೊಸ ವಾಯುಪ್ರದೇಶ ಉಲ್ಲಂಘನೆಯನ್ನು ಗಮನಿಸಿ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ಇದರಲ್ಲಿ ಪಾಕಿಸ್ತಾನದ ಕ್ರಮಗಳಿಗೆ ಭಾರತವು ಪ್ರತಿಕ್ರಿಯಿಸುತ್ತದೆ ಎಂದು ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಲಾಯಿತು.
ಭಾರತವು ಎಲ್ಲಾ ಸಂಗತಿಗಳನ್ನು ಟೇಬಲ್‌ ಗೆ ತಂದಿತು ಭಾರತ ಮತ್ತು ಅಮೆರಿಕದ ಉನ್ನತ ನಾಯಕರ ನಡುವೆ ಅನೇಕ ಫೋನ್ ಕರೆಗಳು ನಡೆದಿವೆ ಎಂದು ಅದು ಒಪ್ಪಿಕೊಂಡಿತು. ಪಾಕಿಸ್ತಾನದ ಮಿಲಿಟರಿ ಉಲ್ಲಂಘನೆಗಳಿಗೆ ಭಾರತವು ಪ್ರತಿಕ್ರಿಯಿಸುತ್ತಿದೆ ಎಂದು ಅಮೆರಿಕ್ಕೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಭಾರತವು ಪ್ರತಿಪಾದಿಸಿತು. ಕದನ ವಿರಾಮ ದ್ವಿಪಕ್ಷೀಯ ವಿಷಯವಾಗಿದೆ ಮತ್ತು ಈ ವಿಷಯದಲ್ಲಿ ಪಾಕಿಸ್ತಾನವು ನೇರವಾಗಿ ಭಾರತದ ಜೊತೆ ಮಾತನಾಡಬೇಕು ಎಂದು ಟ್ರಂಪ್ ಆಡಳಿತದ ನಾಯಕರಿಗೆ ತಿಳಿಸಲಾಯಿತು.
ಭಾರತದ ಜೊತೆ ಮಾತನಾಡಿದ ಪಾಕಿಸ್ತಾನ
ನಂತರ ದ್ವಿಪಕ್ಷೀಯ ಒಪ್ಪಂದಕ್ಕೆ ಬದ್ಧವಾಗಿರುವ ಕುರಿತು ಪಾಕಿಸ್ತಾನದ ಡಿಜಿಎಂಒ ಭಾರತದ ಡಿಜಿಎಂಒ ಅವರ ಜೊತೆ ಮಾತುಕತೆ ನಡೆಸಿದರು. ಭಾರತದ ಡಿಜಿಎಂಒ ಪಾಕಿಸ್ತಾನವು ಯಾವುದೇ ದುಸ್ಸಾಹಸಕ್ಕೆ ಕೈಹಾಕದಂತೆ ಎಚ್ಚರಿಕೆ ನೀಡಿದರು ಮತ್ತು ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯನ್ನು ಒಳಗೊಂಡಂತೆ ಕದನ ವಿರಾಮಕ್ಕೆ ಷರತ್ತುಗಳನ್ನು ಹಾಕಿದರು. ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ಎಲ್ಲಾ ಇತರ ಶಿಕ್ಷಾರ್ಹ ರಾಜತಾಂತ್ರಿಕ ಕ್ರಮಗಳು ಮುಂದುವರಿಯುತ್ತದೆ ಎಂದು ಪಾಕಿಸ್ತಾನಕ್ಕೆ ತಿಳಿಸಲಾಯಿತು.

 

 

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement