೨೦೨೫ಕ್ಕೆ ಭಾರತದ ರಕ್ಷಣಾ ಉತ್ಪನ್ನಗಳ ರಫ್ತಿನ ಗುರಿ ೨೫ ಶತಕೋಟಿ ಡಾಲರ್‌: ರಾಜನಾಥ್‌ ಸಿಂಗ್‌

ಬೆಂಗಳೂರು: 2025 ರ ವೇಳೆಗೆ ತನ್ನ ರಕ್ಷಣಾ ಉತ್ಪಾದನಾ ಮೂಲವನ್ನು ೧೧ ಶತಕೋಟಿ ಡಾಲರ್‌ನಿಂದ ೨೫ ಶತಕೋಟಿ ಡಾಲರ್‌ಗೆ ಏರಿಸುವ ಉದ್ದೇಶದಿಂದ ಭಾರತವು ಹಿಂದೂ ಮಹಾಸಾಗರ ಪ್ರದೇಶದ ದೇಶಗಳಿಗೆ ಮತ್ತು ಇತರ ದೇಶಗಳಿಗೆ ರಕ್ಷಣಾ ಪಾಲುದಾರನಾಗಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಬಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು. ಬೆಂಗಲೂರಿನಲ್ಲಿ ಶುಕ್ರವಾರ ಕೊನೆಯ ದಿನದ … Continued

ಕೃಷಿ ಕಾನೂನಿಗೆ ತಿದ್ದುಪಡಿ ತಂದರೆ ದೋಷವಿದೆ ಎಂದರ್ಥವಲ್ಲ

  ನವದೆಹಲಿ: ಕೇಂದ್ರ ಸರಕಾರ ಒಂದು ವೇಳೆ ಕೃಷಿ ಕಾನೂನುಗಳಿಗೆ ತಿದ್ದುಪಡಿ ಮಾಡಿದರೆ ಕೃಷಿ ಕಾನೂನಿನಲ್ಲಿ ಯಾವುದೇ ಕೊರತೆಯಿದೆ ಎಂದು ತಿಳಿಯುವುದು ಸರಿಯಲ್ಲ ಎಂದು ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ತಿಳಿಸಿದ್ದಾರೆ. ಕೆಲವರು ರೈತರ ದಾರಿ ತಪ್ಪಿಸುತ್ತಿದ್ದಾರೆ. ಅಲ್ಲದೇ ಒಂದು ನಿರ್ದಿಷ್ಟ ರಾಜ್ಯದ ಜನರು ಕೃಷಿ ಮಸೂದೆಗಳ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ. ರೈತರ ಆದಾಯ … Continued

ನಾಳೆ ದೇಶಾದ್ಯಂತ ರೈತರಿಂದ ರಸ್ತೆತಡೆ

ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಫೆ.೬ರಂದು ಕರೆನೀಡಿದ ರಸ್ತೆ ತಡೆ ಚಳವಳಿಯಿಂದ  ಹಲವು ರಾಜ್ಯಗಳಲ್ಲಿ ರಸ್ತೆ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಕೇಂದ್ರ ಸರಕಾರ ಆಯವ್ಯಯದಲ್ಲಿ ರೈತರ ಬೇಡಿಕೆಗಳನ್ನು ಕಡೆಗಣಿಸಿದ್ದನ್ನು ಖಂಡಿಸಿ ದೇಶಾದ್ಯಂತ ರಸ್ತಾ ರೋಕೊ ನಡೆಸಲಾಗುತ್ತಿದೆ. ದೆಹಲಿಯನ್ನು ಹೊರತುಪಡಿಸಿ, ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಕೆಲವೆಡೆ ಮತ್ತು … Continued

ಲಗ್ನ ಪತ್ರಿಕೆಯಲ್ಲಿ ರೈತ ಪರ ಘೋಷಣೆ, ರೈತ ಮುಖಂಡರ ಫೋಟೊ ಮುದ್ರಣ !!

ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನವನ್ನು ಬೆಂಬಲಿಸಲು ಹರಿಯಾಣ ರೈತರು ನೂತನ ಮಾರ್ಗವೊಂದನ್ನು ಕಂಡುಕೊಂಡಿದ್ದು, ಮದುವೆಯ ಆಮಂತ್ರಣಗಳಲ್ಲಿ ರೈತ ಹೋರಾಟ ಪರ ಘೋಷಣೆಗಳು ಹಾಗೂ ಹೋರಾಟಗಾರರ ಫೋಟೊಗಳನ್ನು ಮುದ್ರಿಸುತ್ತಿದ್ದಾರೆ. “ರೈತರಿಲ್ಲದೇ ಅನ್ನವಿಲ್ಲʼ, “ರೈತರ ಹೋರಾಟಕ್ಕೆ ಜಯವಾಗಲಿʼ, “ರೈತರ ಬೇಡಿಕೆಗಳು ಈಡೇರಲಿ” ಸೇರಿದಂತೆ ವಿವಿಧ ಘೋಷಣೆಗಳನ್ನು ಮುದ್ರಿಸುತ್ತಿದ್ದಾರೆ. ಅಲ್ಲದೇ ರೈತ ಮುಖಂಡ ಸರ್‌ ಛೋಟುರಾಮ್‌ ಅವರ ಫೋಟೊಗಳನ್ನು … Continued

ನಿಮ್ಹಾನ್ಸ್‌ನಲ್ಲಿ ಮರೆವಿನ ಕಾಯಿಲೆ ಚಿಕಿತ್ಸಾ ಕೇಂದ್ರ

ಬೆಂಗಳೂರು: ಇಲ್ಲಿನ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮೆಂಟಲ್‌ ಹೆಲ್ತ್‌ ಆಂಡ್‌ ನ್ಯೂರೋ ಸಾಯನ್ಸ್‌ (ನಿಮ್ಹಾನ್ಸ್)‌ ನಲ್ಲಿ ಮೊದಲ ಮರೆವಿನ ಕಾಯಿಲೆ ಚಿಕಿತ್ಸಾ ಕೇಂದ್ರ ಆರಂಭವಾಗಲಿದೆ. ಇಲ್ಲಿನ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರದ ಕ್ಯಾಂಪಸ್‌ನಲ್ಲಿ ನೂತನ ಕೇಂದ್ರ ಆರಂಭಗೊಳ್ಳುವುದು. ಕೇಂದ್ರ ನಿರ್ಮಾಣಗೊಳ್ಳಲು ಕನಿಷ್ಟ ೧೮ ತಿಂಗಳುಗಳ ಅವಶ್ಯಕತೆಯಿದೆ ಎಂದು ಮನೋವೈದ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಪಿ.ಟಿ.ಶಿವಕುಮಾರ ತಿಳಿಸಿದ್ದಾರೆ. ವಸತಿ … Continued

ಕೇರಳ ಬಿಡಿಜೆಎಸ್‌ ಇಬ್ಭಾಗ

ಎನ್‌ಡಿಎ ಅಂಗಪಕ್ಷವಾಗಿದ್ದ ಕೇರಳದ ಭಾರತ್ ಧರ್ಮ ಜನಸೇನೆ (ಬಿಡಿಜೆಎಸ್) ವಿಭಜನೆಯಾಗಿದ್ದು, ಒಂದು ಘಟಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನೊಂದಿಗೆ ಕೆಲಸ ಮಾಡುವ ಹೊಸ ಪಕ್ಷವನ್ನು ರಚನೆ ಮಾಡಲಾಗುವುದು ಎಂದು ಬಂಡಾಯ ನಾಯಕರು ತಿಳಿಸಿದ್ದಾರೆ. ಭಾರತೀಯ ಜನಸೇನೆ (ಬಿಜೆಎಸ್) ಅನ್ನು ತೇಲುವ ನಿರ್ಧಾರವನ್ನು ಪ್ರಕಟಿಸಿದ ಬಂಡಾಯ ಮುಖಂಡರಾದ ವಿ ಗೋಪಕುಮಾರ್ ಮತ್ತು ಎನ್.ಕೆ.ಲೀಲಕಂದನ್, ಎಲ್‌ಡಿಎಫ್ … Continued

ಬೇರೆ ರಾಜ್ಯಗಳಿಂದ ವಿದ್ಯಾರ್ಥಿಗಳ ಸಮವಸ್ತ್ರ ಖರೀದಿಗೆ ಬ್ರೇಕ್

ಬೆಂಗಳೂರು: ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುವ ಸಮವಸ್ತ್ರವನ್ನು ಬೇರೆ ರಾಜ್ಯದಿಂದ ಖರೀದಿ ಮಾಡುವುದನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಹೇಳಿರುವ ಜವಳಿ ಸಚಿವ ಶ್ರೀಮಂತ ಪಾಟೀಲ್, ವಿದಾನ ಪರಿಷತ್‌ನಲ್ಲಿ ಶುಕ್ರವಾರ ತಿಳಿಸಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದ ನೇಕಾರರಿಂದಲೇ ಸಮವಸ್ತ್ರ ಖರೀದಿಸಿ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಕೋವಿಡ್ ಸಮಯದಲ್ಲಿ ಜವಳಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಮಂದಿ ಉದ್ಯೋಗ … Continued

ಮಥುರಾ ಶ್ರೀಕೃಷ್ಣ ದೇಗುಲ ಸಮೀಪದ ಮಸೀದಿ ತೆರವು ಅರ್ಜಿ ವಿಚಾರಣೆಗೆ ಒಪ್ಪಿಗೆ: ಆದೇಶ ಕಾಯ್ದಿರಿಸಿದ ಕೋರ್ಟ್

ಮಥುರಾ: ಇಲ್ಲಿನ ಶ್ರೀಕೃಷ್ಣ ದೇವಾಲಯದ ಸಮೀಪ ಇರುವ ಮಸೀದಿ ತೆರವುಗೊಳಿಸಬೇಕು ಎಂದು ಕೋರಿ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ವಿಚಾರಣಗೆ ಒಪ್ಪಿಗೆ ನೀಡುವ  ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ. ಇಲ್ಲಿನ ಕತ್ರಾ ಕೇಶವ್ ದೇವ್ ದೇವಸ್ಥಾನದ ಸುತ್ತಮುತ್ತಲಿನ 13.37 ಎಕರೆ ಜಮೀನಿನ ಮಾಲೀಕತ್ವವನ್ನು ಹಾಗೂ ಈ ಪ್ರದೇಶದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕಬೇಕೆಂದು ಕೋರಿ ದಾಖಲಿಸಿದ್ದ ಹೊಸ ಸಿವಿಲ್ … Continued

ಶುದ್ಧ ಕುಡಿಯುವ ನೀರಿನ ಘಟಕ ಅವ್ಯವಹಾರ ತನಿಖೆಗೆ ಜಂಟಿ ಸದನ ಸಮಿತಿ

ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಯೋಜನೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆಗೆ ಜಂಟಿ ಸದನ ಸಮಿತಿ ರಚಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ವಿಧಾನ ಪರಿಷತ್‍ನಲ್ಲಿ ಸದಸ್ಯ ರಘುನಾಥ್ ಮಲ್ಕಾಪುರೆ, ಶಶಿಲ್ ಜಿ.ನಮೋಷಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಾಕಷ್ಟು ಮಾಹಿತಿ ನೀಡಬೇಕಿದೆ. ಹಾಗಾಗಿ … Continued

ಪಂಜಾಬ್‌ ಪೊಲೀಸರಿಗೆ ಫೈಲ್‌ ಹಿಂದಿರುಗಿಸಿದ ಸಿಬಿಐ

ಕೇಂದ್ರೀಯ ತನಿಖಾ ದಳವು (ಸಿಬಿಐ) 2015ರ ಸಕ್ರಿಲೇಜ್‌ ಘಟನೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಫೈಲ್‌ಗಳನ್ನು ಪಂಜಾಬ್ ಪೊಲೀಸರಿಗೆ ಹಿಂದಿರುಗಿಸಿದೆ ಎಂದು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಸಿದ್ದಾರೆ. ಪ್ರಕರಣಗಳನ್ನು ತನಿಖೆ ಮಾಡಲು ರಾಜ್ಯಕ್ಕೆ ಅವಕಾಶ ನೀಡಬೇಕೆಂಬುದು ಪಂಜಾಬ್‌ ಕಾಂಗ್ರೆಸ್ ಸರ್ಕಾರದ ಬಹುದಿನಗಳ ಬೇಡಿಕೆಯಾಗಿತ್ತು. ಈ ಪ್ರಕರಣಗಳನ್ನು ಹಿಂದಿನ ಎಸ್‌ಎಡಿ-ಬಿಜೆಪಿ ಸರ್ಕಾರ ಸಿಬಿಐಗೆ ಹಸ್ತಾಂತರಿಸಿತ್ತು. ಸಿಬಿಐಗೆ ಪಂಜಾಬ್ … Continued