ಹುಬ್ಬಳ್ಳಿಗೆ ಬರಲಿದೆ ಏಮ್ಸ್‌ ಆಸ್ಪತ್ರೆ

ಹುಬ್ಬಳ್ಳಿ: ಸ್ಥಾಪಿಸಲು ಉದ್ದೇಶಿಸಿದ್ದ ಪ್ರತಿಷ್ಠಿತ ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್‌) ಈಗ ಅಲ್ಲಿಂದ ಸ್ಥಳಾಂತರಗೊಳ್ಳಿದ್ದು, ಈಗ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಜಾಗ ಗುರುತಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಇದುವರೆಗೂ ಶೈಕ್ಷಣಿಕ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಉತ್ತರ ಕರ್ನಾಟಕದ ಹೆಬ್ಬಾಗಿಲಾಗಿದ್ದ ಹುಬ್ಬಳ್ಳಿ-ಧಾರವಾಡ ಈಗ ಆರೋಗ್ಯ ಕ್ಷೇತ್ರದಲ್ಲಿಯೂ ಈಗ ಉತ್ತರ ಕರ್ನಾಟಕದ … Continued

೩೪ ಸಾವು, ಸುರಂಗದೊಳಗೆ ಕಾರ್ಮಿಕರ ಪತ್ತೆಗೆ ಡ್ರೋನ್‌-ಡಾಗ್ ಸ್ಕ್ವಾಡ್‌ ಬಳಕೆ

ಉತ್ತರಾಖಂಡ: ಚಮೋಲಿ ಜಿಲ್ಲೆಯ ತಪೋವನ್‌ನಲ್ಲಿರುವ ಎನ್‌ಟಿಪಿಸಿ ಹೈಡಲ್ ವಿದ್ಯುತ್ ಯೋಜನೆಯಲ್ಲಿ 1.7 ಕಿಲೋಮೀಟರ್ ಉದ್ದದ ಸುರಂಗದಲ್ಲಿ ಸುಮಾರು 35 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ.ಬುಧವಾರ ಸಂಜೆ ತನಕ, 1.7 ಕಿ.ಮೀ ಉದ್ದದ ಸುರಂಗದೊಳಗೆ 100 ಮೀಟರ್ ಸುರಂಗ ತೆರವುಗೊಳಿಸಲು ಸಾಧ್ಯವಾಯಿತು. 100 ಮೀ ನಂತರ ಪ್ರವಾಹದಿಂದ ತಂದ ದೊಡ್ಡ ಪ್ರಮಾಣದ ಕೆಸರು ತುಂಬಿದ್ದರಿಂದ ತೆರವಿಗೆ ಅಡಚಣೆಯಾಗಿದೆ. ಡ್ರೋನ್‌ಗಳು ಮತ್ತು … Continued

ಪಾಂಗೊಂಗ್‌ ಲೇಕ್‌ನಿಂದ ಭಾರತ-ಚೀನಾ ಸೇನಾ ಹಿಂತೆಗೆತ ಆರಂಭ: ಚೀನಾ

ಚೀನಾ ಮತ್ತು ಭಾರತದ ಸಶಸ್ತ್ರ ಪಡೆಗಳ ಮುಂಚೂಣಿ ಘಟಕಗಳಾದ ಚೀನಾ ಮತ್ತು ಭಾರತದ ನಡುವಿನ ಕಮಾಂಡರ್ ಮಟ್ಟದ ಮಾತುಕತೆಯ ಒಂಬತ್ತನೇ ಸುತ್ತಿನ ಒಮ್ಮತದ ಪ್ರಕಾರ ಪೂರ್ವ ಲಡಾಕ್‌ ಭಾರತಿ-ಚೀನಾ ಗಡಿಯಲ್ಲಿ ಸೈನ್ಯವನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು ನಡೆಯುತ್ತಿದೆ ಎಂದು ಚೀನಾ ರಕ್ಷಣಾ ಸಚಿವಾಲಯ ತಿಳಿಸಿದೆ. ಪೂರ್ವ ಲಡಾಖ್‌ನ ಪಾಂಗೊಂಗ್ ಸರೋವರದ ದಕ್ಷಿಣ ಮತ್ತು ಉತ್ತರ ದಂಡೆಯಲ್ಲಿರುವ ಚೀನಾ … Continued

ಕೃಷಿ ಕಾಯ್ದೆಯಲ್ಲಿ ತೊಡಕಿದ್ದರೆ ಬದಲಾವಣೆಗೆ ಸಿದ್ಧ: ರೈತರಿಗೆ ಪ್ರಧಾನಿ ಅಭಯ

ನವದೆಹಲಿ: ಇತ್ತೀಚೆಗೆ ಜಾರಿಗೆ ಬಂದ ಕೃಷಿ ಕಾನೂನುಗಳು ಬಲವಂತವಾಗಿಲ್ಲ ಮತ್ತು ಆಯ್ಕೆಗಳನ್ನು ಮಾತ್ರ ನೀಡುತ್ತವೆ. ಒಂದೊಮ್ಮೆ ರೈತರು ಮನವರಿಕೆಯಾಗುವ ಸಮರ್ಥ ಸಲಹೆಯೊಂದಿಗೆ ಬಂದರೆ ಕಾನೂನಿನಲ್ಲಿ ಬದಲಾವಣೆ ಮಾಡಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ, ಕೃಷಿ ಮಾರುಕಟ್ಟೆಗಳ ಹಳೆಯ ವ್ಯವಸ್ಥೆ ಮತ್ತು ಎಂಎಸ್‌ಪಿ ಮುಂದುವರಿಯುತ್ತದೆ ಎಂದು ಪುನರುಚ್ಚರಿಸಿದ ಅವರು, … Continued

ಸೆಬಿ ನಿಯಮ ಉಲ್ಲಂಘನೆ: ಹಣ ಪಾವತಿಸಿ ಸಮಸ್ಯೆ ಬಗೆಹರಿಸಿಕೊಂಡ ಇಂಡಿಗೋ

ನವದೆಹಲಿ: ಸೆಬಿಯ ನಿಯಮ ಉಲ್ಲಂಘನೆಗಾಗಿ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ನಡೆಸುತ್ತಿರುವ ಇಂಟರ್‌ಗ್ಲೋಬ್‌ ಏವಿಯೇಶನ್‌ ಲಿಮಿಟೆಡ್‌ ೨.೧೦ ಕೋಟಿ ರೂ. ಭರಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡಿದೆ. ಸೆಬಿಯ ಒಪ್ಪಿಗೆಯ ಕಾರ್ಯವಿಧಾನದ ಅಡಿಯಲ್ಲಿ, ತಪ್ಪನ್ನು ಒಪ್ಪಿಕೊಳ್ಳದೇ ಅಥವಾ ಅದನ್ನು ತಪ್ಪನ್ನು ನಿರಾಕರಿಸದೆ ದಂಡವನ್ನು ಪಾವತಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಂಡಿದೆ. ತನ್ನ ಪಾಲುದಾರ ರಾಹುಲ್ ಭಾಟಿಯಾ ಮತ್ತು ಇಂಟರ್ … Continued

ಮೇಲ್ಛಾವಣಿ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಾಯ

ಮೈಸೂರು: ನಗರದ ಮಹಾರಾಜ ಪದವಿ ಕಾಲೇಜಿನ ಮೇಲ್ಛಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಕಾಲೇಜಿನ ಅಪರಾಧಶಾಸ್ತ್ರ ವಿಭಾಗದಲ್ಲಿ ಉಪನ್ಯಾಸ ನಡೆಯುತ್ತಿರುವ ಸಂದರ್ಭದಲ್ಲಿ ಛಾವಣಿಯ ಭಾಗವೊಂದು ಕುಸಿದು ದುರ್ಘಟನೆ ಸಂಭವಿಸಿದೆ. ವಿದ್ಯಾರ್ಥಿಗಳಾದ ವಿಶಾಲ್‌, ಯಶವಂತ ಹಾಗೂ ಸಲೀಮ್‌ ಪಾಶಾ ಗಾಯಗೊಂಡಿದ್ದಾರೆ. ವಿಶಾಲ್‌ ತಲೆಗೆ ಗಂಭೀರ ಗಾಯವಾಗಿದ್ದು, ಉಳಿದ ಇಬ್ಬರು ವಿದ್ಯಾರ್ಥಿಗಳ ಕೈಗೆ ತರುಚಿದ … Continued

ಐಎನ್‌ಎಸ್‌ ವಿರಾಟ ಒಡೆಯಲು ಸುಪ್ರೀಂಕೋರ್ಟ್‌ ತಡೆ

ವಿಮಾನವಾಹಕ ನೌಕೆ ಐಎನ್‌ಎಸ್‌ ವಿರಾಟ್ ‌ಅನ್ನು ಒಡೆಯುವ ಪ್ರಕ್ರಿಯೆಗೆ ಸರ್ವೋಚ್ಚ ನ್ಯಾಯಾಲಯ ತಡೆಯೊಡ್ಡಿದ್ದು, ವಿಶಾಲವಾದ ಹಡಗನ್ನು ವಸ್ತುಸಂಗ್ರಹಾಲಯ ಮಾಡುವಂತೆ ಆದೇಶ ನೀಡಿದೆ. ವಿಮಾನವಾಹನ ನೌಕೆಯನ್ನು ವಸ್ತುಸಂಗ್ರಹಾಲಯವಾಗಿ ರೂಪಿಸಬೇಕೆಂಬ ಎನ್ವಿಟೆಕ್‌ ಮೆರೈನ್‌ ಕನ್ಸಲ್ಟಂಟ್‌ ಲಿಮಿಟೆಡ್‌ನ ಮನವಿಯನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದ ನಂತರ ಸಂಸ್ಥೆ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು. ಐಎನ್‌ಎಸ್‌ ವಿರಾಟನ್ನು ಒಡೆಯದೇ ಯಥಾಸ್ಥಿತಿ ಉಳಿಸಿಕೊಳ್ಳುವಂತೆ ನ್ಯಾಯಾಲಯ … Continued

ಸಂವಿಧಾನ-ಕಾನೂನು ಚೌಕಟ್ಟಿನೊಳಗೆ ಮೀಸಲಾತಿ ಬೇಡಿಕೆ ಬಗ್ಗೆ ತೀರ್ಮಾನ: ಬಿಎಸ್‌ವೈ

ಬೆಂಗಳೂರು: ಸಂವಿಧಾನ ಹಾಗೂ ಕಾನೂನು ಚೌಕಟ್ಟಿನಡಿಯಲ್ಲಿ ವಿವಿಧ ಜಾತಿ, ಸಮುದಾಯಗಳ ಮೀಸಲಾತಿ ಬೇಡಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯನವರ ೧೧೩ನೇ ಜಯಂತಿ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಕೆಂಗಲ್ ಹನುಮಂತಯ್ಯನವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಜಾತಿ-ಸಮುದಾಯಗಳಿಗೆ ಸಂವಿಧಾನದ ಪ್ರಕಾರವೇ … Continued

ಮೋದಿಗೆ ಜೈ, ರೈತರ ಮೇಲೆ ಕ್ರಮಕ್ಕೆ ಭಾರತೀಯ ಅಮೆರಿಕನ್ನರ ವಿರೋಧ

ವಾಷಿಂಗ್ಟನ್: ಅಮೆರಿಕದಲ್ಲಿ ವಾಸವಾಗಿರುವ ಭಾರತೀಯ ಮೂಲದವರಲ್ಲಿ ಶೇ.೫೦ರಷ್ಟು ಜನರು ಭಾರತದ ಕೇಂದ್ರ ಸರಕಾರದ ನೀತಿಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಕಾರ್ನೆಗಿ ಎಂಡೋಮೆಂಟ್‌ ಫಾರ್‌ ಇಂಟರ್‌ನ್ಯಾಷನಲ್‌ ಪೀಸ್‌, ಜಾನ್ಸ್‌ ಹಾಪ್ಕಿನ್ಸ್‌-ಎಸ್‌ಎಐಎಸ್‌ ಹಾಗೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆದ “ಭಾರತೀಯ ಅಮೆರಿಕನ್ನರ ದೃಷ್ಟಿಯಲ್ಲಿ ಭಾರತʼ ವಿಷಯದ ಸಮೀಕ್ಷೆ ನಡೆದಿದೆ. ವಲಸೆಗಾರರ ಬಗ್ಗೆ ಪ್ರಧಾನಿ ಮೋದಿ ಹೆಚ್ಚು ಉದಾರತೆ … Continued

ಬೋಧನಾ ಶುಲ್ಕ ಕಡಿತ:ಖಾಸಗಿ ಆಡಳಿತ ಮಂಡಳಿಗಳ ಪ್ರತಿಭಟನೆ

ಬೆಂಗಳೂರು: ಬೋಧನಾ ಶುಲ್ಕದಲ್ಲಿ ಶೇ.೩೦ರಷ್ಟು ಕಡಿತ ಹಾಗೂ ಅಭಿವೃದ್ಧಿ ಶುಲ್ಕ ಹಾಗೂ ಇತರ ಹೆಚ್ಚುವರಿ ಪಾವತಿ ಸ್ಥಗಿತಗೊಳಿಸಿದ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ೬ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ. ಫೆ.೨೩ರೊಳಗೆ ಸರಕಾರ ತನ್ನ ನಿರ್ಧಾರವನ್ನು ರದ್ದುಗೊಳಿಸದಿದ್ದರೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿ ನಿರ್ಧರಿಸಲಾಗಿದೆ. ಶುಲ್ಕ ಕಡಿತವನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಕೇಳುವುದರೊಂದಿಗೆ … Continued