ಶಶಿಕಲಾ ವಿರುದ್ಧ ಎಐಎಡಿಎಂಕೆ ದೂರು ದಾಖಲು

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತ ಸಹಾಯಕಿ ಶಶಿಕಲಾ ಹಾಗೂ ಅಮ್ಮ ಮಕ್ಕಳ ಮುನೇತ್ರ ಕಜಗಮ್‌ ಪ್ರಧಾನ ಕಾರ್ಯದರ್ಶಿ ದಿನಕರನ್‌ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆಂದು ಹಿರಿಯ ಸಚಿವರು ಸೇರಿದಂತೆ ಎಐಎಡಿಎಂಕೆ ಮುಖಂಡರು ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಸಚಿವರಾದ ಡಿ.ಜಯಕುಮಾರ, ಪಿ.ತಂಗಮಣಿ ಅಲ್ಲದೇ ಪಕ್ಷದ ಅಧ್ಯಕ್ಷ ಇ. ಮಧುಸೂಧನ್‌ ಪೊಲೀಸ್‌ ಮಹಾನಿರ್ದೇಶಕ ಸಿ.ವಿ.ತ್ರಿಪಾಠಿ ಅವರನ್ನು … Continued

ತೆಂಡುಲ್ಕರ್‌ ಹೇಳಿಕೆಗೆ ಪವಾರ್‌ ಆಕ್ಷೇಪ

ಮುಂಬೈ: ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಹೇಳಿಕೆ ನೀಡುವಾಗ ಜಾಗರೂಕವಾಗಿರಿ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್‌ಗೆ ಸಲಹೆ ನೀಡಿದ್ದಾರೆ. ರೈತರ ಪ್ರತಿಭಟನೆ ಕುರಿತು ಅಂತಾರಾಷ್ಟ್ರೀಯ ಗಣ್ಯರು ನೀಡಿದ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ಸಚಿನ್, ಭಾರತದ ಸಾರ್ವಭೌಮತ್ವದೊಂದಿಗೆ ರಾಜಿ ಮಾಡಲು ಸಾಧ್ಯವಿಲ್ಲ ಮತ್ತು ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು, … Continued

ಶ್ರೀರಾಮ ಮಂದಿರ ನಿಧಿ ಸಮರ್ಪಣೆ: ಡಿಕೆಶಿ ಭೇಟಿ ಮಾಡಿದ ವಿಎಚ್‌ಪಿ ಪ್ರಮುಖರು

ಬೆಂಗಳೂರು: ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ನಿಮಿತ್ತ ವಿಶ್ವ ಹಿಂದೂ ಪರಿಷತ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾದರು. ವಿಎಚ್‌ಪಿ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ .ಶಿವಕುಮಾರ ಮತ್ತು ಸಂಸದ ಡಿ.ಕೆ ಸುರೇಶ ಅವರನ್ನು ಭೇಟಿಯಾದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ತೆರಳಿದ ವಿಶ್ವ ಹಿಂದು ಪರಿಷತ್ತಿನ … Continued

ಪಿಎಸ್‌ಯು ಉತ್ತಮ ನಿರ್ವಹಣೆ ಸರ್ಕಾರದ ಬಯಕೆ: ನಿರ್ಮಲಾ

ನವದೆಹಲಿ: ತೆರಿಗೆದಾರರ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಲು ಕೇಂದ್ರ ಸರಕಾರ ಸ್ಪಷ್ಟ ಕಾರ್ಯತಂತ್ರ ರೂಪಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಬಜೆಟ್‌ ಕುರಿತು ಕುಟುಂಬದ ಬೆಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಪ್ರತಿ ಪಕ್ಷಗಳ ಆರೋಪವನ್ನು ವಿತ್ತ ಸಚಿವೆ ತಿರಸ್ಕರಿಸಿದ್ದಾರೆ. ನಿಗದಿತ ಕ್ಷೇತ್ರಗಳಲ್ಲಿನ ಕೆಲವು ಸಾರ್ವಜನಿಕ ವಲಯದ ಉದ್ಯಮಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಸರ್ಕಾರ ಬಯಸಿದೆ, … Continued

ಶಾಂತರೀತಿ ಪ್ರತಿಭಟನೆಗೆ ರೈತರಿಗೆ ಅವಕಾಶ ನೀಡಿ:ಅಮರಿಕ

ವಾಷಿಂಗ್ಟನ್‌ (ಅಮೆರಿಕ): ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವದ ಮೌಲ್ಯಗಳ ಪಾಲನೆಯಾಗಬೇಕು ಮತ್ತು ಪ್ರತಿಭಟನಾನಿರತರು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಬೇಕಲ್ಲದೆ ಇಂಟರ್‌ನೆಟ್‌ಗೆ ತಡೆಯಾಗದಂತೆ ನೋಡಿಕೊಳ್ಳಬೇಕೆಂದು ಅಮೆರಿಕದ ಕಾಂಗ್ರೆಶ್ನಲ್‌ ಇಂಡಿಯಾ ಆಗ್ರಹಿಸಿದೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರಿಯೊಂದಿಗೆ ಮಾತನಾಡಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಶ್ನಲ್‌ ಇಂಡಿಯಾ ಸಹ ಅಧ್ಯಕ್ಷ ಬ್ರಾಡ್ ಶೆರ್ಮನ್ ತಿಳಿಸಿದ್ದಾರೆ. … Continued

ಅಸ್ಸಾಂ ಚಹಾ ವಿರುದ್ಧ ವಿದೇಶಿ ಶಕ್ತಿಗಳ ಪಿತೂರಿ: ಮೋದಿ

ಆಸ್ಸಾಂ: ಕೆಲ ವಿದೇಶಿ ಶಕ್ತಿಗಳು ನಮ್ಮ ಭಾರತೀಯ ಚಹಾದ ಘನತೆ ಕುಂದಿಸುಲ್ಲಿ ನಿರತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಆಸ್ಸಾಂನಲ್ಲಿ ಚಹಾ ತೋಟಗಳ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ, ಅಸ್ಸಾಂ ಚಹಾದ ವಿರುದ್ಧ ಕೆಲ ವಿದೇಶಿ ಶಕ್ತಿಗಳು ಪಿತೂರಿ ನಡೆಸಿವೆ. ಭಾರತೀಯ ಚಹಾದ ಘನತೆಯನ್ನು ವಿಶ್ವಾದ್ಯಂತ ವ್ಯವಸ್ಥಿತವಾಗಿ ಹಾಳು ಮಾಡುವಲ್ಲಿ ಕೆಲ ಶಕ್ತಿಗಳು ನಿರತವಾಗಿವೆ ಎಂದರು. … Continued

ಮ್ಯಾನ್ಮಾರ್‌ನಲ್ಲಿ ಸೈನ್ಯ ದಂಗೆ ವಿರುದ್ಧ ಬೃಹತ್‌ ಪ್ರದರ್ಶನ

ಮ್ಯಾನ್ಮಾರ್‌ನಲ್ಲಿ ಭಾನುವಾರ ಕಳೆದ ವಾರ ನಡೆದ ಸೈನಿಕ ದಂಗೆ ಮತ್ತು ಚುನಾಯಿತ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ದೇಶಾದ್ಯಂತ ಸಾವಿರಾರು ಜನರು ಪ್ರತಿಭಟನೆ ನಡೆಸಿದರು. ಇಂಟರ್ನೆಟ್ ನಿರ್ಬಂಧ ಮತ್ತು ಫೋನ್ ಮಾರ್ಗಗಳ ನಿರ್ಬಂಧಗಳ ಹೊರತಾಗಿಯೂ ನಡೆದ ಪ್ರತಿಭಟನೆಗಳು 2007 ರ ಬೌದ್ಧ ಸನ್ಯಾಸಿ ನೇತೃತ್ವದ ಕೇಸರಿ ಕ್ರಾಂತಿಯ ನಂತರ ದೇಶದ ಅತಿದೊಡ್ಡ … Continued

ಉತ್ತರಾಖಂಡದಲ್ಲಿ ಹಿಮಪದರ ಕುಸಿತ: ೨೬ ಸಾವು, 15 ಜನರ ರಕ್ಷಣೆ

ಉತ್ತರಾಖಂಡ: ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟಗೊಂಡ ನಂತರ ಉತ್ತರಾಖಂಡದ ತಪೋವನ್ ಜಲ-ವಿದ್ಯುತ್ ಶಕ್ತಿ ಅಣೆಕಟ್ಟು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ ಎಂದು ಭಾರತೀಯ ವಾಯುಪಡೆಯ ಆರಂಭಿಕ ವರದಿಯಲ್ಲಿ ತೋರಿಸಲಾಗಿದೆ. ಧೌಲಿ ಗಂಗಾ ಮತ್ತು ರಿಷಿ ಗಂಗಾ ನದಿಗಳ ಸಂಗಮದಲ್ಲಿರುವ ಅಣೆಕಟ್ಟು ಸಂಪೂರ್ಣವಾಗಿ ನಾಶವಾಗಿದೆ ಎಂದು ಸಮೀಕ್ಷೆಯ ಚಿತ್ರಗಳು ತೋರಿಸಿದೆ. ಮಲಾರಿ ಕಣಿವೆಯ ಪ್ರವೇಶದ್ವಾರದಲ್ಲಿ ಮತ್ತು ತಪೋವನ್ ಬಳಿಯಿರುವ … Continued

ಸಂಪ್ರದಾಯ ಮುರಿದು ಬಿಷಪ್‌ಗಳ ಸಿನೊಡ್‌ನ ಅಧೀನ ಕಾರ್ಯದರ್ಶಿಯಾಗಿ ಮಹಿಳೆ ನೇಮಕ ಮಾಡಿದ ಪೋಪ್‌

ಪೋಪ್ ಫ್ರಾನ್ಸಿಸ್ ಕ್ಯಾಥೊಲಿಕ್ ಸಂಪ್ರದಾಯವನ್ನು ಮುರಿದು ಮಹಿಳೆಯನ್ನು ಬಿಷಪ್‌ಗಳ ಸಿನೊಡ್‌ನ ಅಧೀನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ, ಇವರು ಮತದಾನದ ಹಕ್ಕು ಪಡೆದಿರುವ ಮೊದಲಲ ಸಿನೋಡ್‌ನ ಅಧೀನ ಕಾರ್ಯದರ್ಶಿಯಾಗಿದ್ದಾರೆ. ಫ್ರೆಂಚ್ ಮಹಿಳೆ ನಥಾಲಿ ಬೆಕ್ವಾರ್ಟ್ ಫೆಬ್ರವರಿ 6 ರಂದು ಸಿನೊಡ್ಗೆ ಹೆಸರಿಸಲಾದ ಎರಡು ಹೊಸ ಉಪ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲಿ ಅವರು 2019 ರಿಂದ ಸಲಹೆಗಾರರಾಗಿದ್ದಾರೆ. ಈ … Continued

ರೈತ ಹೋರಾಟದಲ್ಲಿ ಈಗ ಜಾಟರ ಪ್ರಾಬಲ್ಯ

ಗಾಜಿಪುರ: ರೈತ ಹೋರಾಟ ಹಿಂಸಾತ್ಮಕ ರೂಪ ತಳೆದಿದ್ದಕ್ಕೆ ರೈತ ಮುಖಂಡ ರಾಕೇಶ್‌ ಟಿಕಾಯತ್‌ ಕಣ್ಣೀರು ಸುರಿಸಿದ್ದು ಸುದ್ದಿವಾಹಿನಿಗಳಲ್ಲಿ ಬಿತ್ತರಗೊಂಡ ನಂತರ ಪಂಜಾಬ್‌ ಸಿಖ್‌ ಕೇಂದ್ರಿತ ರೈತರ ಹೋರಾಟ ಈಗ ಜಾಟ್‌ ಪ್ರಾಬಲ್ಯದ ರೈತ ಹೋರಾಟವಾಗಿ ರೂಪುಗೊಂಡಿದೆ. ಸದ್ಯ ಜಾಟ್‌ ಸಮುದಾಯವೇ ಆಂದೋಲನವನ್ನು ನಿಯಂತ್ರಿಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಹಿಂದೆ ಸಿಂಗು ಗಡಿಯಲ್ಲಿ ಹೋರಾಟ ತೀವ್ರವಾಗಿತ್ತು. ಆದರೆ ಈಗ … Continued