ತವರಿಗೆ ಮರಳಿದ ಜಯಲಲಿತಾ ಆಪ್ತೆ ಶಶಿಕಲಾ

ಕೃಷ್ಣಗಿರಿ: ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ನಾಲ್ಕು ವರ್ಷಗಳ ಕಾರಾಗೃಹವಾಸ ಪೂರ್ಣಗೊಳಿಸಿ ತವರು ರಾಜ್ಯ ತಮಿಳುನಾಡಿಗೆ ಮರಳಿದರು. ಕೃಷ್ಣಗಿರಿಗೆ ಬಂದ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಅವರನ್ನು ನೂರಾರು ಬೆಂಬಲಿಗರು ಪುಷ್ಪವೃಷ್ಟಿ ಮೂಲಕ ಬರಮಾಡಿಕೊಂಡರು. ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ೪ ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಿದ್ದಾರೆ. ಶಶಿಕಲಾ ಹೊಸೂರು ಪಟ್ಟಣದ … Continued

ಈಗ ಸತ್ಯಾಗ್ರಹದ ರೂಪ ಪಡೆಯುತ್ತಿರುವ ರೈತ ಆಂದೋಳನ

ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದ ನಂತರ, ಕೆಲ ದುಷ್ಟಶಕ್ತಿಗಳು ಸೇರಿಕೊಂಡು ಮಾಡಿದ ಹಿಂಸೆ ಪ್ರಾಮಾಣಿಕವಾದ ಅಹಿಂಸಾತ್ಮಕ ಪ್ರತಿಭಟನೆ ದುರ್ಬಲಗೊಳಿಸುವುದನ್ನು ತಡೆಯುವುದು ಎಷ್ಟು ಕಷ್ಟ ಎಂಬ ಬಗ್ಗೆ ಸಾಕಷ್ಟು ಅಭಿಪ್ರಾಯಗಳಿವೆ. ಆದರೆ ಫೆ.೧ರಿಂದ ಮತ್ತೆ ಅಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿದೆ. ಜೊತೆಗೆ ದೆಹಲಿಯ ಹೊರವಲಯದ ಸಿಂಘು ಗಡಿಗೆ ಸೀಮಿತವಾಗಿದ್ದ ಈ ಅಹಿಂಸಾತ್ಮಕ ಪ್ರತಿಭಟನೆ, ಸತ್ಯಾಗ್ರಹದ ರೂಪದಲ್ಲಿ ಈಗ … Continued

ಕನಿಷ್ಠ ಬೆಂಬಲ ಬೆಲೆ ಇತ್ತು, ಇದೆ, ಮುಂದೆಯೂ ಇರಲಿದೆ: ರೈತರಿಗೆ ಪ್ರಧಾನಿ ಅಭಯ

ಕೃಷಿ ಕಾನೂನುಗಳನ್ನು ಹಸಿರು ಕ್ರಾಂತಿಯೊಂದಿಗೆ ಹೋಲಿಸಿದ ಪ್ರಧಾನಿ   ನವ ದೆಹಲಿ; ಕೃಷಿ ಉತ್ಪನ್ನಕ್ಕೆ ಕನಿಷ್ಠ ಬೆಂಬಲ ಬೆಲೆ ಇತ್ತು, ಇದೆ, ಮುಂದೆಯೂ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಪುನಃ ಆಶ್ವಾಸನೆ ನೀಡಿದರು. ರಾಷ್ಟ್ರಪತಿ ಭಾಷಣಕ್ಕೆ ಅಭಿನಂದನಾ ಚರ್ಚೆಯಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ನಾವು ಈ ಸಮಯವನ್ನು ಕಳೆದುಕೊಳ್ಳಬಾರದು, ಪ್ರಗತಿ ಹೊಂದಬೇಕು, … Continued

ಎಡ-ಕಾಂಗ್ರೆಸ್‌ ಜೊತೆ ತೃಣಮೂಲ ರಹಸ್ಯ ಒಪ್ಪಂದ; ಪ್ರಧಾನಿ ಮೋದಿ ವಾಗ್ದಾಳಿ

ಕೊಲ್ಕತ್ತ: ತೃಣಮೂಲ ಕಾಂಗ್ರೆಸ್‌ ಪಕ್ಷವು ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ. ಮತದಾರರು ಈ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಜಾಗೃತರಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಧಾನಸಭಾ ಚುನಾವಣೆಗೆ ಮುನ್ನ ಬಂಗಾಳದಲ್ಲಿ ಬಾನುವಾರ ಸಂಜೆ ಹಲ್ಡಿಯಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಮತದಾರರಿಗೆ ಈ ರೀತಿ ಕರೆ ನೀಡಿದ್ದಾರೆ. ನೀವು … Continued

ರೈತರ ಪ್ರತಿಭಟನೆ: 1,178 ಖಾತೆ ತೆಗೆಯಲು ಟ್ವಿಟರ್‌ಗೆ ಕೇಂದ್ರ ಸರ್ಕಾರದ ಸೂಚನೆ

ನವ ದೆಹಲಿ: ರೈತರ ಪ್ರತಿಭಟನೆಯ ಸುತ್ತಲಿನ ‘ಟೂಲ್‌ಕಿಟ್’ ವಿವಾದದ ಮಧ್ಯೆ, ರೈತರ ಆಂದೋಲನದ ಬಗ್ಗೆ ತಪ್ಪು ಮಾಹಿತಿ ಮತ್ತು ಪ್ರಚೋದನಕಾರಿ ವಿಷಯ ಹರಡುವ 1,178 “ಪಾಕಿಸ್ತಾನಿ-ಖಲಿಸ್ತಾನಿ ಖಾತೆಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರವು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ಗೆ ನಿರ್ದೇಶನ ನೀಡಿದೆ” ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಟ್ವಿಟರ್ ಇನ್ನೂ ಆದೇಶಗಳನ್ನು ಸಂಪೂರ್ಣವಾಗಿ ಪಾಲಿಸಿಲ್ಲ. ರೈತ ಸಂಘಗಳ … Continued

ಪುನಃ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಸೇರಲು ಅಮರಿಕ ನಿರ್ಧಾರ

ವಾಷಿಂಗ್ಟನ್‌: ಸುಮಾರು ಮೂರು ವರ್ಷಗಳ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ಹಿಂದೆ ಸರಿದಿದ್ದ ನಿರ್ಧಾರವನ್ನು ಈಗಿನ ಅಧ್ಯಕ್ಷ ಬಿಡೆನ್ ಆಡಳಿತವು ರದ್ದುಪಡಿಸಿ ಪುನಃ ಅದನ್ನು ಸೇರಲು ಸಜ್ಜಾಗಿದೆ. ಹಿಂದಿನ ಟ್ರಂಪ್‌ ಆಡಳಿತದ ಒಂದೊಂದೇ ನಿರ್ಣಯವನ್ನು ಬದಲಿಸುತ್ತಿರುವ ಬಿಡೆನ್‌ ಈಗ ಇದನ್ನು ಬದಲಾಯಿಸಲು ನಿರ್ಧರಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು … Continued

ಗುರ್ಗಾಂವ್‌ ಕೊಲೆ ಪ್ರಕರಣ: ಇನ್ನೂ ಆರಂಭವಾಗದ ವಿಚಾರಣೆ

ನವದೆಹಲಿ: ಗುರ್ಗಾಂವ್‌ನ ಖಾಸಗಿ ಶಾಲೆಯಲ್ಲಿ ಏಳು ವರ್ಷದ ಬಾಲಕನನ್ನು ಕೊಂದು ಪ್ರಕರಣಕ್ಕೆ ಮೂರು ವರ್ಷಗಳಾದರೂ ಇನ್ನೂ ವಿಚಾರಣೆ ಇನ್ನೂ ಆರಂಭವಾಗಿಲ್ಲ. 8 ಸೆಪ್ಟೆಂಬರ್ 2017 ರಂದು ೭ ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪದ ಮೇಲೆ ಅದೇ ಶಾಲೆಯ 11 ನೇ ತರಗತಿಯ ವಿದ್ಯಾರ್ಥಿಯನ್ನು ಸಿಬಿಐ ಬಂಧಿಸಿತ್ತು.. ಆದಾಗ್ಯೂ, ಸಂಬಂಧಿತ ಪ್ರಕರಣಗಳಲ್ಲಿ ಹಲವಾರು ಕಾನೂನು ತೊಡಕುಗಳಿರುವುದರಿಂದ … Continued

ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರ ಸಿದ್ಧ: ಗೋಯಲ್‌

ನವ ದೆಹಲಿ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಭಾನುವಾರ ಹೇಳಿದ್ದಾರೆ. ಆದರೆ ಪದೇ ಪದೇ ಪ್ರಸ್ತಾಪಗಳಿದ್ದರೂ ಪ್ರತಿಭಟನಾಕಾರರು ಈವರೆಗೆ ಯಾವುದೇ ಸ್ಪಷ್ಟ ಹಾಗೂ ಪರಿನಾಮಕಾರಿ ಸಲಹೆ ನೀಡಿಲ್ಲ ಎಂದು ಪ್ರತಿಪಾದಿಸಿದರು. ರೈತ ಸಂಘಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ … Continued

ಚೀನಾದ ಮಾನವ ಹಕ್ಕುಗಳ ಹೋರಾಟಗಾರ ನಾಪತ್ತೆ

ಬೀಜಿಂಗ್‌: ದೇಶದಿಂದ ಹೊರಹೋಗದಂತೆ ನಿರ್ಬಂಧಿಸಿದ ನಂತರ ಚೀನಾದ ಮಾನವ ಹಕ್ಕುಗಳ ಹೋರಾಟಗಾರ ಗುವೊ ಫಿಕ್ಸಿಯಾಂಗ್ ಅವರಿಗೆ ತಮ್ಮ ಕುಟುಂಬವನ್ನು ಸೇರಲು ನಿರ್ಬಂಧಿಸಲಾಗಿದೆ ಎಂದು ಅವರ ಸಹೋದರಿ ಹೇಳಿದ್ದಾರೆ. ಅಮೆರಿಕಕ್ಕೆ ತೆರಳಲು ವಿಮಾನ ಹತ್ತಲು ಪ್ರಯತ್ನಿಸುವಾಗ ಶಾಂಘೈನ ಪುಡಾಂಗ್ ವಿಮಾನ ನಿಲ್ದಾಣದಲ್ಲಿ ಅವರು ಬಂಧನಕ್ಕೊಳಗಾದ ನಂತರ ಗುವೊ ಅವರಿಂದಾಗಲೀ ಅಥವಾ ಪೊಲೀಸರಿಂದಅಗಲೀ ಯಾವುದೇ ಮಾಹಿತಿ ಇಲ್ಲ ಎಂದು … Continued

ಅಫ್ಘಾನಿಸ್ಥಾನಕ್ಕೆ ಭಾರತದಿಂದ ೫ ಲಕ್ಷ ಕೊವಿಡ್‌ ಲಸಿಕೆ

  ಅಫ್ಘಾನಿಸ್ಥಾನವು ಭಾನುವಾರ ಭಾರತದಿಂದ ದೊಡ್ಡ ಪ್ರಮಾಣದ COVID-19 ಲಸಿಕೆಗಳನ್ನು ಪಡೆಯಿತು. ಮುಂಬೈನಿಂದ 5,00,000 ಡೋಸ್ ಕೋವಿಶೀಲ್ಡ್ ಲಸಿಕೆ ಹೊತ್ತ ವಿಶೇಷ ಭಾರತೀಯ ವಿಮಾನವು ಕಾಬೂಲ್ ತಲುಪಿತು, ಅಲ್ಲಿ ಅಫ್ಘಾನಿಸ್ತಾನದ ಆರೋಗ್ಯ ಸಚಿವಾಲಯದ ಅಧಿಕಾರಿಗಳು ರವಾನೆಯ ಉಸ್ತುವಾರಿ ವಹಿಸಿಕೊಂಡರು. “ಮೇಡ್ ಇನ್ ಇಂಡಿಯಾ ಲಸಿಕೆಗಳು ಅಫ್ಘಾನಿಸ್ತಾನವನ್ನು ತಲುಪುತ್ತವೆ. (ನಾವು) ಯಾವಾಗಲೂ ನಮ್ಮ ಸ್ನೇಹಿತರೊಂದಿಗೆ ನಿಲ್ಲುತ್ತೇವೆ, ”ಎಂದು … Continued