ಸೂಕಿ ಬಂಧನಕ್ಕೆ ಪೊಲೀಸರು ಸಜ್ಜು

ಉಚ್ಚಾಟಿತ ಮಾಯನ್ಮಾರ ಅಧ್ಯಕ್ಷೆ  ಆಂಗ್ ಸಾನ್ ಸೂಕಿ ವಿರುದ್ಧ ಕಾನೂನುಬಾಹಿರವಾಗಿ ಸಂವಹನ ಸಾಧನಗಳನ್ನು ಆಮದು ಮಾಡಿಕೊಂಡ ಕಾರಣ ನೀಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  ಮತ್ತು ತನಿಖೆಗಾಗಿ ಫೆಬ್ರವರಿ 15 ರ ವರೆಗೆ  ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಮ್ಯಾನ್ಮಾರ್‌ನ ಸೈನ್ಯವು ಸೋಮವಾರ ಅಧಿಕಾರವನ್ನುತನ್ನ ವಶಕ್ಕೆ ತೆಗೆದುಕೊಂಡ ನಂತರ ಈ ಬೆಳವಣಿಗೆ ನಡೆದಿದೆ. 75 ವರ್ಷದ ನೊಬೆಲ್ … Continued

೩ ಖಾಸಗಿ ವಿವಿ ಸ್ಥಾಪನೆಗೆ ಪರಿಷತ್ತಿನಲ್ಲೂ ಅಂಗೀಕಾರ

ಬೆಂಗಳೂರು: ಮೂರು ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ವಿಧೇಯಕಕ್ಕೆ ವಿಧಾನ ಪರಿಷತ್ ಧ್ವನಿಮತದ ಮೂಲಕ ಅಂಗೀಕಾರ ನೀಡಿದೆ. ಭೋಜನ  ವಿರಾಮದ ಬಳಿಕ ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ , ನ್ಯೂ ಹೊರೈಜನ್, ವಿದ್ಯಾಶಿಲ್ಷ್ ವಿಶ್ವವಿದ್ಯಾಲಯ, ಏಟ್ರಿಯಾ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ವಿಧೇಯಕ  ಮಂಡನೆ ಮಾಡಿದರು. ತಪ್ಪು ನಡೆದರೆ ಮಾನ್ಯತೆಯನ್ನೇ ರದ್ದು … Continued

ಇಂಡಿಯಾ ಟುಗೆದರ್‌: ಕೇಂದ್ರ ಸಚಿವರಿಂದ ಸೋಶಿಯಲ್‌ ಮೀಡಿಯಾ ಚಳವಳಿ

ನವ ದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ   ರೈತರ ಪ್ರತಿಭಟನೆಗೆ ‘ಅಂತಾರಾಷ್ಟ್ರೀಯ ಪ್ರಚೋದನೆ’ ಖಂಡಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರದ ಎಲ್ಲ ಸಚಿವರು    ಈ ಹೇಳಿಕೆ ಖಂಡಿಸಿ  # ಇಂಡಿಯಾ ಟುಗೆದರ್ ಮತ್ತು # ಇಂಡಿಯಾ ಅಗೆನೆಸ್ಟ್‌ ಪ್ರೊಪಗೆಂಡ ಎಂಬ ಸಾಮಾಜಿಕ ಜಾಲತಾಣದ ಚಳವಳಿ ಆರಂಭಿಸಿದ್ದಾರೆ. ‌ ಇದು ಸಾಮಾಜಿಕ ಮಾಧ್ಯಮದ … Continued

ಬೆಂಗಳೂರಿನ ಮಾನದಂಡ ಅನುಸರಿಸಿ ನಮಗ್ಯಾಕೆ ಶಿಕ್ಷೆ..?

ಧಾರವಾಡ:  ಅವೈಜ್ಞಾನಿಕವಾಗಿರುವ  ಶೇ. ೭೦ರಷ್ಟು ಶುಲ್ಕಪಡೆಯುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಶಾಲಾ ಶುಲ್ಕ ಪಡೆಯುವ ಆಧಾರವಾಗಲಿ, ನಗರಗಳ ಗ್ರೇಡ್ ಮೇಲಾಗಲಿ ಶುಲ್ಕ   ಕಡಿತಗೊಳಿಸುವಂತೆ ಆಗಬೇಕು ಎಂದು ಧಾರವಾಡ ಅನುದಾನ ರಹಿತ ಖಾಸಗಿ ಶಾಲೆಗಳ ಅಭಿವೃದ್ಧಿ ಸಂಸ್ಥೆ ಹಾಗೂ ಧಾರವಾಡ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಆಗ್ರಹಸಿವೆ. ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ಈ … Continued

ರೈತರ ಪ್ರತಿಭಟನೆ: ವಿದೇಶಿಯರ ಹಸ್ತಕ್ಷೇಪಕ್ಕೆ ಕೇಂದ್ರ ಆಕ್ಷೇಪ

ನವ ದೆಹಲಿ: ನೂತನ ಕೃಷಿ ಮಸೂದೆಗಳನ್ನು ಖಂಡಿಸಿ ನಡೆಯುತ್ತಿರುವ ರೈತರ ಹೋರಾಟದ ಕುರಿತು ಕೆಲ ವಿದೇಶಿಯರು ಹೇಳಿಕೆ ನೀಡಿದ್ದನ್ನು ಭಾರತ ಖಂಡಿಸಿದೆ. ಖ್ಯಾತ‌  ಪಾಪ್‌ ಗಾಯಕಿ‌ ರಿಹಾನಾ ಹಾಗೂ ಪರಿಸರ ಹೋರಾಟಗಾರರಾದ ಗ್ರೆಟಾ ಥಂಬರ್ಗ್‌ ರೈತರ ಹೋರಾಟಕ್ಕೆ ಬೆಂಬಲ ನೀಡಿದ ಮರುದಿನ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಕೆಲ ಸ್ವ ಹಿತಾಸಕ್ತಿ ಹೊಂದಿದ ಗುಂಪುಗಳು ತಮ್ಮ … Continued

ಎನ್‌ಸಿಪಿಗೆ ಬಿಜೆಪಿ ಶಾಸಕನ ೫ ಕೋಟಿ ರೂ. ದೇಣಿಗೆ !

ಮುಂಬೈ: ಶರದ್‌ ಪವಾರ್‌ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ೨೦೧೯-೨೦ನೇ ಸಾಲಿನಲ್ಲಿ ೫೯.೯೪ ಕೋಟಿ ರೂ. ಪಕ್ಷದ ದೇಣಿಗೆ ಸಂಗ್ರಹ ಮಾಡಿದ್ದು, ಕಳೆದ ವರ್ಷ ಪಕ್ಷ ಕೇವಲ ೧೨.೦೫ ಕೋಟಿ ರೂ. ದೇಣಿಗೆ ಸಂಗ್ರಹಿಸಿತ್ತು. ಶಿವಸೇನಾ, ಕಾಂಗ್ರೆಸ್‌ ನೊಂದಿಗೆ ಮಹಾ ವಿಕಾಸ ಅಗಾಢಿ ಸರಕಾರ ನಡೆಸುತ್ತಿರುವ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಗೆ ಹಣ ಹರಿದು … Continued

ಟ್ವಿಟರ್‌ಗೆ ಕೇಂದ್ರದ ನೋಟಿಸ್‌

ನವದೆಹಲಿ: ರೈತರ ನರಮೇಧ ಎಂಬಂತೆ ತಪ್ಪು ಮಾಹಿತಿಯಿರುವ ಹ್ಯಾಷ್ ಟ್ಯಾಗ್ ಹೊಂದಿರುವ ಖಾತೆಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರಕಾರ ಮೈಕ್ರೊ ಬ್ಲಾಗಿಂಗ್‌ ಸೈಟ್‌ ಟ್ವಿಟರ್‌ಗೆ ನೊಟೀಸ್‌ ನೀಡಿದ್ದು, ಆದೇಶ ಪಾಲನೆಗೆ ತಪ್ಪಿದರೆ ದಂಡ ವಿಧಿಸುವ ಎಚ್ಚರಿಕೆ ನೀಡಿದೆ. ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ತಂತ್ರಜ್ಞಾನ-೨೦೦೦ರ ಕಾಯ್ದೆಯ ೬೯ ಎ ಅನುಚ್ಛೇದದಡಿ ತುರ್ತು ಮಧ್ಯಂತರ … Continued

ಬ್ಯಾರಿಕೇಡ್‌ ತೆರವು ಮಾಡದಿದ್ದರೆ ಮಾತುಕತೆಯಿಲ್ಲ: ರೈತ ಸಂಘಟನೆ

ನವ ದೆಹಲಿ: ದೆಹಲಿ ಗಡಿಯಲ್ಲಿ ಪೊಲೀಸರು ರಸ್ತೆಗಳಲ್ಲಿ ನಿರ್ಮಿಸಿದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವವರೆಗೆ ಹಾಗೂ ಇಂಟರ್‌ನೆಟ್‌ ಸೇವೆಯ ತಡೆಯನ್ನು ತೆರವುಗೊಳಿಸುವವರೆಗೆ ಕೇಂದ್ರ ಸರಕಾರದೊಂದಿಗೆ ಯಾವುದೇ ಔಪಚಾರಿಕ ಮಾತುಕತೆ ನಡೆಸುವುದಿಲ್ಲ ಎಂದು ರೈತ ಹೋರಾಟದ ನೇತೃತ್ವ ವಹಿಸಿದ ಸಂಯುಕ್ತ ಕಿಸಾನ್‌ ಮೋರ್ಚಾ ತಿಳಿಸಿದೆ. ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡ ರಾಕೇಶ ಟಿಕಾಯತ್‌,  ಪೊಲೀಸರು ಬ್ಯಾರಿಕೇಡ್‌ ಹಾಕುವ ಮೂಲಕ ರೈತರ … Continued

ಕೊರೋನಾ: ಭಾರತ, ಅಮೆರಿಕ ಸೇರಿ ೨೦ ದೇಶಗಳ ನಾಗರಿಕರಿಗೆ ಸೌದಿ ನಿರ್ಭಂಧ

ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೌದಿ ಅರೆಬಿಯಾ ಭಾರತ ಹಾಗೂ ಅಮೆರಿಕ ಸೇರಿದಂತೆ 20 ದೇಶಗಳ ನಾಗರಿಕರು ತನ್ನ ದೇಶಕ್ಕೆ ಆಗಮಿಸುವುದನ್ನು  ಮಂಗಳವಾರದಿಂದ ನಿಷೇಧಿಸಿದೆ. ಈ “ತಾತ್ಕಾಲಿಕ ನಿಷೇಧ” ರಾಜತಾಂತ್ರಿಕರು, ಸೌದಿ ನಾಗರಿಕರು,  ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಅನ್ವಯಿಸುವುದಿಲ್ಲ ಎಂದು ಎಎಫ್‌ಪಿ ವರದಿ ಮಾಡಿದೆ. ಆದರೆ ಇದು ಸೌದಿ … Continued

ತಾಂತ್ರಿಕ ಸಮಸ್ಯೆ: ಐಟಿಐ ವಿದ್ಯಾರ್ಥಿಗಳ ಪರೀಕ್ಷೆಗೆ ತೊಡಕು

ಬೆಂಗಳೂರು: ತಾಂತ್ರಿಕ ತೊಂದರೆಯಿಂದಾಗಿ ಐಟಿಐ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗುವ ಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ೧೭೫೦ಕ್ಕೂ ಹೆಚ್ಚು ಐಟಿಐ ಕಾಲೇಜುಗಳಿದ್ದು, ೧ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿದೆ. ಕಳೆದ ವರ್ಷ ಜುಲೈ-ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಕೊವಿಡ್‌ ಕಾರಣದಿಂದ ಮುಂದೂಡಲಾಗಿತ್ತು. ೨೦೨೦ರ ನವಂಬರ್‌ನಲ್ಲಿ ಪ್ರಾಯೋಗಿಕ ಹಾಗೂ ಎಂಜಿನೀಯರಿಂಗ್‌ ಡ್ರಾಯಿಂಗ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಉಳಿದ ವಿಷಯಗಳ ಪರೀಕ್ಷೆಗಳನ್ನು ಆನ್‌ಲೈನ್‌ … Continued