ಮ್ಯಾನ್ಮಾರ್‌ನಲ್ಲಿ ನಡೆದ ದಂಗೆಯಲ್ಲಿ ೧೮ ಜನರ ಸಾವು

ಮ್ಯಾನ್ಮಾರ್‌ನಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ದೌರ್ಜನ್ಯದಲ್ಲಿ ಕನಿಷ್ಟ ೧೮ ಜನರು ಸಾವನ್ನಪ್ಪಿದ್ದು, ೩೦ ಜನರು ಗಾಯಗೊಂಡಿದ್ದಾರೆ ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ. ಯಾಂಗೊನ್, ದಾವೆ, ಮಾಂಡಲೆ, ಮೈಕ್, ಬಾಗೊ ಮತ್ತು ಪೊಕೊಕ್ಕುಗಳಲ್ಲಿ ಜನಸಮೂಹಕ್ಕೆ ಗುಂಡು ಹಾರಿಸಿದ ಪರಿಣಾಮವಾಗಿ ಸಾವುಗಳು ಸಂಭವಿಸಿವೆ. ಹಲವೆಡೆ ಅಶ್ರುವಾಯು ಮತ್ತು ಫ್ಲ್ಯಾಷ್-ಬ್ಯಾಂಗ್ ಮತ್ತು ಸ್ಟನ್ ಗ್ರೆನೇಡ್‌ಗಳಲ್ಲಿ ಬಳಕೆಯಾಗಿದೆ … Continued

ರಾಜ್ಯದಲ್ಲಿ ಹೆಚ್ಚಿದ ೫೨೧ ಜನರಿಗೆ ಕೊರೊನಾ ಸಂಕು, ಐದು ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರ ಹೆಚ್ಚಾಗುತ್ತಿದ್ದು, ರವಿವಾರ 521 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,51,251ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 5 ಮಂದಿ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,331ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ರವಿವಾರ 312 ಮಂದಿಗೆ … Continued

ಬಿಪಿಎಫ್‌ ಕಾಂಗ್ರೆಸ್‌ ತೆಕ್ಕೆಗೆ: ತಮಗೆ ಲಾಭ ಎಂದ ಕಾಂಗ್ರೆಸ್‌, ತಲೆಕೆಡಿಸಿಕೊಳ್ಳದ ಬಿಜೆಪಿ

ಪ್ರಾದೇಶಿಕ ಪಕ್ಷವಾದ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಬಿಜೆಪಿಯಿಂದ ಬಿಟ್ಟು ಮತ್ತೆ ಕಾಂಗ್ರೆಸ್‌ ಜೊತೆ ಕೈಜೋಡಿಸುವ ನಿರ್ಧಾರವನ್ನು ಶನಿವಾರ ಪ್ರಕಟಿಸಿದೆ. ಇದು ಅಸ್ಸಾಂ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಮೊದಲ ಮಹತ್ವ ಬೆಳವಣಿಗೆ ಎಂದು ಹೇಳಲಾಗುತ್ತಿದೆ. ಆದರೆ ಕೆಲವು ಚುನಾವಣಾ ವಿಶ್ಲೇಷಕರು ಮಾತ್ರ ಇದಕ್ಕೆ ಅಷ್ಟೊಂದು ಮಹತ್ವವನ್ನು ಕೊಡುತ್ತಿಲ್ಲ ಹಾಗೂ ಬಿಜೆಪಿಯು ಈ ಬಗ್ಗೆ ಜಾಸ್ತಿ … Continued

ವಿಶೇಷ ದಿಜಿಪಿ ರಾಜೇಶದಾಸ ವಿರುದ್ಧದ ಲೈಂಗಿಕ ಕಿರುಕುಳ ಆರೋಪ: ಸಿಐಡಿ ತನಿಖೆ

ಚೆನ್ನೈ; ವಿಶೇಷ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ರಾಜೇಶ್ ದಾಸ್ ವಿರುದ್ಧ ಮಹಿಳಾ ಐಪಿಎಸ್ ಅಧಿಕಾರಿ ಮಾಡಿದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತಮಿಳುನಾಡು ಪೊಲೀಸರ ಅಪರಾಧ ಶಾಖೆ-ಸಿಐಡಿ ತನಿಖೆ ನಡೆಸಲಿದೆ. ರಾಜೇಶ್ ದಾಸ್ ತನ್ನ ವಾಹನದಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳಾ ಅಧಿಕಾರಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ದೂರು ದಾಖಲಿಸದಂತೆ ಮಹಿಳೆಯನ್ನು … Continued

ಬಂಗಾಳದಲ್ಲಿ ಅತಂತ್ರವಾದರೆ ಟಿಎಂಸಿ-ಬಿಜೆಪಿ ಸರ್ಕಾರದ ರಚನೆ, ಯಾಕಂದ್ರೆ ಇಬ್ಬರು ಹಳೆಯ ಮಿತ್ರರು: ಯೆಚೂರಿ

ಭಾನುವಾರ ನಡೆದ ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಬೃಹತ್ ಸಮಾವೇಶದಲ್ಲಿರಾಜ್ಯದ ತೃಣಮೂಲ ಕಾಂಗ್ರೆಸ್‌ ಸರ್ಕಾರ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಜನಶಕ್ತಿ ಮೂಲಕ ಈ ಸರ್ಕಾರಗಳನ್ನು ಕಿತ್ತು ಹಾಕಬೇಕು ಎಂದು ಹೇಳಿದರು. ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಆರ್‌ಎಸ್‌ಎಸ್-ಬಿಜೆಪಿಯ ಕೋಮುವಾದಿ ತಂಡವನ್ನು ತಡೆಯಲು … Continued

ಕೊರೊನಾ ಹೆಚ್ಚಳ: ಪುಣೆಯಲ್ಲಿ ಶಾಲೆಗಳು ಮಾ.೧೪ರ ವರೆಗೆ ಸ್ಥಗಿತ

ಪುಣೆಯಲ್ಲಿ ಸಿಒವಿಐಡಿ -19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪುಣೆ ಜಿಲ್ಲಾಡಳಿತ ಭಾನುವಾರ ರಾತ್ರಿ ಕರ್ಫ್ಯೂ ಮತ್ತು ಶಾಲೆಗಳನ್ನು ಸ್ಥಗಿತಗೊಳಿಸಿರುವುದನ್ನು ಮಾರ್ಚ್ 14ರ ವರೆಗೆ ವಿಸ್ತರಿಸಿದೆ. ಅಗತ್ಯ ಸೇವೆಗಳನ್ನು ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ. ಫೆಬ್ರವರಿ 28 ರ ವರೆಗೆ ಪುಣೆ ನಗರದಲ್ಲಿ ವಿಧಿಸಲಾದ ಸಿಒವಿಐಡಿ -19 ನಿರ್ಬಂಧಗಳನ್ನು ಮಾರ್ಚ್ 14ರ ವರೆಗೆ ವಿಸ್ತರಿಸಲಾಗಿದೆ” ಎಂದು ಪುಣೆ ಮೇಯರ್‌ … Continued

ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಅನುಮತಿ

ವಾಷಿಂಗ್ಟನ್: ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಸರ್ಕಾರ ಅನುಮತಿ ನೀಡಿದೆ. ಅಮೆರಿಕದಲ್ಲಿ ಸೋಂಕು ತಡೆಯಲು ಈ ಲಸಿಕೆಗೆ ಜೋ ಬೈಡನ್ ಆಡಳಿತ ಅನುಮತಿ ಕೊಟ್ಟಿದೆ. ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಸಂಸ್ಥೆಯ ಕೋವಿಡ್‌ ಲಸಿಕೆಯ ಪ್ರಯೋಗಾತ್ಮಕ ವರದಿಯಲ್ಲಿ ಲಸಿಕೆ ಸೋಂಕಿತರ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತುರ್ತು … Continued

ತಮಿಳು ಭಾಷೆಯ ಹಿರಿಮೆ ಹೊಗಳಿದ ಪ್ರಧಾನಿ ಮೋದಿ

ಸುಂದರ ಭಾಷೆಗಳಲ್ಲೊಂದಾದ ತಮಿಳು ಕಲಿಯಲು ಸಾಧ್ಯವಾಗದಿರುವುದಕ್ಕೆ ವ್ಯಥೆಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಮನ್‌ ಕೀ ಬಾತ್‌ನಲ್ಲಿ ಮಾತನಾಡಿ, ಅತ್ಯಂತ ಹಳೆಯ ಭಾಷೆ ತಮಿಳು ಸುಂದರ ಭಾಷೆಯಾಗಿದ್ದು, ಅದು ವಿಶ್ವದಾದ್ಯಂತ ಜನಪ್ರಿಯ ಭಾಷೆಯಾಗಿದೆ ಎಂದು ಬಣ್ಣಿಸಿದರು. ತಮಿಳು ಕಲಿಯಲು ಸಾಧ್ಯವಾಗದಿರುವುದು ಒಂದು ವಿಷಾದವಾಗಿದೆ ವಿಶ್ವದ ಅತ್ಯಂತ ಹಳೆಯ ಭಾಷೆ ತಮಿಳು ಕಲಿಯಬೇಕು. ತಮಿಳು … Continued

ಲಗ್ನಪತ್ರಿಕೆಯಲ್ಲಿ ಕೃಷಿ ಮಾಹಿತಿ: ಸಮಗ್ರ ಕೃಷಿ ಉತ್ತೇಜನಕ್ಕೆ ಮುಂದಾದ ಯುವ ರೈತ

ರಾಮನಗರ: ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಸಮಗ್ರ ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿ ಪ್ರಕಟಿಸಿದ ಕನಕಪುರದ ಯುವ ರೈತರೊಬ್ಬರು ಕೃಷಿಕರ ಚಿತ್ತ ಸೆಳೆದಿದ್ದಾರೆ. ತಾಲೂಕಿನ ಗೊಲ್ಲಹಳ್ಳಿ ಸಮೀಪದ ತೆರಿಗೆದೊಡ್ಡಿಯ ಅರ್ಜುನ ನಾಯಕ್‌ ಅವರ ಮದುವೆ ಗಂಗಾಬಾಯಿ ಅವರೊಂದಿಗೆ ಮಾರ್ಚ್‌ ೭ರಂದು ಜರುಗಲಿದೆ. ತಮ್ಮ ಲಗ್ನ ಪತ್ರಿಕೆಯಲ್ಲಿ ಒಂದು ಪುಟವನ್ನು ಕೃಷಿ ಪದ್ಧತಿಗಳು ಅವುಗಳ ಪ್ರಯೋಜನಗಳ ಬಗ್ಗೆ … Continued

೩೫೦೦ ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಹೆದ್ದಾರಿಗಳ ಅಭಿವೃದ್ಧಿ: ಕಾರಜೋಳ

ಬೆಂಗಳೂರು; ರಾಜ್ಯದಲ್ಲಿ 2021-22 ನೇ ಸಾಲಿನಲ್ಲಿ 3500 ಕೋಟಿ ರೂ.ಗಳ ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಿದೆ ‌ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಯೋಗಿ ಇಲಾಖೆ ಖಾತೆ ಸಚಿವ ಗೋವಿಂದ ಎಂ ಕಾರಜೋಳ ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ವಿಸ್ತೃತ ಯೋಜನಾ ವರದಿ ( ಡಿಪಿಆರ್) ಸಿದ್ಧಪಡಿಸಲು … Continued