ವರದಕ್ಷಿಣೆ ಕಿರುಕುಳ: ಪತಿ ವಿರುದ್ಧ ಮಹಿಳಾ ಐಪಿಎಸ್‌ ಅಧಿಕಾರಿ ದೂರು

ಬೆಂಗಳೂರು: ರಾಜ್ಯದ ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಪತಿ ಮತ್ತು ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ನೀಡುತ್ತಿರುವ ಬಗ್ಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ತಮ್ಮ ಪತಿ ಐಎಫ್ಎಸ್ ಅಧಿಕಾರಿ ನಿತಿನ್ ಸುಭಾಷ್  ಸೇರಿದಂತೆ ಏಳು ಜನರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು … Continued

ದಾಖಲೆ ಇಲ್ಲದ ೧.೪೭ ಕೋಟಿ ರೂ. ಹಣ ವಶಕ್ಕೆ

ದಾವಣಗೆರೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಬೇನಾಮಿ ಹಣ ಪತ್ತೆಯಾಗಿದ್ದು, ಅಜಾದ್ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಕೆಆರ್ ರಸ್ತೆಯ ಗ್ಯಾಲಕ್ಸಿ ಶಾದಿ ಮಹಲ್ ಬಳಿಯಲ್ಲಿ ಈ ಹಣ ಪತ್ತೆಯಾಗಿದ್ದು, ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ 1.47 ಕೋಟಿ ರೂ.ಮೌಲ್ಯದ ಹಣವನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ. ಗ್ಯಾಲಕ್ಸಿ ಶಾದಿ ಮಹಲ್ ಬಳಿ ಎಎಸ್‍ಐ … Continued

ಕಿಸಾನ್‌ ವಿಶೇಷ ರೈಲು

ಅಗರ್ತಾಲ: ದೇಶದ ಈಶಾನ್ಯ ಪ್ರದೇಶಗಳ ರೈತರು ಮತ್ತು ಸಾಗಣೆದಾರರ ಅನುಕೂಲಕ್ಕಾಗಿ ಈಶಾನ್ಯ ಗಡಿನಾಡು ರೈಲ್ವೆ (ಎನ್‍ಎಫ್‍ಆರ್) ಕಿಸಾನ್ ವಿಶೇಷ ರೈಲುಗಳನ್ನು ಫೆ.11 ರಿಂದ ಅಗರ್ತಾಲದಿಂದ ಹೌರಾ ಮತ್ತು ಸೀಲ್ಡಾವರೆಗೆ ಓಡಿಸಲು ರೈಲ್ವೆ ಇಲಾಖೆ  ನಿರ್ಧರಿಸಿದೆ. ಕಿಸಾನ್ ವಿಶೇಷ ರೈಲು ಪ್ರತಿ ಗುರುವಾರ ವಾರಕ್ಕೊಮ್ಮೆ 19.15 ಗಂಟೆಗೆ ಅಗರ್ತಾಲದಿಂದ ಹೊರಟು ಶನಿವಾರ ಸೀಲ್ಡಾ ತಲುಪಲಿದೆ. ಧರ್ಮಾನ್ ನಗರ, … Continued

ರೈತರ ಹೋರಾಟ: ಮೋದಿ ಸರ್ಕಾರಕ್ಕೆ ಉಗುಳಲೂ ಆಗದ ನುಂಗಲೂ ಆಗದ ತುತ್ತು

ಕೇಂದ್ರದ ಮೋದಿ ಸರ್ಕಾರವು ಕೃಷಿ ಕಾನೂನುಗಳ ಯುದ್ಧದಲ್ಲಿ ಕೆಲವಷ್ಟನ್ನು ಕಳೆದುಕೊಂಡಿದೆ, ಆದರೆ ಕಳೆದುಕೊಂಡಿದ್ದನ್ನು ಮರೆಮಾಚಲು ಮುಗಿದು ಹೋಗಿದ್ದ ಹಾಗೂ ಮುಗಿಯಲೇ ಬೇಕಾಗಿದ್ದ ಸಿಖ್ ಪ್ರತ್ಯೇಕತಾವಾದಿ ವಿಷಯವನ್ನುಮತ್ತೆ ಮುನ್ನೆಲೆಗೆ ತರುವ ದುಸ್ಸಾಹಸಕ್ಕೆ ಕೈ ಹಾಕಿದೆ. ಈಗ ರೈತರ ಪ್ರತಿಭಟನೆಗೆ ಮೂರು ತಿಂಗಳಾಗಿದೆ. ದೆಹಲಿಯ ಹೊರವಲಯದಲ್ಲಿ ರೈತರು ನಿರಂತರವಾಗಿ ಒಂದೇ ಸಮನೆ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರದ … Continued

2,464 ಕೋಟಿ ರೂ. ಮೊತ್ತದ 34 ಒಪ್ಪಂದಗಳಿಗೆ ಸಹಿ

ಬೆಂಗಳೂರು: ಏಷ್ಯಾದಲ್ಲೇ ಅತಿ ದೊಡ್ಡ ಏರೋಸ್ಪೇಸ್‌ ಹಬ್‌ ಆಗಿರುವ ಕರ್ನಾಟಕ,ಹಾಗೂ ಮೂರು ದಿನಗಳಿಂದ ಬೆಂಗಳೂರಿನಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಗಳಿಗೆ ಸಂಬಂಧಿಸಿದ 2,464 ಕೋಟಿ ರೂ. ಮೊತ್ತದ 34 ಒಪ್ಪಂದಗಳಿಗೆ ಶುಕ್ರವಾರ ಸಹಿ ಹಾಕಲಾಗಿದೆ. ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2021ರಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಈ ವೇಳೆ ಮಾತನಾಡಿದ … Continued

ಕೊವಿಡ್‌ ಲಸಿಕೆ: ೯೬ ಲಕ್ಷ ಆರೋಗ್ಯ ಕಾರ್ಯಕರ್ತರು,೭೮ ಲಕ್ಷ ಮಂಚೂಣಿ ಕೆಲಸಗಾರರಿಂದ ನೋಂದಣಿ

ನವ ದೆಹಲಿ: ಫೆಬ್ರವರಿ 3ರ ವರೆಗೆ ಒಟ್ಟು 96,28,179 ಆರೋಗ್ಯ ಕಾರ್ಯಕರ್ತರು ಮತ್ತು 78,51,249 ಮುಂಚೂಣಿ ಕೆಲಸಗಾರರು ಕೋವಿಡ್ -19 ಲಸಿಕೆಗಾಗಿ ನೋಂದಾಯಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ. ಅಂದಾಜು ಮೂರು ಕೋಟಿ ಆರೋಗ್ಯ ಮತ್ತು ಮುಂಚೂಣಿ ಕೆಲಸಗಾರರ ಲಸಿಕೆಗಾಗಿ ಕಾರ್ಯಾಚರಣಾ ವೆಚ್ಚವಾಗಿ ಮಾಡಬೇಕಾದ ಖರ್ಚು ಸುಮಾರು 80480 … Continued

ಅಮೆರಿಕದ ವ್ಯಾಪಾರದ ಕೊರತೆ ೧೨ ವರ್ಷಗಳಲ್ಲೇ ಅತಿ ಹೆಚ್ಚು

ವಾಷಿಂಗ್ಟನ್‌: ಅಮೆರಿಕದ ವ್ಯಾಪಾರ ಕೊರತೆ ಕಳೆದ ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 17.7% ಏರಿಕೆಯಾಗಿ 679 ಬಿಲಿಯನ್ ಡಾಲರ್‌ ಗಳಿಗೆ ತಲುಪಿದೆ. ಅಮೆರಿಕವು ವಿದೇಶದಲ್ಲಿ ಮಾರಾಟ ಮಾಡುವ ಸರಕು ಮತ್ತು ಸೇವೆಗಳ ಮೌಲ್ಯ ಮತ್ತು ಅದು ಖರೀದಿಸುವ ವಸ್ತುಗಳ ನಡುವಿನ ಅಂತರವು 2019 ರಲ್ಲಿ 577 ಬಿಲಿಯನ್ ಡಾಲರ್‌ಗಳಿಗೆ ಏರಿದೆ ಎಂದು ವಾಣಿಜ್ಯ ಇಲಾಖೆ ಶುಕ್ರವಾರ … Continued

ರಷ್ಯಾದಿಂದ ಪೋಲೆಂಡ್, ಜರ್ಮನಿ, ಸ್ವೀಡನ್‌ ರಾಜತಾಂತ್ರಿಕರ ಉಚ್ಚಾಟನೆ

ಮಾಸ್ಕೊ: ಜೈಲಿನಲ್ಲಿದ್ದ ಕ್ರೆಮ್ಲಿನ್ ಆಡಳಿತದ ಕಟು ವಿಮರ್ಶಕ ಅಲೆಕ್ಸಿ ನವಲ್ನಿ ಅವರನ್ನು ಬೆಂಬಲಿಸಿ ಕಳೆದ ತಿಂಗಳು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಕ್ಕಾಗಿ ಪೋಲೆಂಡ್, ಜರ್ಮನಿ ಮತ್ತು ಸ್ವೀಡನ್‌ನ ರಾಜತಾಂತ್ರಿಕರನ್ನು ಹೊರಹಾಕಲಾಗುತ್ತಿದೆ ಎಂದು ಮಾಸ್ಕೋ ಶುಕ್ರವಾರ ಹೇಳಿದೆ. ಯುರೋಪಿಯನ್ ಒಕ್ಕೂಟದ ಉನ್ನತ ರಾಜತಾಂತ್ರಿಕ ಜೋಸೆಫ್‌ ಬೊರೆಲ್ ಮಾಸ್ಕೋದಲ್ಲಿ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರನ್ನು ಭೇಟಿಯಾದ ನಂತರ ಮತ್ತು ರಷ್ಯಾದೊಂದಿಗಿನ … Continued

ರಕ್ಷಣಾ ವಲಯದಲ್ಲಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಸಹಕಾರಿ

ಬೆಂಗಳೂರು: ರಕ್ಷಣಾ ವಲಯದಲ್ಲಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಏರೋ ಏಂಡಿಯಾ ವೈಮಾನಿಕ ಪ್ರದರ್ಶನ ಸಹಕಾರಿಯಾಗಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 13ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ರಕ್ಷಣೆ ಮತ್ತು ವೈಮಾನಿಕ ವಲಯದಲ್ಲಿ ಭಾರತದ ಶಕ್ತಿ ಸಾಮರ್ಥ್ಯವನ್ನು ಜಗತ್ತಿನ ಮುಂದೆ ತೆರೆದಿಡಲು … Continued

ಕಾಂಗ್ರೆಸ್‌ ಶಾಶ್ವತವಾಗಿ ಪ್ರತಿಪಕ್ಷದಲ್ಲಿರುವಂತೆ ಮಾಡ್ತೇನೆ: ಗುಡುಗಿದ ಯಡಿಯೂರಪ್ಪ

ಬೆಂಗಳೂರು: ಸವಾಲುಗಳನ್ನು ಎದುರಿಸಿ ಜನರ ವಿಶ್ವಾಸ ಗೆದ್ದು ೪ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೇನೆ. ಸವಾಲುಗಳನ್ನು ಎದುರಿಸಲು ನನಗೆ ಎಲ್ಲಿಲ್ಲದ ಉತ್ಸಾಹ. ಸವಾಲುಗಳು ನನ್ನನ್ನು ಗಟ್ಟಿಗೊಳಿಸುತ್ತವೆ. ಮುಂದಿನ ಚುನಾವಣೆಯಲ್ಲೂ ಎಲ್ಲ ಸವಾಲುಗಳನ್ನು ಎದುರಿಸಿ ಬಿಜೆಪಿಯನ್ನು ೧೫೦ ಸ್ಥಾನಗಳಲ್ಲಿ ಗೆಲ್ಲಿಸಿ ಮತ್ತೆ ಬಿಜೆಪಿ ಸರ್ಕಾರವನ್ನೆ ಅಧಿಕಾರಕ್ಕೆ ತಂದು ಕಾಂಗ್ರೆಸ್‌ನ್ನು ಶಾಶ್ವತವಾಗಿ ಪ್ರತಿಪಕ್ಷದ ಸ್ಥಾನದಲ್ಲಿರುವಂತೆ ಮಾಡಿಯೇ ತೀರುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ … Continued