ಹೋರಾಟ ತೀವ್ರಕ್ಕೆ ದೆಹಲಿ ಗಡಿ ಬಳಿ ಜಮಾಯಿಸಲು ರೈತರಿಗೆ ಮನವಿ

ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್‌ ರಾಜ್ಯಾದ್ಯಂತ ಆಯೋಜಿಸಲಾಗಿರುವ ಮಹಾಪಂಚಾಯತ್‌ಗಳನ್ನು ರದ್ದುಗೊಳಿಸಿ ರಾಷ್ಟ್ರವ್ಯಾಪಿ ನಡೆಯುವ ರೈಲು ರೋಕೊ ಯಶಸ್ವಿಗೊಳಿಸಲು ದೆಹಲಿ ಗಡಿಗೆ ತೆರಳುವಂತೆ ೩೨ ಪಂಜಾಬ್‌ ರೈತ ಸಂಘಟನೆಗಳ ವೇದಿಕೆ ರಾಜ್ಯದ ರೈತರಿಗೆ ಕೋರಿದೆ. ಮೂರು ಕೃಷಿ ಕಾನೂನುಗಳ ಅಪಾಯಗಳ ಬಗ್ಗೆ ರೈತರಿಗೆ ಮನವರಿಕೆಯಾಗಿರುವುದರಿಂದ ಮಹಾಪಂಚಾಯತ್‌ಗಳನ್ನು ರದ್ದುಪಡಿಸಲಾಗಿದೆ. ಜನವರಿ ೨೬ರ ನಂತರ ಪ್ರತಿಭಟನಾ ಸ್ಥಳದಲ್ಲಿ … Continued

ಆನ್‌ಲೈನ್‌ ಜೂಜು: ಸಚಿವ ಸಂಪುಟ ನಿರ್ಧಾರ ದಾಖಲಿಸಲು ಉಚ್ಚ ನ್ಯಾಯಾಲಯ ನಿರ್ದೇಶನ

ಆನ್‌ಲೈನ್‌ ಜೂಜು ನಿಯಂತ್ರಣದಲ್ಲಿ ಕರ್ನಾಟಕ ರಾಜ್ಯ ಸಚಿವ ಸಂಪುಟ ತೆಗೆದುಕೊಳ್ಳುವ ನಿರ್ಧಾರವನ್ನು ದಾಖಲಿಸುವಂತೆ ರಾಜ್ಯ ಸರಕಾರಕ್ಕೆ ಉಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ. ಆನ್‌ಲೈನ್‌ ಬೆಟ್ಟಿಂಗ್‌ ವಿಷಯವನ್ನು ಸಂಪುಟದ ಮುಂದೆ ಇಡಲಾಗಿದೆ. ಈ ದಿಸೆಯಲ್ಲಿ ಶೀಘ್ರವೇ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಸರಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಸೂಕ್ತ ನಿಯಮಾವಳಿ ರೂಪಿಸುವವರೆಗೆ ಆನ್‌ಲೈನ್‌ ಜೂಜು ರದ್ದುಗೊಳಿಸಬೇಕೆಂದು … Continued

ಮನೆ ಕಟ್ಟಲು ಕೂಡಿಟ್ಟಿದ್ದ ೫ ಲಕ್ಷ ರೂ. ಗೆದ್ದಲು ಪಾಲು

ಹೈದರಾಬಾದ್‌: ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿನ ಉದ್ಯಮಿಯೊಬ್ಬರು ಮನೆಕಟ್ಟಲು ಟ್ರಂಕ್‌ನಲ್ಲಿ ಕೂಡಿಟ್ಟಿದ್ದ ಸುಮಾರು ಐದು ಲಕ್ಷ ನಗದು ಹಣ ಗೆದ್ದಲು ತಿಂದು ಹರಿದು ಚಿಂದಿಯಾಗಿ ಬಳಕೆಗೆ ಬಾರದಂತಾಗಿದೆ. ಹಂದಿ ವ್ಯಾಪಾರಿಯಾಗಿರುವ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಮೈಲಾವರಮ್‌ ಗ್ರಾಮದ ನಿವಾಸಿಯಾಗಿರುವ ಬಿಜಿಲ್‌ ಜಮಾಲಯ್ಯ ಎಂಬಾತ ತಾನು ದುಡಿದ ಹಣವನ್ನು ಬ್ಯಾಂಕ್‌ನಲ್ಲಿ ಇಡುವ ಬದಲು, ಕಬ್ಬಿಣದ ಟ್ರಂಕ್‌ನಲ್ಲಿ … Continued

ಟೂಲ್‌ಕಿಟ್‌ ಆರೋಪ ನಿಕಿತಾಗೆ ೩ ವಾರಗಳ ನಿರೀಕ್ಷಣಾ ಜಾಮೀನು

ಟೂಲ್‌ಕಿಟ್‌ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ನಿಕಿತಾ ಜೇಕಬ್‌ ಅವರಿಗೆ ಬಾಂಬೆ ಉಚ್ಚ ನ್ಯಾಯಾಲಯ ಮೂರು ವಾರಗಳ ನಿರೀಕ್ಷಣಾ ಜಾಮೀನು ನೀಡಿದೆ. ನಿಕಿತಾ ವಿರುದ್ಧ ದೆಹಲಿಯಲ್ಲಿ ಜಾಮೀನು ರಹಿತ ವಾರಂಟ್‌ ಹೊರಡಿಸಲಾಗಿದ್ದರಿಂದ ನಿಕಿತಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರಿಗೆ ಸೂಕ್ತ ಪರಿಹಾರ ಪಡೆಯಲು ಹಾಗೂ ನ್ಯಾಯಾಲಯವನ್ನು ಸಂಪರ್ಕಿಸಲು ಮೂರುವಾರಗಳ ನಿರೀಕ್ಷಣಾ ಜಾಮೀನು ನೀಡಲಾಗಿದೆ ಎಂದು ನ್ಯಾಯಪೀಠ … Continued

ಮಧ್ಯಪ್ರದೇಶ ಬಸ್‌ ದುರಂತ: ಮೃತರ ಸಂಖ್ಯೆ ೫೧ಕ್ಕೇರಿಕೆ

ಭೋಪಾಲ್: ಬಸ್‌ ನಾಲೆಗೆ ಬಿದ್ದ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ೫೧ಕ್ಕೇರಿದ್ದು, ಮಂಗಳವಾರ ಮಧ್ಯಪ್ರದೇಶ ಪೊಲೀಸರು ಬಸ್‌ ಚಾಲಕನನ್ನು ಬಂಧಿಸಿದ್ದಾರೆ. ಧುಮುಕುವವನ್‌ ಬಾಲೆಂದ್ರು ವಿಶ್ವಕರ್ಮ ಬಂಧಿತ ಚಾಲಕನಾಗಿದ್ದಾನೆ. ೧೦ ಕಿ.ಮೀ. ನಾಲೆಯುದ್ದಕ್ಕೂ ಕಾರ್ಯಾಚರಣೆ ನಡೆದಿದ್ದು, ಮಂಗಳವಾರ ೨ ಶವಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ. 63 ಜನರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಪಘಾತಕ್ಕೆ ಸ್ವಲ್ಪ ಮೊದಲು, ಅವರಲ್ಲಿ … Continued

ಸ್ಟಾರ್ಟಪ್‌ಗಳನ್ನು ವಿಶ್ವ ಗುಣಮಟ್ಟದ ಸೇವೆ ನೀಡುವ ಸಂಸ್ಥೆಯನ್ನಾಗಿ ರೂಪಿಸಿ: ಪ್ರಧಾನಿ ಮೋದಿ

ಸ್ಟಾರ್ಟಪ್‌ಗಳ ಸಂಸ್ಥಾಪಕರು ಕೇವಲ ಮೌಲ್ಯಮಾಪನದ ಬಗ್ಗೆ ತಲೆಕೆಡಿಸಿಕೊಳ್ಳದೇ ವಿಶ್ವ ಗುಣಮಟ್ಟದ ಸೇವೆ ಒದಗಿಸುವ ಸಂಸ್ಥೆಗಳನ್ನು ಕಟ್ಟುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ನಾಸ್ಕಾಂ ಟೆಕ್ನಾಲಜಿ ಮತ್ತು ಲೀಡರ್‌ಶಿಪ್‌ ಫೋರಂನಲ್ಲಿ ಮಾತನಾಡಿ, ಸ್ಟಾರ್ಟ್ಅಪ್‌ಗಳು ತಮ್ಮನ್ನು ನಿರ್ಗಮನ ತಂತ್ರಗಳ ಮೌಲ್ಯಮಾಪನಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಶ್ರೇಷ್ಠತೆಯ ಜಾಗತಿಕ ಮಾನದಂಡವನ್ನು ನಿಗದಿಪಡಿಸುವ ವಿಶ್ವ ದರ್ಜೆಯ … Continued

ಕೆಪಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಮುಖ ಆರೋಪಿ ಬಂಧನ

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪ್ರಥಮ ದರ್ಜೆ ಸಹಾಯಕ ಹುದ್ದೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಬೆಳಗಾವಿ ಮೂಲದ ಶಿವಲಿಂಗ ಪಾಟೀಲನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬೆಳಗಾವಿಯಲ್ಲಿ ಬಂಧಿಸಲಾಗಿದೆ. ಆರೋಪಿ ಶಿವಲಿಂಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೋಚಿಂಗ್‌ ಸೆಂಟರ್‌ ನಡೆಸುತ್ತಿದ್ದ. ಕಳೆದ ವರ್ಷ ಸೆಂಟರ್‌ ಮುಚ್ಚಿದ್ದ. ಇನ್ನೊಬ್ಬ ಆರೋಪಿ … Continued

ಕೆಂಪು ಕೋಟೆ ಗಲಭೆ: ಮೋಸ್ಟ್‌ ವಾಂಟೆಡ್‌ ಆರೋಪಿ ಬಂಧನ

ನವದೆಹಲಿ: ಗಣರಾಜ್ಯೋತ್ಸವದಂದು ದೆಹಲಿ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮುನಿಂದರ್‌ ಸಿಂಗ್‌ ಬಂಧಿತ ಆರೋಪಿ. ಕೆಂಪುಕೋಟೆಯಲ್ಲಿ ಎರಡೂ ಕೈಗಳಲ್ಲಿ ಖಡ್ಗ ಹಿಡಿದು ಹಿಂಸೆಗೆ ಪ್ರಚೋದಿಸಿದ ಮುನಿಂದರ್‌ ಮೋಸ್ಟ್‌ ವಾಂಟೆಡ್‌ ಆರೋಪಿಯಾಗಿದ್ದ. ಪ್ರಚೋದನೆಯಿಂದಲೇ ಪೊಲೀಸರ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೆಹಲಿ ಸ್ವರೂಪನಗರದ … Continued

ಮ್ಯಾನ್ಮಾರ್‌ನಲ್ಲಿ ಸೇನಾ ಆಡಳಿತ ಖಂಡಿಸಿ ಮುಂದುವರೆದ ಪ್ರತಿಭಟನೆ

ಮ್ಯನ್ಮಾರ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರೆದಿದೆ. ಜನರು ಬೀದಿಗಿಳಿದು ಮಿಲಿಟರಿ ಆಡಳಿತವನ್ನು ವಿರೋಧಿಸುತ್ತಿದ್ದಾರೆ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೋರಾಟ ತೀವ್ರಗೊಂಡಿರುವ ಯಾಂಗೂನ್‌ಗೆ ದೊಡ್ಡ ಸಂಖ್ಯೆಯ ಸೇನಾ ಪಡೆಗಳನ್ನು ಕಳಿಸಲಾಗುತ್ತಿದೆ. ಹಿಂದೆ ಕೂಡ ಹಲವು ಬಾರಿ ಸೇನೆ … Continued

ಸ್ವಾತಂತ್ರ್ಯಾನಂತರ ಗಲ್ಲಿಗೇರುತ್ತಿರುವ ಮೊದಲ ಮಹಿಳೆ ಶಬನಮ್‌!

ಮಥುರಾ: ಗೆಳೆಯ ಸಲೀಮ್‌ನೊಂದಿಗೆ ಸೇರಿ ತನ್ನ ಕುಟುಂಬದ ಏಳು ಸದಸ್ಯರನ್ನು ಕೊಲೆಗೈದಿದ್ದ ಶಬನಮ್‌ಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿರುವುದರಿಂದ ಸ್ವಾತಂತ್ರ್ಯಾನಂತರ ಗಲ್ಲಿಗೇರುತ್ತಿರುವ ಮೊದಲ ಮಹಿಳೆ ಇವರಾಗಿದ್ದಾರೆ. ಶಬನಮ್‌ಗೆ ಗಲ್ಲು ಶಿಕ್ಷೆ ನೀಡಲು ಮಥುರಾ ಜೈಲಿನಲ್ಲಿ ಸಿದ್ಧತೆ ನಡೆದಿದೆ. ಡೆತ್‌ ವಾರಂಟ್‌ಗಾಗಿ ಕಾಯುತ್ತಿದ್ದೇವೆ ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ. ೨೦೦೮ರ ಎಪ್ರಿಲ್‌ ೧೪ರಂದು ಶಬನಮ್‌ ಸಖ ಸಲೀಮ್‌ನೊಂದಿಗೆ … Continued