ಮದುವೆ ಮೆರವಣಿಗೆ ವೇಳೆ ಓಡಿ ಹೋದ ವಧು..ವರನ ಜೊತೆ ವಧುವಿನ ಅಪ್ರಾಪ್ತ ತಂಗಿ ಮದುವೆ…ಅಪ್ರಾಪ್ತಳನ್ನು ಕರೆದೊಯ್ದ ಆಡಳಿತ

ಭವಾನಿಪಟ್ನಾ: ಕಲಹಂಡಿಯ ದೂರದ ಮಾಲ್ಗುಡಾ ಕುಗ್ರಾಮ ಮಂಗಳವಾರ ರಾತ್ರಿ ಕಂಡದ್ದು ಬಾಲಿವುಡ್ ಪಾಟ್‌ಬಾಯ್ಲರ್‌ಗೆ ಸೂಕ್ತವಾದ ಕಥಾವಸ್ತುವಾಗಿದೆ. ಇದು ಕಥೆಯಲ್ಲಿ ಹಲವಾರು ತಿರುವುಗಳನ್ನು ಹೊಂದಿರುವ ವಿವಾಹವಾಗಿತ್ತು – ಓಡಿದ ವಧು; ಅವಮಾನಿತ ವರ… ಆದರೆ ನಾವು ಹೀಗೆಂದುಕೊಂಡಿದ್ದರೆ ಮುಂದೆ ಆಗಿದ್ದೇ ಮತ್ತೊಂದು. ತನ್ನ ವಧು ತನ್ನ ಮನೆಯಿಂದ ಕೇವಲ 50 ಮೀಟರ್ ದೂರದಲ್ಲಿರುವ ತನ್ನ ಗೆಳೆಯನೊಂದಿಗೆ ಮದುವೆ … Continued

ನಿವೃತ್ತ ಸಿಜೆಐ ರಂಜನ್‌ ಗೊಗೊಯ್‌ ವಿರುದ್ಧದ ಸ್ವಯಂ ಪ್ರೇರಿತ ಪ್ರಕರಣ ರದ್ದುಗೊಳಿಸಿದ ಸುಪ್ರಿಂ ಕೋರ್ಟ್‌

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಸುವ ಸಂಚಿನ ಕುರಿತು ತಾನು ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯ ರದ್ದುಪಡಿಸಿದೆ. ನ್ಯಾಯಮೂರ್ತಿ ಸಂಜಯ್‌ಕಿಶನ್‌ ಕೌಲ್‌ ನೇತೃತ್ವದ ಪೀಠ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ, ವಿ.ರಾಮಸುಬ್ರಮಣಿಯನ್‌ ಅವರನ್ನೊಳಗೊಂಡ ನ್ಯಾಯಪೀಠ ಪಿತೂರಿಯ ಬಗ್ಗೆ ತನಿಖೆ ನಡೆಸಲು ನೇಮಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ … Continued

ಶ್ರೀಲಂಕಾ ಸಂಸತ್ತಿನಲ್ಲಿ ಇಮ್ರಾನ್‌ ಖಾನ್‌ ಭಾಷಣ ರದ್ದು!

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಶ್ರೀಲಂಕಾ ಸಂಸತ್ತನ್ನು ಉದ್ದೇಶಿಸಿ ಮಾಡಬೇಕಿದ್ದ ಭಾಷಣವನ್ನು ದ್ವೀಪರಾಷ್ಟ್ರ ರದ್ದುಪಡಿಸಿದೆ. ಫೆಬ್ರವರಿ 22 ರಿಂದ ಇಮ್ರಾನ್‌ ಖಾನ್ ಎರಡು ದಿನಗಳ ಪ್ರವಾಸಕ್ಕಾಗಿ ಕೊಲಂಬೊಗೆ ಪ್ರಯಾಣಿಸಲಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸೆ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ಸಭೆ ಮತ್ತು ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವುದರ ಜೊತೆಗೆ, ಅವರು ಫೆಬ್ರವರಿ 24 ರಂದು … Continued

ಬಿಜೆಪಿ ತೆಕ್ಕೆಗೆ ಮೆಟ್ರೋಮ್ಯಾನ್‌ ಇ. ಶ್ರೀಧರನ್‌

ಮೆಟ್ರೋಮ್ಯಾನ್‌ ಎಂದೇ ಖ್ಯಾತಿಗಳಿಸಿದ ಇ. ಶ್ರೀಧರನ್‌ ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್‌ ತಿಳಿಸಿದ್ದಾರೆ. ನಮ್ಮ ಮೆಟ್ರೋ ಪ್ರಾಜೆಕ್ಟ್‌ ರೂವಾರಿ ಶ್ರೀಧರನ್‌ ಪಕ್ಷ ಸೇರಿಕೊಳ್ಳಲು ಆಸಕ್ತಿ ತೋರಿದ್ದಾರೆ. ಅವರು ಬಿಜೆಪಿ ರಾಜ್ಯವ್ಯಾಪಿ ಯಾತ್ರೆ ಮಲಪ್ಪುರಂ ಜಿಲ್ಲೆ ಪ್ರವೇಶಿಸಿದ ಸಂದರ್ಭದಲ್ಲಿ ಪಕ್ಷದ ಸದಸ್ಯತ್ವ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿ … Continued

ಬಿಹಾರ್‌ ಚುನಾವಣೆಯಲ್ಲಿ ಕಾಂಗ್ರೆಸ್‌, ಆರ್‌ಜೆಡಿ ಪಕ್ಷಗಳಿಗೆ ವಿಜಯೇಂದ್ರ ಹಣ ನೀಡಿದ ಬಗ್ಗೆ ತನಿಖೆಯಾಗಲಿ: ಯತ್ನಾಳ

ಬೆಂಗಳೂರು: ಬಿಜೆಪಿ ಸೋಲಿಸುವ ಮೂಲಕ ಪ್ರಧಾನಿ ಮೋದಿ ತಾಕತ್ತನ್ನು ಕುಗ್ಗಿಸುವ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಬಿಹಾರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಆರ್‌ಜೆಡಿ ಪಕ್ಷಗಳಿಗೆ ಹಣ ನೀಡಿದ್ದು, ಈ ಕುರಿತು ಸಮರ್ಪಕ ತನಿಖೆ ನಡೆಯಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ. ವಿಜಯೇಂದ್ರ ಬಿಹಾರ ಚುನಾವಣೆಯಲ್ಲಿ ಹಣ ನೀಡಿದ ಬಗ್ಗೆ ಕೇಂದ್ರ ಸರಕಾರಕ್ಕೂ ಮಾಹಿತಿಯಿದೆ. … Continued

ಬಿಗ್‌ ಬಿ, ಅಕ್ಷಯಕುಮಾರ ಚಿತ್ರಗಳ ಶೂಟಿಂಗ್‌ಗೆ ಅವಕಾಶ ನೀಡುವುದಿಲ್ಲ : ಮಹಾರಾಷ್ಟ್ರ ಕಾಂಗ್ರೆಸ್‌ ಎಚ್ಚರಿಕೆ

ಮುಂಬೈ: ಕೇಂದ್ರ ಸರಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಹೆಚ್ಚಿಸಿರುವುದರ ಕುರಿತು ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಹಾಗೂ ಅಕ್ಷಯಕುಮಾರ ಮೌನ ವಹಿಸಿರುವುದನ್ನು ಖಂಡಿಸಿದ ಮಹಾರಾಷ್ಟ್ರ ಕಾಂಗ್ರೆಸ್‌ ಇಬ್ಬರೂ ನಟರ ಚಿತ್ರಗಳ ಚಿತ್ರೀಕರಣ ಮಾಡಲು ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಇಬ್ಬರೂ ಹಿರಿಯ ನಟರ ನಿಲುವು … Continued

ತಾಯಿಯನ್ನು ಗಲ್ಲು ಶಿಕ್ಷೆಯಿಂದ ಉಳಿಸುವಂತೆ ರಾಷ್ಟ್ರಪತಿಗೆ ಕೋರಿದ ತಾಜ್‌‌

ಲಖನೌ: ತನ್ನ ಕುಟುಂಬದ ಏಳು ಸದಸ್ಯರನ್ನು ಕೊಂದು ಮರಣದಂಡನೆ ಶಿಕ್ಷೆಗೊಳಗಾಗಿರುವ ತಾಯಿ ಶಬನಮ್‌ಗೆ ಕ್ಷಮಾದಾನ ನೀಡಬೇಕೆಂದು ಪುತ್ರ ತಾಜ್‌ ರಾಷ್ಟ್ರಪತಿ ರಾಮನಾಥ ಕೋವಿಂದ್‌ರನ್ನು ಕೋರಿದ್ದಾನೆ. ತನ್ನ ತಾಯಿಯನ್ನು ಗಲ್ಲು ಶಿಕ್ಷೆಯಿಂದ ರಕ್ಷಿಸಲು ಕೊನೆಯ ಪ್ರಯತ್ನ ಮಾಡುತ್ತಿರುವ 12ರ ಹರೆಯದ ತಾಜ್, ಕ್ಷಮಾದಾನ ಅರ್ಜಿಯನ್ನು ಪರಿಶೀಲಿಸುವಂತೆ ರಾಷ್ಟ್ರಪತಿಗೆ ಮನವಿ ಮಾಡಿದ್ದಾನೆ. ತನ್ನ ಪ್ರೇಮಿ ಸಲೀಮ್‌ನೊಂದಿಗೆ ಗಲ್ಲಿಗೇರಲಿರುವ ಶಬನಮ್ … Continued

ಬಸ್‌ ಪ್ರಯಾಣ ದರ ಹೆಚ್ಚಳವಿಲ್ಲ: ಸಾರಿಗೆ ಸಚಿವ ಸವದಿ

ಡೀಸೆಲ್‌ ಬೆಲೆ ಹೆಚ್ಚಳಗೊಂಡಿದ್ದರೂ ಬಸ್‌ ಪ್ರಯಾಣ ದರವನ್ನು ಹೆಚ್ಚಿಸುವುದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಬಸ್‌ ಪ್ರಯಾಣ ದರ ಹೆಚ್ಚಿಸುವಂತೆ ಈಗಾಗಲೇ ಸಾರಿಗೆ ಸಂಸ್ಥೆಗಳಿಂದ ಪ್ರಸ್ತಾಪ ಬಂದಿದೆ. ಆದರೆ ಕೊರೊನಾ, ನೈಸರ್ಗಿಕ ವಿಕೋಪದ ಕಾರಣದಿಂದಾಗಿ ಈಗಾಗಲೇ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬಸ್‌ ಪ್ರಯಾಣ ದರ ಹೆಚ್ಚಿಸಿದರೆ ಜನರಿಗೆ ಇನ್ನಷ್ಟು … Continued

ದೆಹಲಿ ಗಡಿಗಳಲ್ಲಿ ಸಂಚಾರಕ್ಕೆ ನಿರ್ಬಂಧ

ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ರೈತರು ಆಂದೋಲನವನ್ನು ಮುಂದುವರಿಸುತ್ತಿರುವುದರಿಂದ ಘಾಜಿಪುರ, ಟಿಕ್ರಿ ಮತ್ತು ಸಿಂಗು ಗಡಿಗಳನ್ನು ನಿರ್ಬಂಧಿಸಲಾಗಿದೆ. ಗರಿಷ್ಠ ಪ್ರಯಾಣದ ಸಮಯದಲ್ಲಿ ರಾಜಧಾನಿಯ ಕೆಲವು ಭಾಗಗಳಲ್ಲಿ ಭಾರಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಬಹುದಾದ ದಟ್ಟಣೆಯನ್ನು ದೆಹಲಿ ಪೊಲೀಸರು ತಿರುಗಿಸಿದ್ದಾರೆ. ಆಂದೋಲನದಿಂದಾಗಿ ಗಾಜಿಪುರ-ಗಾಜಿಯಾಬಾದ್ (ಯುಪಿ ಗೇಟ್) ಗಡಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿರುವುದರಿಂದ ದೆಹಲಿ ಮತ್ತು ಗಾಜಿಯಾಬಾದ್ ಗರಿಷ್ಠ ಸಮಯದಲ್ಲಿ … Continued

ಸಿದ್ದರಾಮಯ್ಯ, ನಟ ಯಶ್‌ ಅಂತ್ಯಕ್ರಿಯೆಗೆ ಬರಬೇಕೆಂದು ಡೆತ್‌ನೋಟ್‌ ಬರೆದು ಆತ್ಮಹತ್ಯೆ ಮಾಡಿಕೊಂಡ ಯುವಕ

ತನ್ನ ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚಿತ್ರ ನಟ ಯಶ್‌ ಆಗಮಿಸಬೇಕು ಎಂದು ಡೆತ್ ‌ನೋಟ್‌ ಬರೆದಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಡ್ಯ ತಾಲೂಕ ಕೆರೆಗೋಡು ಹೋಬಳಿ ಕೊಡಿದೊಡ್ಡಿ ಗ್ರಾಮದ ಯುವಕ ಕೃಷ್ಣ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂತ್ಯಕ್ರಿಯೆ ವೇಳೆ ತನ್ನ ಮೊಬೈಲ್‌ನ್ನು ಚಿತೆಯಲ್ಲಿ ಹಾಕುವಂತೆ ಡೆತ್‌ನೋಟ್‌ನಲ್ಲಿ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ … Continued