ನೇಪಾಳದಲ್ಲಿ ನೂತನ ವಿದೇಶ ಪ್ರವಾಸ ನೀತಿ ಖಂಡಿಸಿ ಬೀದಿಗಿಳಿದ ಮಹಿಳೆಯರು

ನೇಪಾಳದಲ್ಲಿ ಮಹಿಳೆಯರ ವಿದೇಶಿ ಪ್ರವಾಸ ನೀತಿಗೆ ತಿದ್ದುಪಡಿ ತರುತ್ತಿರುವುದನ್ನು ಖಂಡಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ನೇಪಾಳದಲ್ಲಿ ೪೦ ವರ್ಷದೊಳಗಿನ ಮಹಿಳೆಯರು ವಿದೇಶಕ್ಕೆ ತೆರಳುವಾಗ ಪಾಲಕರಿಂದ (ಕಡ್ಡಾಯವಾಗಿ ಪುರುಷರು) ಪ್ರವಾಸದ ಉದ್ದೇಶ ತಿಳಿಸುವ ಅನುಮತಿ ಪತ್ರ ತರಬೇಕೆಂದು ಪ್ರವಾಸ ನೀತಿಯಲ್ಲಿ ತಿದ್ದುಪಡಿ ತರುತ್ತಿರುವುದನ್ನು ಖಂಡಿಸಿ ಮಹಿಳೆಯರು ದೇಶಾದ್ಯಂತ ವಿವಿಧೆಡೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ … Continued

ಸಾಲ ಮರುಪಾವತಿ ವಿಫಲ: ಬಿ.ಆರ್‌.ಶೆಟ್ಟಿ ಆಸ್ತಿ ಮುಟ್ಟುಗೋಲಿಗೆ ಲಂಡನ್‌ ನ್ಯಾಯಾಲಯ ಆದೇಶ

ದುಬೈ: ದುಬೈನ ಬ್ಯಾಂಕ್‌ಗಳಿಂದ ಪಡೆದ ಸಾಲ ಮಾರುಪಾವತಿ ಮಾಡಲು ವಿಫಲವಾಗಿರುವ, ಕರ್ನಾಟಕ ಮೂಲಕ ದುಬೈ ಉದ್ಯಮಿ ಬಿ.ಆರ್ ಶೆಟ್ಟಿಯವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಎಂದು ಲಂಡನ್‌ ನ್ಯಾಯಾಲಯ ಆದೇಶಿಸಿದೆ. ದುಬೈನ ದೊಡ್ಡ ಆರೋಗ್ಯ ಸೇವಾ ಕಂಪನಿಯಾಗಿರುವ ಎನ್‌ಎಂಸಿ ಹೆಲ್ತ್‌ ಕೇರ್‌ನ ಮಾಲೀಕರಾಗಿದ್ದ ಬಿ.ಆರ್‌ ಶೆಟ್ಟಿ, ಸಂಸ್ಥಾಪಕ ಖಲೀಫಾ ಅಲ್‌ ಮುಹೈರಿ ಹಾಗೂ ಸಯೀದ್ ಅಲ್‌ ಖುಬೈಸಿ, … Continued

ಪ್ಲಾಸ್ಟಿಕ್‌, ಗಾಜಿನ ಮೇಲೆ ಹೆಚ್ಚು ಕಾಲ ಬದುಕುವ ಕೊರೊನಾ ಸೋಂಕು: ಐಐಟಿ ಸಂಶೋಧನೆ

ಕೊರೊನಾ ಸೋಂಕು ಕಾಗದ ಹಾಗೂ ಬಟ್ಟೆಗೆ ಹೋಲಿಕೆ ಮಾಡಿದರೆ ಪ್ಲಾಸ್ಟಿಕ್‌ ಹಾಗೂ ಗಾಜಿನ ಮೇಲ್ಮೈ ಮೇಲೆ ಹೆಚ್ಚು ಕಾಲ ಬದುಕುಳಿಯುತ್ತದೆ ಎಂದು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ಬಾಂಬೆ ಸಂಶೋಧಕರು ತಿಳಿಸಿದ್ದಾರೆ. ಭೌತಶಾಸ್ತ್ರದ ಸಂಶೋಧನಾ ಜರ್ನಲ್‌ನಲ್ಲಿ ಪ್ರಕಟಗೊಂಡ ಪ್ರಬಂಧದಲ್ಲಿ ಈ ಮಹತ್ವದ ವಿಷಯವನ್ನು ತಿಳಿಸಲಾಗಿದೆ. ಗಾಜು ಹಾಗೂ ಪ್ಲಾಸ್ಟಿಕ್‌ ಮೇಲೆ ಕೊವಿಡ್‌-೧೯ ಸೋಂಕು ಹೆಚ್ಚು … Continued

ಮತ್ತೆ ಕಾಣಿಸಿಕೊಂಡ ಎಬೊಲಾ: ಮೂವರ ಸಾವು

3 ಜನರು ಗಿನಿಯಾದಲ್ಲಿ ಎಬೊಲದಿಂದ ಮೃತಪಟ್ಟಿದ್ದಾರೆ. 2016 ರ ನಂತರದಲ್ಲಿ ಇದು ಎಬೊಲಾದಿಂದ ಮೃತಪಟ್ಟ ಮೊದಲ ಪ್ರಕರಣವಾಗಿದೆ. ಗಿನಿಯಾದ ಆರೋಗ್ಯ ಅಧಿಕಾರಿಗಳು ಭಾನುವಾರ ಅಲ್ಲಿ ಕನಿಷ್ಠ ಮೂವರು ಎಬೊಲಾದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಐದು ವರ್ಷಗಳ ಹಿಂದೆ ಕೊನೆಗೊಂಡ ವಿಶ್ವದ ಮಾರಕ ಎಬೊಲ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿದ ಮೂರು ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಲ್ಲಿ ಗಿನಿಯಾ ಕೂಡ … Continued

ಶ್ರೀಲಂಕಾ ತಮಿಳರ ಸಮಾನತೆ-ನ್ಯಾಯಕ್ಕೆ ಭಾರತ ಬದ್ಧ: ಮೋದಿ

ಶ್ರೀಲಂಕಾದಲ್ಲಿ ವಾಸಿಸುವ ತಮಿಳರ ಹಕ್ಕುಗಳ ವಿಷಯವನ್ನು ಭಾರತವು ನೆರೆಯ ದೇಶದ ಸರ್ಕಾರದೊಂದಿಗೆ ಸತತವಾಗಿ ಕೈಗೆತ್ತಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ‘ಅವರು ಸಮಾನತೆ, ನ್ಯಾಯದೊಂದಿಗೆ ಬದುಕುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ತಮ್ಮ ಆಡಳಿತವು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ ಭಾಷಣ ಮಾಡಿದ ಮೋದಿ, ಶ್ರೀಲಂಕಾದಲ್ಲಿ ‘ತಮಿಳು … Continued

ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊದಲ ಭಾರತದ ಹುಡುಗಿ

ಉಡುಪಿ: ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಹಳೆಯ ವಿದ್ಯಾರ್ಥಿ ರಶ್ಮಿ ಸಮಂತ್ ಗುರುವಾರ ಆಕ್ಸ್‌ಫರ್ಡ್ ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆನ್ಸಿಯ ಪ್ರತಿಷ್ಠಿತ ಸ್ಥಾನವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆ ಇವರು. ಪ್ರಾಸಂಗಿಕವಾಗಿ, ಐತಿಹಾಸಿಕ ಗೆಲುವಿನಲ್ಲಿ, ಅವರು ಈ ಹುದ್ದೆಗೆ ಇತರ ಮೂರು ಅಭ್ಯರ್ಥಿಗಳ … Continued

ಶೇಮ್‌ ಆನ್‌ ಯು: ಮ್ಯಾನ್ಮಾರ್‌ನಲ್ಲಿ ಚೀನಾ ವಿರುದ್ಧ ಪ್ರತಿಭಟನೆ

ಮ್ಯಾನ್ಮಾರ್‌: ಒಮ್ಮತದಿಂದ ‘ಶೇಮ್ ಆನ್ ಯು ಚೀನಾ’ ಎಂದು ಕೂಗುತ್ತ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಸರ್ವಾಧಿಕಾರಕ್ಕೆ ಬೀಜಿಂಗ್ ಬೆಂಬಲ ನೀಡುವುದನ್ನು ವಿರೋಧಿಸಿ ಯುವಕರು ಭಾನುವಾರ ಯಾಂಗೊನ್‌ನಲ್ಲಿರುವ ಚೀನಾದ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮ್ಯಾನ್ಮಾರ್ ನೌ ಪ್ರಕಾರ, ಯುವ ಪ್ರತಿಭಟನಾಕಾರರು ಕೈಯಿಂದ ಮತ್ತು ಮುದ್ರಿತ ಫಲಕಗಳನ್ನು ಹಿಡಿದಿಕೊಂಡು ಚೀನಾವು … Continued

ಜಪಾನ್‌ನಲ್ಲಿ ಭೂಕಂಪನಕ್ಕೆ ೧೨೦ ಜನರಿಗೆ ಗಾಯ

ಈಶಾನ್ಯ ಜಪಾನ್‌ನಲ್ಲಿ ಶನಿವಾರ ತಡರಾತ್ರಿ ಭೂಕಂಪನ ಸಂಭವಿಸಿದ್ದು, ಸುಮಾರು ೧೨೦ ಜನರು ಗಾಯಗೊಂಡಿರುವುದು ವರದಿಯಾಗಿದೆ. ಭೂ ಕಂಪನದಿಂದಾಗಿ ಬುಲೆಟ್‌ ರೈಲು ಮಾರ್ಗಗಳು, ಹಲವು ಕಟ್ಟಡಗಳು, ರಸ್ತೆಗಳು ಹಾನಿಗೀಡಾಗಿವೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ತೀವ್ರತೆ ೭.೩ ರಷ್ಟು ದಾಖಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಯಾವುದೇ ಜೀವಹಾನಿಯಾಗಿರುವುದು ವರದಿಯಾಗಿಲ್ಲ ಸಮುದ್ರದ ಆಳದಲ್ಲಿ ಭೂ ಕಂಪನದ ಕೇಂದ್ರ ಪತ್ತೆಯಾಗಿದ್ದು, ಯಾವುದೇ … Continued

ಜಪಾನ್‌ನಲ್ಲಿ ಭೂಕಂಪ, ಅಲ್ಲಾಡಿದ ಕಟ್ಟಡಗಳು.

ಪೂರ್ವ ಜಪಾನ್‌ನ ಕರಾವಳಿಯಲ್ಲಿ ಶನಿವಾರ 7.1 ರಿಕ್ಟರ್‌ ತೀವ್ರತೆಯ ತೀವ್ರ ಭೂಕಂಪನ ಸಂಭವಿಸಿ, ಕಟ್ಟಡಗಳನ್ನು ಅಲುಗಾಡಿಸಿದೆ. ಆದರೆ ಯಾವುದೇ ದೊಡ್ಡ ಹಾನಿಯಾಗಿಲ್ಲ. ಭೂಕಂಪ ಕೇಂದ್ರವು ಫುಕುಶಿಮಾ ಪ್ರಾಂತ್ಯದ ಕರಾವಳಿಯಲ್ಲಿ 60 ಕಿಲೋಮೀಟರ್ (36 ಮೈಲಿ) ಆಳದಲ್ಲಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಇದು ರಾತ್ರಿ 11:08 ಕ್ಕೆ , (7.38 p.m.ಭಾರತದ ಕಾಲಮಾನ) ಸಂಭವಿಸಿದೆ. … Continued

ಮೊದಲ ಕೋವಿಡ್‌ ಪ್ರಕರಣಗಳ ಕಚ್ಚಾ ದತ್ತಾಂಶ ಡಬ್ಲುಎಚ್‌ಒ ತಂಡಕ್ಕೆ ನೀಡಲು ನಿರಾಕರಿಸಿದ ಚೀನಾ: ತಂಡದ ಸದಸ್ಯ

ಆರಂಭಿಕ ಕೋವಿಡ್ ಪ್ರಕರಣಗಳ ಬಗ್ಗೆ ಡಬ್ಲ್ಯುಎಚ್‌ಒ ತಂಡಕ್ಕೆ ಕಚ್ಚಾ ಡೇಟಾವನ್ನು ನೀಡಲು ಚೀನಾ ನಿರಾಕರಿಸಿದೆ ಎಂದು ತಂಡದ ಸದಸ್ಯರೊಬ್ಬರು ಹೇಳಿದ್ದಾರೆ. 2019 ರ ಡಿಸೆಂಬರ್‌ನಲ್ಲಿ ಚೀನಾದ ನಗರವಾದ ವುಹಾನ್‌ನಲ್ಲಿ ಏಕಾಏಕಿ ಉಂಟಾದ ಆರಂಭಿಕ ಹಂತದಿಂದ ಚೀನಾ ಗುರುತಿಸಿದ ಕೋವಿಡ್‌-19 174 ಪ್ರಕರಣಗಳ ಬಗ್ಗೆ ರೋಗಿಗಳ ದತ್ತಾಂಶವನ್ನು ತಂಡವು ಕೋರಿತ್ತು, ಆದರೆ ಅವರಿಗೆ ಸಾರಾಂಶವನ್ನು ಮಾತ್ರ ನೀಡಲಾಗಿದೆ, … Continued