ತನ್ನ ತಾಯಿಯೊಂದಿಗೆ ಅಡ್ಡಾಡುತ್ತಿರುವ ಅಪರೂಪದ ಬಿಳಿ ಸಿಂಹದ ಮರಿ : ಕಾಡಿನಲ್ಲಿ ಮೂರು ಬಿಳಿ ಸಿಂಹಗಳಿವೆಯಂತೆ | ವೀಕ್ಷಿಸಿ

ಕಾಡು ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ತೋರಿಸುವ ವೀಡಿಯೊಗಳನ್ನು ವೀಕ್ಷಿಸಲು ಯಾವಾಗಲೂ ಆಕರ್ಷಕವಾಗಿರುತ್ತವೆ. ವೀಡಿಯೊ ಅಪರೂಪದ ಪ್ರಾಣಿಯನ್ನು ಒಳಗೊಂಡಿದ್ದರೆ ಅದು ಹೆಚ್ಚು ರೋಮಾಂಚನಕಾರಿಯಾಗುತ್ತದೆ. ಅದಕ್ಕೆ ಸೂಕ್ತ ಉದಾಹರಣೆಯೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗುರುವಾರ ಐಎಫ್‌ಎಸ್ ಅಧಿಕಾರಿ, ಬಿಳಿ ಸಿಂಹದ ಮರಿಯೊಂದು ತನ್ನ ಕುಟುಂಬದೊಂದಿಗೆ ಕಾಡಿನಲ್ಲಿ ಅಡ್ಡಾಡುತ್ತಿರುವ ಕಿರು ಕ್ಲಿಪ್ … Continued

ಜೆಇಇ ಮೇನ್ 2023 : ಪರೀಕ್ಷೆಯ ದಿನಾಂಕಗಳು ಪ್ರಕಟ, ವೇಳಾಪಟ್ಟಿ ಇಲ್ಲಿದೆ

ನವದೆಹಲಿ: ಎಲ್ಲಾ ಊಹಾಪೋಹಗಳನ್ನು ಕೊನೆಗೊಳಿಸಿ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) 2023ರ ಜಂಟಿ ಪ್ರವೇಶ ಪರೀಕ್ಷೆ (JEE) ಮೇನ್‌ ದಿನಾಂಕಗಳನ್ನು ಪ್ರಕಟಿಸಿದೆ. ಈ ವರ್ಷ, ಜೆಇಇ (JEE) ಮೇನ್‌ ಎರಡು ಅವಧಿಗಳಲ್ಲಿ ನಡೆಯಲಿದೆ, ಮೊದಲನೆಯದು 2023ರ ಜನವರಿಯಲ್ಲಿ ಮತ್ತು ಎರಡನೆಯದು ಏಪ್ರಿಲ್‌ನಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಜೆಇಇ ಮೇನ್‌ 2023 ಮೊದಲ ಅಧಿವೇಶನಕ್ಕೆ ಆನ್‌ಲೈನ್‌ನಲ್ಲಿ ಡಿಸೆಂಬರ್ 15 … Continued

ಪರಮಾಣು ಸಾಮರ್ಥ್ಯದ ಅಗ್ನಿ-V ಬ್ಯಾಲಿಸ್ಟಿಕ್ ಕ್ಷಿಪಣಿಯ ರಾತ್ರಿ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ ಭಾರತ

ನವದೆಹಲಿ: ಅರುಣಾಚಲದ ವಾಸ್ತವಿಕ ಗಡಿಯಲ್ಲಿ ಘರ್ಷಣೆಯ ನಂತರ ಚೀನಾದೊಂದಿಗಿನ ಉದ್ವಿಗ್ನತೆಯ ನಡುವೆ, 5400 ಕಿಮೀಗೂ ಮೀರಿದ ಗುರಿಗಳನ್ನು ಹೊಡೆಯಬಲ್ಲ ಅಗ್ನಿ V ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಯ ರಾತ್ರಿ ಪ್ರಯೋಗಗಳನ್ನು ಭಾರತ ಯಶಸ್ವಿಯಾಗಿ ನಡೆಸಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಗುರುವಾರ ತಿಳಿಸಿವೆ. ಕಳೆದ ವಾರ ಪ್ರದೇಶ. ಕ್ಷಿಪಣಿಯಲ್ಲಿನ ಹೊಸ ತಂತ್ರಜ್ಞಾನಗಳು ಮತ್ತು ಉಪಕರಣಗಳನ್ನು ಮೌಲ್ಯೀಕರಿಸಲು … Continued

ಭಾರತಕ್ಕೆ ಹಸ್ತಾಂತರ ಆಗುವುದರಿಂದ ತಪ್ಪಿಸಿಕೊಳ್ಳುವ ನೀರವ್‌ ಮೋದಿಯ ಮತ್ತೊಂದು ಯತ್ನ ವಿಫಲ

ಲಂಡನ್:‌ ಪರಾರಿಯಾಗಿರುವ ಭಾರತೀಯ ಉದ್ಯಮಿ ನೀರವ್ ಮೋದಿ ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧದ ಕಾನೂನು ಹೋರಾಟದಲ್ಲಿ ಗುರುವಾರ ಹಿನ್ನಡೆ ಅನುಭವಿಸಿದ್ದು, ಲಂಡನ್ ಹೈಕೋರ್ಟ್ ಬ್ರಿಟನ್‌ನ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅನುಮತಿ ನಿರಾಕರಿಸಿದೆ. ಲಂಡನ್‌ನ ರಾಯಲ್ ಕೋರ್ಟ್ ಆಫ್ ಜಸ್ಟಿಸ್‌ನಲ್ಲಿ ತೀರ್ಪು ನೀಡಿದ ಲಾರ್ಡ್ ಜಸ್ಟೀಸ್ ಜೆರೆಮಿ ಸ್ಟುವರ್ಟ್-ಸ್ಮಿತ್ ಮತ್ತು ನ್ಯಾಯಮೂರ್ತಿ ರಾಬರ್ಟ್ ಜೇ ಅವರು “ಸುಪ್ರೀಂ … Continued

‘ವಾಹನ ಪೂಜೆ’ಗಾಗಿ ದೇವಸ್ಥಾನಕ್ಕೇ ಹೆಲಿಕಾಪ್ಟರ್ ತಂದ ತೆಲಂಗಾಣ ಉದ್ಯಮಿ…!

ಹೈದರಾಬಾದ್: ಜನರು ಹೊಸದಾಗಿ ಖರೀದಿಸಿದ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ‘ವಾಹನ ಪೂಜೆ’ಗಾಗಿ ದೇವಸ್ಥಾನಗಳಿಗೆ ತರುವುದು ಸಾಮಾನ್ಯ. ಆದರೆ ತೆಲಂಗಾಣದ ಉದ್ಯಮಿಯೊಬ್ಬರು ಹೊಸದಾಗಿ ಖರೀದಿಸಿದ ಹೆಲಿಕಾಪ್ಟರ್ ಅನ್ನೇ ದೇವಾಲಯಕ್ಕೆ ತಂದು ವಾಹನ ಪೂಜೆ ಸೇರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಪ್ರತಿಮಾ ಗ್ರೂಪ್‌ನ ಮಾಲೀಕ ಬೋಯಿನಪಲ್ಲಿ ಶ್ರೀನಿವಾಸ ರಾವ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ … Continued

ವ್ಯಕ್ತಿಯ ಮೇಲೆಯೇ ಹರಿದು ಹೋದ ಬಸ್‌ : ಮ್ಯಾಜಿಕ್‌ ಮಾಡಿದ ರೀತಿಯಲ್ಲಿ ಪವಾಡಸದೃಶವಾಗಿ ಪಾರಾದ ವ್ಯಕ್ತಿ | ವೀಕ್ಷಿಸಿ

ಮುಂಬೈ:ಬೆಚ್ಚಿಬೀಳಿಸುವ ವೀಡಿಯೊದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬಸ್ ಕೆಳಗೆ ಸಿಲುಕಿದ ವಯೋವೃದ್ಧನೊಬ್ಬ ಜಾದು ಮಾಡಿದ ರೀತಿಯಲ್ಲಿ ಪವಾಡಸದೃಶವಾಗಿ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ವೀಡಿಯೊವೊಂದು ವೈರಲ್‌ ಆಗಿದೆ. ಮುಂಬೈನ ಪೊವೈ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯಾವಳಿಗಳು ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುರ್ತಾ-ಪೈಜಾಮಾ ಧರಿಸಿದ್ದ ವ್ಯಕ್ತಿಯೊಬ್ಬ ಆ ಪ್ರದೇಶದಲ್ಲಿ ರಸ್ತೆ ದಾಟಲು ಪ್ರಯತ್ನಿಸುತ್ತಿರುವಾಗ ಒಂದು … Continued

ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಮಹತ್ವದ ಪ್ರಗತಿ: ದೆಹಲಿ ಅರಣ್ಯದಲ್ಲಿ ಸಿಕ್ಕ ಮೂಳೆಗಳು ಅವಳದ್ದೇ ಎಂದು ಹೇಳಿದ ಡಿಎನ್‌ಎ ಪರೀಕ್ಷೆ

ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಅಂತಿಮವಾಗಿ ಕೆಲವು ಪ್ರಮುಖ ಸಾಕ್ಷ್ಯಗಳು ಸಿಕ್ಕಿವೆ – ದೆಹಲಿಯ ಮೆಹ್ರೌಲಿ ಪ್ರದೇಶದ ಕಾಡಿನಲ್ಲಿ ಪೊಲೀಸರಿಗೆ ಸಿಕ್ಕ ಮೂಳೆಗಳು ನಿಜವಾಗಿಯೂ ಅವಳದ್ದೇ ಎಂದು ಡಿಎನ್‌ಎ ಪರೀಕ್ಷೆ ದೃಢಪಡಿಸಿದೆ. ಆಕೆಯ ತಂದೆಯ ಡಿಎನ್‌ಎ ಮಾದರಿಗಳನ್ನು ಬಳಸಿಕೊಂಡು ನಡೆಸಿದ ಪರೀಕ್ಷಾ ವರದಿಯು ಇಂದು, ಗುರುವಾರ ಬಂದಿದ್ದು, ತಂದೆಯ ಡಿಎನ್‌ಎಯೊಂದಿಗೆ ಸಿಕ್ಕ ಎಲುಬಿನ … Continued

‘ಒಸಾಮಾ ಬಿನ್ ಲಾಡೆನ್ಗೆ ಆತಿಥ್ಯ …ಸಂಸತ್ತಿನ ಮೇಲೆ ದಾಳಿ…’: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದ ಜೈಶಂಕರ್

ವಿಶ್ವಸಂಸ್ಥೆ: ಪಾಕಿಸ್ತಾನವು ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತಾಪಿಸಿದ ನಂತರ ಭಾರತವು ಪಾಕಿಸ್ತಾನಕ್ಕೆ ಬಲವಾಗಿ ತಿರುಗೇಟು ನೀಡಿದೆ. ಹತ್ಯೆಯಾದ ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ಗೆ ಆತಿಥ್ಯ ನೀಡಿದ ಮತ್ತು ನೆರೆಯ ರಾಷ್ಟ್ರದ ಸಂಸತ್ತಿನ ಮೇಲೆ ದಾಳಿ ಮಾಡಿದ ದೇಶಕ್ಕೆ “ಬೋಧನೆ” ಮಾಡುವ ಅರ್ಹತೆ ಇಲ್ಲ ಎಂದು ಭಾರತವು ಬಲವಾಗಿ ಪ್ರತಿಪಾದಿಸಿದೆ. ನಾವು ಇಂದು … Continued

ಡಿಜೆ ಸಂಗೀತ, ಬ್ಯಾಂಡ್ ನುಡಿಸಿದರೆ ನಿಕಾಹ್ ಮಾಡಬೇಡಿ: ಧರ್ಮಗುರುಗಳಿಗೆ ಮುಸ್ಲಿಂ ಸಂಘಟನೆ ಸೂಚನೆ

ನವದೆಹಲಿ: ಕಾರ್ಯಕ್ರಮದಲ್ಲಿ ಡಿಜೆ ಮ್ಯೂಸಿಕ್ ಅಥವಾ “ಬ್ರಾಸ್ ಬ್ಯಾಂಡ್” ನುಡಿಸಿದರೆ ‘ನಿಕಾಹ್’ (ಮುಸ್ಲಿಂ ವಿವಾಹ) ಮಾಡಬೇಡಿ ಎಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮುಸ್ಲಿಂ ಮಹಾಸಭಾವು ಧರ್ಮಗುರುಗಳನ್ನು ಒತ್ತಾಯಿಸಿದೆ. ವಿವಾಹ ಸಮಾರಂಭಗಳನ್ನು “ಸರಳವಾಗಿ” ನಡೆಸಲು ಸಮುದಾಯಗಳನ್ನು ಮನವೊಲಿಸಲು ಧರ್ಮಗುರುಗಳ ಸಹಕಾರವನ್ನು ಕೋರಿ ಸಂಸ್ಥೆ ಹೇಳಿಕೆ ನೀಡಿದೆ. ಮದುವೆ ಕಾರ್ಯಕ್ರಮಗಳಿಗೆ ಹೆಚ್ಚು ಹಣ ಖರ್ಚು ಮಾಡುವುದನ್ನು ಸಂಸ್ಥೆ ವಿರೋಧಿಸುವುದನ್ನು … Continued

ದೆಹಲಿ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಮೂವರ ಬಂಧನ, ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್‌ ಮಾಡಿ ಆ್ಯಸಿಡ್ ಖರೀದಿಸಿದ್ದ ಖದೀಮರು…!

ನವದೆಹಲಿ: ದೆಹಲಿಯಲ್ಲಿ 17 ವರ್ಷದ ಶಾಲಾ ವಿದ್ಯಾರ್ಥಿನಿಯ ಮೇಲೆ ಆ್ಯಸಿಡ್ ಎರಚಿದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದು, ಬಂಧಿತ ಮೂವರು ತನಿಖಾಧಿಕಾರಿಗಳನ್ನು ದಾರಿತಪ್ಪಿಸಲು ಸೂಕ್ಷ್ಮವಾಗಿ ದಾಳಿಯನ್ನು ಯೋಜಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ನೈಋತ್ಯ ದೆಹಲಿಯ ದ್ವಾರಕಾದಲ್ಲಿ ಆ್ಯಸಿಡ್ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ … Continued