ಜಿಂಕೆ ಮೇಲೆ ಮಂಗನ ಸವಾರಿ…! ಐಐಟಿ ಮದ್ರಾಸ್‌ನಲ್ಲಿ ಸೆರೆಯಾದ ದೃಶ್ಯ…ವೀಕ್ಷಿಸಿ

ಚೆನ್ನೈ: ಸಾಮಾಜಿಕ ಮಾಧ್ಯಮಗಳಲ್ಲಿ‌ ಕಂಡು ಬರುವ ಪ್ರಾಣಿಗಳ ವೀಡಿಯೋಗಳು ನಕ್ಕು ನಗಿಸುತ್ತವೆ. ಇಂಥದ್ದೇ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜಿಂಕೆಯ ಮೇಲೆ ಕೋತಿ ಸವಾರಿ ಮಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (IIT Madras) ಕ್ಯಾಂಪಸ್‌ನಲ್ಲಿ ಸೆರೆಹಿಡಿಯಲಾದ ಈ ವೀಡಿಯೋ ನೆಟ್ಟಿಗರ ಮನ ಗೆದ್ದಿದೆ. ವೀಡಿಯೊ ಕ್ಲಿಪ್‌ನಲ್ಲಿ ಜಿಂಕೆಯೊಂದು … Continued

ಶ್ರೀಮಂತರಾಗಲು ಬಯಸಿದ್ದ ದಂಪತಿಯಿಂದ “ನರಬಲಿ”…! ಇಬ್ಬರು ಮಹಿಳೆಯರನ್ನು ಕೊಂದು ಶವಗಳನ್ನು ತುಂಡುತುಂಡು ಮಾಡಿ ಹೂತಿಟ್ಟರು..!

ತಿರುವನಂತಪುರಂ: ಕೇರಳದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಮಹಿಳೆಯರನ್ನು ದಂಪತಿ ಕೊಂದು ತುಂಡುತುಂಡು ಮಾಡಿ ಹೂತಿಟ್ಟಿರುವ ಭೀಕರ ನರಬಲಿ ಪ್ರಕರಣವನ್ನು ಪೊಲೀಸರು ಇಂದು, ಮಂಗಳವಾರ ಭೇದಿಸಿದ್ದಾರೆ. ತಮ್ಮ ಆರ್ಥಿಕ ತೊಂದರೆಗಳನ್ನು ಕೊನೆಗೊಳಿಸಿ ಶ್ರೀಮಂತರಾಗಲು ಬಯಸಿದ್ದ ದಂಪತಿ ಎರ್ನಾಕುಲಂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಇಬ್ಬರು ಮಹಿಳೆಯರಾದ ರೋಸ್ಲಿನ್ ಮತ್ತು ಪದ್ಮಾ ಅವರನ್ನು ನರಬಲಿ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. … Continued

ಭಯೋತ್ಪಾದನೆಗೆ ಧನ ಸಹಾಯ ಪ್ರಕರಣ: ಕಾಶ್ಮೀರದ ಹಲವೆಡೆ ಎನ್‌ಐಎ ದಾಳಿ

ಶ್ರೀನಗರ: ದಾರುಲ್ ಉಲೂಮ್ ರಹೀಮಿಯಾ ಬಂಡಿಪೋರಾ, ಮೌಲಾನಾ ರೆಹಮತುಲ್ಲಾ ಖಾಸ್ಮಿ ಅವರ ನಿವಾಸ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ರಾಷ್ಟ್ರೀಯ ತನಿಖಾ ಸಂಸ್ಥೆ ಮಂಗಳವಾರ ದಾಳಿ ನಡೆಸಿದೆ. ಪೂಂಚ್, ರಾಜೌರಿ, ಪುಲ್ವಾಮಾ, ಶೋಪಿಯಾನ್, ಶ್ರೀನಗರ, ಬುದ್ಗಾಮ್ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಎನ್‌ಐಎಯು ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿ ನೆರವಿನೊಂದಿಗೆ ದಾಳಿ ನಡೆಸಿದೆ ಎಂದು ಅಧಿಕಾರಿಯೊಬ್ಬರು … Continued

ಸುಪ್ರಿಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಡಿ.ವೈ.ಚಂದ್ರಚೂಡ್ ನೇಮಕಕ್ಕೆ ಶಿಫಾರಸು ಮಾಡಿದ ಸಿಜೆಐ ಯು.ಯು. ಲಲಿತ್

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಉದಯ್ ಯು. ಲಲಿತ್ ಅವರು ಮಂಗಳವಾರ ನ್ಯಾಯಮೂರ್ತಿ ಧನಂಜಯ ಯಶವಂತ್ ಚಂದ್ರಚೂಡ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಶಿಫಾರಸು ಮಾಡಿ ಪತ್ರವನ್ನು ಹಸ್ತಾಂತರಿಸಿದ್ದಾರೆ. ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಭಾರತದ 50 ನೇ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ. ಇಂದು, ಮಂಗಳವಾರ ಎಲ್ಲಾ ನ್ಯಾಯಾಧೀಶರು ನ್ಯಾಯಾಧೀಶರ ಲಾಂಜ್‌ನಲ್ಲಿ ಸಭೆ ಸೇರುವಂತೆ ಸಿಜೆಐ … Continued

ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ತೃಣಮೂಲ ಶಾಸಕ ಅರೆಸ್ಟ್: ಮಾಜಿ ಸಚಿವರ ನಂತರ 2ನೇ ಬಂಧನ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಆಪಾದಿತ ಶಿಕ್ಷಕರ ನೇಮಕಾತಿ ಹಗರಣದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಮಾಣಿಕ್ ಭಟ್ಟಾಚಾರ್ಯ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ.) ರಾತ್ರಿ ವಿಚಾರಣೆ ನಡೆಸಿದ ನಂತರ ಇಂದು, ಮಂಗಳವಾರ ಮುಂಜಾನೆ ಬಂಧಿಸಿದೆ. ಇವರು ಈ ಹಗರಣದಲ್ಲಿ ಬಂಧಿತರಾದ ಎರಡನೇ ತೃಣಮೂಲ ನಾಯಕರಾಗಿದ್ದಾರೆ. ಜುಲೈನಲ್ಲಿ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿಗೆ ಸಂಬಂಧಿಸಿದ ಆಸ್ತಿಗಳಿಂದ ನಗದು ರಾಶಿಯನ್ನು … Continued

ಆರ್ಥಿಕ ವರ್ಷ 2023ರ ಮೊದಲಾರ್ಧದಲ್ಲಿ 20,000 ಫ್ರೆಶರ್‌ಗಳನ್ನು ನೇಮಿಸಿಕೊಂಡ ಟಿಸಿಎಸ್‌

ನವದೆಹಲಿ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಆರ್ಥಿಕ ವರ್ಷ 2023 ರ ಮೊದಲಾರ್ಧದಲ್ಲಿ 35,000 ಫ್ರೆಶರ್‌ಗಳನ್ನು ಆನ್‌ಬೋರ್ಡ್ ಮಾಡಿದೆ, ಈ ಪೈಕಿ 20,000 ಫ್ರೆಶರ್‌ಗಳನ್ನು ಎರಡನೇ ತ್ರೈಮಾಸಿಕದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಕಂಪನಿಯು ಅಕ್ಟೋಬರ್ 10 ರಂದು ಪ್ರಕಟಿಸಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಾಡ್ ಹೇಳಿಕೆಯಲ್ಲಿ ಕಂಪನಿಯು ಎಲ್ಲಾ … Continued

ಬಾಡಿಗೆ ತಾಯ್ತನದ ಮೂಲಕ ಪಡೆದ ಅವಳಿ ಮಕ್ಕಳನ್ನು ಸ್ವಾಗತಿಸಿದ ಮರುದಿನ ನಟಿ ನಯನತಾರಾ-ವಿಘ್ನೇಶ ದಂಪತಿಗೆ ಎದುರಾಯ್ತು ಸಂಕಷ್ಟ…! ​

ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿ ಮದುವೆ ಆದ ನಾಲ್ಕೇ ತಿಂಗಳಿಗೆ ಮಗು ಪಡೆದಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ಬಗ್ಗೆ ದಂಪತಿ ಮಾಹಿತಿ ಹಂಚಿಕೊಂಡಿದ್ದು, ಈಗ ಅವರಿಗೆ ಸಂಕಷ್ಟ ತಂದೊಡ್ಡಿದೆ. ಬಾಡಿಗೆ ತಾಯ್ತನದ ವಿಚಾರದಲ್ಲಿ ಸರ್ಕಾರ ನಿಯಮಗಳನ್ನು ರೂಪಿಸಿದ್ದು, ಇವುಗಳನ್ನು ನಯತಾರಾ ಹಾಗೂ ವಿಘ್ನೇಶ್ ದಂಪತಿ ಗಾಳಿಗೆ ತೂರಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ … Continued

ಸ್ಟಾಫ್​ ಸೆಲೆಕ್ಷನ್​ ಕಮಿಷನ್​ನಿಂದ ನೇಮಕಾತಿ: ಗ್ರೂಪ್​ ಬಿ ಮತ್ತು ಸಿ ಗ್ರೇಡ್‌ 20,000 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟಾಫ್​ ಸೆಲೆಕ್ಷನ್​ ಕಮಿಷನ್​ನಿಂದ (Staff Selection Commission) ಗ್ರೂಪ್​ ಬಿ ಮತ್ತು ಸಿ ಗ್ರೇಡ್‌ 20,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಿಜಿಎಲ್ ಈ ಬಗ್ಗೆ​ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು ಸೇರಿದಂತೆ ಈ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯಲಿದೆ. ಆಸಕ್ತರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ … Continued

ಧಾರ್ಮಿಕ ಮತಾಂತರದ ಕಾರ್ಯಕ್ರಮದಲ್ಲಿ ಸಚಿವರಾಗಿ ಉಪಸ್ಥಿತಿ : ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಾಲ್‌ಗೆ ಪೊಲೀಸರಿಂದ ಸಮನ್ಸ್

ನವದೆಹಲಿ: ದೆಹಲಿಯ ಮಾಜಿ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ಧಾರ್ಮಿಕ ಮತಾಂತರ ಕಾರ್ಯಕ್ರಮಕ್ಕೆ ಹಾಜರಾಗಿದ್ದಕ್ಕಾಗಿ ಬಿಜೆಪಿ ಪ್ರತಿಭಟನೆಯ ನಂತರ ಭಾನುವಾರ ರಾಜೀನಾಮೆ ನೀಡಿದ್ದು, ಅವರನ್ನು ಈಗ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದೆ. ಹಿಂದೂ ದೇವತೆಗಳನ್ನು ನಿಂದಿಸಲಾಗಿದೆ ಎಂದು ಹೇಳಲಾದ ಕಾರ್ಯಕ್ರಮದಲ್ಲಿ ಪಾಲ್ ಅವರ ಉಪಸ್ಥಿತಿಯ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ … Continued

ಈ ವರ್ಷದ ನವರಾತ್ರಿ ವೇಳೆ 5.40 ಲಕ್ಷ ವಾಹನಗಳ ದಾಖಲೆಯ ಮಾರಾಟ: 57% ರಷ್ಟು ಹೆಚ್ಚಳ ಎಂದ ಎಫ್‌ಎಡಿಎ

ನವದೆಹಲಿ: ಈ ವರ್ಷ ನವರಾತ್ರಿ ಉತ್ಸವದಲ್ಲಿ ದೇಶದಲ್ಲಿ ವಾಹನ ಚಿಲ್ಲರೆ ಮಾರಾಟವು ಶೇಕಡಾ 57 ರಷ್ಟು ಏರಿಕೆಯಾಗಿದ್ದು, ಸುಮಾರು 5.4 ಲಕ್ಷ ವಾಹನಗಳ ದಾಖಲೆಯ ಮಾರಾಟವಾಗಿದೆ ಎಂದು ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್‌ಗಳ ಒಕ್ಕೂಟ ಸೋಮವಾರ ತಿಳಿಸಿದೆ. ಸೆಪ್ಟೆಂಬರ್ 26 ಮತ್ತು ಅಕ್ಟೋಬರ್ 5ರ ನಡುವಿನ ಒಟ್ಟು 5,39,227 ವಾಹನಗಳು ಮಾರಾಟವಾಗಿವೆ ಎಂದು ಅದು ತಿಳಿಸಿದೆ. ಕಳೆದ … Continued