ಉತ್ತರ ಪ್ರದೇಶ ಚುನಾವಣೆ 2022: ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಪುತ್ರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ..!

ಅಜಂಗಢ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಕೊನೆಯ ಹಂತಕ್ಕೆ ಮುನ್ನ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ ಪುತ್ರ ಮಾಯಾಂಕ್ ಜೋಶಿ ಅವರು ಶನಿವಾರ ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ) ಸೇರ್ಪಡೆಗೊಂಡಿದ್ದಾರೆ. “ಭಾರತೀಯ ಜನತಾ ಪಕ್ಷದ ಸಂಸದೆ ರೀಟಾ ಬಹುಗುಣ ಜೋಶಿ ಅವರ ಪುತ್ರ ಮಾಯಾಂಕ್ ಜೋಶಿ ಇಂದು ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ” ಎಂದು ಎಸ್ಪಿ … Continued

ನಿರಂತರ ಶೆಲ್ ದಾಳಿ, ಸಾರಿಗೆ ಸೌಲಭ್ಯದ ಕೊರತೆ ಉಕ್ರೇನ್‌ನ ಸುಮಿಯಿಂದ ಸ್ಥಳಾಂತರಿಸುವ ಪ್ರಯತ್ನಗಳಿಗೆ ಸವಾಲು: ವಿದೇಶಾಂಗ ಸಚಿವಾಲಯ

ನವದೆಹಲಿ: ನಿರಂತರ ಶೆಲ್ ದಾಳಿ ಮತ್ತು ಸಾರಿಗೆ ಸೌಲಭ್ಯಗಳ ಕೊರತೆಯು ಉಕ್ರೇನ್‌ನ ಸುಮಿ ಪ್ರದೇಶದಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಪ್ರಯತ್ನಗಳಿಗೆ ಸಾಕಷ್ಟು ಸವಾಲುಗಳನ್ನು ಒಡ್ಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಶನಿವಾರ ತಿಳಿಸಿದೆ. ಇದುವರೆಗೆ 63 ವಿಮಾನಗಳಲ್ಲಿ 13,300 ಭಾರತೀಯರನ್ನು ಯುದ್ಧ ಪೀಡಿತ ದೇಶದಿಂದ ಮರಳಿ ಕರೆತರಲಾಗಿದೆ ಎಂದು ಅದು ಹೇಳಿದೆ. ಉಕ್ರೇನ್‌ನಿಂದ ಭಾರತೀಯರನ್ನು … Continued

ಉಕ್ರೇನ್‌- ರಷ್ಯಾ ಯುದ್ಧ: ಭಾರತದಲ್ಲಿ ಮುಂದಿನ ವಾರದಿಂದ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುವ ಸಾಧ್ಯತೆ..

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳಲ್ಲಿ ಹೆಚ್ಚಳ ಮಾಡಿದೆ. ಅಲ್ಪಾವಧಿಯಲ್ಲಿ ಪ್ರತಿ ಬ್ಯಾರೆಲ್‌ಗೆ $ 95 ರಿಂದ 125 ಅಮೆರಿಕನ್‌ ಡಾಲರ್‌ ವರೆಗೆ ಇದು ಏರಬಹುದು ಎಂದು ಅಂದಾಜಿಸಲಾಗಿದೆ. ಕಚ್ಚಾ ತೈಲ ಬೆಲೆಯಲ್ಲಿ ಜಾಗತಿಕ ಹೆಚ್ಚಳವು ಭಾರತದ ದೇಶೀಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಪ್ರತಿ ಲೀಟರ್‌ಗೆ 15-22 … Continued

ಹೃದಯ ವಿದ್ರಾವಕ ಘಟನೆ: 2 ವರ್ಷದ ಮಗುವನ್ನು ಕೊಂದ ಬೆಕ್ಕು…!

ಜಬಲ್‌ಪುರ (ಮಧ್ಯಪ್ರದೇಶ): ಜಬಲ್‌ಪುರದ ಬರೇಲಾದಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಭೀಕರ ಘಟನೆಯೊಂದರಲ್ಲಿ ಬೆಕ್ಕೊಂದು ಎರಡು ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಜಬಲ್‌ಪುರ ಜಿಲ್ಲೆಯ ಬರೇಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಜಿಲ್ಲೆಯ ಮಹಗೋನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ. ವರದಿಗಳ … Continued

ಕೋವಿಡ್ ಲಾಕ್‌ಡೌನ್‌ಗಳ ಸಮಯದಲ್ಲಿ ಆನ್‌ಲೈನ್ ತರಗತಿಗಳಿಗೆ ಹಾಜರಾಗದ 67%ರಷ್ಟು ಹುಡುಗಿಯರು : ವರದಿಗಳು

ನವದೆಹಲಿ: ದೇಶಾದ್ಯಂತ ನಾಲ್ಕು ರಾಜ್ಯಗಳಲ್ಲಿ ಕೋವಿಡ್‌-19 ಲಾಕ್‌ಡೌನ್‌ಗಳ ಸಮಯದಲ್ಲಿ ಕನಿಷ್ಠ 68%ರಷ್ಟು ಹದಿಹರೆಯದ ಹುಡುಗಿಯರು ಆರೋಗ್ಯ ಮತ್ತು ಪೌಷ್ಟಿಕಾಂಶದ ಸವಾಲುಗಳನ್ನು ಎದುರಿಸುತ್ತಿದ್ದಾರೆ ಮತ್ತು 67%ರಷ್ಟು ಆನ್‌ಲೈನ್ ತರಗತಿಗಳಿಗೆ ಹಾಜರಾಗಲಿಲ್ಲ ಎಂದು ಎನ್‌ಜಿಒ ವರದಿ ಹೇಳಿದೆ. ಸೇವ್ ದಿ ಚಿಲ್ಡ್ರನ್‌ನ ‘ದಿ ವರ್ಲ್ಡ್ ಆಫ್ ಇಂಡಿಯಾಸ್ ಗರ್ಲ್ಸ್- ವಿಂಗ್ಸ್ 2022’ ಎಂಬ ವರದಿಯು 2020-2021 ರ ಅವಧಿಯಲ್ಲಿ … Continued

ಕಾಂಗ್ರೆಸ್ ನಾಯಕನ ಮಗನ ಮದುವೆಯಲ್ಲಿ ಊಟ ಮಾಡಿದ 1,200 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಮೆಹ್ಸಾನಾ: ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕನ ಮಗನ ಮದುವೆಯಲ್ಲಿ ಆಹಾರ ಸೇವಿಸಿದ 1,200 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ವಿಸ್ನಗರ ತಾಲೂಕಿನ ಸವಲ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ವಿಸ್ನಗರ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಮದುವೆಯಲ್ಲಿ ಆಹಾರ … Continued

ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿ: ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತೀಯ ನೌಕಾಪಡೆ

ನವದೆಹಲಿ: ಭಾರತೀಯ ನೌಕಾಪಡೆಯು ತನ್ನ ಮುಂಚೂಣಿ ಹಡಗಿನಲ್ಲಿ ಯುದ್ಧ ಸನ್ನದ್ಧತೆಯನ್ನು ಪ್ರದರ್ಶಿಸುವ ಬ್ರಹ್ಮೋಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯನ್ನು ಶನಿವಾರ ಯಶಸ್ವಿಯಾಗಿ ಪರೀಕ್ಷಿಸಿದೆ. ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರ ಮತ್ತೊಂದು ಅವತರಣಿಕೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯು ಪಿನ್ ಪಾಯಿಂಟ್ ನಿಖರತೆಯೊಂದಿಗೆ ಗುರಿಯನ್ನು ಮುಟ್ಟಿತು ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.ಬ್ರಹ್ಮೋಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯ ದೀರ್ಘ-ಶ್ರೇಣಿಯ ನಿಖರವಾದ ಸ್ಟ್ರೈಕ್ ಸಾಮರ್ಥ್ಯವನ್ನು … Continued

ಆಪರೇಷನ್ ಗಂಗಾ ಅಡಿ ಉಕ್ರೇನ್‌ನಿಂದ ಸುಮಾರು 11,000 ಭಾರತೀಯರು ವಾಪಸ್‌: ಸರ್ಕಾರ

ನವದೆಹಲಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಿಸಲು ‘ಆಪರೇಷನ್ ಗಂಗಾ’ ಅಡಿಯಲ್ಲಿ, ಉಕ್ರೇನ್‌ನ ನೆರೆಯ ದೇಶಗಳಿಂದ 17 ವಿಶೇಷ ವಿಮಾನಗಳು ಶುಕ್ರವಾರ (ಮಾರ್ಚ್ 4) ದೇಶಕ್ಕೆ ಬಂದಿವೆ. ಈ ವಿಶೇಷ ವಿಮಾನಗಳಲ್ಲಿ 14 ನಾಗರಿಕ ವಿಮಾನಗಳು ಮತ್ತು 3 C-17 ಐಎಎಫ್‌ (IAF) ವಿಮಾನಗಳು ಸೇರಿವೆ. ಇನ್ನೂ ಒಂದು ನಾಗರಿಕ ವಿಮಾನವು ದಿನದ ನಂತರ ಆಗಮಿಸುವ … Continued

ಉಕ್ರೇನ್-ರಷ್ಯಾ ಯುದ್ಧ : ಯುದ್ಧ ಬೇಡ ಎಂದು ಘೋಷಿಸಿ ನೇರ ಪ್ರಸಾರ ಕಾರ್ಯಕ್ರಮದಲ್ಲೇ ಸಾಮೂಹಿಕ ರಾಜೀನಾಮೆ ನೀಡಿ ಹೊರ ನಡೆದ ರಷ್ಯಾದ ಟಿವಿ ಚಾನೆಲ್‌ನ ಸಂಪೂರ್ಣ ಸಿಬ್ಬಂದಿ..! ವೀಕ್ಷಿಸಿ

ಅಂತಿಮ ಟೆಲಿಕಾಸ್ಟ್‌ನಲ್ಲಿ “ಯುದ್ಧ ಬೇಡ” ಎಂದು ಘೋಷಿಸಿದ ನಂತರ ರಷ್ಯಾದ ದೂರದರ್ಶನ ಚಾನೆಲ್‌ನ ಸಂಪೂರ್ಣ ಸಿಬ್ಬಂದಿ ಟಿವಿಯಲ್ಲಿ ನೇರ ಪ್ರಸಾರ ನಡೆಯುತ್ತಿದ್ದಾಗಲೇ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ…! ಉಕ್ರೇನ್ ಯುದ್ಧದ ಕವರೇಜ್‌ನ ಮೇಲೆ ರಷ್ಯಾದ ಅಧಿಕಾರಿಗಳು ಅದರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ನಂತರ ಟಿವಿ ರೇನ್ (ಡೊಜ್ಡ್) ಸಿಬ್ಬಂದಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಚಾನೆಲ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ನಟಾಲಿಯಾ … Continued

ಉಕ್ರೇನ್‌ನಲ್ಲಿ ದಿನಗಟ್ಟಲೆ ಆಹಾರ-ನೀರಿಲ್ಲದೆ ಪರಿತಪಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಈಗ ನೀರಿಗಾಗಿ ಹಿಮವನ್ನೇ ಕರಗಿಸುತ್ತಿದ್ದಾರೆ… | ವೀಕ್ಷಿಸಿ

ಕೀವ್‌: ಉಕ್ರೇನ್ ಆಕ್ರಮಣದ ನಂತರ ಆಹಾರ ಮತ್ತು ನೀರಿಲ್ಲದೆ ದಿನಗಟ್ಟಲೆ ಸಿಲುಕಿರುವ ಈಶಾನ್ಯ ನಗರದ ಸುಮಿಯ ಹಾಸ್ಟೆಲ್‌ನಲ್ಲಿ ಕೆಲವು ಭಾರತೀಯ ವಿದ್ಯಾರ್ಥಿಗಳು ನೀರಿಗಾಗಿ ಹಿಮವನ್ನೇ ಕರಗಿಸಲು ಹಿಮವನ್ನು ಸಂಗ್ರಹಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ಅವರಲ್ಲಿ ಸುಮಾರು 800-900 ವಿದ್ಯಾರ್ಥಿಗಳು ಒಂದು ವಾರದಿಂದ ಸುಮಿ ಸ್ಟೇಟ್ ಯೂನಿವರ್ಸಿಟಿಯ ವೈದ್ಯಕೀಯ ಸಂಸ್ಥೆಯ ಹಾಸ್ಟೆಲ್‌ಗಳಲ್ಲಿ ಬಂಧಿಯಾಗಿದ್ದಾರೆ ಮತ್ತು … Continued