ಈ ಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಾಲಕ್ಕೆ ಎರಡೂ ಕೈಗಳಿಂದ ಬರೆಯುತ್ತಾರೆ.. ! ವೀಕ್ಷಿಸಿ

ಭೋಪಾಲ್: ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿರುವ ಶಾಲೆಯೊಂದರಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎರಡೂ ಕೈಗಳನ್ನು ಬಳಸಿ ಬರೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಜೊತೆಗೆ ಅವರು ಐದು ಭಾಷೆಗಳಲ್ಲಿ ಚೆನ್ನಾಗಿ ಪಾರಂಗತರಾಗಿದ್ದಾರೆ. ವೀಣಾ ವಾದಿನಿ ಪಬ್ಲಿಕ್ ಸ್ಕೂಲ್ ಸಿಂಗ್ರೌಲಿಯ ಬುಧೇಲಾ ಗ್ರಾಮದಲ್ಲಿದೆ. ಶಾಲೆಯ ವಿದ್ಯಾರ್ಥಿಗಳು ಹಿಂದಿ, ಸಂಸ್ಕೃತ, ಇಂಗ್ಲಿಷ್, ಉರ್ದು ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಪ್ರವೀಣರಾಗಿದ್ದಾರೆ. ಮೊದಲು ಬಲಗೈ ಬಳಸಿ ಬರೆಯುತ್ತಿದ್ದೆ, … Continued

ಗಾಲ್ವಾನ್ ನಂತರ ಮೊದಲ ಹಸ್ತಲಾಘವ : ಜಿ20 ಔತಣಕೂಟದಲ್ಲಿ ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪರಸ್ಪರ ಶುಭಾಶಯ ವಿನಿಮಯ

ಬಾಲಿ: ಇಂಡೋನೇಷ್ಯಾದ ಬಾಲಿಯಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಆಯೋಜಿಸಿದ್ದ ಜಿ20 ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದರು. ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟಿನ ನಂತರ ಉಭಯ ನಾಯಕರ ನಡುವೆ ಕ್ಯಾಮೆರಾದಲ್ಲಿ ಇದು ಮೊದಲ ಹಸ್ತಲಾಘವವಾಗಿದೆ. ಔತಣಕೂಟದಲ್ಲಿ ಉಭಯ ನಾಯಕರು … Continued

ಆಂಧ್ರದಲ್ಲಿ ತೆರೆದ ಬಾವಿಗೆ ಬಿದ್ದ ಆನೆ : ಜೆಸಿಬಿ ಕಾರ್ಯಾಚರಣೆ ನಂತರ ರಕ್ಷಣೆ | ವೀಕ್ಷಿಸಿ

ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಸೋಮವಾರ ರಾತ್ರಿ ಬಾವಿಗೆ ಬಿದ್ದ ಆನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಮಂಗಳವಾರ ರಕ್ಷಿಸಿದ್ದಾರೆ. ವೀಡಿಯೊದಲ್ಲಿ ಜೆಸಿಬಿ ಯಂತ್ರವು ಬಾವಿಯ ಗೋಡೆಯ ಒಂದು ಭಾಗವನ್ನು ಕಿತ್ತು ಹಾಕುವುದನ್ನು ಮತ್ತು ಆನೆ ಹೊರಬರಲು ಅನುಕೂಲವಾಗುವಂತೆ ಇಳಿಜಾರು ಮಾಡುವುದನ್ನು ತೋರಿಸುತ್ತದೆ. ಅದೃಷ್ಟವಶಾತ್ ಸಂಬಂಧಪಟ್ಟ ಬಾವಿ ತುಂಬಾ ಆಳವಾಗಿ ಇರಲಿಲ್ಲ. ಸ್ಥಳೀಯರು ಮತ್ತು … Continued

ಶ್ರದ್ಧಾ ಭೀಕರ ಕೊಲೆ ಪ್ರಕರಣ: ವಿಚಾರಣೆ ವೇಳೆ ಕೊಲೆ ಆರೋಪಿಯಿಂದ ಹೊರಬೀಳುತ್ತಿರುವ ಬೆಚ್ಚಿ ಬೀಳಿಸುವ ಸಂಗತಿಗಳು..

 ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಒಂದೊಂದೇ ಬೆಚ್ಚಿ ಬೀಳಿಸುವ ಸಂಗತಿಗಳು ಹೊರಬೀಳುತ್ತಿವೆ. ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ತನ್ನ ಲಿವ್-ಇನ್ ಪಾಲುದಾರಳಾದ ಶ್ರದ್ಧಾ ವಾಕರ್ ಅವಳನ್ನು ಕೊಂದ ನಂತರ ರಕ್ತವನ್ನು ಸ್ವಚ್ಛಗೊಳಿಸುವ ವಿಧಾನದ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದ್ದಾನೆ ಮತ್ತು ಆಕೆಯ ದೇಹವನ್ನು 35 ಸಣ್ಣ ತುಂಡುಗಳಾಗಿ ಕತ್ತರಿಸುವ ಮೊದಲು ಮಾನವ ಅಂಗರಚನಾಶಾಸ್ತ್ರದ ಬಗ್ಗೆ ಆತ … Continued

G20 ಶೃಂಗಸಭೆಯಲ್ಲಿ ಮೊದಲ ಬಾರಿಗೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ

ಬಾಲಿ: 17ನೇ ಆವೃತ್ತಿಯ ಜಿ20 ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು, ಮಂಗಳವಾರ ಮೊದಲ ಬಾರಿಗೆ ಯುನೈಟೆಡ್ ಕಿಂಗ್‌ಡಂ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾದರು. ಉಭಯ ನಾಯಕರ ನಡುವೆ ನಡೆದ ಮೊದಲ ಮುಖಾಮುಖಿ ಇದಾಗಿದೆ. ಇದಕ್ಕೂ ಮೊದಲು, ಅಕ್ಟೋಬರ್‌ನಲ್ಲಿ, ಪ್ರಧಾನಿ ಮೋದಿ ಮತ್ತು ಸುನಕ್ ಅವರು ಫೋನ್‌ನಲ್ಲಿ ಮಾತನಾಡಿದ್ದರು ಮತ್ತು ಉಭಯ … Continued

ಶ್ರದ್ಧಾ ಭೀಕರ ಕೊಲೆ ಪ್ರಕರಣ: ಕೊಂದು ದೇಹ ಫ್ರಿಡ್ಜ್‌ನಲ್ಲಿಟ್ಟು ಬೇರೆ ಮಹಿಳೆಯರ ಜೊತೆ ಡೇಟಿಂಗ್‌ ಶುರು ಮಾಡಿದ್ದ ಕೊಲೆ ಆರೋಪಿ ಅಫ್ತಾಬ್…!

 ನವದೆಹಲಿ: ಶ್ರದ್ಧಾ ಕೊಲೆ ಪ್ರಕರಣದ ಆಘಾತಕಾರಿ ಅಪ್‌ಡೇಟ್‌ನಲ್ಲಿ, ಆರೋಪಿ ಅಫ್ತಾಬ್ ಪೂನಾವಾಲಾ ದಕ್ಷಿಣ ದೆಹಲಿಯ ಛತ್ತರ್‌ಪುರ ಪಹಾಡಿಯಲ್ಲಿ ತನ್ನ ಲೈವ್-ಇನ್ ಪಾರ್ಟ್ನರಳನ್ನು ಕೊಂದ ಕೆಲವು ದಿನಗಳ ನಂತರ ಮತ್ತೆ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಮೂಲಗಳ ಪ್ರಕಾರ, ಆತ 2019 ರಲ್ಲಿ ಶ್ರದ್ಧಾ ವಾಕರ್ ಅವಳನ್ನು ಭೇಟಿಯಾದ ಅದೇ ಡೇಟಿಂಗ್ ಅಪ್ಲಿಕೇಶನ್ … Continued

ಮಿಜೋರಾಂ ಕಲ್ಲುಕ್ವಾರಿ ಅವಘಡ: 8 ಕಾರ್ಮಿಕರ ಮೃತದೇಹ ಹೊರಕ್ಕೆ

ಐಜ್ವಾಲ್: ಮಿಜೋರಾಂನ ಕಲ್ಲುಕ್ವಾರಿ ಅವಘಡದಲ್ಲಿ ಮೃತಪಟ್ಟ ಬಿಹಾರದ 8 ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸೋಮವಾರ ಸಂಜೆ ಕುಸಿದಿದ್ದ ಕಲ್ಲುಕ್ವಾರಿ ಅಡಿ 12 ಮಂದಿ ಸಿಲುಕಿದ್ದರು ಎಂದು ಹೇಳಲಾಗಿದ್ದು, ಇನ್ನೂ ನಾಲ್ವರಿಗಾಗಿ ಶೋಧ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳ ಗುರುತು ಪತ್ತೆ ಕಾರ್ಯ ನಡೆಯಲಿದೆ. ನಾಪತ್ತೆಯಾಗಿರುವ ಎಲ್ಲ ಕಾರ್ಮಿಕರು ಪತ್ತೆಯಾಗುವವರೆಗೂ ಕಾರ್ಯಾಚರಣೆ ನಡೆಯಲಿದೆ ಎಂದು ರಾಷ್ಟ್ರೀಯ … Continued

ಪ್ರಯಾಣಿಕರ ಮರುಪಾವತಿಯಾಗಿ $121.5 ಮಿಲಿಯನ್ ಪಾವತಿಸಲು ಟಾಟಾ ನೇತೃತ್ವದ ಏರ್ ಇಂಡಿಯಾಕ್ಕೆ ಅಮೆರಿಕ ಆದೇಶ

ವಾಷಿಂಗ್ಟನ್: ಹೆಚ್ಚಾಗಿ ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ವಿಮಾನಗಳ ರದ್ದತಿ ಅಥವಾ ಬದಲಾವಣೆಯಿಂದಾಗಿ ಪ್ರಯಾಣಿಕರಿಗೆ ಮರುಪಾವತಿ ನೀಡಲು ತೀವ್ರ ವಿಳಂಬ ಮಾಡಿದ್ದಕ್ಕಾಗಿ $ 121.5 ಮಿಲಿಯನ್ ಮರುಪಾವತಿ ಮತ್ತು $ 1.4 ಮಿಲಿಯನ್ ದಂಡ ಪಾವತಿಸಲು ಟಾಟಾ-ಗುಂಪಿನ ಒಡೆತನದ ಏರ್ ಇಂಡಿಯಾಕ್ಕೆ ಅಮೆರಿಕ ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 600 ಮಿಲಿಯನ್ ಡಾಲರ್‌ಗಳನ್ನು ಮರುಪಾವತಿಯಾಗಿ ನೀಡಲು … Continued

“ಕದನ ವಿರಾಮ, ರಾಜತಾಂತ್ರಿಕತೆ”: ಜಿ20 ಶೃಂಗಸಭೆಯಲ್ಲಿ ಉಕ್ರೇನ್ ಬಿಕ್ಕಟ್ಟಿಗೆ ಪ್ರಧಾನಿ ಮೋದಿ ಸಲಹೆ

ನವದೆಹಲಿ: ಉಕ್ರೇನ್‌ನಲ್ಲಿ ಕದನ ವಿರಾಮ ಮತ್ತು ರಾಜತಾಂತ್ರಿಕತೆಯ ದಾರಿಗೆ ಮರಳಲು ಜಗತ್ತು ಒಂದು ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಹೇಳಿದ್ದಾರೆ. 2ನೇ ಮಹಾಯುದ್ಧದ ಭೀಕರತೆಯನ್ನು ಪ್ರಸ್ತಾಪಿಸಿದ ಅವರು,”ಕಳೆದ ಶತಮಾನದಲ್ಲಿ, ಎರಡನೇ ಮಹಾಯುದ್ಧವು ಜಗತ್ತಿನಲ್ಲಿ ವಿನಾಶವನ್ನುಂಟುಮಾಡಿತು. ಅದರ ನಂತರ, ಅಂದಿನ ನಾಯಕರು ಶಾಂತಿಯ ಹಾದಿಯನ್ನು ಹಿಡಿಯಲು … Continued

ನಟ ಮಹೇಶ್​ ಬಾಬು ತಂದೆ ತೆಲುಗು ಸೂಪರ್​ ಸ್ಟಾರ್​ ಕೃಷ್ಣ ನಿಧನ

ಹೈದರಾಬಾದ್‌: ತೆಲುಗು ಸಿನಿಮಾ ಸೂಪರ್‌ಸ್ಟಾರ್ ಹಿರಿಯ ತೆಲುಗು ನಟ ಕೃಷ್ಣ ಘಟ್ಟಮನೇನಿ ಮಂಗಳವಾರ ಮುಂಜಾನೆ 4:10ಕ್ಕೆ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು ಅವರು ಹೃದಯಾಘಾತದ ನಂತರ ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಮತ್ತು ಅವರು ಪುತ್ರ ಮತ್ತು ತೆಲುಗು ಸೂಪರ್‌ ಸ್ಟಾರ್‌ ಮಹೇಶ್ ಬಾಬು ಮತ್ತು ಪುತ್ರಿಯರಾದ ಪದ್ಮಾವತಿ, ಮಂಜುಳಾ … Continued