ಜೀವಂತ ಗೋವನ್ನು ಮರಕ್ಕೆ ಕಟ್ಟಿ ಸಿಂಹದ ಬಾಯಿಗೆ ಕೊಟ್ಟು ಕೊಲ್ಲುವುದು ನೋಡಿ ವಿಕೃತ ಆನಂದ…!:12 ಜನರ ವಿರುದ್ಧ ಪ್ರಕರಣ ದಾಖಲು

ಜುನಾಗಢ: ಗಿರ್ ಅರಣ್ಯದ ಹಳ್ಳಿಯೊಂದರಲ್ಲಿ ಕಂಬಕ್ಕೆ ಕಟ್ಟಿ ಹಾಕಿದ ಹಸುವನ್ನು ಸಿಂಹವೊಂದು ಕೊಂದು ತಿನ್ನುತ್ತಿರುವ ಕಾನೂನು ಬಾಹಿರ ಕಾರ್ಯಕ್ರಮ ವೀಕ್ಷಿಸಲು ನೆರೆದಿದ್ದ ಜನರ ಗುಂಪೊಂದರ ವಿಡಿಯೊ ಆಗಿದ್ದು, ಈ ಸಂಬಂಧ ಗುಜರಾತ್ ಅರಣ್ಯ ಇಲಾಖೆ 12 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಘಟನೆಯ ಕುರಿತು ಇದುವರೆಗೆ ನಡೆಸಲಾದ ತನಿಖೆಯ ಪ್ರಕಾರ, … Continued

ಪಾನ್ ಮಸಾಲಾ ಸಂಸ್ಥೆಗೆ ಲೀಗಲ್‌ ನೋಟಿಸ್‌ ಕಳುಹಿಸಿದ ಬಚ್ಚನ್:‌ ವರದಿ

ಬಾಲಿವುಡ್‌ ಸೂಪರ್‌ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಪಾನ್ ಮಸಾಲಾ ಸಂಸ್ಥೆಗೆ ಲೀಗಲ್‌ ನೋಟಿಸ್‌ ಕಳುಹಿಸಿ ಕಾನೂನು ಎಚ್ಚರಿಕೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಒಪ್ಪಂದದ ಮುಕ್ತಾಯದ ಹೊರತಾಗಿಯೂ ಅವರನ್ನು ಒಳಗೊಂಡ ದೂರದರ್ಶನ ಜಾಹೀರಾತುಗಳನ್ನು ತೋರಿಸುವುದನ್ನು ಕಂಪನಿಯವರು ಮುಂದುವರೆಸಿದ್ದಾರೆ. ಅಕ್ಟೋಬರ್‌ನಲ್ಲಿ, ಯುವಕರು ತಂಬಾಕಿಗೆ ವ್ಯಸನಿಯಾಗುವುದನ್ನು ತಡೆಯಲು ಪಾನ್ ಮಸಾಲಾ ಬ್ರ್ಯಾಂಡ್‌ಗೆ ಪ್ರಾಯೋಜಕತ್ವವನ್ನು ನೀಡುವುದನ್ನು ನಿಲ್ಲಿಸುವಂತೆ ರಾಷ್ಟ್ರೀಯ … Continued

ಭಾರತದ ನೌಕಾಪಡೆಗೆ ಕ್ಷಿಪಣಿ ವಿಧ್ವಂಸಕ ಯುದ್ಧನೌಕೆ ಐಎನ್​ಎಸ್​ ವಿಶಾಖಪಟ್ಟಂ ಸೇರ್ಪಡೆ

ಮುಂಬೈ: ದೇಶದ ಮೊದಲ ಮೊದಲ ರಹಸ್ಯ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ನೌಕೆ ಐಎನ್​ಎಸ್​ ವಿಶಾಖಪಟ್ಟಣಂ ಅನ್ನು ಇಂದು (ಭಾನುವಾರ) ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು. ಈ ನೌಕೆಯನ್ನು ಇಂದು ರಾಷ್ಟ್ರಕ್ಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಂಬೈನ ನೌಕಾನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ನೌಕಾಪಡೆಗೆ ಐಎನ್ಎಸ್ ವಿಶಾಖಪಟ್ಟಣಂ ಅನ್ನು ಅಧಿಕೃತವಾಗಿ ನಿಯೋಜಿಸುವ ಮೂಲಕ, ನೌಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. … Continued

ಆಂಧ್ರ ಪ್ರವಾಹ: ಇಬ್ಬರನ್ನು ಪಾರು ಮಾಡಿ ಜೀವ ಕಳೆದುಕೊಂಡ ಎಸ್‌ಡಿಆರ್‌ಎಫ್ ಸಿಬ್ಬಂದಿ

ನೆಲ್ಲೂರು: ಇಬ್ಬರ ಪ್ರಾಣ ಕಾಪಾಡಿದ ಆಂಧ್ರದ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್) ಕಾನ್ಸ್ಟೇಬಲ್ ಒಬ್ಬರು ರಕ್ಷಣಾ ಕಾರ್ಯಾಚರಣೆ ವೇಳೆ ಲೈಫ್ ಜಾಕೆಟ್ ಬೇರ್ಪಟ್ಟ ನಂತರ ಜಲಸಮಾಧಿಯಾದ ದುರಂತ ನಡೆದಿದೆ. ಬುಚ್ಚಿರೆಡ್ಡಿಪಾಲೆಂ ಮಂಡಲದ ದಾಮರಮಡುಗು ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ದುರ್ದೈವಿ ಎಸ್‌ಡಿಆರ್‌ಎಫ್ ಪೇದೆಯನ್ನು ಕೆಲ್ಲ ಶ್ರೀನಿವಾಸ ರಾವ್ (30) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, … Continued

ನಿರ್ಲಕ್ಷ್ಯವೋ..ಅಚ್ಚರಿಯೋ…: ಶವಾಗಾರದ ಫ್ರೀಜರ್‌ನಲ್ಲಿ 7 ತಾಸುಗಳ ಕಾಲ ಇರಿಸಿದ್ದ ‘ಸತ್ತ’ ವ್ಯಕ್ತಿ ಬದುಕಿ ಬಂದ..!

ಲಕ್ನೋ: ಒಂದು ಅಪರೂಪದ ಘಟನೆಯಲ್ಲಿ, ಮೃತಪಟ್ಟಿದ್ದಾನೆಂದು ವೈದ್ಯರು ಅಧಿಕೃತವಾಗಿ ಘೋಷಿಸಿ ಶವಗಾರದಲ್ಲಿ ಇರಿಸಿದ್ದ ವ್ಯಕ್ತಿ ಏಳು ತಾಸುಗಳ ನಂತರ ಜೀವಂತವಾಗಿ ಹೊರಬಂದ ಅಪರೂದ ವಿದ್ಯಮಾನ ಉತ್ತರ ಪ್ರದೇಶದ ಮೊರದಾಬಾದ್‌ನಲ್ಲಿ ನಡೆದಿದೆ…!  40 ವರ್ಷದ ವ್ಯಕ್ತಿಯನ್ನು ಜೀವಂತವಾಗಿ ಹೊರಬರುವ ಮೊದಲು ಆ ವ್ಯಕ್ತಿ ಸತ್ತಿದ್ದಾನೆಂದು ಸುಮಾರು ಏಳು ಗಂಟೆಗಳ ಕಾಲ ಶವಾಗಾರದ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಎಲೆಕ್ಟ್ರಿಷಿಯನ್‌ ಆಗಿ … Continued

ಎಂಎಸ್‌ಪಿ, ಎಫ್‌ಐಆರ್‌ಗಳ ಹಿಂಪಡೆಯುವಿಕೆ, ಸಚಿವ ಅಜಯ್ ಮಿಶ್ರಾ ವಜಾ: ಬೇಡಿಕೆಗಳ ಪಟ್ಟಿ ಮುಂದಿಟ್ಟ ಎಸ್‌ಕೆಎಂ, ಹೋರಾಟ ಮುಂದುವರಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ, 40ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್‌ ಮೋರ್ಚಾ ಭಾನುವಾರ (ನವೆಂಬರ್ 21 ) ದೆಹಲಿ-ಹರಿಯಾಣ ಗಡಿಯ ಸಮೀಪವಿರುವ ಸಿಂಘು ಪ್ರತಿಭಟನಾ ಸ್ಥಳದಲ್ಲಿ ಮುಂದಿನ ಮಾರ್ಗೋಪಾಯಗಳ ಕುರಿತು ಚರ್ಚಿಸಲು ಸಭೆ ನಡೆಸಿತು. ನವೆಂಬರ್ 22 ರಂದು ಲಕ್ನೋದಲ್ಲಿ … Continued

ತನ್ನ ಮದುವೆಯ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಯುವಕನ ಮೇಲೆ ಆಸಿಡ್ ಎರಚಿದ ಎರಡು ಮಕ್ಕಳ ತಾಯಿ..!

ಕೊಚ್ಚಿ :ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಆಸಿಡ್ ಎರಚಿದ ಆರೋಪದ ಮೇಲೆ 35 ವರ್ಷದ ಎರಡು ಮಕ್ಕಳ ತಾಯಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಿರುವಂತಪುರಂನ ಅರುಣ್ ಕುಮಾರ್ (28) ಅವರು ರಾಜ್ಯ ರಾಜಧಾನಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ನವೆಂಬರ್ 16 ರಂದು ಶೀಬಾ … Continued

ನಾಯಿಪಾಡು ಎನ್ನಬೇಡಿ.. .ಯಾಕೆಂದ್ರೆ ಈ ನಾಯಿ ಆಸ್ತಿ ಕೇಳಿದ್ರೆ ಬೆಚ್ಚಿ ಬೀಳ್ತೀರಿ.. ಅದರ ಒಂದು ಭವನ 238 ಕೋಟಿ ರೂ.ಗೆ ಮಾರಾಟ..! ವೀಕ್ಷಿಸಿ

ನಾಯಿ ಪಾಡು ಎಂದು ಮೂಗು ಮುರಿಯಬೇಡಿ. ಯಾಕೆಂದರೆ ಇಲ್ಲೊಂದು ನಾಯಿಯ ಆಸ್ತಿ ಕೇಳಿದರೆ ಎಂಥವನಾದರೂ ಹೌಹಾರಲೇಬೇಕು. ಅದರ ಆಸ್ತಿ ಒಂದು ಕೋಟಿಯಲ್ಲ, ಹತ್ತು ಕೋಟಿಯಲ್ಲ, ನೂರು ಕೋಟಿಯಲ್ಲ.. ಸಾವರ ಕೋಟಿಯಲ್ಲ…ಈ ನಾಯಿಯ ಬಳಿ ಆಸ್ತಿ 3715 ಕೋಟಿ ರೂ.ಗಳು..(500 ಮಿಲಿಯನ್ ಡಾಲರ್‌)…! ಇದು ಈಗ ವಿಶ್ವದ ಅತ್ಯಂತ ಶ್ರೀಮಂತ ನಾಯಿ..!! ಈ ನಾಐಇ ಇರುವುದು ಅಮೆರಿಕದ … Continued

ಸಿಖ್ ಸಮುದಾಯಕ್ಕೆ ಅವಮಾನ: ಕಂಗನಾ ರಣಾವತ್ ವಿರುದ್ಧ ಪೊಲೀಸ್ ದೂರು ದಾಖಲು

ನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಸಿಖ್ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ ಆರೋಪದ ಮೇಲೆ ನಟಿ ಕಂಗನಾ ರಣಾವತ್ ವಿರುದ್ಧ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್‌ಜಿಎಂಸಿ) ಶನಿವಾರ ಪೊಲೀಸ್ ದೂರು ದಾಖಲಿಸಿದೆ ಎಂದು ಹೇಳಿಕೆ ತಿಳಿಸಿದೆ. ಮಂದಿರ ಮಾರ್ಗ ಪೊಲೀಸ್ ಠಾಣೆಯ ಸೈಬರ್ ಸೆಲ್‌ಗೆ ದೂರು ನೀಡಲಾಗಿದೆ. ಕಂಗನಾ ರಣಾವತ್ ಅವರು “ಉದ್ದೇಶಪೂರ್ವಕವಾಗಿ” ರೈತರ … Continued

ಸಾರಾಯಿ ಪಾರ್ಟಿ ವೇಳೆ ಹಾವನ್ನು ಕಂಡು ಹುರಿದು ತಿಂದ ಸ್ನೇಹಿತರು.. ಒಬ್ಬ ಪ್ರಜ್ಞಾಹೀನನಾಗಿ ಆಸ್ಪತ್ರೆಗೆ ದಾಖಲು ..!

ಸಾರಾಯಿ ಪಾರ್ಟಿಯಲ್ಲಿ ಕುಡುಕ ಸ್ನೇಹಿತರು ಹಾವನ್ನು ಹುರಿದು ತಿಂದಿದ್ದಾರೆ. ನಂತರ ಅವರಲ್ಲಿ ಒಬ್ಬ ಗಂಟೆಗಟ್ಟಲೆ ಪ್ರಜ್ಞಾಹೀನನಾದ ಘಟನೆ ರಾಜಸ್ಥಾನದ ಧೋಲ್‌ಪುರದಲ್ಲಿ ವರದಿಯಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಮಾದಕ ವ್ಯಸನಿಗಳು ಮಾಡಿದ್ದನ್ನು ಕೇಳಿದರೆ ಯಾರೇ ಆದರೂ ಬೆಚ್ಚಿ ಬೀಳುತ್ತಾರೆ. ಮದ್ಯದ ಪಾರ್ಟಿಯಲ್ಲಿ ಕುಡಿದ ಅಮಲಿನಲ್ಲಿ ಹಾವನ್ನು ಕಂಡ ಮೂವರು ಸ್ನೇಹಿತರು … Continued