ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್​​ ಸೈಲ್ ಹೃದಯಾಘಾತದಿಂದ ಸಾವು

ಮುಂಬೈ: 2021 ರ ಮುಂಬೈ ಕ್ರೂಸ್ ಡ್ರಗ್ ಪ್ರಕರಣದ ಸ್ವತಂತ್ರ ಸಾಕ್ಷಿ ಪ್ರಭಾಕರ್ ಸೈಲ್ ಹೃದಯಾಘಾತದಿಂದ ಶುಕ್ರವಾರ ಮಧ್ಯಾಹ್ನ ಮಹುಲ್ ಪ್ರದೇಶದಲ್ಲಿನ ಅವರ ಬಾಡಿಗೆ ಅಪಾರ್ಟ್ಮೆಂಟಿಲ್ಲಿ ನಿಧನರಾಗಿದ್ದಾರೆ. ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲ ತುಷಾರ್ ಖಂಡಾರೆ, ಸೈಲ್ ಅವರು ಸಾವನ್ನು ದೃಢಪಡಿಸಿದ್ದಾರೆ ಮತ್ತು ಸೈಲ್ ಅವರು ಮನೆಯಲ್ಲಿದ್ದರು ಮತ್ತು ಅವರ ಸಾವಿನ ಹಿಂದೆ ಕುಟುಂಬವು ಯಾವುದೇ ದುಷ್ಕೃತ್ಯವನ್ನು … Continued

ಯುಗಾದಿ ದಿನಂದು ಪೆಟ್ರೋಲ್‌-ಡೀಸೆಲ್‌ ಮತ್ತಷ್ಟು ದುಬಾರಿ

ನವದೆಹಲಿ: ಯುಗಾದಿ ಹಬ್ಬದ ದಿನವಾದ ಇಂದು, ಶನಿವಾರ ಕೂಡ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ 80 ಪೈಸೆ ಏರಿಕೆಯಾಗಿದೆ. ಕೇವಲ 12 ದಿನಗಳಲ್ಲೇ 10ನೇ ಬಾರಿಗೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದ್ದು, ಇಂದು (ಏಪ್ರಿಲ್‌ 2) ಪೆಟ್ರೋಲ್ ಮತ್ತು ಡೀಸೆಲ್​ ಕ್ರಮವಾಗಿ 80​ ಪೈಸೆಯಷ್ಟು ಏರಿಕೆಯಾಗಿದ್ದು, ಕಳೆದ 12 ದಿನಗಳಲ್ಲಿ ಒಟ್ಟು 7.20 ರೂ. … Continued

ರಷ್ಯಾದ ವಿದೇಶಾಂಗ ಸಚಿವರ ಭೇಟಿ ಮಾಡಿದ ಪ್ರಧಾನಿ: ಹಿಂಸಾಚಾರ ನಿಲ್ಲಿಸಲು” ಕರೆ, ಶಾಂತಿ ಪ್ರಯತ್ನಕ್ಕೆ ಸಹಕರಿಸಲು ಸಿದ್ಧ ಎಂದ ಮೋದಿ

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರ ದೀರ್ಘಾ ಕಾಲದ ಮಿತ್ರ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಶುಕ್ರವಾರ ಅಧಿಕೃತ ಭೇಟಿಗಾಗಿ ನವದೆಹಲಿಗೆ ಬಂದಿದ್ದು, ಉಕ್ರೇನ್ ಆಕ್ರಮಣದ ಬಗ್ಗೆ ರಷ್ಯಾ ವ್ಯಾಪಕ ಟೀಕೆಗಳನ್ನು ಸ್ವೀಕರಿಸುತ್ತಿರುವ ಸಮಯದಲ್ಲಿ ಈ ಭೇಟಿ ನಡೆದಿದೆ. ತಮ್ಮ ಭೇಟಿಯ ಸಂದರ್ಭದಲ್ಲಿ, ಲಾವ್ರೊವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು … Continued

ಪುಣೆಯಿಂದ ಕೊಲ್ಲಾಪುರಕ್ಕೆ ವರ್ಗಾವಣೆಗೊಂಡ ನಂತರ ಅಧಿಕಾರ ವಹಿಸಿಕೊಳ್ಳಲು 294 ಕಿಮೀ ಸೈಕಲ್‌ ತುಳಿದ ಮಹಾರಾಷ್ಟ್ರ ಅರಣ್ಯಾಧಿಕಾರಿ

ಮುಂಬೈ: ಮಹಾರಾಷ್ಟ್ರದ ಅರಣ್ಯ ಅಧಿಕಾರಿಯೊಬ್ಬರು ತಮ್ಮ ಹೊಸ ಪೋಸ್ಟಿಂಗ್‌ನಲ್ಲಿ ಅಧಿಕಾರ ವಹಿಸಿಕೊಳ್ಳಲು ಪುಣೆಯಿಂದ ಕೊಲ್ಲಾಪುರಕ್ಕೆ ಹೋಗಲು 294 ಕಿಲೋಮೀಟರ್ ಸೈಕ್ಲಿಂಗ್ ಮಾಡುವ ಮೂಲಕ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೆ 59 ನೇ ವರ್ಷಕ್ಕೆ ಕಾಲಿಟ್ಟ ನಾನಾಸಾಹೇಬ್ ಲಾಡ್ಕಟ್ ಎಂಬ ಅಧಿಕಾರಿ ಬುಧವಾರದಂದು ಸೈಕಲ್ ತುಳಿದು, ಬೇಸಿಗೆಯ … Continued

ಈ ಮಾರ್ಚ್‌ನಲ್ಲಿ 1.42 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಸಾರ್ವಕಾಲಿಕವಾಗಿ ಹೆಚ್ಚು ಜಿಎಸ್‌ಟಿ ಸಂಗ್ರಹ…!

ನವದೆಹಲಿ: ಮಾರ್ಚ್‌ನಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಸಾರ್ವಕಾಲಿಕ ಗರಿಷ್ಠ 1.42 ಲಕ್ಷ ಕೋಟಿ ರೂಪಾಯಿಗಳನ್ನು ಮುಟ್ಟಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ (ಏಪ್ರಿಲ್ 1) ತಿಳಿಸಿದೆ. ಮಾರ್ಚ್ 2022ರಲ್ಲಿ ಒಟ್ಟು ಜಿಎಸ್‌ಟಿ (GST) ಆದಾಯವು 1,42,095 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸಿಜಿಎಸ್‌ಟಿ (CGST) 25,830 ಕೋಟಿ ರೂ., ಎಸ್‌ಜಿಎಸ್‌ಟಿ (SGST) … Continued

ರಾಜ್ಯಸಭೆಯಲ್ಲಿ ಇದೇ ಮೊದಲ ಬಾರಿಗೆ ಮೂರಂಕಿ ತಲುಪಿದ ಬಿಜೆಪಿ ಸದಸ್ಯರ ಬಲ

ನವದೆಹಲಿ: ಗುರುವಾರ ರಾಜ್ಯಸಭೆಗೆ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮೂರು ಅಂಕಿಗಳ ಸಂಖ್ಯೆಯನ್ನು ಪಡೆದುಕೊಂಡಿದೆ. ಈ ನಾಲ್ಕು ಸ್ಥಾನಗಳ ಸೇರ್ಪಡೆಯು 245 ಸದಸ್ಯರ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯೆಯನ್ನು 101 ಕ್ಕೆ ಹೆಚ್ಚಿಸಿದೆ, ಆದಾಗ್ಯೂ ಪಂಜಾಬ್ ಸಂಸದ ಶ್ವೈತ್ … Continued

ರಷ್ಯಾ-ಉಕ್ರೇನ್‌ ನಡುವೆ ಭಾರತವು ಮಧ್ಯಸ್ಥಿಕೆ ವಹಿಸಬಹುದು: ರಷ್ಯಾದ ವಿದೇಶಾಂಗ ಸಚಿವರ ಮಹತ್ವದ ಹೇಳಿಕೆ

ನವದೆಹಲಿ: ರಷ್ಯಾ ಮತ್ತು ಉಕ್ರೇನ್‌ ನಡುವೆ ಭಾರತವು ಮಧ್ಯವರ್ತಿ ಪಾತ್ರ ವಹಿಸಬಹುದು ಎಂದು ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್ ಶುಕ್ರವಾರ ತಮ್ಮ ಅಧಿಕೃತ ಭೇಟಿಯ ವೇಳೆ ಮಹತ್ವದ ಹೇಳಿಕೆ ನೀಡಿದ್ದಾರೆ. ಭಾರತವು ಒಂದು ಪ್ರಮುಖ ದೇಶವಾಗಿದೆ. ಭಾರತವು ಸಮಸ್ಯೆಯ ಪರಿಹಾರವನ್ನು ಒದಗಿಸುವ ಆ ಪಾತ್ರವನ್ನು ವಹಿಸುತ್ತದೆ ಎಂದಾದರೆ, ಭಾರತವು ಅಂತಾರರಾಷ್ಟ್ರೀಯ ಸಮಸ್ಯೆಗಳಿಗೆ ನ್ಯಾಯಯುತ ಮತ್ತು ತರ್ಕಬದ್ಧವಾದ … Continued

ಸಾಬರಮತಿ ಪುನರಾಭಿವೃದ್ಧಿ ಪ್ರಶ್ನಿಸಿ ಅರ್ಜಿ ವಿಚಾರಣೆ: ಹೊಸದಾಗಿ ಪ್ರಕರಣ ಆಲಿಸಲು ಗುಜರಾತ್‌ ಹೈಕೋರ್ಟ್‌ಗೆ ಸೂಚಿಸಿದ ಸುಪ್ರೀಂಕೋರ್ಟ್‌

ನವದೆಹಲಿ: ಪ್ರಸ್ತಾವಿತ ಸಾಬರಮತಿ ಆಶ್ರಮದ ಪುನರಾಭಿವೃದ್ಧಿ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಶುಕ್ತವಾರ ಬದಿಗೆ ಸರಿಸಿದ್ದು , ಹೊಸದಾಗಿ ಪ್ರಕರಣವನ್ನು ಆಲಿಸುವಂತೆ ಸೂಚಿಸಿ ಪ್ರಕರಣವನ್ನು ಗುಜರಾತ್‌ ಹೈಕೋರ್ಟ್‌ಗೆ ಮರಳಿಸಿದೆ. ಸಾಬರಮತಿ ಆಶ್ರಮದ ಪುನರಾಭಿವೃದ್ಧಿ ಯೋಜನೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಮಹಾತ್ಮ ಗಾಂಧೀಜಿ ಮರಿ ಮೊಮ್ಮಗ ತುಷಾರ್‌ … Continued

ಭಾರತದಲ್ಲಿ ಮಾತ್ರ…!? : ಹೊಲದಲ್ಲಿ ಕರಡಿ ವೇಷ ಹಾಕಿಕೊಂಡು ಓಡಾಡಿದ್ರೆ ತಿಂಗ್ಳಿಗೆ 15,000 ರೂ. ಸಂಬಳ…!

ಹೈದರಾಬಾದ್: ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ರೈತರು ತಮ್ಮ ಬೆಳೆಯನ್ನು ಮಂಗಗಳು ಮತ್ತು ಕಾಡುಹಂದಿಗಳಿಂದ ರಕ್ಷಿಸಿಕೊಳ್ಳಲು ಒಂದು ವಿಶಿಷ್ಟ ಉಪಾಯವನ್ನು ಕಂಡುಕೊಂಡಿದ್ದಾರೆ. ಜನರಿಗೇ ಕರಡಿಯ ವೇಷ ಹಾಕಿಸಿ ತಮ್ಮ ಹೊಲದಲ್ಲಿ ನಿಲ್ಲಿಸುವ ಮೂಲಕ ಅವರು ತಮ್ಮ ಹೊಲಕ್ಕೆ ಕೋತಿಗಳು ಬರದಂತೆ ತಡೆಯುತ್ತಿದ್ದಾರೆ. ಸಿದ್ದಿಪೇಟೆಯ ಕೋಹೆಡದ ರೈತ ಭಾಸ್ಕರ್ ರೆಡ್ಡಿ ಅವರು ಹೊಲಕ್ಕೆ ದಾಳಿ ಇಟ್ಟು ಬೆಲಳೆಗಳಿಗೆ ಹಾನಿ … Continued

ಭಾರತವು ನಮ್ಮಿಂದ ಯಾವುದನ್ನೇ ಖರೀದಿಸಲು ಬಯಸಿದರೂ ಅದರ ಬಗ್ಗೆ ಮಾತುಕತೆಗೆ ನಾವು ಸಿದ್ಧ: ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್

ನವದೆಹಲಿ: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಅವರೊಂದಿಗೆ ಮಾತುಕತೆ ನಡೆಸಿದ ನಂತರ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಶುಕ್ರವಾರ, ಮಾಸ್ಕೋ ಭಾರತದಿಂದ ಕಚ್ಚಾ ತೈಲವನ್ನು ಖರೀದಿಸಲು ಬಯಸಿದರೆ, ಭಾರತದ ಅಗತ್ಯತೆಯ ಬಗ್ಗೆ ಚರ್ಚಿಸಲು ಸಿದ್ಧ ಎಂದು ಹೇಳಿದ್ದಾರೆ. ಭಾರತವು ಹೆಚ್ಚಿನ ಪ್ರಮಾಣದ ರಿಯಾಯಿತಿಯ ರಷ್ಯಾದ ತೈಲವನ್ನು ಖರೀದಿಸಬಹುದು ಎಂಬ ಸೂಚನೆಗಳ ಹಿನ್ನೆಲೆಯಲ್ಲಿ ಉನ್ನತ … Continued