ಚಂದ್ರಯಾನ ಯಶಸ್ಸು ಸಹಿಸದ ಬ್ರಿಟನ್​ ಪತ್ರಕರ್ತರು: ಭಾರತಕ್ಕೆ ನೆರವು ನಿಲ್ಲಿಸಲು ಒತ್ತಾಯ, ಲೂಟಿ ಮಾಡಿದ $45 ಟ್ರಿಲಿಯನ್ ಹಣ, ಕೊಹಿನೂರು ವಜ್ರ ವಾಪಸ್‌ ಮಾಡಿ ಎಂದ ನೆಟಿಜನ್‌ಗಳು

ನವದೆಹಲಿ: ಭಾರತದ ಚಂದ್ರಯಾನ 3 ಯೋಜನೆಯ ಯಶಸ್ಸಿಗೆ ಇಡೀ ಜಗತ್ತು ಅಭಿನಂದಿಸುತ್ತಿರುವ ಸಮಯದಲ್ಲಿ ಬ್ರಿಟನ್ನಿನ ಕೆಲವರು ತಮ್ಮ ಅಸೂಯೆಯನ್ನು ಹೊರಹಾಕಿದ್ದಾರೆ. ಬ್ರಿಟನ್‌, 2016 ಮತ್ತು 2021 ರ ನಡುವೆ ಭಾರತಕ್ಕೆ ನೀಡಿದ 2.3 ಶತಕೋಟಿ ಪೌಂಡ್ ನೆರವನ್ನು ಭಾರತ ಹಿಂದಿರುಗಿಸಬೇಕು ಎಂದು ಬ್ರಿಟಿಷ್ ಟಿವಿ ನಿರೂಪಕ ಹೇಳಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಚಂದ್ರನಲ್ಲಿಗೆ ಹೋಗಲು … Continued

ಚಂದ್ರಯಾನ-3ರ ವಿಕ್ರಂ ಲ್ಯಾಂಡರ್‌ ಒಳಗಿದ್ದ ಪ್ರಗ್ಯಾನ ರೋವರ್ ಹೊರಬಂದ ವೀಡಿಯೊ ಬಿಡುಗಡೆ ಮಾಡಿದ ಇಸ್ರೋ | ವೀಕ್ಷಿಸಿ

ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ವಿಕ್ರಂ ಲ್ಯಾಂಡರ್‌ನಿಂದ ಪಗ್ಯಾನ್‌ ರೋವರ್‌ ಚಂದ್ರನ ಮೇಲ್ಮೈಗೆ ಹೇಗೆ ಇಳಿಯಿತು ಎಂಬುದನ್ನು ತೋರಿಸುವ ವೀಡಿಯೊವೊಂದನ್ನು ಬಿಡುಗಡೆ ಮಾಡಿದೆ. ‘… ಮತ್ತು ಚಂದ್ರಯಾನ-3 ರೋವರ್ ಲ್ಯಾಂಡರ್‌ನಿಂದ ಚಂದ್ರನ ಮೇಲ್ಮೈಗೆ ಹೇಗೆ ರಾಂಪ್ ಮಾಡಿತು ಎಂಬುದು ಇಲ್ಲಿದೆ’ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ … Continued

ಆಸ್ಪತ್ರೆಯಿಂದ ಬಿಡುಗಡೆಯಾದ ಒಂದು ವರ್ಷದೊಳಗೆ 6.5% ಕೋವಿಡ್ ರೋಗಿಗಳ ಸಾವು : ಐಎಂಸಿಆರ್‌ ಅಧ್ಯಯನ

ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಅಡಿ ಆಸ್ಪತ್ರೆಗಳ ನೆಟ್‌ವರ್ಕ್ ನಡೆಸಿದ ಅಧ್ಯಯನದಲ್ಲಿ ಮಧ್ಯಮದಿಂದ ತೀವ್ರತರವಾದ ಕೋವಿಡ್-19 ಸೋಂಕಿನೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ಒಂದು ವರ್ಷದೊಳಗೆ 6.5% ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ ಎಂಬುದು ಕಂಡುಬಂದಿದೆ. ರೋಗಲಕ್ಷಣಗಳಿಲ್ಲದ ಕೋವಿಡ್ ರೋಗಿಗಳಿಗೆ ಹೋಲಿಸಿದರೆ, ಡಿಸ್ಚಾರ್ಜ್ ಆದ ನಂತರ ಕೋವಿಡ್ ನಂತರದ ಪರಿಸ್ಥಿತಿಗಳನ್ನು ಅನುಭವಿಸುವ … Continued

ಭಾರತ-ಚೀನಾ ಬಾಂಧವ್ಯದ ಬಗ್ಗೆ ‘ಪ್ರಾಮಾಣಿಕ, ಆಳವಾದ ದೃಷ್ಟಿಕೋನಗಳ ವಿನಿಮಯ’ ಮಾಡಿಕೊಂಡ ಪ್ರಧಾನಿ ಮೋದಿ-ಚೀನಾ ಅಧ್ಯಕ್ಷ ಕ್ಸಿ : ಚೀನಾ

ನವದೆಹಲಿ: ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ದ್ವಿಪಕ್ಷೀಯ ಮಾತುಕತೆಗಳ ಕುರಿತು ಚೀನಾ ಗುರುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಸಭೆಯಲ್ಲಿ ಭಾರತ-ಚೀನಾ ಸಂಬಂಧಗಳ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದೆ. ಚೀನಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವಿನಿಮಯಕ್ಕೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, … Continued

ಲೋಕಸಭೆಗೆ ಈಗ ಚುನಾವಣೆ ನಡೆದರೆ ಗೆಲ್ಲುವುದು ಮೋದಿಯೋ- ವಿಪಕ್ಷಗಳ ಒಕ್ಕೂಟವೋ…: ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಏನು ಹೇಳುತ್ತದೆ..?

ಈಗಲೇ ಲೋಕಸಭೆ ಚುನಾವಣೆ ನಡೆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) 306 ಸ್ಥಾನಗಳ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಹೇಳಿದೆ. ಸರ್ಕಾರ ರಚಿಸಲು ಅಗತ್ಯವಿರುವ 272 ಸಂಖ್ಯೆಯನ್ನು ಎನ್‌ಡಿಎ ದಾಟಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಮೂಡ್ ಆಫ್ ದಿ … Continued

ಚಂದ್ರಯಾನ-3 ಚಂದ್ರನ ಮೇಲ್ಮೈ ಸ್ಪರ್ಷಿಸುವ ಕೆಲವೇ ಕ್ಷಣಗಳ ಮೊದಲು ಚಂದ್ರ ಹೇಗೆ ಕಾಣುತ್ತಿತ್ತು ಎಂಬುದರ ವೀಡಿಯೊ ಹಂಚಿಕೊಂಡ ಇಸ್ರೋ | ವೀಕ್ಷಿಸಿ

ನವದೆಹಲಿ: ಆಗಸ್ಟ್ 23ರಂದು ಸಂಜೆ 6:04 IST ಕ್ಕೆ ಭಾರತದ ಬಾಹ್ಯಾಕಾಶ ನೌಕೆ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದ ಐತಿಹಾಸಿಕ ಸ್ಪರ್ಶವನ್ನು ಮಾಡುವ ಮೊದಲು ಲ್ಯಾಂಡರಿಗೆ ಚಂದ್ರ ಹೇಗೆ ಕಾಣುತ್ತಿತ್ತು ಎಂಬ ವೀಡಿಯೊವನ್ನು ಇಸ್ರೋ ಹಂಚಿಕೊಂಡಿದೆ. ಚಂದ್ರಯಾನ-3, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾಗಿದ್ದು, ಚಂದ್ರನ ದಕ್ಷಿಣ ಧ್ರುವದ … Continued

ಚೆಸ್ ವಿಶ್ವಕಪ್ ಫೈನಲ್‌: ಟೈಬ್ರೇಕ್ ಪಂದ್ಯದಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಸೋತ ಭಾರತದ ಪ್ರಗ್ನಾನಂದ

ನವದೆಹಲಿ: ಭಾರತದ ಗ್ರ್ಯಾಂಡ್‌ಮಾಸ್ಟರ್ 18 ವರ್ಷದ ಆರ್. ಪ್ರಗ್ನಾನಂದ ಅವರು ಗುರುವಾರ ನಡೆದ ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಟೈಬ್ರೇಕರ್ ಪಂದ್ಯದಲ್ಲಿ ಸೋತಿದ್ದಾರೆ. ಮಂಗಳವಾರ ಮತ್ತು ಬುಧವಾರ ನಡೆದ ಎರಡು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದು, ಫೈನಲ್‌ ಟೈ-ಬ್ರೇಕ್‌ ಹೋಯಿತು. ಮೊದಲ ಟೈ-ಬ್ರೇಕ್ ಪಂದ್ಯದಲ್ಲಿ ವಿಶ್ವದ ನಂ. 1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರು … Continued

“ಚಂದ್ರನ ದಕ್ಷಿಣ ಧ್ರುವವನ್ನೇ ಆಯ್ಕೆ ಮಾಡಿದ್ದು ಯಾಕೆಂದರೆ…”: ಚಂದ್ರಯಾನ-3ರ ಪ್ರಮುಖ ಉದ್ದೇಶಗಳ ಕುರಿತು ಮಾತನಾಡಿದ ಇಸ್ರೋ ಮುಖ್ಯಸ್ಥರು

ಬೆಂಗಳೂರು: ಚಂದ್ರಯಾನ-3 ಬುಧವಾರ ಸಂಜೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿದೆ. ಹಾಗೂ ಆ ಮೂಲಕ ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಏಕೈಕ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೆಪ್ಟೆಂಬರ್ 2019 ರಲ್ಲಿ ಚಂದ್ರಯಾನ-2ರ ಲ್ಯಾಂಡರ್‌ ಎಲ್ಲವನ್ನೂ ಸರಿಯಾಗಿ ನಿರ್ವಹಿಸಿ ಕೊನೆಯ ಕ್ಷಣದಲ್ಲಿ ಇಳಿಯುವಾಗ ಚಂದ್ರನ ಮೇಲೆ … Continued

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ : ಅತ್ಯುತ್ತಮ ನಟಿ ಪ್ರಶಸ್ತಿ ಹಂಚಿಕೊಂಡ ಆಲಿಯಾ ಭಟ್, ಕೃತಿ ಸನೋನ್ ; ಅಲ್ಲು ಅರ್ಜುನ ಅತ್ಯುತ್ತಮ‌ ನಟ -ರಾಕೆಟ್ರಿ: ನಂಬಿ ಎಫೆಕ್ಟ್ ಅತ್ಯುತ್ತಮ ಚಲನಚಿತ್ರ

ನವದೆಹಲಿ: ಗುರುವಾರ ನವದೆಹಲಿಯಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಗಂಗೂಬಾಯಿ ಕಥಿಯಾವಾಡಿ ಮತ್ತು ಮಿಮಿ ಚಿತ್ರದಲ್ಲಿನ ಅಭಿನಯಕ್ಕಾಗಿ ಆಲಿಯಾ ಭಟ್ ಮತ್ತು ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್‌ ಚಲನಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಮೂವರೂ ನಟರಿಗೆ ಇದು ಮೊದಲ ರಾಷ್ಟ್ರೀಯ ಪ್ರಶಸ್ತಿ. … Continued

ಬಡತನದಿಂದ ತುಂಬಿರುವ, ಶೌಚಾಲಯಗಳಿಲ್ಲದ ಭಾರತಕ್ಕೆ ಚಂದ್ರಯಾನ ಬೇಕಾ ಎಂದ ಬಿಬಿಸಿ ನಿರೂಪಕನಿಗೆ ತೀಕ್ಷ್ಣ ಉತ್ತರ ಕೊಟ್ಟ ಆನಂದ ಮಹಿಂದ್ರಾ

ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಇಳಿದ ಬೆನ್ನಲ್ಲೇ ಬಿಬಿಸಿ ನಿರೂಪಕರೊಬ್ಬರ ಹಳೆಯ ವೀಡಿಯೊವೊಂದು ಮತ್ತೆ ವೈರಲ್‌ ಆಗಿದೆ. ಈ ವೀಡಿಯೊದಲ್ಲಿ ಬಿಬಿಸಿ ನಿರೂಪಕ, ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಭಾರತ ನಿಜವಾಗಿಯೂ ಇಷ್ಟೊಂದು ಹಣವನ್ನು ಖರ್ಚು ಮಾಡಬೇಕೇ ಎಂದು ಪ್ರಶ್ನಿಸಿದ್ದಾರೆ. ಭಾರತದ ಹೆಚ್ಚಿನ ಜನರು ಬಡತನದಲ್ಲಿ ವಾಸಿಸುತ್ತಿದ್ದಾರೆ. 70ಕೋಟಿಗೂ ಹೆಚ್ಚು ಭಾರತೀಯರು ಶೌಚಾಲಯ ಹೊಂದಿಲ್ಲ ಎಂದು ಬಿಬಿಸಿ … Continued