ಹಲ್ಲೆ ಪ್ರಕರಣ: ಬಾಲಿವುಡ್‌ ನಟ ಆದಿತ್ಯ ಪಾಂಚೋಲಿ ಶಿಕ್ಷೆ ಎತ್ತಿ ಹಿಡಿದ ನ್ಯಾಯಾಲಯ, ಜೈಲು ಶಿಕ್ಷೆಯಲ್ಲಿ ರಿಲೀಫ್‌

ಮುಂಬೈ: ಮುಂಬೈನ ಸೆಷನ್ಸ್ ನ್ಯಾಯಾಲಯವು 2005 ರ ಪಾರ್ಕಿಂಗ್ ನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಬಾಲಿವುಡ್‌ ನಟ ಆದಿತ್ಯ ಪಾಂಚೋಲಿಯ ಅಪರಾಧವನ್ನು ಎತ್ತಿಹಿಡಿದಿದೆ. ಆದರೆ ಮ್ಯಾಜಿಸ್ಟ್ರೇಟ್ ನೀಡಿದ ಒಂದು ವರ್ಷದ ಜೈಲು ಶಿಕ್ಷೆಯನ್ನು ಮಾರ್ಪಡಿಸಿದೆ ಮತ್ತು ಉತ್ತಮ ನಡವಳಿಕೆಯ ಬಾಂಡ್‌ ಮೇಲೆ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಆದಾಗ್ಯೂ ಸೆಷನ್ಸ್ ನ್ಯಾಯಾಲಯವು 59 ವರ್ಷದ ನಟನಿಗೆ … Continued

ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಬಂಧನ ವಾರಂಟ್

ಲುಧಿಯಾನ : ಆಪಾದಿತ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ ನ್ಯಾಯಾಲಯವು ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಲೂಧಿಯಾನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ರಮಣ್‌ಪ್ರೀತ್ ಕೌರ್ ಅವರು ವಾರಂಟ್ ಹೊರಡಿಸಿದ್ದಾರೆ. ಮೋಹಿತ್ ಶುಕ್ಲಾ ಎಂಬಾತ ತನಗೆ 10 ಲಕ್ಷ ರೂಪಾಯಿ ವಂಚಿಸಿದ್ದಾನೆ ಎಂದು ಆರೋಪಿಸಿ ಲೂಧಿಯಾನ ವಕೀಲ ರಾಜೇಶ ಖನ್ನಾ ಅವರು ದಾಖಲಿಸಿರುವ … Continued

ಸಂಗೀತ ಕಾರ್ಯಕ್ರಮದಲ್ಲೇ ಸೋನು ನಿಗಮ್ ಗೆ ತೊಂದರೆ : ಆಸ್ಪತ್ರೆಗೆ ದಾಖಲು

ಮುಂಬೈ : ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಪುಣೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ವೇಳೆ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ಆರೋಗ್ಯದ ಬಗ್ಗೆ ಫ್ಯಾನ್ಸ್‌ಗೆ ಗಾಯಕ ಸೋಶಿಯಲ್ ಮೀಡಿಯಾದಲ್ಲಿ ವಿವರಿಸಿ ಪೋಸ್ಟ್ ಹಾಕಿದ್ದಾರೆ. ಲೈವ್ ಕಾನ್ಸರ್ಟ್ ವೇಳೆ ಅವರಿಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿದೆ. … Continued

ಸೈಫ್‌ ಅಲಿ ಖಾನ್‌ ಇರಿತ ಪ್ರಕರಣ : ಪೊಲೀಸರ ತಪ್ಪು ಗ್ರಹಿಕೆಯಿಂದ ಬಂಧಿಸಲ್ಪಟ್ಟ ವ್ಯಕ್ತಿಯ ಕೆಲಸ ಹೋಯ್ತು, ಮದುವೆಯೇ ಮುರಿದುಬಿತ್ತು….!

ಮುಂಬೈ : ಜನವರಿ 16ರಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ಚಾಕು ಇರಿತದ ಪ್ರಕರಣದಲ್ಲಿ ಛತ್ತೀಸ್‌ಗಢದ ದುರ್ಗ್‌ನಲ್ಲಿ ಪೊಲೀಸರ ತಪ್ಪು ಗ್ರಹಿಕೆಯಿಂದ ಬಂಧಿಸ್ಪಟ್ಟ ವ್ಯಕ್ತಿಯ ಜೀವನವೇ ಈಗ ಬರ್ಬಾದ್‌ ಆಗಿದೆ. ಪೊಲೀಸರು ತಪ್ಪಾಗಿ ಆತನನ್ನು ಬಂಧಿಸಿದ್ದರಿಂದ ಆತನ ಕೆಲಸವೂ ಹೋಗಿದೆ, ಜೊತೆಗೆ ಆತನ ಮದುವೆ ನಿಶ್ಚಿತಾರ್ಥವೂ ಮುರಿದುಬಿದ್ದಿದೆ ಎಂದು ವರದಿಯಾಗಿದೆ. … Continued

ವೀಡಿಯೊಗಳು..| ಬಾಲಿವುಡ್‌ ಬೋಲ್ಡ್‌ ನಟಿ ಈಗ ಸನ್ಯಾಸಿನಿ…! ಮಹಾಕುಂಭದಲ್ಲಿ ಕಿನ್ನರ ಅಖಾರದ ‘ಮಹಾಮಂಡಲೇಶ್ವರ’ ಆದ ನಟಿ ಮಮತಾ ಕುಲಕರ್ಣಿ

ಬಾಲಿವುಡ್‌ನ ಮಾಜಿ ನಟಿ ಮಮತಾ ಕುಲಕರ್ಣಿ ಈಗ ಅಧ್ಯಾತ್ಮದ ಹಾದಿ ಹಿಡಿದಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್‌ನ ಬೋಲ್ಡ್‌ ನಟಿ ಎಂದು ಗುರುತಿಸಿಕೊಂಡಿದ್ದ ಮಮತಾ ಕುಲಕರ್ಣಿ ಈಗ ಕುಂಭಮೇಳದಲ್ಲಿ ಮಹಾಮಂಡಲೇಶ್ವರ ಆಗುವ ಮೂಲಕ ಅಧ್ಯಾತ್ಮಿಕ ಹಾದಿ ಹಿಡಿದಿದ್ದಾರೆ. ಕಿನ್ನರ ಅಖಾಡದಿಂದ ಅವರಿಗೆ ಈ ಬಿರುದು ನೀಡಲಾಗಿದೆ. ಈಗ ಅವರ ಹೆಸರನ್ನೂ ಬದಲಾಯಿಸಲಾಗಿದೆ. ಅವರನ್ನು ಈಗ ಶ್ರೀ ಯಾಮಿನಿ … Continued

ಚಲನಚಿತ್ರ ನಿರ್ದೇಶಕ ರಾಮಗೋಪಾಲ ವರ್ಮಾಗೆ ಮೂರು ತಿಂಗಳು ಜೈಲು ಶಿಕ್ಷೆ

ಹೈದರಾಬಾದ್‌ ; ಖ್ಯಾತ ಚಲನಚಿತ್ರ ನಿರ್ಮಾಪಕ  ಹಾಗೂ ನಿರ್ದೇಶಕ  ರಾಮಗೋಪಾಲ ವರ್ಮಾ ಅವರಿಗೆ ಮುಂಬೈ ನ್ಯಾಯಾಲಯವು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ನ್ಯಾಯಾಲಯದ ತೀರ್ಪು ಹಲವಾರು ವರ್ಷಗಳಿಂದ ನಡೆಯುತ್ತಿರುವ ಕಾನೂನು ಹೋರಾಟದ ನಂತರ ಬಂದಿದೆ. ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಕೂಡ ಹೊರಡಿಸಲಾಗಿದೆ. ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು … Continued

ನಟ ಸೈಫ್ ಅಲಿ ಖಾನಗೆ ಚಾಕು ಇರಿತದ ಪ್ರಕರಣ; ಪ್ರಮುಖ ಆರೋಪಿಯ ಬಂಧನಕ್ಕೆ ಕಾರಣವಾದ ಪರಾಟಾ-ಯುಪಿಐ ಪೇಯ್ಮೆಂಟ್‌…!

ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಚೂರಿ ಇರಿತದ ಪ್ರಮುಖ ಶಂಕಿತ ಷರೀಫುಲ್ ಇಸ್ಲಾಂ ಶೆಹಜಾದ್ ಎಂಬಾತನನ್ನು ಮುಂಬೈ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆತ ಬೆಳಗಿನ ಉಪಾಹಾರ ಪರಾಟಾ ತಿಂದ ನಂತರ ಗೂಗಲ್ ಪೇ ಮೂಲಕ ಹೊಟೇಲ್‌ ಬಿಲ್‌ ಪಾವತಿಸಿದ ನಂತರ ಪೊಲೀಸರು ಆತ ಎಲ್ಲಿದ್ದಾನೆಂದು ಪತ್ತೆಹಚ್ಚಲು ಕಾರಣವಾಯಿತು. ಡಿಜಿಟಲ್ ಪಾವತಿಯ … Continued

ನಟ ಸೈಫ್ ಅಲಿ ಖಾನ್‌ಗೆ ಇರಿದು ಪರಾರಿಯಾಗಿ ಅಡಗಿದ್ದ ಬಾಂಗ್ಲಾದೇಶಿ ವ್ಯಕ್ತಿಯನ್ನು ಒಂದು ಸುಳಿವನ್ನಾಧರಿಸಿ ಪೊಲೀಸರು ಹಿಡಿದಿದ್ದೇ ರೋಚಕ..!

ಮುಂಬೈ: ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮತ್ತು ಬಿಜೋಯ ದಾಸ್ ಎಂಬ ಸುಳ್ಳು ಹೆಸರಿನಲ್ಲಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ನನ್ನು ನಟ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿ ಕಳ್ಳತನ ಯತ್ನದ ವೇಳೆ ನಟನ ಮೇಲೆ ಮತ್ತು ಅವರ ಸಿಬ್ಬಂದಿಯ ಮೇಲೆ ಚಾಕುವಿನಿಂದ ದಾಳಿ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಆರೋಪಿಯ … Continued

ನಟ ಸೈಫ್ ಅಲಿ ಖಾನ್ ಗೆ ಚಾಕುವಿನಿಂದ ಇರಿದ ಪ್ರಕರಣ : ಬಂಧಿತ ಮುಖ್ಯ ಆರೋಪಿ ಶರೀಫುಲ್ ಇಸ್ಲಾಂ ಬಗ್ಗೆ ಈವರೆಗೆ ತಿಳಿದಿದ್ದೇನೆಂದರೆ….

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮುಂಬೈ ನಿವಾಸದ ಒಳನುಗ್ಗಿ ಅವರನ್ನು ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಬಾಂಗ್ಲಾದೇಶದ ಪ್ರಜೆಯನ್ನು ಬಂಧಿಸಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ ಎಂಬ ವ್ಯಕ್ತಿಗೆ ತಾನು ಸೈಫ್‌ ಅಲಿ ಖಾನ್ ಅವರ … Continued

ನಟ ಸೈಫ್ ಅಲಿ ಖಾನಗೆ ಚಾಕುವಿನಿಂದ ಇರಿದ ಆರೋಪಿಯ ಬಂಧನ ; ದಾಳಿಕೋರ ಬಾಂಗ್ಲಾದೇಶಿ, 5 ತಿಂಗಳ ಹಿಂದೆ ಮುಂಬೈಗೆ ಬಂದಿರುವ ಶಂಕೆ : ಪೊಲೀಸರು

ಮುಂಬೈ: ಮುಂಬೈನ ನಿವಾಸದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರನ್ನು ಚಾಕುವಿನಿಂದ ಇರಿದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆಯಲ್ಲಿ ವ್ಯಕ್ತಿಯೊಬ್ಬನನ್ನು ಇಂದು, ಭಾನುವಾರ ಮುಂಜಾನೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು 30 ವರ್ಷದ ಮೊಹಮ್ಮದ್ ಶರೀಫುಲ್ ಇಸ್ಲಾಂ ಶಹಜಾದ್ ಎಂದು ಗುರುತಿಸಲಾಗಿದ್ದು, ಈತ ಬೇರೆಬೇರೆ ಹೆರನ್ನು ಇಟ್ಟುಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸೈಫ್‌ … Continued