ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

ಕಳೆದ ವರ್ಷ ಬ್ರಿಟಿಷ್ ಕೊಲಂಬಿಯಾದಲ್ಲಿ ಕೊಲೆಯಾದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ಗೆ ಸಂಬಂಧಿಸಿದಂತೆ ಹಿಟ್ ಸ್ಕ್ವಾಡ್‌ನ ಮೂವರು ಭಾರತೀಯ ಸದಸ್ಯರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಕೆನಡಾದ ಪೊಲೀಸರು ತಿಳಿಸಿದ್ದಾರೆ. ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಮೂವರು ಬಂಧಿತರನ್ನು ಕರಣ್‌ಪ್ರೀತ್ ಸಿಂಗ್ (28), ಕಮಲಪ್ರೀತ್ ಸಿಂಗ್ (22) ಮತ್ತು ಕರಣ್ ಬ್ರಾರ್ (22) ಎಂದು ಹೆಸರಿಸಿದ್ದಾರೆ. … Continued

ಬಾಹ್ಯಾಕಾಶದಿಂದ ಸಂಪೂರ್ಣ ಸೂರ್ಯ ಗ್ರಹಣ ಹೇಗೆ ಕಾಣುತ್ತದೆ..? : ವೀಡಿಯೊ ಹಂಚಿಕೊಂಡ ನಾಸಾ | ವೀಕ್ಷಿಸಿ

ನ್ಯೂಯಾರ್ಕ್: ಮೆಕ್ಸಿಕೊ, ಕೆನಡಾ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಲಕ್ಷಾಂತರ ಜನರು ಸೋಮವಾರ ಅಪರೂಪದ ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಿದರು. ಉತ್ತರ ಅಮೆರಿಕದ ಸಾವಿರಾರು ಜನರು, ಮೆಕ್ಸಿಕೊದ ಫೆಸಿಫಿಕ್ ಕಡಲತೀರದಿಂದ ಅಮೆರಿಕ-ಕೆನಡಾದ ನಯನ ಮನೋಹರ ನಯಾಗರ ಜಲಪಾತದವರೆಗೆ ಸೋಮವಾರ ಪೂರ್ಣ ಸೂರ್ಯಗ್ರಹಣ ವೀಕ್ಷಣೆಗೆ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ನಾಸಾ ಸೂರ್ಯಗ್ರಹಣ ವೀಕ್ಷಣೆಗಾಗಿ ವಿಶೇಷ ವ್ಯವಸ್ಥೆಯನ್ನು ಏರ್ಪಡಿಸಿತ್ತು. … Continued

ತನ್ನ ಚುನಾವಣೆಯಲ್ಲಿ ಭಾರತ ಸಂಭಾವ್ಯ ‘ವಿದೇಶಿ ಬೆದರಿಕೆ’ ಎಂದು ಹೊಸ ಆರೋಪ ಮಾಡಿದ ಕೆನಡಾ

ನವದೆಹಲಿ: ತಮ್ಮ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕನನ್ನು ಕೊಲ್ಲುವಲ್ಲಿ ಭಾರತದ ಪಾತ್ರವಿದೆ ಆರೋಪಿಸಿದ ತಿಂಗಳುಗಳ ನಂತರ, ಕೆನಡಾವು ಭಾರತವನ್ನು ತಮ್ಮ ದೇಶದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬಹುದಾದ ಸಂಭಾವ್ಯ ‘ವಿದೇಶಿ ಬೆದರಿಕೆ’ ಎಂದು ಹೆಸರಿಸಿದೆ. ಈ ಹೊಸ ಆರೋಪಕ್ಕೆ ಭಾರತ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಆರೋಪವನ್ನು ಕೆನಡಾದ ಭದ್ರತಾ ಗುಪ್ತಚರ ಸೇವೆಯು ಡಿಕ್ಲಾಸಿಫೈಡ್ ಗುಪ್ತಚರ ವರದಿಯಲ್ಲಿ ಮಾಡಿದೆ. … Continued

ರಾಜತಾಂತ್ರಿಕ ಗದ್ದಲದ ನಂತರ ಕೆನಡಾಕ್ಕೆ ತೆರಳುವ ಭಾರತದ ವಿದ್ಯಾರ್ಥಿಗಳ ಸಂಖ್ಯೆ ತೀವ್ರ ಇಳಿಕೆ : 86%ರಷ್ಟು ಕುಸಿತ ಎಂದ ಸಚಿವರು

ಎರಡು ದೇಶಗಳ ನಡುವಿನ ರಾಜತಾಂತ್ರಿಕ ಗದ್ದಲದ ನಂತರ 2023 ರಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಕೆನಡಾ ನೀಡಿದ ಅಧ್ಯಯನ ಪರವಾನಗಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡಿದೆ ಎಂದು ಕೆನಡಾದ ಉನ್ನತ ಅಧಿಕಾರಿಗಳು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ. ಭಾರತೀಯರಿಗೆ ಅಧ್ಯಯನ ಪರವಾನಗಿಗಳ ಸಂಖ್ಯೆಯು ಸನಿಹದಲ್ಲಿ ಮರುಕಳಿಸುವ ಸಾಧ್ಯತೆಯಿಲ್ಲ ಎಂದು ತಾವು ನಂಬಿದ್ದಾಗಿ ಎಂದು ಉನ್ನತ ಅಧಿಕಾರಿ ಸಂದರ್ಶನದಲ್ಲಿ … Continued

ವೀಡಿಯೊ… | ಕೆನಡಾದಲ್ಲಿ ಖಲಿಸ್ತಾನಿಗಳ ಅಟ್ಟಹಾಸ : ದೀಪಾವಳಿ ಆಚರಿಸುತ್ತಿದ್ದ ಹಿಂದೂಗಳ ಮೇಲೆ ಕಲ್ಲು ತೂರಾಟ

ಕೆನಡಾದಲ್ಲಿ ಖಲಿಸ್ತಾನಿ (Khalistan) ಸಂಘಟನೆಗಳು ದೀಪಾವಳಿ ಆಚರಣೆ ವೇಳೆ ಅಟ್ಟಹಾಸ ಮೆರೆದಿದ್ದಾರೆ. ಕೆನಡಾದ ಕ್ವಿಬೆಕ್ ಪ್ರಾಂತ್ಯದ ಬ್ರಾಂಪ್ಟನ್ ಬರೋದಲ್ಲಿ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಖಲಿಸ್ತಾನ್ ಪರ ಗುಂಪುಗಳು ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆಸಿವೆ. ಖಲಿಸ್ತಾನ್ ಧ್ವಜಗಳನ್ನು ಹೊತ್ತಿದ್ದ ಗುಂಪುಗಳು ದೀಪಾವಳಿಯನ್ನು ಆಚರಿಸುವ ಜನರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಭಾರತೀಯ ಸಮುದಾಯದ ಜನರೊಂದಿಗೆ ಅಗೌರವದಿಂದ … Continued

ಜಸ್ಟಿನ್ ಟ್ರುಡೊ ಅಸಮರ್ಥ… ನಾನು ಪ್ರಧಾನಿಯಾದ್ರೆ ಭಾರತದೊಂದಿಗೆ ಕೆನಡಾದ ಸಂಬಂಧ ಮರುಸ್ಥಾಪನೆ : ಕೆನಡಾ ವಿಪಕ್ಷದ ನಾಯಕ

ಕೆನಡಾದ ಕನ್ಸರ್ವೇಟಿವ್ ಪಕ್ಷದ ನಾಯಕ ಪಿಯರೆ ಪೊಯಿಲಿವ್ರೆ ಭಾರತದೊಂದಿಗಿನ ರಾಜತಾಂತ್ರಿಕ ವಿವಾದದ ಬಗ್ಗೆ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಟೀಕಿಸಿದ್ದಾರೆ. ಟ್ರುಡೊ ಅವರು “ಎಂಟು ವರ್ಷಗಳ ನಂತರ ಯಾವುದಕ್ಕೂ ಯೋಗ್ಯರಲ್ಲ” ಎಂಬಂತಾಗಿದೆ ಮತ್ತು ಅವರನ್ನು “ಭಾರತದಲ್ಲಿ ನಗುವ ಸ್ಟಾಕ್” ಎಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯಾಗಿ ಕೆನಡಿಯನ್ನರ ಆದ್ಯತೆಯ ಅಭ್ಯರ್ಥಿಯಾಗಿರುವ ಕೆನಡಾದ … Continued

“ಭಾರತವು ನಂಬಲಾಗದಷ್ಟು ಕಷ್ಟಕರವನ್ನಾಗಿ ಮಾಡಿದೆ…”: ರಾಜತಾಂತ್ರಿಕ ಗದ್ದಲದ ನಡುವೆ ಕೆನಡಾ ಪ್ರಧಾನಿ ಟ್ರುಡೊ

ಒಟ್ಟಾವಾ: ಕೆನಡಾದ ರಾಜತಾಂತ್ರಿಕರ ಮೇಲೆ ಭಾರತ ಸರ್ಕಾರದ ದಬ್ಬಾಳಿಕೆಯು ಎರಡೂ ದೇಶಗಳಲ್ಲಿನ ಲಕ್ಷಾಂತರ ಜನರಿಗೆ ಸಾಮಾನ್ಯ ಜೀವನವನ್ನು ಕಷ್ಟಕರವಾಗಿಸಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಶುಕ್ರವಾರ ಹೇಳಿದ್ದಾರೆ. ಏಕಪಕ್ಷೀಯವಾಗಿ ತಮ್ಮ ರಾಜತಾಂತ್ರಿಕ ಸಿಬ್ಬಂದಿ ಹಿಂತೆಗೆದುಕೊಳ್ಳುವಂತೆ ಭಾರತದ ಸೂಚನೆಯ ನಂತರ 41 ರಾಜತಾಂತ್ರಿಕರನ್ನು ಹಿಂಪಡೆದಿರುವುದಾಗಿ ಕೆನಡಾ ಹೇಳಿದ ಒಂದು ದಿನದ ನಂತರ ಟ್ರೂಡೊ ಮಾತನಾಡಿದ್ದಾರೆ. ಕೆನಡಾದಲ್ಲಿ ಜೂನ್‌ನಲ್ಲಿ … Continued

ಹರ್ದೀಪ್ ನಿಜ್ಜರ್ ಹತ್ಯೆ ಹಿಂದೆ ಚೀನಾ ? ಇದು ಚೀನಾದ ದೊಡ್ಡ ಪಿತೂರಿ ಎಂದು ಆರೋಪಿಸಿದ ಬ್ಲಾಗರ್

ಸ್ವತಂತ್ರ ಬ್ಲಾಗರ್ ಆಗಿರುವ ಜೆನ್ನಿಫರ್ ಜೆಂಗ್ ಅವರು ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷ (ಸಿಸಿಪಿ) ಪಾತ್ರವಿದೆ ಎಂದು ಸೂಚಿಸುವ ಆರೋಪವನ್ನು ಮುಂದಿಟ್ಟಿದ್ದಾರೆ. “ಭಾರತ ಮತ್ತು ಪಶ್ಚಿಮದ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸಿ ಭಾರತವನ್ನು ದೂಷಿಸುವಂತೆ ಮಾಡುವುದು ಚೀನಾದ ಉದ್ದೇಶವಾಗಿದೆ” ಎಂದು ಝೆಂಗ್ ಆರೋಪಿಸಿದ್ದಾರೆ. ತೈವಾನ್‌ಗೆ ಸಂಬಂಧಿಸಿದಂತೆ ಕ್ಸಿ ಜಿನ್‌ಪಿಂಗ್ … Continued

ಭಾರತ ‘ಗಡುವು’ ನೀಡಿದ ನಂತರ ಭಾರತದಿಂದ ಅನೇಕ ರಾಜತಾಂತ್ರಿಕರನ್ನು ಸ್ಥಳಾಂತರಿಸಿದ ಕೆನಡಾ : ವರದಿ

ಟೊರೊಂಟೊ : ಕೆನಡಾ ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿಮೆ ಮಾಡುವಂತೆ ಸೂಚಿಸಿ ಅಕ್ಟೋಬರ್ 10ರ ಗಡುವು ನೀಡಿದ ನಂತರ ಕೆನಡಾವು ದೆಹಲಿಯ ಹೊರಗೆ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ರಾಜತಾಂತ್ರಿಕರಲ್ಲಿ ಹೆಚ್ಚಿನವರನ್ನು ಕೌಲಾಲಂಪುರ ಅಥವಾ ಸಿಂಗಾಪುರಕ್ಕೆ ಸ್ಥಳಾಂತರಿಸಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ … Continued

‘ಭಾರತದ ಜೊತೆ ಕೆನಡಾ ಖಾಸಗಿಯಾಗಿ ಮಾತನಾಡಲು ಬಯಸುತ್ತದೆ…’: ತನ್ನ ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳುವಂತೆ ಭಾರತ ಸೂಚಿಸಿದೆ ಎಂಬ ವರದಿ ನಂತರ ಕೆನಡಾ ಹೇಳಿಕೆ

ಒಟ್ಟಾವಾ : ಭಾರತದಿಂದ ತನ್ನ 41 ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳುವಂತೆ ಭಾರತವು ಕೆನಡಾಕ್ಕೆ ಸೂಚಿಸಿದೆ ಎಂಬ ವರದಿಯ ನಂತರ, ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು, ರಾಜತಾಂತ್ರಿಕ ಬಿಕ್ಕಟ್ಟನ್ನು ಪರಿಹರಿಸಲು ಕೆನಡಾವು ಭಾರತದೊಂದಿಗೆ ಖಾಸಗಿ ಮಾತುಕತೆಗಳನ್ನು ಬಯಸುತ್ತದೆ ಎಂದು ಹೇಳಿದ್ದಾರೆ. ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು, ಕೆನಡಾ … Continued