ಪರಮ್ ಬೀರ್ ಸಿಂಗ್ ಭ್ರಷ್ಟಾಚಾರ ಆರೋಪ: ಮಹಾರಾಷ್ಟ್ರ ಗೃಹ ಸಚಿವ ದೇಶ್ಮುಖ್ ವಿರುದ್ಧ ಪ್ರಾಥಮಿಕ ತನಿಖೆ ಆರಂಭಿಸುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್ ಸೂಚನೆ

ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರ ಭ್ರಷ್ಟಾಚಾರದ ಆರೋಪದ ಬಗ್ಗೆ ಪ್ರಾಥಮಿಕ ತನಿಖೆ ಆರಂಭಿಸುವಂತೆ ಮುಂಬೈ ಹೈಕೋರ್ಟ್ ಸೋಮವಾರ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡಿದೆ. ಇದರಿಂದ ಅನಿಲ ದೇಶ್ಮುಖ್‌ಗೆ ರಾಜಕೀಯವಾಗಿ ಹಿನ್ನಡೆಯಾಗಿದೆ. ದೇಶ್ಮುಖ್ ವಿರುದ್ಧ “ತಕ್ಷಣದ ಮತ್ತು ಪಕ್ಷಪಾತವಿಲ್ಲದ” … Continued

ಆಮಿಷ ಒಡ್ಡಿ ಭದ್ರತಾ ಪಡೆಗಳಿಗೆ ಯು-ಆಕಾರದ’ ಹೊಂಚು ದಾಳಿಗೆ ಗುರಿಯಾಗುವಂತೆ ಮಾಡಿದ ನಕ್ಸಲರು

ಉನ್ನತ ಮಾವೋವಾದಿ ಕಮಾಂಡರ್ ಇರುವ ಮಾಹಿತಿ ನೀಡಿ ಭದ್ರತಾ ಸಿಬ್ಬಂದಿ ಬಲೆಗೆ ಬೀಳಿಸಿದ ನಂತರ ಮಾವೋವಾದಿಗಳು ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ “ಯು-ಟೈಪ್” ಹೊಂಚು ದಾಳಿ ನಡೆಸಿದರು ಎಂದು ಪರಿಚಿತ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ ಎಂದು  ವರದಿಯೊಂದು ಹೇಳಿದೆ. ವರದಿ ಪ್ರಕಾರ, ಮಾವೋವಾದಿ ಕಾರ್ಯಾಚರಣೆ ನೇತೃತ್ವವನ್ನು ಬೆಟಾಲಿಯನ್ ನಂಬರ್ -1 ಕಮಾಂಡರ್ ಮಾಡ್ವಿ ಹಿಡ್ಮಾ ವಹಿಸಿದ್ದರು. ನಕ್ಸಲ್‌ … Continued

ಭಾರತದಲ್ಲಿ ಒಂದು ಲಕ್ಷ ದಾಟಿದ ದೈನಂದಿನ ಪ್ರಕರಣ. ಇದು ಈವರೆಗಿನ ದಾಖಲೆ…!!

ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 1,03,558 ಜನರುಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ದೈನಂದಿನ ಸೋಂಕು ಒಂದು ಲಕ್ಷ ದಾಟಿರುವುದು ಇದೇ ಮೊದಲು. ಕಳೆದ 24 ಗಂಟೆಗಳಲ್ಲಿ 478 ಹೊಸ ಸಾವುನೋವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 165,101 ಕ್ಕೆ ಏರಿದೆ. ಕಳೆದ ವರ್ಷ ಕಳೆದ ವರ್ಷ ಸೆಪ್ಟೆಂಬರ್ 16 ರಂದು ದೈನಂದಿನ ಸೋಂಕುಗಳಲ್ಲಿ 97,894 ರಷ್ಟಿತ್ತು. … Continued

ಏರ್‌ಇಂಡಿಯಾ ಖರೀದಿ: ಟಾಟಾ- ಕೇಂದ್ರ ಸರ್ಕಾರದ ನಡುವೆ ಬಹುತೇಕ ಬಗೆಹರಿದ ಭಿನ್ನಾಭಿಪ್ರಾಯ

ಮುಂಬೈ / ನವದೆಹಲಿ: ಏರ್‌ ಇಂಡಿಯಾ ಖರೀದಿಯಲ್ಲಿ ಮಂಚೂಣಿಯಲ್ಲಿರುವ ಟಾಟಾ ಸನ್ಸ್ ಲಿಮಿಟೆಡ್ ಮತ್ತು ಸರ್ಕಾರದ ನಡುವೆ ಖರೀದಿಗೆ ಸಂಬಂಧಿಸಿದ ಮಾತುಕತೆಗಳು ಈವರೆಗಿದ್ದ ಬಹುತೇಕ ಭಿನ್ನಾಭಿಪ್ರಾಯವನ್ನು ದೂರ ಮಾಡಿದೆ. ಪ್ರಮುಖವಾಗಿ ಏರ್‌ಇಂಡಿಯಾ ಖರೀದಿಗೆ ಸಂಬಂಧಿಸಿದಂತೆ ಪಿಂಚಣಿ ಹೊಣೆಗಾರಿಕೆಗಳು, ರಿಯಲ್‌ ಎಸ್ಟೇಟ್‌ ಆಸ್ತಿಗಳು, ಮತ್ತು ಸಾಲ ಈ ಮೂರು ಪ್ರಮುಖ ವಿಷಯಗಳ ಬಗ್ಗೆ ಟಾಟಾ ಸನ್ಸ್‌ ಮತ್ತು … Continued

ಮಹಾರಾಷ್ಟ್ರದಲ್ಲಿ ಕೊರೊನಾ ಸುನಾಮಿ..ಭಾನುವಾರ 57 ಸಾವಿರ ದಾಟಿದ ದೈನಂದಿನ ಪ್ರಕರಣ..!!!

ಮುಂಬೈ: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ಮಹಾರಾಷ್ಟ್ರ ತತ್ತರಿಸಿ ಹೋಗಿದೆ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲೇ 57074 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದಾಖಲಾಗಿದೆ. ಒಂದು ದಿನದಲ್ಲಿ 222 ಮಂದಿ ಮೃತಪಟ್ಟಿದ್ದು, 27,508 ಸೋಂಕಿತರು ಗುಣಮುಖರಾಗಿದ್ದಾರೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಈವರೆಗೆ ಒಟ್ಟು 30,10,597 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. … Continued

ಬಂಧಿತ ಎಬಿವಿಪಿ ನಾಯಕನ ತಪ್ಪೊಪ್ಪಿಗೆ: ಪ್ರಚಾರಕ್ಕಾಗಿ ರಾಕೇಶ್ ಟಿಕಾಯತ್‌ ಬೆಂಗಾವಲು ಮೇಲೆ ದಾಳಿ

ಜೈಪುರ: ಅಲ್ವಾರ್‌ನಲ್ಲಿ ಸಂಯುಕ್ತ ರೂತ ಮೋರ್ಚಾ ಮುಖಂಡ ರಾಕೇಶ್ ಟಿಕಾಯತ್‌ ಅವರ ಮೇಲೆ ಶುಕ್ರವಾರ ನಡೆದ ದಾಳಿ ಪ್ರಚಾರ ಪಡೆಯುವ ಸಲುವಾಗಿ ಅಖಿಲ್ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿ ಮುಖಂಡರು ಆಯೋಜಿಸಿದ್ದಾರೆ. ಟಿಕಾಯತ್‌ ಅವರ ಬೆಂಗಾವಲು ಮೇಲಿನ ದಾಳಿಗೆ ಸಂಬಂಧಿಸಿದಂತೆ ಪ್ರಸ್ತುತ ಬಂಧನದಲ್ಲಿರುವ ಎಬಿವಿಪಿಗೆ ಸಂಬಂಧಿಸಿದ ವಿದ್ಯಾರ್ಥಿ ಮುಖಂಡ ಕುಲದೀಪ್ ಯಾದವ್, ಅಲ್ವಾರ್ ಪೊಲೀಸರು ವಿಚಾರಣೆ … Continued

ಭಾನುವಾರ ಕರ್ನಾಟಕದಲ್ಲಿ 4500ಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು,15 ಜನರು ಸಾವು

ಬೆಂಗಳೂರು: ರಾಜ್ಯದಲ್ಲಿ ಭಾನುವಾರು ತಗುಲಿರುವುದು ದೃಢಪಟ್ಟಿದೆ. ಅಲ್ಲದೆ 15 ಜನ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 10,15,155 ಕ್ಕೆ ಏರಿಕೆಯಾಗಿದೆ.ಇದುವರೆಗೆ 12,625 ಜನ ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಭಾನುವಾರ 2060 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 9,63,419 ಜನ ಬಿಡುಗಡೆಯಾದಂತಾಗಿದೆ 39,092 ಸಕ್ರಿಯ ಪ್ರಕರಣಗಳಿವೆ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ 2787 ಜನರಿಗೆ ಹೊಸದಾಗಿ ಸೋಂಕು … Continued

ಸಿಡಿ ಪ್ರಕರಣ : ಕಾಂಗ್ರೆಸ್‍ನ ಮಾಜಿ ಶಾಸಕರಿಬ್ಬರಿಗೆ ಎಸ್‍ಐಟಿ ನೊಟೀಸ್..?

ಬೆಂಗಳೂರು: ದಿನಕ್ಕೊಂದು ಬೆಳವಣಿಗೆ ಕಾಣುತ್ತಿರುವ ಸಿ.ಡಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‍ನ ಇಬ್ಬರು ಮಾಜಿ ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಎಸ್‍ಐಟಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್‍ನ ಇಬ್ಬರು ಮಾಜಿ ಶಾಸಕರ ಹೆಸರು ಕೇಳಿಬಂದಿದೆ. ಹೀಗಾಗಿ ಸಿಡಿ ಪ್ರಕರಣ ಮತ್ತೊಂದು ರೀತಿಯ ತಿರುವು ಪಡೆಯುವಂತಾಗಿದೆ. ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಯ ಇಬ್ಬರು … Continued

ಕೊರೊನಾ ಎರಡನೇ ಅಲೆ: ದೈನಂದಿನ ಪ್ರಕರಣಗಳ ಬೆಳವಣಿಗೆ ದರದಲ್ಲಿ ಮಹಾರಾಷ್ಟ್ರ ನಂ.1, ಪಂಜಾಬ್‌ ನಂ.2

ನವ ದೆಹಲಿ: ಕಳೆದ ಹದಿನೈದು ದಿನಗಳಲ್ಲಿ ದೇಶಾದ್ಯಂತ ಒಟ್ಟು ಹೊಸ ಪ್ರಕರಣಗಳು ಮತ್ತು ಸಾವುನೋವುಗಳನ್ನು ಗಮನದಲ್ಲಿಟ್ಟುಕೊಂಡರೆ ಮಹಾರಾಷ್ಟ್ರ ಮತ್ತು ಪಂಜಾಬ್ ಹೆಚ್ಚು ಹಾನಿಗೊಳಗಾದ ರಾಜ್ಯಗಳಾಗಿವೆ. ಹೊಸ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೆ ವರದಿಯಾದ ಗರಿಷ್ಠಮಟ್ಟ ದಾಟಿದ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ ನಡುವೆ ಈ ಎರಡು ರಾಜ್ಯಗಳು ಅಗ್ರಸ್ಥಾನದಲ್ಲಿವೆ ಮತ್ತು ಚಂಡೀಗಡ, ಛತ್ತೀಸ್‌ಗಡ ಮತ್ತು ಗುಜರಾತ್ ಮೊದಲ … Continued

ನಕ್ಸಲರ ಭೀಕರ ದಾಳಿ: ನಾಪತ್ತೆಯಾಗಿದ್ದ 22 ಯೋಧರೂ ಹುತಾತ್ಮ

ರಾಯ್ಪುರ: ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶದ ಬಿಜಾಪುರ್ ಅರಣ್ಯ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆ ಮತ್ತು ನಕ್ಸಲರ ಮಧ್ಯೆ ನಡೆದ ಗುಂಡಿನ ಕಾಳಗ ನಂತರ ನಾಪತ್ತೆಯಾಗಿದ್ದ 22 ಮಂದಿ ಯೋಧರು ಹುತಾತ್ಮರಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟರ್ರೆಮ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇರುವ ಕುರಿತು ಮಾಹಿತಿ ಕಲೆಹಾಕಿದ್ದ ನಕ್ಸಲ್ ನಿಗ್ರಹ ಪಡೆ ಸಿಆರ್ ಪಿಎಫ್ ನೊಂದಿಗೆ … Continued