ಹೆಲ್ಮೆಟ್ ಧರಿಸದ ಕಾರಣಕ್ಕೆ 9 ತಿಂಗಳ ಗರ್ಭಿಣಿ 3 ಕಿಮೀ ನಡೆಯುವಂತೆ ಮಾಡಿದ ಪೊಲೀಸರು…!

ಬರಿಪಾಡಾ: ಒಡಿಶಾದಲ್ಲಿ ಪೊಲೀಸ್ ಸಂವೇದನಾಶೀಲತೆಯ ಆಘಾತಕಾರಿ ಘಟನೆಯಲ್ಲಿ, ಒಂಭತ್ತು ತಿಂಗಳ ಗರ್ಭಿಣಿಯನ್ನು 3 ಕಿ.ಮೀ ನಡೆಯುವಂತೆ ಮಾಡಿದ ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕ ಟೀಕೆ ವ್ಯಕ್ತವಾಗಿದೆ. ಹೆಲ್ಮೆಟ್ ಇಲ್ಲದೆ ಪಿಲಿಯನ್ ಸವಾರಿ ಮಾಡುತ್ತಿದ್ದಾಳೆ ಎಂದು ದಂಡ ಪಾವತಿಸಲು ಪತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಕಾರಣ ಗರ್ಭಿಣಿಯೂ ಮೂರು ಕಿಮೀ ನಡೆಯಬೇಕಾಯಿತು. ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ಭಾನುವಾರ … Continued

ದೆಹಲಿಯಲ್ಲಿ ತೀವ್ರ ಶಾಖದ ಅಲೆ, 76 ವರ್ಷದಲ್ಲೇ ಮಾರ್ಚಿನಲ್ಲಿ ಅತಿ ಹೆಚ್ಚು ಉಷ್ಣತೆ ಎಂದ ಐಎಂಡಿ..!

ನವ ದೆಹಲಿ: ಹೋಳಿ ದಿನದಂದು ದೆಹಲಿಯು ಹೋಳಿಯ ದಿನವೇ ಗರಿಷ್ಠ ತಾಪಮಾನ ಕಂಡಿತು. ಈ ದಿನ 40.1 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಏರಿತ್ತು. ಇದು 76 ವರ್ಷಗಳಲ್ಲಿ ಮಾರ್ಚಿನಲ್ಲಿ ಕಂಡ ಅತಿ ಹೆಚ್ಚು ತಾಪಮಾನದ ದಿನವಾಗಿದೆ ಎಂದು ಭಾರತ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ. ನಗರಕ್ಕೆ ಪ್ರತಿನಿಧಿ ದತ್ತಾಂಶವನ್ನು ಒದಗಿಸುವ ಸಫ್ದರ್ಜಂಗ್ ವೀಕ್ಷಣಾಲಯವು ಗರಿಷ್ಠ … Continued

ಕರ್ನಾಟಕದಲ್ಲಿ ಸೋಮವಾರವೂ ದೈನಂದಿನ ಪ್ರಕರಣಗಳ ಹೆಚ್ಚಳ..ಬೆಂಗಳೂರಲ್ಲೇ ಶೇ.60ಕ್ಕಿಂತ ಹೆಚ್ಚು ಪ್ರಕರಣ..!

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ದೈನಂದಿನ ಪ್ರಕರಣದಲ್ಲಿ ಸೋಮವಾರವೂ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 2,792 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಒಟ್ಟು ೧೬ ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,89,804ಕ್ಕೆ ಏರಿಕೆಯಾಗಿದೆ.ಒಂದೇ ದಿನದಲ್ಲಿ 1,964 ಸೋಂಕಿತರು ಬಿಡುಗಡೆಯಾಗಿದ್ದು, 9,53,416 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ … Continued

೧ರಿಂದ ೯ನೇ ತರಗತಿ ಮಕ್ಕಳಿಗೆ ಪರೀಕ್ಷೆ ರದ್ದು ನಿರ್ಧಾರ ಕೈಗೊಂಡಿಲ್ಲ:ಸಿಎಂ ಬಿಎಸ್‌ವೈ

ಬೆಂಗಳೂರು: ೧ರಿಂದ ೯ನೇ ತರಗತಿ ಮಕ್ಕಳಿಗೆ ಪರೀಕ್ಷೆ  ರದ್ದು ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆತಂಕ ಮೂಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಶಾಲೆ ಬಂದ್ ಮಾಡುವ … Continued

ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಸಿಡಿ ಪ್ರಕರಣದ ಯುವತಿಗೆ ಕೋರ್ಟ್‌ ಅನುಮತಿ, ಯಾವಾಗ ಹಾಜರಾಗ್ತಾಳೆ..?

ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ಸಿಡಿಯಲ್ಲಿನ ಯುವತಿ ಕೋರ್ಟ್ ಮುಂದೆ ಹಾಜರಾಗಿ, ನ್ಯಾಯಾಧೀಶರ ಎದುರು ತನ್ನ ಹೇಳಿಕೆ ದಾಖಲಿಸಲು ಸೋಮವಾರ ಕೋರ್ಟ್ ಅನುಮತಿ ನೀಡಿದೆ. ಇದರಿಂದಾಗಿ ಸಿಡಿ ಪ್ರಕರಣಕ್ಕೆ ಈಗ ಬಹುದೊಡ್ಡ ತಿರುವು ಸಿಕ್ಕಂತಾಗಿದೆ. ಸೋಮವಾರ ಸಿಡಿ ಸಂತ್ರಸ್ತ ಯುವತಿ ವಕೀಲ ಜಗದೀಶ್ ಅವರು ಕೋರ್ಟ್‌ ಮುಂದೆ ಸಂತ್ರಸ್ತ ಯುವತಿ ಹಾಜರಾಗಿ … Continued

ಲಾಕ್‌‌ಡೌನ್‌ ಇಲ್ಲ.. ಆದರೆ ಕೊರೊನಾ ನಿಯಂತ್ರಣಕ್ಕೆ 15 ದಿನ ಪ್ರತಿಭಟನೆ, ಸಮಾವೇಶ ಇತ್ಯಾದಿ ಬಂದ್‌

ಬೆಂಗಳೂರು : ನಾಳೆಯಿಂದ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ. ನಾಳೆಯಿಂದ ಮುಂದಿನ 15 ದಿನಗಳ ವರೆಗೆ ರಾಜ್ಯದಲ್ಲಿ ಯಾವುದೇ ಪ್ರತಿಭಟನೆ,ಸಮಾವೇಶ ಇತ್ಯಾದಿಗಳಿಗೆ ಅವಕಾಶವಿಲ್ಲ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಮಾಡುವುದಿಲ್ಲ. ಅದರೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಕೊರೋನಾ ನಿಯಂತ್ರಣ ಕುರಿತಂತೆ ಸೋಮವಾರ ಸಭೆ ನಡೆಸಿದ ಬಳಿಕ … Continued

ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟವರಿಗೂ ಲಸಿಕೆ: ಕೊ-ವಿನ್‌ ಪೋರ್ಟಲ್‌ ಸಾಮರ್ಥ್ಯ ಹೆಚ್ಚಳ

ನವ ದೆಹಲಿ: ಭಾರತದಲ್ಲಿ ಕೊವಿಡ್-19 ಲಸಿಕೆ ವಿತರಣೆ ನೋಂದಣಿಗೆಂದು ರೂಪಿಸಿರುವ ವೆಬ್​ಪೋರ್ಟಲ್ CoWIN ಸಾಮರ್ಥ್ಯ ಹೆಚ್ಚಿಸಲಾಗಿದೆ. ಪ್ರತಿದಿನ ಒಂದು ಕೋಟಿ ನೋಂದಣಿ ದಾಖಲಿಸುವ ಸಾಮರ್ಥ್ಯ ಈಗ ಕೋವಿನ್ ವೆಬ್​ಪೋರ್ಟಲ್​ಗೆ ಬಂದಿದೆ. ಏಪ್ರಿಲ್ 1ರ ನಂತರ 45 ವರ್ಷ ದಾಟಿದ ಎಲ್ಲರಿಗೂ ಲಸಿಕೆ ವಿತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ನೋಂದಣಿಗೆ ಮುಂದಾಗುವವರ ಸಂಖ್ಯೆ ಹೆಚ್ಚಾಗಬಹುದು … Continued

ಸಿಡಿ ಪ್ರಕರಣ: ನನ್ನ ಮಗಳು ಬೇರೆಯವರ ಒತ್ತಡದಲ್ಲಿದ್ದಾಳೆ, ಅವಳು ನೀಡುವ ಹೇಳಿಕೆ ಪರಿಗಣಿಸಬೇಡಿ ಎಂದ ಯುವತಿ ತಂದೆ

ಬೆಳಗಾವಿ: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಪೋಷಕರು ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದು, ನನ್ನ ಮಗಳು ಬೇರೆಯವರ ಒತ್ತಡಕ್ಕೆ ಸಿಲುಕಿದ್ದಾಳೆ. ಹೀಗಾಗಿ ಅವಳ ಹೇಳಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ. ನನ್ನ ಮಗಳನ್ನು ರಾಜಕೀಯ ದಾಳವಾಗಿ ಬಳಸಿಕೊಂಡಿದ್ದಾರೆ. ಮೊದಲು ನಮ್ಮ ಮಗಳು ಅಲ್ಲಿಂದ ಹೊರಬರಬೇಕು. ಆಕೆಯ ಮೇಲೆ ಡಿ.ಕೆ.ಶಿವಕುಮಾರ್ ಕಡೆಯವರು ಒತ್ತಡ ಹೇರಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಮೊದಲು … Continued

ಕೋವಿಡ್ ಉಲ್ಬಣದ ನಡುವೆ ಪುಣೆ-ಚೆನ್ನೈ ಸಂಶೋಧಕರಿಂದ ಮರು-ಸೋಂಕುಗಳಿಗೆ ಎರಡು-ನಗರ ಸ್ಕ್ಯಾನ್

ಮರು-ಸೋಂಕುಗಳು ಭಾರತದ ಸಾಂಕ್ರಾಮಿಕ ರೋಗದ ತೀವ್ರವಾಗಿ ಏರುತ್ತಿರುವ ಎರಡನೇ ತರಂಗಕ್ಕೆ ಕಾರಣವಾಗಿದೆಯೇ ಎಂದು ನಿರ್ಧರಿಸಲು ಚೆನ್ನೈ ಮತ್ತು ಪುಣೆಯ ಆರೋಗ್ಯ ಸಂಶೋಧಕರು ಹೊಸದಾಗಿ ಸೋಂಕಿತ ಕೋವಿಡ್ -19 ರೋಗಿಗಳಿಂದ ರಕ್ತದ ಮಾದರಿಗಳನ್ನು ವ್ಯವಸ್ಥಿತವಾಗಿ ಪರೀಕ್ಷಿಸಲು ಯೋಜಿಸಿದ್ದಾರೆ, ದೃಢಪಡಿಸಿದ ಕೋವಿಡ್-ಪಾಸಿಟಿವ್ ರೋಗಿಗಳ ರಕ್ತದ ಮಾದರಿಗಳಲ್ಲಿ ಚೆನ್ನೈನ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆ ಮತ್ತು ಪುಣೆಯ ಬೈರಂಜಿ ಜೀಜೀಭಾಯ್ … Continued

ಕೊರೊನಾ ವೈರಸ್ ಹರಡಿದ್ದು ಯಾವುದರಿಂದ..? ಸೋರಿಕೆಯಾದ ಡಬ್ಲ್ಯುಎಚ್‌ಒ-ಚೀನಾ ಜಂಟಿ ವರದಿಯಲ್ಲಿ ಮಹತ್ವದ ಮಾಹಿತಿ ಬಹಿರಂಗ..!

ಕೋವಿಡ್ -19 ರ ಮೂಲದ ಕುರಿತಾದ ಜಂಟಿ ಡಬ್ಲ್ಯುಎಚ್‌ಒ-ಚೀನಾ ಜಂಟಿ ಅಧ್ಯಯನವು ಬಾವಲಿಗಳಿಂದ ಮತ್ತೊಂದು ಪ್ರಾಣಿಗಳ ಮೂಲಕ ಮನುಷ್ಯರಿಗೆ ವೈರಸ್‌ ಹರಡಿರುವುದು ಬಹುಪಾಲು ಖಚಿತವಾಗಿದೆ. ಪ್ರಯೋಗಾಲಯದಿಂದ ಕೊರೊನಾ ವೈರಸ್ ಹರಡಿರುವ ಸಾಧ್ಯತೆ ಬಹಳ ಕಡಿಮೆ ಇದೆ ಎಂದು ವರದಿ ತಿಳಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಸೋರಿಕೆಯಾದ ಅಧ್ಯಯನ ವರದಿ ಉಲ್ಲೇಖಿಸಿ ಪತ್ರಿಕೆ ಈ … Continued