ನೇಪಾಳ ಮಾಜಿ ಪ್ರಧಾನಿ ಕೆ.ಪಿ. ಓಲಿ ಬಂಧನ: ಪ್ರಧಾನಿಯಾಗಿ ಬಾಲೇಂದ್ರ ಶಾ ಪದಗ್ರಹಣದ ಮರುದಿನವೇ ಕ್ರಮ

ಕಠ್ಮಂಡು: ನೇಪಾಳದ ರಾಜಕೀಯದಲ್ಲಿ ಶನಿವಾರ ಬೆಳಗ್ಗೆ ಭಾರಿ ಸಂಚಲನ ಉಂಟಾಗಿದ್ದು, ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. 2025ರ ಸೆಪ್ಟೆಂಬರ್‌ನಲ್ಲಿ ನಡೆದ ‘ಜೆನ್-ಜಿ’ (Gen Z) ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಹತ್ತಿಕ್ಕಿದ ಮತ್ತು ಆ ಸಂದರ್ಭದಲ್ಲಿ ನಡೆದ ಸಾವು-ನೋವುಗಳಿಗೆ ಕಾರಣರಾದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಗಾಯಕ-ರಾಜಕಾರಣಿ ಬಾಲೇಂದ್ರ ಶಾ ಅವರು … Continued

ನೇಪಾಳ ಚುನಾವಣೆ : ಜೆನ್‌ ಝಡ್‌ ಬೆಂಬಲಿತ ಬಾಲೇಂದ್ರ ಶಾ ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಾರ್ಟಿಗೆ ಭರ್ಜರಿ ಗೆಲುವು

ಕಠ್ಮಂಡು: ನೇಪಾಳದ ಸಂಸತ್ ಚುನಾವಣೆಯಲ್ಲಿ ಬಲಾಢ್ಯ ರಾಜಕೀಯ ಪಕ್ಷಗಳನ್ನು ಧೂಳೀಪಟ ಮಾಡಿರುವ ಬಾಲೇಂದ್ರ ಶಾ (ಬಾಲೆನ್) ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಾರ್ಟಿ (RSP), ದೇಶದ ಮುಂದಿನ ಸರ್ಕಾರವನ್ನು ರಚಿಸಲು ಸಜ್ಜಾಗಿದೆ. ರಾಪರ್ ಹಾಗೂ ರಾಜಕಾರಣಿ 35 ವರ್ಷದ ಬಾಲೇಂದ್ರ ಶಾ, ಝಾಪಾ-5 ಕ್ಷೇತ್ರದಲ್ಲಿ ನಾಲ್ಕು ಬಾರಿ ನೇಪಾಳದ ಪ್ರಧಾನಿಯಾಗಿದ್ದ ಸಿಪಿಎನ್-ಯುಎಂಎಲ್ ನಾಯಕ ಕೆ.ಪಿ. ಶರ್ಮಾ ಓಲಿ … Continued

ಲವ್ ಬ್ರೇಕಪ್ ಆಗಿದೆ, ಕೆಲಸದ ಮೇಲೆ ಗಮನ ಕೊಡಲಿಕ್ಕೆ ಆಗ್ತಿಲ್ಲ, ರಜೆ ಕೊಡಿ ! ಉದ್ಯೋಗಿ ರಜಾ ಅರ್ಜಿಗೆ ಸಿಇಒ ಏನ್ಮಾಡಿದ್ರು ಗೊತ್ತಾ..?

ಗುರುಗ್ರಾಮ ಮೂಲದ ಉದ್ಯಮಿಯೊಬ್ಬರು ತಮಗೆ ಬಂದಿರುವ “ಅತ್ಯಂತ ಪ್ರಾಮಾಣಿಕ ರಜಾ ಅರ್ಜಿ”ಯೊಂದನ್ನು ‘X’ (ಹಿಂದಿನ ಟ್ವಿಟರ್) ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ವ್ಯಾಪಕವಾಗಿ ಚರ್ಚೆಗೊಳಗಾಗಿದ್ದು, ಉದ್ಯೋಗಿಗಳಲ್ಲಿನ ಮಾನಸಿಕ ಆರೋಗ್ಯದ ಕುರಿತಾದ ಮುಕ್ತ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ. ನಾಟ್ ಡೇಟಿಂಗ್ (Knot Dating) ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿರುವ ಜಸ್ವೀರ್ ಸಿಂಗ್ … Continued

ಪ್ರತಿಭಟನೆ ವೇಳೆ 19 ಮಂದಿ ಸಾವು : ನೇಪಾಳ ಗೃಹ ಸಚಿವ ರಮೇಶ ಲೇಖಕ್ ರಾಜೀನಾಮೆ

ಕಠ್ಮಂಡು : ಸೋಮವಾರ ನಡೆದ ಹಿಂಸಾತ್ಮಕ ಜನರಲ್-ಝಡ್ ಪ್ರತಿಭಟನೆಗಳಲ್ಲಿ 19 ಜನರ ಜನರು ಸಾವಿಗೀಡಾದ ಘಟನೆಗೆ ನೈತಿಕ ಹೊಣೆ ಹೊತ್ತು ನೇಪಾಳದ ಗೃಹ ಸಚಿವ ರಮೇಶ ಲೇಖಕ್ ರಾಜೀನಾಮೆ ನೀಡಿದ್ದಾರೆ. ಸೋಮವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ ಅವರು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. … Continued