ಕರ್ನಾಟಕದ  ಆರು ನಗರಗಳಲ್ಲಿ ವಿಧಿವಿಜ್ಞಾನ  ಪ್ರಯೋಗಾಲಯಗಳ ಸ್ಥಾಪನೆ: ಬೊಮ್ಮಾಯಿ

ಹುಬ್ಬಳ್ಳಿ: ಅಪರಾಧ ಪ್ರಕರಣಗಳ ತ್ವರಿತ ಪತ್ತೆ ಮತ್ತು ತನಿಖೆಯ ವೇಗ ಹೆಚ್ಚಿಸಲು ರಾಜ್ಯದ ಕಲಬುರ್ಗಿ ,ಹುಬ್ಬಳ್ಳಿ-ಧಾರವಾಡ , ಮೈಸೂರು ಹಾಗೂ ಇತರ ಪ್ರಮುಖ ನಗರಗಳಲ್ಲಿ ಒಟ್ಟು ಆರು ವಿಧಿವಿಜ್ಞಾನ (ಎಫ್ ಎಸ್ ಎಲ್) ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ಈ ಕುರಿತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. … Continued

ಆರ್ ಆ್ಯಂಡ್ ಡಿ ಹೊಸನೀತಿ ರೂಪಿಸಲು ಕಾರ್ಯಪಡೆ ರಚನೆ, ಅಧ್ಯಕ್ಷರನ್ನಾಗಿ ಡಾ.ಅಶೋಕ ಶೆಟ್ಟರ್ ನೇಮಕಕ್ಕೆ ಚಿಂತನೆ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಕೃಷಿ, ತೈಲ, ಕೈಗಾರಿಕೆ ಮತ್ತಿತರ ಎಲ್ಲ ರಂಗಗಳಲ್ಲಿ ಇಂದು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಅಗತ್ಯವಾಗಿದೆ. ರಾಜ್ಯದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ 180 ಆರ್ ಆ್ಯಂಡ್ ಡಿ ಕೇಂದ್ರಗಳಿದ್ದು, ಅವುಗಳಿಗೆ ಹೆಚ್ಚು ಮಹತ್ವ ನೀಡಲಾಗುವುದು. ಈ ಕ್ಷೇತ್ರಗಳಲ್ಲಿ ಆರ್ ಆ್ಯಂಡ್ ಡಿ ಬಳಕೆಗೆ ಹೆಚ್ಚು ಒತ್ತು ನೀಡಲು ಸರ್ಕಾರ ಉದ್ದೇಶಿಸಿದ್ದು, … Continued

ಸರಕು-ಸೇವೆಗಳ ಬೇಡಿಕೆ ಹೆಚ್ಚಿಸಲು ಗುಣಮಟ್ಟದ ರಫ್ತು ಅತ್ಯವಶ್ಯ: ವಸಂತ ಲದ್ವಾ

ಹುಬ್ಬಳ್ಳಿ: ಕೇವಲ ರಾಜ್ಯ ಮತ್ತು ದೇಶದಲ್ಲಿ ವ್ಯಾಪಾರ ಮಾಡುವುದರಿಂದ ಅಭಿವೃದ್ಧಿಯಾಗುವುದು ಕಷ್ಟ. ಗುಣಮಟ್ಟದ ರಫ್ತು ಕೈಗೊಳ್ಳುವುದರ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಿಸಿಕೊಳ್ಳುವುದು ಇಂದಿನ ವ್ಯಾಪಾರದಲ್ಲಿ ಅವಶ್ಯಕವಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ವಸಂತ ಲದ್ವಾ ಹೇಳಿದರು. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, … Continued

ಹುಬ್ಬಳ್ಳಿ: ಚಿರತೆ ಹಿಡಿಯುವವರೆಗೆ ನೃಪತುಂಗ ಬೆಟ್ಟದ ಸುತ್ತಲಿನ 12 ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ

ಹುಬ್ಬಳ್ಳಿ: ಹುಬ್ಬಳ್ಳಿ ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಕಂಡುಬಂದ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರಿದಿದ್ದು, ಬೆಟ್ಟದ ಸಮೀಪದ ಜನತಾ ಪ್ರೌಢಶಾಲೆ ಹಾಗೂ ಶಿರಡಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿ ನೃಪತುಂಗ ಬೆಟ್ಟದ ಸುತ್ತಮುತ್ತಲಿನ ವಿವಿಧ 12 ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ … Continued

ಹುಬ್ಬಳ್ಳಿ : ಚಿರತೆ ವಿಡಿಯೊದಲ್ಲಿ ಸೆರೆ: ಬೋನಿಟ್ಟು ಹಿಡಿಯಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ

ಹುಬ್ಬಳ್ಳಿ: ಮೂರು ದಿನಗಳ ಹಿಂದೆ ಹುಬ್ಬಳ್ಳಿ ನೃಪತುಂಗ ಬೆಟ್ಟದ ಬಳಿ ಚಿರತೆ ಕಾಣಿಸಿಕೊಂಡಿದೆ ಎನ್ನುವುದಕ್ಕೆ ಪುಷ್ಟಿ ನೀಡುವಂತೆ ಶನಿವಾರ ರಾಜನಗರದ ಕೇಂದ್ರೀಯ ವಿದ್ಯಾಲಯದ ಬಳಿ ಚಿರತೆ ಕಾಣಿಸಿಕೊಂಡಿದೆ. ಶನಿವಾರ ರಾತ್ರಿ 7.30ರ ಸುಮಾರಿಗೆ ರಾಜ ನಗರ ಕೇಂದ್ರಿಯ ವಿದ್ಯಾಲಯದ ಮೈದಾನದ ಸಮೀಪದಲ್ಲಿ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಹೀಗಾಗಿ ಚಿರತೆ ಸೆರೆಗೆ ಬೆಟ್ಟದ … Continued

ಕನ್ನಡದ ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಆರೋಗ್ಯದಲ್ಲಿ ಚೇತರಿಕೆ

ಹುಬ್ಬಳ್ಳಿ: ವಚನಶ್ರೀ ಎಂದೇ ಖ್ಯಾತರಾದ ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ (84) ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಆದರೆ ಈಗ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ 46 ಗ್ರಂಥಗಳನ್ನು ನೀಡಿರುವ ಅವರು ವಿಮರ್ಶಾತ್ಮಕ ಪ್ರಬಂಧಗಳಾದ ಭಕ್ತಿ, ಭಕ್ತಿಮಾರ್ಗ, ಜನಪದ ಸಾಹಿತ್ಯ ಮತ್ತು ದೈವಿ ಶ್ರದ್ಧೆ, ದಶಧರ್ಮ, ಸಂಸ್ಕೃತಿ ಸೌರಭ, ನುಡಿ-ಮಿಡಿ, ಶರಣಾನುಭವ, ವಚನಸ್ತವನ, ವಚನಮಯೂರ, … Continued

ಹುಬ್ಬಳ್ಳಿಯಲ್ಲಿ ದಾಖಲೆಗಳಿಲ್ಲದ ೮೨.೭೫ ಲಕ್ಷ ರೂ.ಹಣ ಪತ್ತೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸೆಪ್ಟಂಬರ್‌ ೩ಕ್ಕೆ ಚುನಾವಣೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಹುಬ್ಬಳ್ಳಿ ನಗರದ ಹೊರವಲಯದಲ್ಲಿ ೮೨.೭೫ ಲಕ್ಷ ರೂ.ಹಣ ಪತ್ತೆಯಾಗಿದೆ. ರಾಜಸ್ಥಾನದ ಮೂಲದ ಬಾಗಲಕೋಟೆಯಿಂದ ಬರುತ್ತಿದ್ದ ಚಾಲಕನ ಬಳಿ ಈ ಹಣ ಪತ್ತೆಯಾಗಿದೆ. ಕುಸುಗಲ್ಲ ರ್ಸತೆ ಬಳಿ ಆಕ್ಸ್‌ಫರ್ಡ್‌ ಕಾಲೇಜು ಬಳಿ ಕೇಶ್ವಾಪುರ ಠಾಣೆ ಇನ್ಸ್‌ಪೆಕ್ಟರ್‌ ಜಗದೀಶ ಹಂಚಿನಾಳ ಶುಕ್ರವಾರ ವಾಹನ ತಪಾಸಣೆ … Continued

ಬಿಜೆಪಿ ಜನಾಶೀರ್ವಾದ ಯಾತ್ರೆಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ ಚಾಲನೆ

ಹುಬ್ಬಳ್ಳಿ: ಬಿಜೆಪಿಯ ಜನಾಶ್ರೀರ್ವಾದ ಯಾತ್ರೆಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಇಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದರು. ಇಲ್ಲಿನ ಕ್ಯೂಬಿಕ್ಸ್ ಹೊಟೇಲ್ಲಿನ ಐವರು ಕೋವಿಡ್ ವಾರಿಯರ್ಸಿಗೆ ಸನ್ಮಾನಿಸುವ ಮೂಲಕ ಜನಾಶೀರ್ವಾದ ಯಾತ್ರೆ ಉದ್ಘಾಟಿಸಿದ ರಾಜೀವ ಚಂದ್ರಶೇಖರ, ಭಾರತ ಬೆಳವಣಿಗೆ ಹೊಂದಲು ಸರಿಯಾದ ಸಮಯ ಬಂದಿದೆ. ಪ್ರಪಂಚ ನಮ್ಮ ದೇಶದತ್ತ ತಿರುಗಿ ನೋಡುತ್ತಿದೆ ಎಂದರು. ಮುಂದಿನ 25 ವರ್ಷಗಳಲ್ಲಿ … Continued

ಡಿಕೆಶಿ, ಹೆಬ್ಬಾಳ್ಕರ್‌ ನನ್ನ ಕಿಸೆಯಲ್ಲಿದ್ದಾರೆ ಎಂದು ರಜತ್‌ ಹೇಳ್ತಾನೆ: ಕಾಂಗ್ರೆಸ್‌ ವರಿಷ್ಠರ ಸಭೆಯಲ್ಲಿ ಬಹಿರಂಗವಾಗಿ ಆರೋಪಿಸಿದ ಗದಿಗೆಪ್ಪಗೌಡರ್

ಹುಬ್ಬಳ್ಳಿ: “ಒಂದು ಪಾಕೆಟ್‌ನಲ್ಲಿ ಡಿ.ಕೆ. ಶಿವಕುಮಾರ ಇನ್ನೊಂದು ಪಾಕೆಟ್‌ನಲ್ಲಿ ಲಕ್ಷ್ಮೀ ಹೆಬ್ಬಾಳಕರ, ಹು-ಧಾ ಮಹಾನಗರ ಪಾಲಿಕೆಯ ೨೫ ವಾರ್ಡುಗಳ ಟಿಕೆಟ್ ನನ್ನ ಕಿಸೆಯಲ್ಲಿವೆ ಹೀಗೆಲ್ಲ ಹೇಳಿಕೊಂಡು ಕಾಂಗ್ರೆಸ್ಸಿನ ರಜತ ಉಳ್ಳಾಗಡ್ಡಿಮಠ ಅವರು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಅದೇ ಪಕ್ಷದ ಗಿರೀಶ ಗದಿಗೆಪ್ಪಗೌಡರ್ ಕಾಂಗ್ರೆಸ್ ಹೈಕಮಾಂಡ್ ಎದುರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬೆಳಗಾವಿ … Continued

ಪ್ರೀತಿ-ಸಾಮಾಜಿಕ ಕಳಕಳಿ-ಭಾವೈಕ್ಯದ ಕವಿ ಎಂ.ಡಿ.ಗೊಗೇರಿ ಸರ್‌ಗೆ ನಾಳೆ ನುಡಿ ನಮನ

(ರವಿವಾರ ದಿನಾಂಕ ೦೧.೦೮.೨೦೨೧ ರಂದು ಮುಂಜಾನೆ ೧೦.೦೦ ಗಂಟೆಗೆ ಶ್ರೀ ಜಗದ್ಗುರು ಮೂರುಸಾವಿರ ಮಠದ ಸಭಾ ಭವನದಲ್ಲಿ ಸಾಹಿತಿಗಳಾದ ಎಂ. ಡಿ. ಗೋಗೇರಿ ಅವರ ನುಡಿನಮನ ಕಾರ್‍ಯಕ್ರಮವಿದ್ದು, ಆ ನಿಮಿತ್ತ ಲೇಖನ. ಎಂ. ಡಿ. ಗೋಗೇರಿ ಅವರ ಜೀವನ , ಸಾಹಿತ್ಯ, ಸಂಸ್ಕೃತಿ, ಹಾಸ್ಯಪ್ರಜ್ಞೆ, ಭಾವೈಕ್ಯತೆ, ಮಕ್ಕಳ ಸಾಹಿತ್ಯ, ಜಾನಪದ ಕ್ಷೇತ್ರ ಮುಂತಾದ ಸಾಧನೆಗಳ ಕುರಿತು … Continued