ಮಹಾಕುಂಭ ಮೇಳ 2025 : ಒಟ್ಟು 45 ದಿನಗಳಲ್ಲಿ 66.21 ಕೋಟಿ ಭಕ್ತರಿಂದ ಪುಣ್ಯಸ್ನಾನ

ಪ್ರಯಾಗರಾಜ್‌ : ವಿಶ್ವದ ಅತಿದೊಡ್ಡ ಧಾರ್ಮಿಕ ಸೇರುವಿಕೆಯಾದ ಮಹಾಕುಂಭ ಬುಧವಾರ ಮುಕ್ತಾಯವಾಯಿತು. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳವು ನಂಬಿಕೆ, ಭಕ್ತಿಯ ಸೇರುವಿಕೆಯಾಗಿತ್ತು. 45 ದಿನಗಳ ಕಾಲ ನಡೆದ ಮಹಾಕುಂಭ ಮೇಳೆ 2025ರಲ್ಲಿ 66.21 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, … Continued

ಮಹಾಕುಂಭ 2025 : ಈವರೆಗೆ 62 ಕೋಟಿ ಭಕ್ತರ ಆಗಮನ

ಆಗ್ರಾ : ಮಹಾಕುಂಭ ಮೇಳ 2025 ಮುಕ್ತಾಯಗೊಳ್ಳುವ ಮೂರು ದಿನಗಳ ಮೊದಲು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಹಾಕುಂಭಕ್ಕೆ ಈವರೆಗೆ 62 ಕೋಟಿ ಭಕ್ತರು ಆಗಮಿಸಿದ್ದಾರೆ ಎಂದು ಭಾನುವಾರ ತಿಳಿಸಿದ್ದಾರೆ. ಮತ್ತು ನಿರ್ದಿಷ್ಟ ಅವಧಿಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರು ಸೇರಿದ್ದು “ಶತಮಾನದ ಅಪರೂಪದ ಘಟನೆಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದಾರೆ. ಆಗ್ರಾದಲ್ಲಿ ನಡೆದ … Continued

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ : 11 ಮಹಿಳೆಯರು, 4 ಮಕ್ಕಳು ಸೇರಿ 18 ಮಂದಿ ಸಾವು

ನವದೆಹಲಿ: ಮಹಾಕುಂಭಕ್ಕೆ ಹೋಗುವ ಎರಡು ರೈಲುಗಳು ತಡವಾಗಿ ಬಂದಿದ್ದರಿಂದ ಜನದಟ್ಟಣೆಯಿಂದ ಕೂಡಿದ್ದ ನವದೆಹಲಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಹಠಾತ್ ನೂಕು ನುಗ್ಗಲು ಉಂಟಾಗಿ 11 ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯ ಮುಖ್ಯ ಅಪಘಾತ ವೈದ್ಯಕೀಯ ಅಧಿಕಾರಿ ಸಾವುಗಳನ್ನು ದೃಢಪಡಿಸಿದ್ದಾರೆ. ಘಟನೆಯಲ್ಲಿ … Continued

ವೀಡಿಯೊ…| ಮಹಾ ಕುಂಭಮೇಳಕ್ಕೆ ಹೋಗಲು ರೈಲು ಹತ್ತಲು ಸಾಧ್ಯವಾಗದ್ದಕ್ಕೆ ರೈಲಿನ ಕಿಟಿಕಿಯನ್ನೇ ಒಡೆದು ಹಾಕಿದ ಪ್ರಯಾಣಿಕರು…

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳುತ್ತಿರುವ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗದೆ ಸ್ವತಂತ್ರ ಸೇನಾನಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನ ಗಾಜಿನ ಕಿಟಕಿಗಳನ್ನು ಒಡೆದ ಘಟನೆ ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ರೈಲು ಹತ್ತಲಾಗದೆ ಹತಾಶೆಗೊಂಡ ಪ್ರಯಾಣಿಕರು ರೈಲಿಗೆ ಕಲ್ಲು ಎಸೆದು ಎಸಿ ಕಂಪಾರ್ಟ್‌ಮೆಂಟ್‌ಗಳ ಗಾಜುಗಳನ್ನು … Continued

ವೀಡಿಯೊ…| ಮಹಾಕುಂಭ ಮೇಳ ; ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ

ಪ್ರಯಾಗರಾಜ್‌ : ಪ್ರಧಾನಿ ನರೇಂದ್ರ ಮೋದಿ ಮಹಾಕುಂಭ ಮೇಳಕ್ಕೆ ಆಗಮಿಸಿದ್ದು, ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಕೇಸರಿ ಬಟ್ಟೆ ಧರಿಸಿ, ಕೈಯಲ್ಲಿ ‘ರುದ್ರಾಕ್ಷಿ ಮಾಲೆ’ ಹಿಡಿದು ಅವರು ಪ್ರಾರ್ಥಿಸಿದ್ದಾರೆ. ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಏರಿಯಲ್ ಘಾಟ್‌ನಿಂದ ಮಹಾಕುಂಭಕ್ಕೆ ದೋಣಿ ವಿಹಾರ ಮಾಡಿದ್ದಾರೆ. … Continued

ಮಹಾಕುಂಭಮೇಳಕ್ಕೆ ತೆರಳಿದ್ದ ಬೆಳಗಾವಿ ವ್ಯಕ್ತಿ ಹೃದಯಾಘಾತದಿಂದ ಸಾವು

ಬೆಳಗಾವಿ: ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಬೆಳಗಾವಿಯ ಮತ್ತೋರ್ವ ವ್ಯಕ್ತಿ ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದಾರೆ. ಬೆಳಗಾವಿ ದೇಶಪಾಂಡೆ ಗಲ್ಲಿಯ ನಿವಾಸಿ ರವಿ ಜಠಾರ (61) ಎಂಬವರು ಮೃತಪಟ್ಟವರು. ಪ್ರಯಾಗರಾಜ್ ನಿಂದ ಮರಳಿ ಬರುವಾಗ ರೈಲಿನಲ್ಲಿ ರವಿ ಜಠಾರ ಅವರಿಗೆ ಪುಣೆ ಬಳಿ ಹೃದಯಾಘಾತವಾಗಿದೆ. ಪುಣೆಯಲ್ಲಿ ಸಂಬಂಧಿಕರು, ಸ್ನೇಹಿತರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ … Continued

ವಿವಿಐಪಿ ಪಾಸ್‌ ಗಳು ರದ್ದು, ಕುಂಭಮೇಳ ಪ್ರದೇಶಕ್ಕೆ ವಾಹನಗಳಿಲ್ಲ ಪ್ರವೇಶ : ಮಹಾಕುಂಭದಲ್ಲಿ ಕಾಲ್ತುಳಿತದ ಜನಸಂದಣಿ ನಿರ್ವಹಣೆ ಕ್ರಮಗಳು ಜಾರಿ

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭ ಮೇಳದ ಸಂಗಮ ಪ್ರದೇಶದಲ್ಲಿ ಬುಧವಾರ ನಸುಕಿನ ಜಾವ ಕಾಲ್ತುಳಿತದಲ್ಲಿ 30 ಜನರು ಮೃತಪಟ್ಟ ಹಾಗೂ ಇತರ 60 ಜನರು ಗಾಯಗೊಂಡ ಒಂದು ದಿನದ ನಂತರ, ರಾಜ್ಯ ಸರ್ಕಾರವು ಸುರಕ್ಷತಾ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಇಡೀ ಜಾತ್ರೆ ಪ್ರದೇಶವನ್ನು ವಾಹನ ರಹಿತ ವಲಯ ಎಂಬ ಘೋಷಣೆ ಸೇರಿದಂತೆ … Continued

27 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಮಹಾಕುಂಭ ಮೇಳದಲ್ಲಿ ‘ಅಘೋರಿ’ ಬಾಬಾ ಆಗಿ ಕುಟುಂಬದವರಿಗೆ ಪತ್ತೆ…!

27 ವರ್ಷಗಳ ಹಿಂದೆ ಕಳೆದುಹೋಗಿದ್ದ ತಮ್ಮ ಮನೆಯ ವ್ಯಕ್ತಿಯನ್ನು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪತ್ತೆಹಚ್ಚಿರುವುದಾಗಿ ಜಾರ್ಖಂಡದ ಕುಟುಂಬವೊಂದು ಬುಧವಾರ ಹೇಳಿಕೊಂಡಿದೆ…! ಅವರ ಪ್ರಕಾರ, 27 ವರ್ಷಗಳ ಹಿಂದೆ ಕಳೆದು ಹೋಗಿದ್ದ ವ್ಯಕ್ತಿ ಗಂಗಾಸಾಗರ ಯಾದವ್ ಎಂಬವರು ಈಗ 65 ವರ್ಷದ ‘ಅಘೋರಿ’ ಸನ್ಯಾಸಿ ಬಾಬಾ ರಾಜಕುಮಾರ ಎಂಬ ಹೆಸರಿನ ಸಾಧುವಾಗಿದ್ದು, ನಿರ್ದಿಷ್ಟ ಸನ್ಯಾಸಿಗಳ ವರ್ಗಕ್ಕೆ ಸೇರಿದವರಾಗಿದ್ದಾರೆ. … Continued

ಮಹಾಕುಂಭ ಕಾಲ್ತುಳಿತದಲ್ಲಿ 30 ಸಾವು, 60 ಮಂದಿಗೆ ಗಾಯ

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭ ಮೇಳದಲ್ಲಿ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಮೃತಪಟ್ಟಿದ್ದಾರೆ ಎಂದು ಮಹಾಕುಂಭದ ಉಪ ಮಹಾನಿರೀಕ್ಷಕ (ಡಿಐಜಿ) ವೈಭವ ಕೃಷ್ಣ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ಅವರು, 25 ಶವಗಳನ್ನು ಗುರುತಿಸಲಾಗಿದೆ, ಘಟನೆಯಲ್ಲಿ 60 ಮಂದಿ ಗಾಯಗೊಂಡಿದ್ದಾರೆ. ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು … Continued

ಮಹಾಕುಂಭ ಮೇಳ 2025 : ‘ಲೌಕಿಕ ಜೀವನʼ ತ್ಯಜಿಸಿ ಸನ್ಯಾಸಿ(ಸಾಧ್ವಿ)ಯಾದ ಐಎಎಸ್ ಆಗಬೇಕೆಂದು ಹಂಬಲಿಸಿದ್ದ 13 ವರ್ಷದ ಬಾಲಕಿ

ಪ್ರಯಾಗರಾಜ್‌ : ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಆಗ್ರಾದ ರಾಖಿ ಎಂಬ 13 ವರ್ಷದ ಬಾಲಕಿ ಮಹಾ ಕುಂಭಮೇಳದಲ್ಲಿ ‘ಸಾಧ್ವಿ’ ಆಗುವ ಇಚ್ಛೆ ವ್ಯಕ್ತಪಡಿಸಿದ ನಂತರ ಆಕೆಯ ಪೋಷಕರು ಆಕೆಯ ನಿರ್ಧಾರವನ್ನು ದೈವಿಕ ಇಚ್ಛೆಯಂತೆ ಸ್ವೀಕರಿಸಿ, ಅವಳನ್ನು ಜುನಾ ಅಖಾಡಾದ ಸುಪರ್ದಿಗೆ ನೀಡಿದ್ದಾರೆ. ವರದಿಗಳ ಪ್ರಕಾರ, ಆಗ್ರಾದ 13 ವರ್ಷದ ಬಾಲಕಿಯೊಬ್ಬಳು ಐಎಎಸ್ ಅಧಿಕಾರಿಯಾಗುವ ಕನಸನ್ನು … Continued