ಲೋಕಸಭೆ ಚುನಾವಣೆ : ಟೈಮ್ಸ್​ ನೌ-ಇಟಿಜಿ ಸಮೀಕ್ಷೆ ವರದಿ ಪ್ರಕಟ; ಕಾಂಗ್ರೆಸ್ಸಿಗೆ ಕಳೆದ ಚುನಾವಣೆಗಿಂತಲೂ ಕಡಿಮೆ ಸ್ಥಾನ ಎಂದ ಸಮೀಕ್ಷೆ; ಬಿಜೆಪಿಗೆ ಎಷ್ಟು ಸ್ಥಾನ..?

ನವದೆಹಲಿ: ಈಗ ದೇಶದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಇದರ ಬೆನ್ನಲ್ಲೇ ಈಗ ಮತ್ತೊಂದು ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಈಗಲೇ ದೇಶದಲ್ಲಿ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ 358-398 ಸ್ಥಾನದಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಟೈಮ್ಸ್​ ನೌ ಸುದ್ದಿ ವಾಹಿನಿ- ಇಟಿಜಿ ನಡೆಸಿರುವ ಸಮೀಕ್ಷೆಯಲ್ಲಿ ಒಟ್ಟು 543 ಕ್ಷೇತ್ರಗಳಲ್ಲಿ … Continued

ಮತ್ತೆ ಎನ್‌ಡಿಎಗೆ ಸೇರುವ ಸುಳಿವು ನೀಡಿದ 15 ವರ್ಷಗಳ ಹಿಂದೆ ಮೈತ್ರಿ ಮುರಿದುಕೊಂಡಿದ್ದ ಬಿಜೆಡಿ

ನವದೆಹಲಿ : ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಒಡಿಶಾದ ಆಡಳಿತಾರೂಢ ಬಿಜು ಜನತಾ ದಳ (ಬಿಜೆಡಿ) ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಸಂಭಾವ್ಯ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದೆ. ಬುಧವಾರ, ಒಡಿಶಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರ ಅಧಿಕೃತ ನಿವಾಸ ನವೀನ ನಿವಾಸ್‌ನಲ್ಲಿ ಬಿಜೆಡಿ ನಾಯಕರು ಸಭೆ ನಡೆಸಿದರು. ಅದೇ ಸಮಯದಲ್ಲಿ, ಬಿಜೆಪಿಯ ರಾಜ್ಯ ಘಟಕದ … Continued

ಲೋಕಸಭೆ ಚುನಾವಣೆ : ತಮಿಳುನಾಡಿನಲ್ಲಿ ನಟ ಶರತ್ ಕುಮಾರ ನೇತೃತ್ವದ ಎಐಎಸ್‌ಎಂಕೆ-ಬಿಜೆಪಿ ಮೈತ್ರಿ

ಚೆನ್ನೈ : ಖ್ಯಾತ ನಟ ಆರ್ ಶರತ್ ಕುಮಾರ ನೇತೃತ್ವದ ಅಖಿಲ ಭಾರತ ಸಮತುವ ಮಕ್ಕಳ್ ಕಚ್ಚಿ (ಎಐಎಸ್‌ಎಂಕೆ) ಪಕ್ಷವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾತುಕತೆಯನ್ನು ಪೂರ್ಣಗೊಳಿಸಲಾಗಿದೆ ಮತ್ತು ತಮಿಳುನಾಡಿನಲ್ಲಿ ಬಿಜೆಪಿಯೊಂದಿಗೆ ‘ಜಂಟಿಯಾಗಿ’ ಕೆಲಸ … Continued

ಈಗ ಚುನಾವಣೆ ನಡೆದರೆ ಎನ್‌ಡಿಎ ಎಷ್ಟು ಗೆಲ್ಲಲಿದೆ..? ಇಂಡಿಯಾ ಮೈತ್ರಿಕೂಟ ಗೆಲ್ಲುವುದೆಷ್ಟು..? : ಇಂಡಿಯಾ ಟಿವಿ-ಸಿಎನ್‌ಎಕ್ಸ್ ಒಪಿನಿಯನ್‌ ಪೋಲ್ ಹೇಳಿದ್ದೇನೆಂದರೆ…

ನವದೆಹಲಿ: ಈಗಲೇ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 543 ಲೋಕಸಭಾ ಸ್ಥಾನಗಳಲ್ಲಿ 378 ಸ್ಥಾನಗಳನ್ನು ಗೆಲ್ಲಬಹುದು ಎಂದು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಒಪಿನಿಯನ್‌ ಪೋಲ್‌ ಮಂಗಳವಾರ (ಮಾರ್ಚ್ 5) ಹೇಳಿದೆ. ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಐ.ಎನ್.ಡಿ.ಐ.ಎ. ಬ್ಲಾಕ್ (ತೃಣಮೂಲ ಕಾಂಗ್ರೆಸ್ ಇಲ್ಲದೆ) 98 ಸ್ಥಾನಗಳನ್ನು ಗೆಲ್ಲಬಹುದು, ಆದರೆ ಮಮತಾ … Continued

ಲೋಕಸಭೆ ಚುನಾವಣೆ 2024 : ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಕೊಕ್‌…!

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ 195 ಅಭ್ಯರ್ಥಿಗಳ ಹೆಸರುಗಳೊಂದಿಗೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಅದರಲ್ಲಿ 33 ಹಾಲಿ ಸಂಸದರಿಗೆ ಟಿಕೆಟ್‌ ನೀಡಿಲ್ಲ…! ಪಟ್ಟಿಯಲ್ಲಿ ಬಿಜೆಪಿ ಅಸ್ಸಾಂನ 11 ಲೋಕಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಅವರಲ್ಲಿ ಆರು ಅಭ್ಯರ್ಥಿಗಳು ಹಾಲಿ ಸಂಸದರಾಗಿದ್ದರೆ ಉಳಿದ ಐವರು ಹೊಸ ಮುಖಗಳಾಗಿವೆ. 2019ರ ಸಾರ್ವತ್ರಿಕ … Continued

ಇತ್ತೀಚಿನ ಚುನಾವಣೆಯ ನಂತರ ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಎನ್‌ಡಿಎಗೆ ಕೇವಲ 3 ಸ್ಥಾನದ ಕೊರತೆ

ನವದೆಹಲಿ : ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಬಿಜೆಪಿ ನೇತೃತ್ವದ ಎನ್‌ಡಿಎಗೆ ಕೇವಲ ಮೂರು ಸ್ಥಾನಗಳು ಕಡಿಮೆ ಸ್ಥಾನಗಳು ಕಡಿಮೆಯಾಗಲಿವೆ. ಈ ತಿಂಗಳು ನಡೆದ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಯ ನಂತರ ಬಿಜೆಪಿ ಏಕಾಂಗಿಯಾಗಿ ಹತ್ತಿರ ಹತ್ತಿರ 100 ಸ್ಥಾನಗಳಿಗೆ ತಲುಪಿದೆ. ಒಟ್ಟಾರೆಯಾಗಿ, ಈ ಸುತ್ತಿನ ಚುನಾವಣೆಯಲ್ಲಿ 56 ಸ್ಥಾನಗಳಲ್ಲಿ ಬಿಜೆಪಿ 30 ಸ್ಥಾನಗಳನ್ನು … Continued

ಲೋಕಸಭೆಗೆ ಈಗಲೇ ಚುನಾವಣೆ ನಡೆದರೆ ಅಧಿಕಾರ ಯಾರಿಗೆ : ಮೋದಿಗೋ ? ವಿಪಕ್ಷಗಳ ಮೈತ್ರಿಕೂಟಕ್ಕೋ..? : ಇಂಡಿಯಾ ಟುಡೇ ಮೂಡ್‌ ಆಫ್‌ ದಿ ನೇಶನ್‌ ಸರ್ವೆಯಲ್ಲಿ ಬಹಿರಂಗ

ನವದೆಹಲಿ; 2024 ರ ಲೋಕಸಭಾ ಚುನಾವಣೆಯನ್ನು ಸಮೀಪಿಸುತ್ತಿರುವಾಗ, ಮೂಡ್ ಆಫ್ ದಿ ನೇಷನ್ (Mood of the Nation) ಸಮೀಕ್ಷೆಯು ಈಗಲೇ ಲೋಕಸಭೆ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಹೇಳಿದೆ. ಆದಾಗ್ಯೂ, ಇದು … Continued

ಯುಪಿಎ ಸರ್ಕಾರ V/S ಮೋದಿ ಸರ್ಕಾರ : ಕೇಂದ್ರದ ಅನುದಾನದ ಲೆಕ್ಕ ನೀಡಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಬಿಜೆಪಿ

ಬೆಂಗಳೂರು: ತೆರಿಗೆ ರೂಪದಲ್ಲಿ ಕರ್ನಾಟಕದಿಂದ ಹಣ ಸಂಗ್ರಹವಾದರೂ ಮೋದಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಹಣ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸುದ್ದಿಗೋಷ್ಠಿಯಲ್ಲಿ ಆರೋಪಿದ ಬೆನ್ನಲ್ಲೇ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ. ಕಾಂಗ್ರೆಸ್‌ ಸರ್ಕಾರ ತನ್ನ ವೈಪಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ ಎಂದು ರಾಜ್ಯ ಬಿಜೆಪಿ … Continued

ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನದಲ್ಲಿ ಗೆದ್ದ ನಂತರ 17 ರಾಜ್ಯಗಳಿಗೆ ವಿಸ್ತರಿಸಿದ ಬಿಜೆಪಿ-ಮಿತ್ರ ಪಕ್ಷಗಳ ಆಡಳಿತ : ರಾಜ್ಯಗಳ ಪಟ್ಟಿ ಇಲ್ಲಿದೆ…

ನವದೆಹಲಿ: ಬಿಜೆಪಿಯು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನಗಳಲ್ಲಿ ಭಾರಿ ಜಯ ಸಾಧಿಸಿದೆ, ಈ ನಿರ್ಣಾಯಕ ʼಹಿಂದಿ-ಬೆಲ್ಟ್ʼ ರಾಜ್ಯಗಳಲ್ಲಿ ಮುಂದಿನ ರಾಜಕೀಯ ಭೂದೃಶ್ಯವನ್ನು ಗಮನಾರ್ಹವಾಗಿ ಮರುರೂಪಿಸಿದೆ. ಈ ಅಮೋಘ ವಿಜಯವು 2024 ರ ಲೋಕಸಭೆ ಚುನಾವಣೆಗೆ ಭಾರತದ ರಾಜಕೀಯ ಡೈನಾಮಿಕ್ಸ್‌ ಗೆ ಗಮನಾರ್ಹ ದಿಕ್ಸೂಚಿ ಎಂದೇ ಹೇಳಬಹುದು. ಈ ನಿರ್ಣಾಯಕ ಗೆಲುವುಗಳೊಂದಿಗೆ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು … Continued

ನಮ್ಮದೇ ನಿಜವಾದ ಜೆಡಿಎಸ್ : ಯಾವ ಕಾರಣಕ್ಕೂ ಎನ್‌ಡಿಎ ಮೈತ್ರಿಕೂಟದ ಜೊತೆ ಹೋಗಲ್ಲ : ಸಿ.ಎಂ.ಇಬ್ರಾಹಿಂ

ಬೆಂಗಳೂರು : ಲೋಕಸಭೆ ಚುಣಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಈಗ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೇ ಸಡ್ಡು ಹೊಡೆದಿದ್ದಾರೆ. ನಮ್ಮದೇ ಅಸಲಿ ಜೆಡಿಎಸ್. ನಾವು ಯಾವುದೇ ಕಾರಣಕ್ಕೂ ಎನ್‌ಡಿಎ ಮೈತ್ರಿಕೂಟದ ಜೊತೆ ಹೋಗುವುದಿಲ್ಲ ಎಂದು ಸಿಎಂ … Continued