ಪಹಲ್ಗಾಮ್‌ ದಾಳಿಯ ಮತ್ತಷ್ಟು ವೀಡಿಯೊಗಳು..| ಭಯೋತ್ಪಾದಕ ದಾಳಿ ಬಗ್ಗೆ ಗೊತ್ತಿಲ್ಲದೆ ಸೆರೆಹಿಡಿದ ಜಿಪ್‌ಲೈನ್‌ನಲ್ಲಿದ್ದ ಪ್ರವಾಸಿಗ ; ಜೀವ ರಕ್ಷಣೆಗೆ ಓಡಿದ ಪ್ರವಾಸಿಗರು

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ಪಡೆದ ಭಯೋತ್ಪಾದಕ ದಾಳಿ ನಡೆದು ಸುಮಾರು ಒಂದು ವಾರ ಕಳೆದಿದೆ. ಪಹಲ್ಗಾಮ್‌ನಲ್ಲಿ ಪ್ರವಾಸಿಗರು ಚಿತ್ರೀಕರಿಸಿದ ಹಲವಾರು ವೀಡಿಯೊಗಳು ಈಗ ಪರಿಶೀಲನೆಯಲ್ಲಿವೆ. ಬೈಸರನ್ ಹುಲ್ಲುಗಾವಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಜಿಪ್‌ಲೈನ್ ಸವಾರಿಯನ್ನು ರೆಕಾರ್ಡ್ ಮಾಡುತ್ತಿರುವುದನ್ನು ತೋರಿಸುವ ಹೊಸ ವೀಡಿಯೊ ಹೊರಬಿದ್ದಿದೆ, ಅದರಲ್ಲಿ ಕೆಲವು ಪ್ರವಾಸಿಗರು ನೆಲದ ಮೇಲೆ ಓಡುತ್ತಿರುವುದನ್ನು … Continued

ಪಹಲ್ಗಾಮ್ ಭಯೋತ್ಪಾದಕ ದಾಳಿ | ಹೊರಬಿದ್ದ ಮತ್ತೊಂದು ಆಘಾತಕಾರಿ ವೀಡಿಯೊ ; ಪ್ರವಾಸಿಗನ ಮೇಲೆ ಉಗ್ರನ ಅಟ್ಟಹಾಸ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹೊಸ ವೀಡಿಯೊ ಹೊರಬಿದ್ದಿದೆ. ವೀಡಿಯೊದಲ್ಲಿ, ಭಯೋತ್ಪಾದಕನೊಬ್ಬ ಪ್ರವಾಸಿಗರ ಮೇಲೆ ಗುಂಡು ಹಾರಿಸುವುದನ್ನು ಕಾಣಬಹುದು. ಏಪ್ರಿಲ್ 22 ರಂದು, ಪಹಲ್ಗಾಮ್‌ನ ಬೈಸರನ್‌ನಲ್ಲಿ ಪ್ರವಾಸಿಗರ ಗುಂಪಿನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಕೊಂದರು. ದಾಳಿಯಲ್ಲಿ ಇತರ 17 ಜನರು ಗಾಯಗೊಂಡರು. ವೀಡಿಯೊದಲ್ಲಿ, ಬಿಳಿ ಬಟ್ಟೆ … Continued

“ನನ್ನ ಗಂಡನ ಮೇಲೆ ಗುಂಡು ಹಾರಿಸಿದ ನಂತರ ಭಯೋತ್ಪಾದಕ ನಗುತ್ತಿದ್ದ…”: ಪಹಲ್ಗಾಮ್ ದಾಳಿಯಲ್ಲಿ ಮೃತ ಶೈಲೇಶ ಪತ್ನಿ

ಅಹಮದಾಬಾದ್ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸೂರತ್ ನಿವಾಸಿ ಶೈಲೇಶ್ ಕಲಾಥಿಯಾ ಅವರ ಪತ್ನಿ ಗುರುವಾರ, ತಮ್ಮ ಪತಿಯನ್ನು ಗುಂಡಿಕ್ಕಿ ಕೊಂದ ನಂತರ ಭಯೋತ್ಪಾದಕರು ನಗುತ್ತಿದ್ದರು, ಅವರಲ್ಲಿ ಯಾವುದೇ ಪಶ್ಚಾತ್ತಾಪದ ಲವಲೇಶದ ಭಾವವೂ ಇರಲಿಲ್ಲ ಎಂದು ಹೇಳಿದ್ದಾರೆ. ಮಂಗಳವಾರ ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಪಟ್ಟಣದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ … Continued

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕ್ ವಿರುದ್ಧ ಭಾರತದ 7 ಪ್ರಮುಖ ಕ್ರಮಗಳು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ತೆಗೆದುಕೊಂಡ ಭೀಕರ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಏಳು ಕ್ರಮಗಳನ್ನು ತೆಗೆದುಕೊಂಡಿದೆ. ಈ ದಾಳಿಯಲ್ಲಿ ಗಡಿಯಾಚೆಗಿನ ಸಂಪರ್ಕಗಳ ಕುರಿತು ಚರ್ಚಿಸಿದ ನಂತರ ಸರ್ಕಾರ ಬುಧವಾರ ಐದು ಕ್ರಮಗಳನ್ನು ಮತ್ತು ಗುರುವಾರ ಇನ್ನೂ ಎರಡು ಕ್ರಮಗಳನ್ನು ಘೋಷಿಸಿತು. ಭಯೋತ್ಪಾದನಾ ದಾಳಿಯ ಕುರಿತು ಭಾರತ … Continued

ಪಹಲ್ಗಾಮ್ ದಾಳಿ: ‘ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮಕ್ಕೆ ಸಂಪೂರ್ಣ ಬೆಂಬಲ’; ಸರ್ವಪಕ್ಷಗಳ ಸಭೆಯಲ್ಲಿ ವಿಪಕ್ಷಗಳು

ನವದೆಹಲಿ: 26 ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಹತ್ಯಾಕಾಂಡವನ್ನು ಖಂಡಿಸಿರುವ ಪ್ರತಿಪಕ್ಷಗಳು ಸರ್ಕಾರದ “ಯಾವುದೇ ಕ್ರಮ”ಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಗುರುವಾರ ಸಂಜೆ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ ನಂತರ ಗುಪ್ತಚರ ಮತ್ತು ಸರ್ಕಾರಿ ಅಧಿಕಾರಿಗಳಿಂದ ವಿಪಕ್ಷಗಳ ನಾಯಕರಿಗೆ ಮಾಹಿತಿ ನೀಡಲಾಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಒಕ್ಕೊರಲಿನಿಂದ … Continued

ವೀಡಿಯೊ..| ಭಯೋತ್ಪಾದಕರಿಗೆ, ಹಿಂದಿದ್ದವರಿಗೆ ಭಾರತದ ಖಡಕ್‌ ವಾರ್ನಿಂಗ್‌ ಜಗತ್ತಿಗೆ ಗೊತ್ತಾಗಲೆಂದು ಇಂಗ್ಲಿಷಿಗೆ ಭಾಷಣ ಬದಲಾಯಿಸಿದ ಪ್ರಧಾನಿ ಮೋದಿ

ನವದೆಹಲಿ: ಪಹಲ್ಗಾಮ್ ದಾಳಿಕೋರರಿಗೆ ಪ್ರಧಾನಿ ಮೋದಿ ಖಡಕ್‌ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಬಿಹಾರದ ಮಧುಬನಿಯಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟದ ಬಲವಾದ ಸಂದೇಶವನ್ನು ಸಾರ್ವಜನಿಕ ವೇದಿಕೆಯಿಂದ ಇಡೀ ಜಗತ್ತಿಗೆ ರವಾನಿಸಲು ಹಿಂದಿಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಇಂಗ್ಲಿಷ್‌ಗೆ ಬದಲಾಯಿಸಿಕೊಂಡರು. “ಬಿಹಾರದ ಮಣ್ಣಿನಿಂದ, ನಾನು … Continued

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮನಕಲಕುವ ವೀಡಿಯೊ : ಉಗ್ರರು ಪ್ರವಾಸಿಗರ ಹತ್ತಿರ ಹೋಗಿ ಗುಂಡು ಹಾರಿಸಿದರು…

ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ಕ್ಷಣವನ್ನು ತೋರಿಸುವ ಮನಕಲಕುವ ದೃಶ್ಯಗಳು ಹೊರಬಂದಿವೆ. ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಹುಲ್ಲುಗಾವಲಿನಲ್ಲಿ ರಜಾದಿನಗಳನ್ನು ಆನಂದಿಸುತ್ತಿದ್ದ 26 ಅಮಾಯಕ ಪ್ರವಾಸಿಗರನ್ನು ಕೊಂದರು. ಈಗ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸಿದ ಆಘಾತಕಾರಿ ಕ್ಷಣದ ವೀಡಿಯೊ ಹೊರಬಿದ್ದಿದೆ. ಈ ವೀಡಿಯೊದಲ್ಲಿ, ಗುಲ್ಮಾರ್ಗ್‌ನ … Continued

ಪಹಲ್ಗಾಮ್‌ ದಾಳಿಯ ನಂತರ ʼಸಿಂಧೂ ನದಿ ನೀರು ಒಪ್ಪಂದʼ ಸ್ಥಗಿತಗೊಳಿಸಿದ ಭಾರತ ; ಇದರಿಂದ ಪಾಕಿಸ್ತಾನಕ್ಕೆ ಆಗುವ ತೊಂದರೆ ಏನು..?

ನವದೆಹಲಿ: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ದಿಟ್ಟ ರಾಜತಾಂತ್ರಿಕ ದಾಳಿಯಲ್ಲಿ, ಭದ್ರತೆ ಕುರಿತ ಕ್ಯಾಬಿನೆಟ್ ಸಮಿತಿ (CCS) 1960 ರ ಸಿಂಧೂ ಜಲ ಒಪ್ಪಂದವನ್ನು (IWT) ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಭದ್ರತೆಯ … Continued

ಕಲಿಮಾ ಪಠಿಸದ್ದಕ್ಕೆ ಉಗ್ರರಿಂದ ತಂದೆಯ ತಲೆಗೆ ಗುಂಡೇಟು ; ಕಣ್ಣೀರಿಟ್ಟ ಪುಣೆಯ ಉದ್ಯಮಿಯ ಪುತ್ರಿ

ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಉಗ್ರರು ಹಿಂದೂಗಳನ್ನೇ ಗುರಿಯಾಗಿಸಿ ನರಮೇಧ ಮಾಡಿದ್ದಾರೆ. ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣವಾದ ಪಹಲ್ಗಾಮ್ (Pahalgam) ಕಣಿವೆಯಲ್ಲಿ ವ್ಯಕ್ತಿಗಳ ಗುರುತು ಹಾಗೂ ಧರ್ಮ ಯಾವುದೆಂದು ಕೇಳಿ ಅವರನ್ನು ಹತ್ಯೆ ಮಾಡಲಾಗಿದೆ. ಕಲಿಮಾ (Kalima) ಹೇಳಲು ಬಾರದವರ ತಲೆಗೆ ಗುಂಡಿಕ್ಕಿ ಕೊಲ್ಲಲಾಗಿದೆ. ಭಯೋತ್ಪಾದಕರು ಟೆಂಟ್‌ ಒಳಗೆ ಕುಳಿತಿದ್ದ 54 ವರ್ಷದ ಸಂತೋಷ ಜಗದಾಳೆ … Continued

ನಿನ್ನನ್ನು ಕೊಲ್ಲಲ್ಲ, ಇದನ್ನು ಹೋಗಿ ಮೋದಿಗೆ ಹೇಳುʼ ; ಶಿವಮೊಗ್ಗದ ಉದ್ಯಮಿ ಸಾಯಿಸಿ ಪತ್ನಿಗೆ ಹೇಳಿದ ಭಯೋತ್ಪಾದಕ…

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಗೆ (Terrorist Attack) ಇಡೀ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗದ ಉದ್ಯಮಿಯೊಬ್ಬರು ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಮಗನ ಕಣ್ಣೆದುರೇ ಉದ್ಯಮಿ ಮಂಜುನಾಥ ಅವರನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. ತನ್ನ ಗಂಡನನ್ನು ಕಳೆದುಕೊಂಡ ಶಿವಮೊಗ್ಗ ಮೂಲದ ರಿಯಲ್‌ ಎಸ್ಟೇಟ್ … Continued