ಮೈಸೂರಿನ ಮೈಲಾರಿ ಹೋಟೆಲ್​​ನಲ್ಲಿ ದೋಸೆ ಮಾಡಿದ ಪ್ರಿಯಾಂಕಾ ಗಾಂಧಿ; ನಂತ್ರ ಕಾಂಗ್ರೆಸ್​ ನಾಯಕರೊಂದಿಗೆ ಉಪಹಾರ ಸೇವನೆ | ವೀಕ್ಷಿಸಿ

ಮೈಸೂರು: ಮೈಸೂರು ನಗರದ 80 ವರ್ಷ ಹಳೆಯ ಮೈಲಾರಿ ದೋಸೆ ಹೋಟೆಲ್‌ಗೆ ಭೇಟಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು (Priyanka Gandhi) ತಾವೇ ಕಾವಲಿ ಮೇಲೆ ದೋಸೆ ಹೊಯ್ದಿದ್ದಾರೆ(makes dosa). ದೋಸೆ ಮಾಡಿದ ನಂತರ ತಾವೂ ಸವಿದು, ಕಾಂಗ್ರೆಸ್​ ನಾಯಕರಿಗೂ ನೀಡಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ … Continued

ಇಂಜಿನ್‌ಗೆ ಬೆಂಕಿ ತಗುಲಿದ ನಂತರ ತುರ್ತು ಲ್ಯಾಂಡಿಂಗ್ ಮಾಡಿದ ಅಮೆರಿಕನ್ ಏರ್‌ಲೈನ್ಸ್ ವಿಮಾನ | ವೀಕ್ಷಿಸಿ

ಭಾನುವಾರ ಅಮೇರಿಕನ್ ಏರ್ಲೈನ್ಸ್ ವಿಮಾನಕ್ಕೆ ಹಕ್ಕಿಗಳ ಹೊಡೆತದಿಂದಾಗಿ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊವು ಬೆಂಕಿ ಹೊತ್ತಕೊಂಡ ನಂತರ ವಿಮಾನವು ಕೊಲಂಬಸ್‌ನ ಜಾನ್ ಗ್ಲೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂತಿರುಗುತ್ತಿರುವುದನ್ನು ತೋರಿಸುತ್ತದೆ. ವಿಮಾನದ ಬಲ ಇಂಜಿನ್‌ನಿಂದ ಜ್ವಾಲೆ ಮತ್ತು ಹೊಗೆ ಬರುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಟೇಕ್ ಆಫ್ ಆದ ನಂತರ ಪ್ರಮುಖ … Continued

ತೆರೆದ ಮೈದಾನದಲ್ಲಿ ಆಕಳು ಕರುವನ್ನು ಹಿಡಿದ ಹುಲಿ : ಮುಂದಿನ ಘಟನೆಗೆ ದಂಗು ಬಡಿದ ಇಂಟರ್ನೆಟ್ | ವೀಕ್ಷಿಸಿ

ಕಾಡು ಪ್ರಾಣಿಗಳು ಮಾನವನ ಆವಾಸಸ್ಥಾನಗಳಿಗೆ ನುಗ್ಗಿದ ಘಟನೆಗಳು ಈ ಹಿಂದೆ ಹಲವಾರು ಬಾರಿ ವರದಿಯಾಗಿವೆ ಇದೀಗ ಇಂತಹದ್ದೇ ಒಂದು ಘಟನೆಯಲ್ಲಿ ಹುಲಿಯೊಂದು ಬಯಲಿಗೆ ನುಗ್ಗಿ ದನದ ಮೇಲೆ ದಾಳಿ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಾಂತ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ, ಹುಲಿಯೊಂದು ಹಸುಗಳ ಗುಂಪನ್ನು … Continued

ಆಳದ ಗುಂಡಿಯಲ್ಲಿ ಬಿದ್ದ ಬೆಕ್ಕಿನ ಮರಿ ರಕ್ಷಿಸಲು ಶತಪ್ರಯತ್ನ ನಡೆಸುವ ಮಂಗ: ಈ ಮನಕರಗುವ ವೀಡಿಯೊ ವೀಕ್ಷಿಸಿ

ಪ್ರೀತಿ, ಬಾಂಧವ್ಯ, ಕಾಳಜಿ, ಕರುಣೆ ಎಂಬುದು ಕೇವಲ ಮಾನವರಿಗೆ ಮಾತ್ರ ಸೀಮಿತವಾಗಿಲ್ಲ. ಇದು ಪ್ರಾಣಿಗಳಲ್ಲಿಯೂ ಅಗಾಗ್ಗೆ ಕಾಣುತ್ತೇವೆ. ತಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವವರಿಗೆ ಅಥವಾ ಮತ್ತೊಂದು ಪ್ರಾಣಿ ಅಸಹಾಯಕ ಸ್ಥಿತಿಯಲ್ಲಿದ್ದುದನ್ನು ನೋಡಿದರೆ ಪ್ರಾಣಿಗಳು ತಕ್ಷಣವೇ ನೆರವಿಗೆ ಧಾವಿಸುತ್ತದೆ ಎಂಬುದನ್ನು ಅನೇಕ ಸಂದರ್ಭಗಳಲ್ಲಿ ನೋಡಿದ್ದೇವೆ. ಜೀವವನ್ನು ಪಣಕ್ಕಿಟ್ಟು ಅಪಾಯದಲ್ಲಿದ್ದ ಮತ್ತೊಂದು ಪ್ರಾಣಿಯನ್ನು ಕಾಪಾಡುತ್ತವೆ ಇಂಥದ್ದೇ ಮನಕರಗುವ ಒಂದು … Continued

ಪುತ್ರ ಕಾಂತೇಶಗೆ ಟಿಕೆಟ್ ತಪ್ಪಿದ ನಂತರ ಮಾಜಿ ಸಚಿವ ಈಶ್ವರಪ್ಪಗೆ ಕರೆ ಮಾಡಿದ ಪ್ರಧಾನಿ ಮೋದಿ : ʼಬಿಜೆಪಿ ಬಗ್ಗೆ ಇರುವ ಬದ್ಧತೆ’ಗೆ ಶ್ಲಾಘನೆ | ವೀಕ್ಷಿಸಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ಕರ್ನಾಟಕ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಕರೆ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಈಶ್ವರಪ್ಪ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು ಮತ್ತು 2023 ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೊದಲು ಬಿಜೆಪಿ ಬಗ್ಗೆ ಜನರ ಪ್ರತಿಕ್ರಿಯೆ … Continued

ಪರೀಕ್ಷಾ ಹಾರಾಟದ ಸಮಯದಲ್ಲಿ ಬಿಲಿಯನೇರ್ ಎಲೋನ್‌ ಮಸ್ಕ್‌ ನ ಸ್ಟಾರ್‌ಶಿಪ್ ಬೃಹತ್‌ ರಾಕೆಟ್‌ ಸ್ಫೋಟ | ವೀಕ್ಷಿಸಿ

ಬಿಲಿಯನೇರ್ ಎಲೋನ್ ಮಸ್ಕ್ ಅವರ ಐಕಾನಿಕ್ ರಾಕೆಟ್ ಸ್ಟಾರ್‌ಶಿಪ್, ಚಂದ್ರ ಮತ್ತು ಮಂಗಳ ಮತ್ತು ಅದರಾಚೆಗೆ ಗಗನಯಾತ್ರಿಗಳನ್ನು ಕಳುಹಿಸಲು ವಿನ್ಯಾಸಗೊಳಿಸಲಾದ ಅತಿದೊಡ್ಡ ಮತ್ತು ಶಕ್ತಿಯುತವಾದ ರಾಕೆಟ್ ಗುರುವಾರ ಬಾಹ್ಯಾಕಾಶ ನೌಕೆಯ ಮೊದಲ ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ ಸ್ಫೋಟಗೊಂಡಿದೆ. ಇದರ ನಂತರ ಮುಂದಿನ ಸ್ಟಾರ್‌ಶಿಪ್ ಪರೀಕ್ಷೆಯು ಕೆಲವೇ ತಿಂಗಳುಗಳಲ್ಲಿ ನಡೆಯಲಿದೆ ಎಂದು ಮಸ್ಕ್ ಹೇಳಿದ್ದಾರೆ. “ಸ್ಟಾರ್‌ಶಿಪ್‌ನ ಮೊದಲ … Continued

ಅರೆರೇ…ಚೌಕಾಕಾರದಲ್ಲಿದೆ ಈ ಸೈಕಲ್ ಚಕ್ರ….! ಆದ್ರೂ ರಸ್ತೆ ಮೇಲೆ ಸರಾಗವಾಗಿ ಓಡುತ್ತದೆ ಈ ಸೈಕಲ್‌ | ವೀಕ್ಷಿಸಿ

ಸಾಮಾನ್ಯವಾಗಿ ವಾಹನಗಳ ಚಕ್ರ ವೃತ್ತಾಕಾರ (ಗೋಳಾಕಾರ) ಆಗಿರುವುದನ್ನು ನೋಡಿದ್ದೇವೆ. ಚಕ್ರ ಸ್ವಲ್ಪ ಬೆಂಡ್ ಆದರೂ ವಾಹನ ಮುಂದೆ ಚಲಿಸಲು ಕಷ್ಟವಾಗುತ್ತದೆ. ಆದರೆ ಇಲ್ಲೊಂದು ಸೈಕಲ್ ಚಕ್ರ ವೃತ್ತಾಕಾರದಲ್ಲಿರುವ ಬದಲು ಚೌಕಾಕಾರದಲ್ಲಿದೆ. ಆದರೂ ಸೈಕಲ್‌ ಸರಾಗವಾಗಿ ರಸ್ತೆ ಮೇಲೆ ಓಡುತ್ತದೆ. ಚೌಕಾಕಾರದ ಚಕ್ರಗಳನ್ನು ಹೊಂದಿರುವ ಈ ಬೈಸಿಕಲ್‌ ವೀಡಿಯೊ ಈಗ ಇಂಟರ್ನೆಟ್ಟಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಭೌತಶಾಸ್ತ್ರ ಮತ್ತು … Continued

ವೀಡಿಯೊ: ಕಾಂಗ್ರೆಸ್‌ ಸೇರ್ಪಡೆ ನಂತರ ಹುಬ್ಬಳ್ಳಿಗೆ ಬಂದ ಜಗದೀಶ ಶೆಟ್ಟರ ಅವರನ್ನು ತಬ್ಬಿಕೊಂಡು ಗಳಗಳನೆ ಅತ್ತ ಪತ್ನಿ ಶಿಲ್ಪಾ ಶೆಟ್ಟರ

ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು, ಸೋಮವಾರ ಬೆಳಿಗ್ಗೆ ಕಾಂಗ್ರೆಸ್ ಸೇರಿದ ಕೆಲವೇ ಗಂಟೆಗಳ ನಂತರ ಅವರು ತಮ್ಮ ಕ್ಷೇತ್ರ ಹುಬ್ಬಳ್ಳಿಗೆ ಆಗಮಿಸಿದಾಗ ಅವರಿಗೆ ಭಾವನಾತ್ಮಕವಾದ ಸ್ವಾಗತ ಸಿಕ್ಕಿತು. ವೀಡಿಯೊದಲ್ಲಿ ಜಗದೀಶ್ ಶೆಟ್ಟರ್ ಅವರ ಪತ್ನಿ ಶಿಲ್ಪಾ ಅವರ ಅವರನ್ನು ತಬ್ಬಿಕೊಂಡು ಅಳುತ್ತಿರುವುದು ಕಂಡುಬಂದಿದೆ. ಇದೇವೇಳೆ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್‌ … Continued

ಸೇತುವೆಯ ಮೇಲೆ ವಿಶಿಷ್ಟ ಪಟ್ಟಣ ನಿರ್ಮಿಸಿದ ಚೀನಾ | ವೀಕ್ಷಿಸಿ

ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಅವರ ಟ್ವೀಟ್‌ಗಳು ಆನ್‌ಲೈನ್‌ನಲ್ಲಿ ಹೆಚ್ಚಿನ ಗಮನ ಸೆಳೆಯುತ್ತವೆ. ಈ ವೇಳೆ ಅವರು ಚೀನಾದ ಚಾಂಗ್‌ಕಿಂಗ್‌ ಎಂಬಲ್ಲಿ ಸೇತುವೆಯ ಮೇಲೆ ನಿರ್ಮಿಸಲಾದ ವರ್ಣರಂಜಿತ ಟೌನ್‌ಶಿಪ್‌ನ ಆಕರ್ಷಕ ವೀಡಿಯೊ ಹಂಚಿಕೊಂಡಿದ್ದಾರೆ. ”ಇಲ್ಲಿ ವಾಸಿಸುವುದನ್ನು ಕಲ್ಪಿಸಿಕೊಳ್ಳಿ…..” ಎಂದು ಆರ್‌ಪಿಜಿ (RPG)ಎಂಟರ್‌ಪ್ರೈಸಸ್‌ ಅಧ್ಯಕ್ಷ ಹರ್ಷ ಗೋಯೆಂಕಾ ವೀಡಿಯೊವನ್ನು ಹಂಚಿಕೊಳ್ಳುವಾಗ … Continued

ತನ್ನ ಮರಿಯನ್ನು ರಕ್ಷಿಸಲು ಮೊಸಳೆ ಮೇಲೆ ದಾಳಿ ಮಾಡಿದ ತಾಯಿ ಆನೆ, ಕೊಳದಿಂದಲೇ ಪಲಾಯನ ಮಾಡಿದ ಮೊಸಳೆ | ವೀಕ್ಷಿಸಿ

ತಾಯಂದಿರು ಶೌರ್ಯ ಮತ್ತು ಧೈರ್ಯದ ಪ್ರತಿರೂಪ ಮತ್ತು ತಾಯಿಯಂತೆ ಯಾರೂ ಮಗುವನ್ನು ರಕ್ಷಿಸಲು ಸಾಧ್ಯವಿಲ್ಲ. ತನ್ನ ಮಗುವನ್ನು ರಕ್ಷಿಸಲು ಅವಳು ತನ್ನ ಜೀವವನ್ನೇ ಅಪಾಯಕ್ಕೆ ತಳ್ಳಬಹುದು. ಅಂತಹ ಬಲವಾದ ಪ್ರವೃತ್ತಿಗಳು ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಕಂಡುಬರುತ್ತವೆ. ತಾಯಿ ಆನೆಯೊಂದು ತನ್ನ ಮಗುವನ್ನು ರಕ್ಷಿಸಲು ಮೊಸಳೆ ಮೇಲೆ ದಾಳಿ ಮಾಡುವುದನ್ನು ತೋರಿಸುವ ಇಂತಹ ವೀಡಿಯೊ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದೆ. … Continued