ದೇವಸ್ಥಾನದಲ್ಲಿ ಕಾಂಗ್ರೆಸ್ ನಾಯಕ ಡಾ.ಪರಮೇಶ್ವರ ಪಾದ ಮುಟ್ಟಿ ನಮಸ್ಕರಿಸಿದ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ | ವೀಕ್ಷಿಸಿ

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶುಕ್ರವಾರ ತುಮಕೂರಿನ ದೇವಸ್ಥಾನದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಡಾ. ಜಿ ಪರಮೇಶ್ವರ ಅವರ ಆಶೀರ್ವಾದ ಪಡೆದರು. ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಅವರು ತಮ್ಮ ತಂದೆಯ ಭದ್ರಕೋಟೆಯಾದ ಶಿಕಾರಿಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ … Continued

ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ ಪೋಸ್ಟರ್ ಹರಿದು ಹಾಕಿದ ನಾಯಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಹಿಳೆಯರು | ವೀಕ್ಷಿಸಿ

ವಿಜಯವಾಡ: ಕೇಳಿರದ ಘಟನೆಯೊಂದರಲ್ಲಿ, ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಅವರ ಪೋಸ್ಟರ್ ಅನ್ನು ಹರಿದು ಹಾಕುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಮಹಿಳೆಯರ ಗುಂಪೊಂದು ನಾಯಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ….! ವಿಜಯವಾಡದಲ್ಲಿ ಈ ಘಟನೆ ನಡೆದಿದ್ದು, ವಿರೋಧ ಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಾರ್ಯಕರ್ತೆ ಎನ್ನಲಾದ ದಾಸರಿ ಉದಯಶ್ರೀ … Continued

ಆಘಾತಕಾರಿ ..: ಸತ್ತ ನಂತರಮಹಿಳೆ ಶವವನ್ನು ಕಾರಿನಲ್ಲಿ ಒಯ್ದು ನಕಲಿ ಉಯಿಲಿಗೆ ಹೆಬ್ಬೆಟ್ಟು ಒತ್ತಿಸಿಕೊಂಡ ಸಂಬಂಧಿಕರು | ವೀಕ್ಷಿಸಿ

ನವದೆಹಲಿ: ಮೃತ ಮಹಿಳೆಯ ಹೆಬ್ಬೆರಳಿನ ಗುರುತನ್ನು ಆಕೆಯ ಸಂಬಂಧಿಕರು ತೆಗೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿರುವುದು ತಡವಾಗಿ ವರದಿಯಾಗಿದೆ. ಈ ಆಘಾತಕಾರಿ ಕೃತ್ಯದ ವಿಡಿಯೋ ವೈರಲ್ ಆಗಿದೆ. ಈ ಘಟನೆಯ ವೀಡಿಯೊ 2021ರದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಮೊಮ್ಮಗ ಜಿತೇಂದ್ರ ಶರ್ಮಾ ಅವರು ಪೊಲೀಸರಿಗೆ ದೂರು ನೀಡಿದ್ದು, ಅಪರಾಧ ಎಸಗುತ್ತಿರುವವರ ವಿರುದ್ಧ ಕ್ರಮ … Continued

ಗಾಯಗೊಂಡಿದ್ದ ತನ್ನನ್ನು ರಕ್ಷಿಸಿದ ವ್ಯಕ್ತಿಯನ್ನು ಕಂಡಾಕ್ಷಣವೇ ಮೃಗಾಲಯದಲ್ಲಿಯೇ ಕುಣಿದು ಕುಪ್ಪಳಿಸಿದ ಕ್ರೇನ್‌ ಪಕ್ಷಿ: ಹೃದಯಸ್ಪರ್ಷಿ ವೀಡಿಯೊ ನೋಡಿ

ಉತ್ತರ ಪ್ರದೇಶದ ವ್ಯಕ್ತಿ ಮತ್ತು ಸರಸ್ ಕ್ರೇನ್ ಹಕ್ಕಿಯ ನಡುವಿನ ಅನನ್ಯ ಸ್ನೇಹವು ಕೆಲವು ವಾರಗಳ ಹಿಂದೆ ಭಾರೀ ಸುದ್ದಿ ಮಾಡಿತ್ತು. ಅಮೇಥಿಯ ವ್ಯಕ್ತಿ ಮೊಹಮ್ಮದ್ ಆರಿಫ್ ಅವರು ಹೊಲದಲ್ಲಿ ಗಾಯಗೊಂಡು ಬಿದ್ದಿದ್ದ ಅಳಿವಿನಂಚಿನಲ್ಲಿರುವ ಪಕ್ಷಿಯನ್ನು ರಕ್ಷಿಸಿದ್ದರು ಹಾಗೂ ಕೆಲವು ತಿಂಗಳುಗಳ ಕಾಲ ಅದನ್ನು ಆರೈಕೆ ಮಾಡಿದ್ದರು. ನಂತರ ಅದನ್ನು ಸಾಕಿದ್ದರು. ಕ್ರೇನ್ ಶೀಘ್ರದಲ್ಲೇ ಆರಿಫ್ … Continued

ಅಪರೂಪದ ಬೇಟೆ..: ಮರದಿಂದ ಮರಕ್ಕೆ ಜಿಗಿಯುತ್ತಲೇ ಮಂಗನ ಬೇಟೆಯಾಡಿದ ಚಿರತೆ | ವೀಕ್ಷಿಸಿ

ಚಿರತೆಗಳು ಬೇಟೆಯಾಡಲು, ವೇಗವಾಗಿ ಓಡುವ ವಿಶೇಷ ಸಾಮರ್ಥ್ಯ ಹೊಂದಿರುತ್ತವೆ. ಅವುಗಳು ಮರ ಏರುವುದರಲ್ಲಿಯೂ ಚತುರ ಪ್ರಾಣಿಗಳು. ದೈತ್ಯಾಕಾರದ ಮರ ಏರಿ ಬೇಟೆಯಾಡುವುದನ್ನು ನಾವು ನೋಡಿರುತ್ತೇವೆ. ಸಾಮಾನ್ಯವಾಗಿ ಮಂಗಗಳು, ಸಿಂಗಳೀಕಗಳು ಮರದಿಂದ ಮರಕ್ಕೆ ಜಿಗಿಯುವುದರಲ್ಲಿ ನಿಪುಣ ಪ್ರಾಣಿಗಳು ಹಾಗೂ ಹೆಚ್ಚಾಗಿ ಮರದಲ್ಲಿಯೇ ವಾಸಿಸುತ್ತವೆ. ಆದರೆ ಚಿರತೆ ಮರದಿಂದ, ಮರಕ್ಕೆ ಮಂಗನಂತೆ ಜಿಗಿದು ಬೇಟೆಯಾಡುವುದನ್ನು ನೋಡಿದ್ದೀರಾ..? ಈ ವೀಡಿಯೊ … Continued

ವೀಡಿಯೊ : ಮದುವೆ ಸಮಾರಂಭದಲ್ಲಿ ಗಾಳಿಯಲ್ಲಿ 150 ಗುಂಡು ಹಾರಿಸಿದ ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್ ಪುತ್ರ, ಸಹೋದರ

ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ವೈರಲ್ ಆಗಿದ್ದು, ಜೈಲಿನಲ್ಲಿರುವ ಗ್ಯಾಂಗ್‌ ಸ್ಟರ್‌-ರಾಜಕಾರಣಿ ಅತಿಕ್ ಅಹ್ಮದ್ ಕುಟುಂಬ ಸದಸ್ಯರು, ಹಾಗೂ ಕೆಲವು ಜನರು ಮದುವೆ ಸಮಾರಂಭದಲ್ಲಿ ಗಾಳಿಯಲ್ಲಿ 150 ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸುತ್ತಿರುವುದು ಕಂಡುಬಂದಿದೆ. ದಿನಾಂಕ ನಿಗದಿ ಮಾಡದ ಎರಡೂವರೆ ನಿಮಿಷದ ವೀಡಿಯೊದಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿದ್ದ ಸಮಾರಂಭದಲ್ಲಿ ಕೆಲವರು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದನ್ನು … Continued

ಮೊಬೈಲ್‌ ಸ್ಕ್ರೋಲ್‌ ಮಾಡಿ ವೀಡಿಯೊ ನೋಡಿ ಆನಂದಿಸುವ ಮಂಗ | ವೀಕ್ಷಿಸಿ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಮಂಗವೊಂದು ಮೊಬೈಲ್ ಫೋನ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕಿರು ಕ್ಲಿಪ್ ಅನ್ನು ಆರಂಭದಲ್ಲಿ CanvasM ಸಿಇಒ ಜಗದೀಶ್ ಮಿತ್ರ ಅವರು ಹಂಚಿಕೊಂಡಿದ್ದಾರೆ. ಇದು ಸಾಕಿದ ಮಂಗವನ್ನು ತೋರಿಸುತ್ತದೆ. ಬಟ್ಟೆಗಳನ್ನು ಧರಿಸಿದ ಮಂಗವೊಂದು, ಹಾಸಿಗೆಯ ಮೇಲೆ ಮಹಿಳೆಯೊಂದಿಗೆ ಕುಳಿತು ಫೋನ್‌ನಲ್ಲಿ ವೀಡಿಯೊಗಳನ್ನು ಸ್ಕ್ರೋಲ್ ಮಾಡುತ್ತಿರುವುದು ಕಂಡುಬಂದಿದೆ “ಇಸ್ಸ್ ಬೆಚಾರೆ ಕೊ … Continued

ಪೆಸಿಫಿಕ್ ಮಹಾಸಾಗರದ 8.33 ಕಿಮೀ ಆಳದಲ್ಲಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ಅತ್ಯಂತ ಆಳ ಪ್ರದೇಶದ ಅಪರೂಪದ ಮೀನು | ವೀಕ್ಷಿಸಿ

ವೆಸ್ಟರ್ನ್ ಆಸ್ಟ್ರೇಲಿಯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಹಿಂದೆ ಯಾರೂ ನೋಡದ ಅತ್ಯಂತ ಆಳದಲ್ಲಿ ಈಜುತ್ತಿರುವ ಮೀನುಗಳನ್ನು ಚಿತ್ರೀಕರಿಸಿದ್ದಾರೆ. ಬಸವನ ಮೀನು (snailfish) ಜಪಾನ್‌ನ ಉತ್ತರ ಪೆಸಿಫಿಕ್ ಮಹಾಸಾಗರದಲ್ಲಿ ಸುಮಾರು ಎಂಟು ಕಿಲೋಮೀಟರ್ ನೀರಿನ ಅಡಿಯಲ್ಲಿ ಕಂಡುಬಂದಿದೆ, ಇದು ವಿಶ್ವದ ಆಳವಾದ ಮೀನುಗಳನ್ನು ಚಿತ್ರೀಕರಿಸುವಲ್ಲಿ ಹೊಸ ದಾಖಲೆಯನ್ನು ಮಾಡಿದೆ. ಪೆಸಿಫಿಕ್‌ ಮಹಾಸಾಗರದಲ್ಲಿನ ಜಪಾನ್‌ನ ಸುತ್ತಲಿನ ಆಳವಾದ ಸಮುದ್ರ … Continued

ವೀಡಿಯೊ: ಕಾಂಗ್ರೆಸ್‌ ಪ್ರತಿಭಟನೆ ವೇಳೆ ವೇದಿಕೆ ಕುಸಿತ: ಇಬ್ಬರು ಮುಖಂಡರಿಗೆ ಗಾಯ | ದೃಶ್ಯ ಕ್ಯಾಮರಾದಲ್ಲಿ ಸೆರೆ

ಬಿಲಾಸಪುರ : ಛತ್ತೀಸ್‌ಗಢದ ಬಿಲಾಸಪುರದಲ್ಲಿ ಪಂಜಿನ ಪ್ರತಿಭಟನೆ ವೇಳೆ ವೇದಿಕೆ ಮುರಿದು ಬಿದ್ದು ವೇದಿಕೆ ಮೇಲಿದ್ದ ಹಲವರು ಕೆಳಗೆ ಬಿದ್ದಿದ್ದಾರೆ. ಲೋಕಸಭೆಯಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ನಗರದಲ್ಲಿ ಪಂಜಿನ ರ್ಯಾಲಿಯನ್ನು ಆಯೋಜಿಸಿದ್ದರು, ಆದರೆ ಈ ವೇಳೆ ವೇದಿಕೆ ಮೇಲೆ ಜನದಟ್ಟಣೆಯಿಂದಾಗಿ ವೇದಿಕೆ ಕುಸಿದುಬಿದ್ದಿದೆ. ಕಾಂಗ್ರೆಸ್ ಪಕ್ಷದ … Continued

ಹಣ್ಣಿನ ಮಾರ್ಕೆಟಲ್ಲಿ ಮಾರಾಟಗಾರರ ನಡುವೆ ಮಾರಾಮಾರಿ: ಟ್ರೇ-ದೊಣ್ಣೆಗಳಿಂದ ಬಡಿದಾಟ | ಮಾರಾಮಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ

2021ರಲ್ಲಿ, ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಇಬ್ಬರು ಚಾಟ್ ಮಾರಾಟಗಾರರ ನಡುವಿನ ಜಗಳದ ವೀಡಿಯೊವು ವೈರಲ್ ಆಗಿತ್ತು, ಈಗ, ಶಿಮ್ಲಾದಲ್ಲಿ ಹಣ್ಣಿನ ಮಾರಾಟಗಾರರ ಗುಂಪುಗಳ ನಡುವಿನ ಕಾದಾಟದ ಇದೇ ರೀತಿಯ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವಾದ-ವಿವಾದ ನಡೆದ ನಂತರ ಹಿಂಸಾತ್ಮಕ ಹೊಡೆದಾಟ ನಡೆಯಿತು. ವೀಡಿಯೊದಲ್ಲಿ ಖಾಲಿ ತರಕಾರಿ ಟ್ರೇಗಳು ಮತ್ತು ದೊಣ್ಣೆಗಳಿಂದ ವ್ಯಾಪಾರಿಗಳು … Continued