ಮುಂಬೈ ಸೆಲೆಬ್ರಿಟಿಗಳ ಟ್ವೀಟ್‌ಗಳ ತನಿಖೆ ನಿರ್ಧಾರವೂ…ಮಹಾರಾಷ್ಟ್ರದ ಸರ್ಕಾರದ ತುಘಲಕ್‌ ದರ್ಬಾರವೂ..

ಮೂರು ಪಕ್ಷಗಳು ಸೇರಿ ರಚನೆಯಾಗಿರುವ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರವು ಮೂರು ಕುದುರೆಗಳ ಮೇಲೆ ನಡೆಯುತ್ತಿದೆ. ಆದರೆ ಪ್ರತಿ ಕುದುರೆಯೂ ಒಂದೊಂದು ದಿಕ್ಕಿನತ್ತ ಸಾಗಿದರೆ ಸರ್ಕಾರದ ನಿಲುವುಗಳು ಹಾಗೂ ನಿರ್ಧಾರಗಳು ಸಹ ಅಸಂಭದ್ಧವಾಗಿಯೇ ಇರುತ್ತದೆ ಎಂಬುದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ಉದ್ಧವ ಠಾಕ್ರೆ ಸರ್ಕಾರ ಎರಡು ದಿನಗಳ ಹಿಂದೆ ಮುಂಬೈ ಸೆಲೆಬ್ರಿಟಿಗಳು ಕೇಂದ್ರ ಸರ್ಕಾರ ಬೆಂಬಲಿಸಿ … Continued

ಮುಂದಿನ ವರ್ಷ ಟಿಸಿಎಸ್‌ನಿಂದ ಬ್ರಿಟನ್‌ನಲ್ಲಿ ೧೫೦೦ ಟೆಕ್ಕಿಗಳ ನೇಮಕ

ಭಾರತೀಯ ಮೂಲದ ಜಾಗತಿಕ ಐಟಿ ಸಂಸ್ಥೆ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮುಂದಿನ ವರ್ಷದಲ್ಲಿ ಬ್ರಿಟನ್ಯಾದ್ಯಂತ 1,500 ತಂತ್ರಜ್ಞಾನ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಬ್ರಿಟನ್‌ ವ್ಯಾಪಾರ ಕಾರ್ಯದರ್ಶಿ ಲಿಜ್ ಟ್ರಸ್ ಮತ್ತು ಟಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಗೋಪಿನಾಥನ್ ಅವರೊಂದಿಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಚರ್ಚೆಯ ಸಮಯದಲ್ಲಿ ಬ್ರಿಟನ್ನಿನ ಆರ್ಥಿಕತೆ, ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರ … Continued

500ಕ್ಕೂ ಹೆಚ್ಚು ಖಾತೆ ತಡೆಹಿಡಿದ ಟ್ವಟ್ಟರ್‌

ನವ ದೆಹಲಿ: ಸರ್ಕಾರ ನೀಡಿದ ನೋಟಿಸ್‌ನಲ್ಲಿ ಗುರುತಿಸಲಾದ ಕೆಲವು ಖಾತೆಗಳನ್ನು ತಡೆಹಿಡಿಯಲಾಗಿದೆ ಎಂದು ಟ್ವಿಟ್ಟರ್‌ ಬುಧವಾರ ತಿಳಿಸಿದೆ. ಆದಾಗ್ಯೂ, ಸುದ್ದಿ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳ ಖಾತೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ; ತಡೆಹಿಡಿಯಲಾದ ಖಾತೆಗಳು ಭಾರತದ ಹೊರಗೆ ಲಭ್ಯವಿದೆ. ಟ್ವಿಟರ್ ನಿಯಮಗಳ ಸ್ಪಷ್ಟ ಉಲ್ಲಂಘನೆಗಾಗಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಆದೇಶಗಳಂತೆ … Continued

ಟ್ವಿಟ್ಟರ್‌ ಬದಲಾಗಿ ದೇಶೀಯ ಕೂ ಬಳಸಲಾರಂಭಿಸಿದ ಸಚಿವರು, ಅಧಿಕಾರಿಗಳು

ನವ ದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದ ವಿಷಯ ಮತ್ತು ಖಾತೆಗಳನ್ನು ನಿರ್ಬಂಧಿಸುವುದರ ಕುರಿತು ಸರ್ಕಾರ ಮತ್ತು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಕೇಂದ್ರ ಸಚಿವರು ಮತ್ತು ಸರ್ಕಾರಿ ಇಲಾಖೆಗಳು ಟ್ವಿಟರ್‌ಗೆ ಮೇಡ್-ಇನ್-ಇಂಡಿಯಾ ಪರ್ಯಾಯವಾದ ಕೂನಲ್ಲಿ ಖಾತೆಗಳನ್ನು ತೆರೆಯಲು ಆರಂಭಿಸಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಂಗಳವಾರ ಟ್ವಿಟ್ಟರ್ ನಲ್ಲಿ, “ನಾನು ಈಗ … Continued

ಮಂಗಳನ ಕಕ್ಷೆ ಸುತ್ತಲಾರಂಭಿಸಿದ ಯುಎಇ ಬಾಹ್ಯಾಕಾಶ ನೌಕೆ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ ಬಾಹ್ಯಾಕಾಶ ನೌಕೆ ಮಂಗಳವಾರ ಮಂಗಳ ಗ್ರಹದ ಸುತ್ತ ಕಕ್ಷೆಗೆ ತಿರುಗಿತು. ದುಬೈನ ಯುಎಇಯ ಬಾಹ್ಯಾಕಾಶ ಕೇಂದ್ರದಲ್ಲಿನ ಏಲ್ಲರೂ ಚಪ್ಪಾಳೆ ತಟ್ಟಿದರು, ಫಾರ್ ಹೋಪ್ ಎಂದು ಅರೆಬಿಕ್‌ ಶಬ್ದದಲ್ಲಿ ಕರೆಯಲ್ಪಡುವ ಅಮಲ್, ತನ್ನ ಏಳು ತಿಂಗಳ, 300 ಮಿಲಿಯನ್ ಮೈಲಿ ಪ್ರಯಾಣದ ಅಂತ್ಯ ತಲುಪಿದೆ ಮತ್ತು ಕೆಂಪು ಗ್ರಹಸುತ್ತಲು ಆರಮಭಿಸಿದೆ. ಅಲ್ಲಿ … Continued

ನಾವು ಸತ್ಯ ಹೇಳುವುದು ಯಾರಿಂದಲೂ ತಡೆಯಲು ಸಾಧ್ಯವಿಲ್ಲ

ಕಲಬುರಗಿ: ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯ ಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಅವರ ಪುತ್ರ ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಅವರು ವಿಛಿದ್ರಕಾರಕ ಶಕ್ತಿಗಳಿಗೆ ಟ್ವಿಟ್ ಮೂಲಕ ದಿಟ್ಟತನದ ಉತ್ತರ ನೀಡಿದ್ದಾರೆ. ನಾವು ಸತ್ಯ ಹೇಳುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಾವು ಬುದ್ದ … Continued

೪೦ ಲಕ್ಷ ಟ್ರ್ಯಾಕ್ಟರ್‌ಗಳೊಂದಿಗೆ ಮತಪ್ರದರ್ಶನ:ಟಿಕಾಯಿತ್

ರಾಷ್ಟ್ರದ ರಾಜಧಾನಿಯ ಗಡಿಯಲ್ಲಿ ಕೇಂದ್ರದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರಿಯುತ್ತದೆ ಮತ್ತು ಉಳಿದ ಭಾಗಗಳಿಗೆ ಹರಡಲಿದೆ. ರೈತರು ಈಗ ಇನ್ನೂ ದೊಡ್ಡದಾದ ಟ್ರಾಕ್ಟರ್ ರ್ಯಾಲಿಯನ್ನು ಕೈಗೊಳ್ಳಲಿದ್ದಾರೆ ಎಂದು ರಾಕೇಶ ಟಿಕಾಯಿತ್‌ ಹೇಳಿದರು. ಹರಿಯಾಣದ ಪೆಹೋವಾದಲ್ಲಿ ‘ಕಿಸಾನ್ ಮಹಾಪಂಚಾಯತ್’ ಉದ್ದೇಶಿಸಿ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಅವರು, ಈಗ, … Continued

ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕ ಯುದ್ಧ ನೌಕೆಗಳ ಮಿಲಿಟರಿ ಕವಾಯತು

ಈ ತಿಂಗಳ ಆರಂಭದಲ್ಲಿ ಪರ್ಷಿಯನ್ ಕೊಲ್ಲಿಯಿಂದ ಹೊರತೆಗೆಯಲಾದ ಅಮೆರಿಕದ ನಿಮಿಟ್ಜ್ ಸೇರಿದಂತೆ ಎರಡು ಅಮರಿಕನ್ ವಿಮಾನ ವಾಹಕ ನೌಕೆಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಮಿಲಿಟರಿ ಕವಾಯತು ನಡೆಸಿದ್ದು ಕ್ಸಿ ಜಿನ್‌ಪಿಂಗ್ ಅವರ ಚೀನಾಕ್ಕೆ ಸ್ಪಷ್ಟ ಸಂಕೇತವಾಗಿ ನೀಡಿದೆ ಹಾಗೂ ಅಧ್ಯಕ್ಷ ಜೋ ಬಿಡನ್ ಬೀಜಿಂಗ್‌ಗೆ ಟ್ರಂಪ್ ಆಡಳಿತದ ನೀತಿ ಮುಂದುವರಿಸುವುದಾಗಿ ಹೇಳಿದಂತಾಗಿದೆ. ಎರಡು ಸ್ಟ್ರೈಕ್ ಗುಂಪುಗಳಾದ … Continued

ಗೋ ಹತ್ಯಾ ನಿಷೇಧ ಕಾನೂನು ಅಂಗೀಕಾರ ವಿರೋಧಿಸಿ ಮುಂದುವರಿದ ಕಾಂಗ್ರೆಸ್‌ ಗದ್ದಲ

ಬೆಂಗಳೂರು: ವಿಧಾನಪರಿಷತ್‍ನಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ (ಗೋಹತ್ಯೆ ನಿಷೇಧ ಕಾನೂನು) ಅಂಗೀಕಾರದ ವೇಳೆ ಕಾನೂನಿನ ತೊಡಕಾಗಿದೆ ಎಂಬ ಕಾರಣ ಮುಂದಿಟ್ಟು ವಿಧಾನಪರಿಷತ್‍ನಲ್ಲಿ ಮಂಗಳವಾರ ಕೂಡ ಕಾಂಗ್ರೆಸ್ ಸದಸ್ಯರುಧರಣಿ ನಡೆಸಿದರು. . ಕಾಂಗ್ರೆಸ್ ಸದಸ್ಯರ ಧರಣಿ, ಗದ್ದಲದ ನಡುವೆ ಸಭಾಪತಿಯವರ ಆಯ್ಕೆಗೆ ಚುನಾವಣೆ ನಡೆದು ಬಸವರಾಜ ಹೊರಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು … Continued

ಹಿಮನದಿ ದುರಂತ: ೩೧ ಜನರ ಮೃತದೇಹ ಪತ್ತೆ, ೧೭೫ ಜನರು ಇನ್ನೂ ನಾಪತ್ತೆ

ಉತ್ತರಾಖಂಡ: ಉತ್ತರಾಖಂಡದ ಹಿಮನದಿಯ ದುರಂತದಿಂದ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿದೆ. ವಿದ್ಯುತ್ ಯೋಜನಾ ಸ್ಥಳದಲ್ಲಿ ಸುರಂಗದೊಳಗೆ ಸಿಕ್ಕಿಬಿದ್ದ ಸುಮಾರು 30 ಕಾರ್ಮಿಕರನ್ನು ತಲುಪಲು ಅನೇಕ ಏಜೆನ್ಸಿಗಳು ಸಮಯಕ್ಕೆ ವಿರುದ್ಧವಾಗಿ ಸ್ಪರ್ಧಿಸುತ್ತಿದ್ದು, 175 ಜನರು ಕಾಣೆಯಾಗಿದ್ದಾರೆ. ರೈನಿ ಗ್ರಾಮದಲ್ಲಿನ ಅವಶೇಷಗಳಿಂದ ಎರಡು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಅಧಿಕಾರಿಗಳು ತಿಳಿಸಿದ್ದು, ಎರಡು … Continued