ಪುದುಚೆರಿಯಲ್ಲಿ ಅಲ್ಪ ಮತಕ್ಕೆ ಕುಸಿದ ಕಾಂಗ್ರೆಸ್‌ ಸರಕಾರ

ನವದೆಹಲಿ: ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗ ಇಬ್ಬರು ಕಾಂಗ್ರೆಸ್‌ ಶಾಸಕರು ರಾಜಿನಾಮೆ ನೀಡಿರುವುದರಿಂದ ಪುದುಚೆರಿಯಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರ ಅಲ್ಪಮತಕ್ಕೆ ಕುಸಿದಿದೆ. ಇಬ್ಬರು ಶಾಸಕರ ರಾಜಿನಾಮೆಯೊಂದಿಗೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ಸಂಖ್ಯೆ ಸಮಬಲವಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪುದುಚೇರಿ ಭೇಟಿಗೂ ಮುನ್ನ ಇಬ್ಬರು ಶಾಸಕರು ರಾಜೀನಾಮೆ ನಿಡಿರುವುದರಿಂದ ಕಾಂಗ್ರೆಸ್‌ಗೆ ಭಾರೀ ಆಘಾತವಾಗಿದೆ. … Continued

ಹಿಂದಿನ ಸರಕಾರಗಳು ಯೋಧರನ್ನು, ನಾಯಕರನ್ನು ಕಡೆಗಣಿಸಿದ್ದವು: ಪ್ರಧಾನಿ ಮೋದಿ

ಹಿಂದಿನ ಸರಕಾರಗಳು ಮಾಡಿದ ತಪ್ಪನ್ನು ಸರಿಪಡಿಸಲು ಮುಂದಾಗಿರುವ ನಮ್ಮ ಸರಕಾರ ಅರ್ಹ ಯೋಧರು ಹಾಗೂ ನಾಯಕರಿಗೆ ಗೌರವ ನೀಡುವ ಕಾರ್ಯ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಉತ್ತರ ಪ್ರದೇಶದ ಬಹ್ರೇಚ್‌ನಲ್ಲಿ ವೀರ ಯೋಧ ಸೋಹೆಲ್ದೇವ್‌ ಅವರ ಮೂರ್ತಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಹಿಂದಿನ ಸರಕಾರಗಳು ಅರ್ಹ ನಾಯಕರಾದ ನೇತಾಜಿ … Continued

ಉತ್ತರಾಖಂಡ ಪ್ರವಾಹ: ಮೃತರ ಸಂಖ್ಯೆ ೫೮ಕ್ಕೆ ಏರಿಕೆ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಬಂಡೆ ಕುಸಿದ ಪರಿಣಾಮದಿಂದ ಉಂಟಾದ ಪ್ರವಾಹ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ೫೮ಕ್ಕೇರಿದೆ. ೧೦ನೇ ದಿನ ಮಂಗಳವಾರ ಕೂಡ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ೨ ಶವಗಳನ್ನು ಹೊರತೆಗೆಯಲಾಯಿತು. ಇನ್ನೂ ೧೪೬ ಜನರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಮೋಲಿ ಜಿಲ್ಲೆಯ ಸುರಂಗದಲ್ಲಿ ೩೦ ಜನ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರತಿಭಟನಾ ನಿರತ ರೈತರಿಗೆ ಹಣ, ಮದ್ಯ ನೀಡಿ : ಕಾಂಗ್ರೆಸ್ ನಾಯಕಿ ಹೇಳಿಕೆಯಿಂದ ಭಾರೀ ವಿವಾದ

ಹರಿಯಾಣ : ಹರಿಯಾಣ ಕಾಂಗ್ರೆಸ್ ನಾಯಕಿ ವಿದ್ಯಾದೇವಿ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್‌ಗೆ ಮುಜಗರಕ್ಕೀಡು ಮಾಡಿದೆ. ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ತೀವ್ರಗೊಳಿಸಲು ಹಣ ಮತ್ತು ಮದ್ಯವನ್ನು ದೇಣಿಗೆಯಾಗಿ ನೀಡುವಂತೆ ಪಕ್ಷದ ಕಾರ್ಯಕರ್ತರಿಗೆ ಹೇಳಿದ ವಿಡಿಯೋ ವೈರಲ್ ಆಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಜಿಂಡ್ ನಲ್ಲಿ ಭಾನುವಾರ ನಡೆದ … Continued

ಅರ್ಬನ್‌ ಕೋಆಪರೇಟಿವ್‌ ಬ್ಯಾಂಕುಗಳಿಗೆ ಆರ್‌ಬಿಐ ಮತ್ತೊಂದು ಅಸ್ತ್ರ

ನವದೆಹಲಿ: ಅರ್ಬನ್ ಕೋ ಆಪರೇಟಿವ್ ಬ್ಯಾಂಕು​ಗಳ ಪ್ರಸ್ತುತ ಸ್ಥಿತಿಗತಿ ಹಾಗೂ ಆಗಬೇಕಾದ ಬದಲಾವಣೆಯ ಕುರಿತಂತೆ ಅಧ್ಯಯನ ನಡೆಸಲು ರಿಸರ್ವ್ ಬ್ಯಾಂಕ್ (ಆರ್​ಬಿಐ) ತಜ್ಞರ ಸಮಿತಿಯೊಂದನ್ನು ಸೋಮವಾರ ರಚಿಸಿದೆ. ಈ ಸಮಿತಿಗೆ ರಿಸರ್ವ್ ಬ್ಯಾಂಕ್​ನ ಉಪ ಗವರ್ನರ್ ಎನ್.​ ಎಸ್.​ ವಿಶ್ವನಾಥನ್ ಅಧ್ಯಕ್ಷರಾಗಿರಲಿದ್ದು, ಇದು ಅರ್ಬನ್ ಬ್ಯಾಂಕುಗಳ ಸ್ಥಿತಿಗತಿಯಷ್ಟೇ ಅಲ್ಲದೇ ಅವುಗಳ ಮುಂದಿನ ಹಾದಿಯ ಬಗ್ಗೆಯೂ ಅಧ್ಯಯನ … Continued

ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ನಿಕಿತಾ ಜೇಕಬ್‌

ಟೂಲ್‌ಕಿಟ್‌ ರಚನೆ ಕುರಿತು ನಿಕಿತಾ ಜೇಕಬ್‌ ಹಾಗೂ ಶಾಂತನು ವಿರುದ್ದ ಜಾಮೀನು ರಹಿತ ವಾರಂಟ್‌ ಹೊರಡಿಸಿದ ಹಿನ್ನೆಲೆಯಲ್ಲಿ ವಕೀಲರಾದ ನಿಕಿತಾ ನಾಲ್ಕು ವಾರಗಳ ನಿರೀಕ್ಷಣಾ ಜಾಮೀನು ಜಾಮೀನು ಕೋರಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದಿಶಾ ರವಿ ಬಂಧನಕ್ಕೊಳಗಾದ ೧ ದಿನದ ನಂತರ ದೆಹಲಿ ಪೊಲೀಸರು ರೈತರ ಪ್ರತಿಭಟನೆ ಕುರಿತ ಟೂಲ್‌ಕಿಟ್‌ ರಚನೆ ಆರೋಪ … Continued

೫ರೂ ದಲ್ಲಿ ಭೋಜನ ನೀಡುವ “ಮಾʼ ಯೋಜನೆಗೆ ಚಾಲನೆ ನೀಡಿದ ದೀದಿ

ಪಶ್ಚಿಮ ಬಂಗಾಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಡಜನರಿಗೆ ೫ ರೂ.ದಲ್ಲಿ ಭೋಜನ ನೀಡುವ “ಮಾʼ ಯೋಜನೆಗೆ ಚಾಲನೆ ನೀಡಿದರು. ರಾಜ್ಯ ಸರಕಾರ ಬಡಜನರಿಗೆ ಕೇವಲ ೫ ರೂ.ಗಳಲ್ಲಿ ಭೋಜನ ನೀಡಲಿದೆ. ಭೋಜನವು ಒಂದು ಬಟ್ಟಲು ಅನ್ನ, ದಾಲ್‌, ತರಕಾರಿ, ಮೊಟ್ಟೆಯ ಕರಿ ಒಳಗೊಂಡಿರಲಿದೆ. ಪ್ರತಿ ಪ್ಲೇಟ್‌ ಊಟಕ್ಕೆ ರಾಜ್ಯ ಸರಕಾರ … Continued

ಮಾತುಕತೆಗೆ ಕೇಂದ್ರ ಸರಕಾರ ವಿಳಂಬ: ಸಂಯುಕ್ತ ಕಿಸಾನ್‌ ಮೋರ್ಚಾ ಆರೋಪ

ರೈತರೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಮಾತುಕತೆಗೆ ದಿನಾಂಕ ನಿಗದಿ ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಆರೋಪ ಮಾಡಿದೆ. ಹೋರಾಟ ನಿರತ ರೈತರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡುವ ಪ್ರಧಾನಿ ಮೋದಿ, ರೈತರನ್ನು ಮಾತುಕತೆಗೆ ಆಹ್ವಾನಿಸಲು ಹಿಂದೇಟು ಹಾಕುತ್ತಿದ್ದಾರೆ. ಕೇಂದ್ರ … Continued

ಟೂಲ್‌ಕಿಟ್‌ ಆರೋಪಿಗಳಿಗೆ ಭಾರತದ ಘನತೆ ಹಾಳು ಮಾಡುವ ಉದ್ದೇಶವಿತ್ತು: ದೆಹಲಿ ಪೊಲೀಸ್‌

ದೆಹಲಿ: ಟೂಲ್‌ಕಿಟ್‌ ರಚನೆ ಮಾಡಿದ ದಿಶಾ ರವಿ, ನಿಕಿತಾ ಜೇಕಬ್‌ ಹಾಗೂ ಶಾಂತನು ಅವರಿಗೆ ಭಾರತದ ಘನತೆಗೆ ಚ್ಯುತಿ ತರುವ ಉದ್ದೇಶವಿತ್ತು ಎಂದು ದೆಹಲಿ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಟೂಲ್‌ಕಿಟ್‌ ಪ್ರಕರಣದಲ್ಲಿ ದಿಶಾ, ನಿಕಿತಾ ಹಾಗೂ ಶಾಂತನು ಪಾಲ್ಗೊಳ್ಳುವಿಕೆ ದೃಢಪಟ್ಟಿದೆ. ಭಾರತದ ಚಿತ್ರಣವನ್ನು ಕಳಂಕಿತಗೊಳಿಸುವುದು ಅವರ ಉದ್ದೇಶವಾಗಿತ್ತು. ಟೂಲ್‌ಕಿಟ್‌ ಹರಡಲು ದಿಶಾ ಅವರು ರಚಿಸಿದ ವ್ಯಾಟ್ಸಪ್‌ … Continued

ಟೂಲ್‌ಕಿಟ್‌ ಹಂಚಿಕೆ ಆರೋಪ ಇಬ್ಬರ ವಿರುದ್ಧ ವಾರಂಟ್‌

ಟೂಲ್‌ಕಿಟ್‌ ಹಂಚಿಕೆ ಕುರಿತು ದಿಶಾ ರವಿ ಬಂಧನದ ಮರುದಿನ ದೆಹಲಿ ಪೊಲೀಸರು ಇಬ್ಬರ ವಿರುದ್ಧ ಜಾಮೀನುರಹಿತ ವಾರಂಟ್‌ ಹೊರಡಿಸಿದ್ದಾರೆ. ನಿಕಿತಾ ಜೇಕಬ್‌ ಹಾಗೂ ಶಾಂತನು ವಿರುದ್ಧ ವಾರಂಟ್‌ ಹೊರಡಿಸಲಾಗಿದೆ. ಶೀಘ್ರದಲ್ಲೇ ಇಬ್ಬರನ್ನೂ ಬಂಧಿಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇಬ್ಬರೂ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಪಾಲ್ಗೊಂಡಿದ್ದಾರೆ. ಖಲಿಸ್ತಾನ ಪರ ವ್ಯಕ್ತಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. … Continued