ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಬಿಡುಗಡೆ: ಇಂದು ಎನ್‌ಎಚ್‌ಆರ್‌ಸಿ ಚರ್ಚೆ ಸಾಧ್ಯತೆ

ನವದೆಹಲಿ: 2002ರ ಗುಜರಾತ್ ಗಲಭೆ ಸಮಯದಲ್ಲಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 11 ಅಪರಾಧಿಗಳು ಗೋಧ್ರಾ ಉಪ-ಜೈಲಿನಿಂದ ಬಿಡುಗಡೆಯಾದ ಒಂದು ವಾರದ ನಂತರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸೋಮವಾರ ಈ ವಿಷಯವನ್ನು “ಚರ್ಚೆಗೆ” ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಸಂಪರ್ಕಿಸಿದಾಗ, ಎನ್‌ಎಚ್‌ಆರ್‌ಸಿ ಅಧ್ಯಕ್ಷ ನ್ಯಾಯಮೂರ್ತಿ … Continued

ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ

ನವದೆಹಲಿ: ಪ್ರತಿ ಯುಪಿಐ ಪಾವತಿಗೆ ಹೆಚ್ಚುವರಿ ಶುಲ್ಕ ವಿಧಿಸುವ ವರದಿಗಳ ಕುರಿತು ಕೇಂದ್ರ ಹಣಕಾಸು ಸಚಿವಾಲಯವು, ಅಂತಹ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ ಎಂದು ಭಾನುವಾರ ಸ್ಪಷ್ಟಪಡಿಸಿದೆ. “ಯುಪಿಐ ಸಾರ್ವಜನಿಕರಿಗೆ ಅಪಾರ ಅನುಕೂಲತೆ ಮತ್ತು ಆರ್ಥಿಕತೆಗೆ ಉತ್ಪಾದಕತೆಯ ಲಾಭಗಳೊಂದಿಗೆ ಡಿಜಿಟಲ್ ಸಾರ್ವಜನಿಕ ಉತ್ಪನ್ನವಾಗಿದೆ. ಯುಪಿಐ ಸೇವೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲು ಸರ್ಕಾರದಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ. ವೆಚ್ಚ … Continued

ಬಿಹಾರ ಸಿಎಂ ನಿತೀಶ್ ಕುಮಾರ್ ಬೆಂಗಾವಲು ವಾಹನಗಳ ಮೇಲೆ ದಾಳಿ : ಹಲವು ವಾಹನಗಳು ಜಖಂ | ವೀಕ್ಷಿಸಿ

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ್ ಅವರ ಬೆಂಗಾವಲು ವಾಹನದ ಮೇಲೆ ಭಾನುವಾರ ಪಟ್ನಾದಲ್ಲಿ ಕಲ್ಲು ತೂರಾಟ ನಡೆಸಲಾಗಿದ್ದು, ಕಲ್ಲು ತೂರಾಟದ ಸಮಯದಲ್ಲಿ ಅವರು ಯಾವುದೇ ವಾಹನದಲ್ಲಿ ಇರಲಿಲ್ಲ ಎಂದು ವರದಿಯಾಗಿದೆ. ಕಲ್ಲು ತೂರಾಟದಲ್ಲಿ ಹಲವು ವಾಹನಗಳ ಗಾಜುಗಳು ಒಡೆದಿವೆ. ನಿತೀಶ ಅವರ ಬೆಂಗಾವಲು ವಾಹನದ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿದ ಘಟನೆ ಪಾಟ್ನಾ ಜಿಲ್ಲೆಯ … Continued

ಮದ್ಯ ನೀತಿ ತನಿಖೆ: ಸಿಸೋಡಿಯಾ ವಿರುದ್ಧ ಲುಕ್‌ಔಟ್ ನೋಟಿಸ್ ಇಲ್ಲ, 8 ಆರೋಪಿಗಳ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ: ಸಿಬಿಐ ಮೂಲಗಳು

ನವದೆಹಲಿ: ದೆಹಲಿ ಅಬಕಾರಿ ನೀತಿಯ ಜಾರಿಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳೆಂದು ಹೆಸರಿಸಲಾದ ಎಂಟು ಖಾಸಗಿ ವ್ಯಕ್ತಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ ಲುಕ್ ಔಟ್ ನೋಟಿಸ್ (ಎಲ್‌ಒಸಿ) ಹೊರಡಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾದವರ ಪೈಕಿ 8 ಜನರ ವಿರುದ್ಧ ಫೆಡರಲ್ ತನಿಖಾ … Continued

ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಿದ ಕಾಂಗ್ರೆಸ್‌

ನವದೆಹಲಿ: ಕಾಂಗ್ರೆಸ್ ಪಕ್ಷವು ಪಕ್ಷದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಭಾನುವಾರ ಆರಂಭಿಸಿದ್ದು, ಸೆಪ್ಟೆಂಬರ್ 20 ರೊಳಗೆ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡುವ ವೇಳಾಪಟ್ಟಿಗೆ ಅಂಟಿಕೊಳ್ಳಲಿದೆ ಎಂದು ಪಕ್ಷದ ಚುನಾವಣಾ ಪ್ರಾಧಿಕಾರ ತಿಳಿಸಿದೆ. ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ (ಸಿಡಬ್ಲ್ಯೂಸಿ) ಕಾಂಗ್ರೆಸ್ ಮುಖ್ಯಸ್ಥರ ಆಯ್ಕೆಯ … Continued

ಅಪರೂಪದಲ್ಲಿ ಅಪರೂಪದ ಘಟನೆ…ತನ್ನ ಮರಿ ರಕ್ಷಿಸಲು ದೊಡ್ಡ ಹಾವಿನ ಜೊತೆಯೇ ಹೋರಾಡಿ ಗೆಲುವು ಸಾಧಿಸಿದ ಇಲಿ | ವೀಕ್ಷಿಸಿ

ಅಪಾಯಕಾರಿ ಹಾವನ್ನೇ ಇಲಿ ಸೋಲಿಸುವುದೆಂದರೆ….! ಅದನ್ನು ನಂಬುವುದೇ ಕಷ್ಟ. ಆದರೆ ನಂಬಲೇಬೇಕಾದ ಘಟನೆಯೊಂದು ವೈರಲ್‌ ಆಗಿದೆ. ತನ್ನ ಮರಿಯನ್ನು ರಕ್ಷಿಸಿಕೊಳ್ಳಲು ದೊಡ್ಡ ಹಾವಿನ ಮೇಲೆ ಇಲಿಯೊಂದು ದಾಳಿ ಮಾಡಿ ಹಾವಿನ ಬಾಯಲ್ಲಿದ್ದ ತನ್ನ ಮರಿಯನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದ ವೀಡಿಯೊವೊಂದು ಸಾಮಾಜಿ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಇಲಿಯೊಂದು ತನ್ನ ಮರಿಯ ಸಲುವಾಗಿ ಹಾವಿನ ಜೊತೆ ಕಾದಾಟ … Continued

ದಂತ ವೈದ್ಯರ ಮೇಲೆ ಹಲ್ಲೆ ಮಾಡಿದ ಮಿಜೋರಾಂ ಸಿಎಂ ಪುತ್ರಿ : ಕ್ಷಮೆ ಯಾಚಿಸಿದ ಸಿಎಂ | ವೀಕ್ಷಿಸಿ

ಮಿಜೋರಾಂ ಮುಖ್ಯಮಂತ್ರಿ ಪುತ್ರಿ ಮಿಲಾರಿ ಚಾಂಗ್ಟೆ ಇತ್ತೀಚೆಗೆ ಕ್ಲಿನಿಕ್‌ ಒಂದರಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ತಮ್ಮ ಮಗಳ “ದುರ್ವರ್ತನೆ” ಕುರಿತು ವ್ಯಾಪಕ ಟೀಕೆಗಳ ನಂತರ ಮಿಜೋರಾಂನ ಮುಖ್ಯಮಂತ್ರಿ ಝೋರಂತಾಂಗ್‌ ಕ್ಷಮೆಯಾಚಿಸಿದ್ದಾರೆ. ಶನಿವಾರ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತಮ್ಮ ಪೋಸ್ಟ್‌ನಲ್ಲಿ ಮುಖ್ಯಮಂತ್ರಿಯವರು ತಮ್ಮ ಮಗಳ ನಡವಳಿಕೆ … Continued

ವಿವಾದದ ನಂತರ ಹೃತಿಕ್ ರೋಷನ್ ಜಾಹೀರಾತಿನ ‘ಮಹಾಕಾಲ ಥಾಲಿ’ ಜಾಹೀರಾತಿಗಾಗಿ ಕ್ಷಮೆಯಾಚಿಸಿದ ಝೊಮಾಟೊ

ನವದೆಹಲಿ: ಮಧ್ಯಪ್ರದೇಶದ ಉಜ್ಜಯನಿಯ ಶಿವನ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಹಾಕಾಲೇಶ್ವರ ದೇವಸ್ಥಾನದ ಅರ್ಚಕರು, ಝೊಮಾಟೊ ಕಂಪನಿಯ ಜಾಹೀರಾತೊಂದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆಕ್ಷೇಪಿಸಿದ ಒಂದು ದಿನದ ನಂತರ, ಅದಕ್ಕಾಗಿ ಕ್ಷಮೆಯಾಚಿಸಿದೆ. ಝೊಮಾಟೊ ಜಾಹೀರಾತಿನಲ್ಲಿ, ಹೃತಿಕ್ ರೋಷನ್ ಅವರು ಉಜ್ಜಯಿನಿಯಲ್ಲಿ ಥಾಲಿ (ಆಹಾರ ತಟ್ಟೆ) ತಿನ್ನಬೇಕೆಂದು ಅನಿಸಿತು, ಆದ್ದರಿಂದ ತಾನು ಅದನ್ನು ‘ಮಹಾಕಾಲ’ದಿಂದ … Continued

ಆಜಾದ್ ಆಘಾತದ ನಂತರ ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌: ಹಿಮಾಚಲ ಕಾಂಗ್ರೆಸ್‌ನ ಸಂಚಾಲಕ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆನಂದ್ ಶರ್ಮಾ ರಾಜೀನಾಮೆ

ನವದೆಹಲಿ: ಕೇಂದ್ರದ ಮಾಜಿ ಸಚಿವ ಆನಂದ್ ಶರ್ಮಾ ಅವರು ಹಿಮಾಚಲ ಪ್ರದೇಶ ಕಾಂಗ್ರೆಸ್‌ನ ಸಂಚಾಲಕ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಆನಂದ್ ಶರ್ಮಾ ಅವರು ತಮ್ಮ ಆತ್ಮಗೌರವವನ್ನು ಚೌಕಾಶಿಗೆ ಒಳಪಡಿಸುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ … Continued

ಭಾರತದಲ್ಲಿ ‘ಟೊಮೇಟೊ ಜ್ವರ’ದ ಬಗ್ಗೆ ಎಚ್ಚರಿಸಿದ ಲ್ಯಾನ್ಸೆಟ್ ವರದಿ: ಅದು ಮಕ್ಕಳಿಗೆ ಹೆಚ್ಚಾಗಿ ಬಾಧಿಸುತ್ತದೆ

ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ಹೊಸ ರೋಗದ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ‘ಟೊಮೇಟೊ ಜ್ವರ’ ಎಂದು ಇದನ್ನು ಸಾಮಾನ್ಯವಾಗಿ ಕರೆಯಲಾಗುತ್ತದೆ, ಇದು ಹೊಸ ರೀತಿಯ ಕೈ, ಕಾಲು ಮತ್ತು ಬಾಯಿ ರೋಗವಾಗಿದ್ದು, ಕೇರಳ ಮತ್ತು ಒಡಿಶಾದಲ್ಲಿ ಪ್ರಕರಣಗಳು ಕಂಡುಬಂದಿವೆ. ಲ್ಯಾನ್ಸೆಟ್ ರೆಸ್ಪಿರೇಟರಿ ಜರ್ನಲ್ ಪ್ರಕಾರ, ಕೇರಳದ ಕೊಲ್ಲಂನಲ್ಲಿ ಮೇ 6 ರಂದು ‘ಟೊಮ್ಯಾಟೊ ಜ್ವರ’ ಪ್ರಕರಣಗಳು … Continued