ನಾಳೆಯಿಂದ ಭಾರತಕ್ಕೆ 3 ದಿನಗಳ ಭೇಟಿ ನೀಡಲಿರುವ ವಿಶ್ವಸಂಸ್ಥೆ ಮುಖ್ಯಸ್ಥರು

ನವದೆಹಲಿ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಮಂಗಳವಾರ(ಅಕ್ಟೋಬರ್‌ ೧೮)ದಿಂದ ಭಾರತಕ್ಕೆ ಮೂರು ದಿನಗಳ ಭೇಟಿ ನೀಡಲಿದ್ದಾರೆ. ಅವರು ಜನವರಿಯಲ್ಲಿ ತಮ್ಮ ಎರಡನೇ ಅವಧಿಯನ್ನು ಪ್ರಾರಂಭಿಸಿದ ನಂತರ ಇದು ಅವರ ಮೊದಲನೆ ಭೇಟಿಯಾಗಿದೆ. ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ 26/11 ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಗುಟೆರಸ್ ತನ್ನ ಭಾರತ ಪ್ರವಾಸವನ್ನು … Continued

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಿಲ್ಲಿಸಬೇಕೆಂದು ಒತ್ತಾಯಿಸಿದ ಕಾಂಗ್ರೆಸ್ ಹಿರಿಯ ಸಂಸದ…! ಕಾರಣ ಇಲ್ಲಿದೆ

ನವದೆಹಲಿ: ಕಾಂಗ್ರೆಸ್ ಹಿರಿಯ ಸಂಸದ ಫ್ರಾನ್ಸಿಸ್ಕೊ ​​ಸರ್ದಿನ್ಹಾ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸುವಂತೆ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಜೊತೆಗಿನ ಸಂವಾದದಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ ಸರ್ದಿನ್ಹಾ ಅವರು, ಗಾಂಧಿ ಕುಟುಂಬದ ಕುಡಿ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನ ವಿಧಾನಸಭಾ ಚುನಾವಣೆಯತ್ತ ಗಮನ ಹರಿಸಬೇಕು ಎಂದು ಅವರು … Continued

2,2,W,W,W,W…!:ಆಸ್ಟ್ರೇಲಿಯಾ ವಿರುದ್ಧ ಅಂತಿಮ ಓವರ್‌ನಲ್ಲಿ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್‌; ಭಾರತಕ್ಕೆ 6 ರನ್ ಗೆಲುವು | ವೀಕ್ಷಿಸಿ

ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಸೋಮವಾರ ಆಸ್ಟ್ರೇಲಿಯಾ ವಿರುದ್ಧದ T20 ವಿಶ್ವಕಪ್ 2022ರ ಅಭ್ಯಾಸ ಪಂದ್ಯದಲ್ಲಿ ತಮ್ಮ ಮೊದಲ ಮತ್ತು ಏಕೈಕ ಓವರ್‌ನಲ್ಲಿ ಬೌಲಿಂಗ್ ಪ್ರದರ್ಶನ ನೀಡಿದರು. ಪಂದ್ಯದ 20ನೇ ಓವರ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಚೆಂಡನ್ನು ಶಮಿಗೆ ಹಸ್ತಾಂತರಿಸಿದರು, ಆಸೀಸ್‌ಗೆ ಸ್ಪರ್ಧೆಯಲ್ಲಿ ಗೆಲ್ಲಲು 6 ಎಸೆತಗಳಲ್ಲಿ 11 ರನ್ ಅಗತ್ಯವಿತ್ತು. … Continued

ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸ್ತಾರೆ, ಆ ಎಲ್ಲ ನಟಿಯರ ಬಗ್ಗೆ ದೇವ್ರಿಗೇ ಗೊತ್ತು: ಬಾಬಾ ರಾಮ್‌ದೇವ್ ಸ್ಫೋಟಕ ಹೇಳಿಕೆ

ಲಕ್ನೋ: ಯೋಗ ಗುರು ಬಾಬಾ ರಾಮದೇವ ಅವರು “ಬಾಲಿವುಡ್ ಮತ್ತು ಡ್ರಗ್ಸ್” ಬಗ್ಗೆ ಧ್ವನಿ ಎತ್ತಿದ್ದಾರೆ. ಶನಿವಾರ ವಿವಾದಾತ್ಮಕ ಭಾಷಣದಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಮಗನ ಹೆಸರನ್ನು ಹೇಳಿರುವ ವೀಡಿಯೊ ಈಗ ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ಡ್ರಗ್ಸ್ ವಿರೋಧಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಮ್‌ದೇವ್, ಡ್ರಗ್ಸ್ ಪ್ರಸರಣಕ್ಕೆ ಚಿತ್ರರಂಗ … Continued

ರಾಜ್ ಠಾಕ್ರೆಯವರ ಮನವಿ ನಂತರ ಅಂಧೇರಿ ಉಪಚುನಾವಣೆ ಅಭ್ಯರ್ಥಿ ಹಿಂಪಡೆಯಲು ಬಿಜೆಪಿ ನಿರ್ಧಾರ

ಮುಂಬೈ: ಭಾರತೀಯ ಜನತಾ ಪಕ್ಷ (ಬಿಜೆಪಿ) ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ತನ್ನ ಅಭ್ಯರ್ಥಿಯನ್ನು ಹಿಂಪಡೆಯಲು ನಿರ್ಧರಿಸಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ರುಜುತಾ ಲಟ್ಕೆ ವಿರುದ್ಧ ಬಿಜೆಪಿ ಮುರ್ಜಿ ಪಟೇಲ್ ಅವರನ್ನು ಕಣಕ್ಕಿಳಿಸಿತ್ತು. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ ಮತ್ತು ಮುರ್ಜಿ ಪಟೇಲ್ ಅವರನ್ನು ಬೆಂಬಲಿಸಲು ನಿರ್ಧರಿಸಿತ್ತು. ಈ … Continued

ಆಪಲ್ ಸಾಧನಗಳಿಗಾಗಿ ಕ್ವಿಕ್‌ ಆಕ್ಷನ್‌ಗಳ ಟೂಲ್‌ ಆರಂಭಿಸಿದ YouTube- ಇದು ಹೇಗೆ..?

ಯೂಟ್ಯೂಬ್ ತಕ್ಷಣ ಹೋಮ್, ಶಾರ್ಟ್ಸ್ ಮತ್ತು ಸಬ್‌ಸ್ಕ್ರಿಪ್ಶನ್‌ಗಳ ಹುಡುಕಾಟವನ್ನು ತೆರೆಯಲು ಐಫೋನ್ ಹೋಮ್ ಸ್ಕ್ರೀನ್ ವಿಜೆಟ್‌ಗಳನ್ನು ಪರಿಚಯಿಸಿದೆ. ‘ಕ್ವಿಕ್‌ ಆಕ್ಷನ್‌ (Quick Actions)’ ಅಪ್ಲಿಕೇಶನ್ ಅನ್ನು ಹುಡುಕಲು ಮತ್ತು ಬ್ರೌಸ್ ಮಾಡಲು ಇದು ಒಂದು ಸಾಧನವಾಗಿದೆ ಎಂದು 9To5Google ವರದಿ ಮಾಡಿದೆ. ಮೈಕ್ರೊಫೋನ್ ಐಕಾನ್ ಧ್ವನಿ ಹುಡುಕಾಟವನ್ನು ತರುವಾಗ ಮೇಲ್ಭಾಗದಲ್ಲಿರುವ ‘ಸರ್ಚ್‌ ಯು ಟ್ಯೂಬ್‌ (Search … Continued

ದೆಹಲಿ: ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಲಿವಾಲ್ ನಿವಾಸದ ಮೇಲೆ ದಾಳಿ, ಕಾರುಗಳು ಧ್ವಂಸ

ನವದೆಹಲಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರ ಮನೆ ಮೇಲೆ ಸೋಮವಾರ ದಾಳಿ ನಡೆಸಲಾಗಿದ್ದು, ಅವರ ಮತ್ತು ಅವರ ತಾಯಿಯ ಕಾರುಗಳನ್ನು ಧ್ವಂಸಗೊಳಿಸಲಾಗಿದೆ. ಯಾರೋ ಅವರ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದರು ಮತ್ತು ನಿವಾಸದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಹಾನಿಗೊಳಿಸಿದ್ದಾರೆ ಮತ್ತು ಘಟನೆ ನಡೆದಾಗ ತಾವು ಮತ್ತು ತಮ್ಮ ತಾಯಿ ಮನೆಯಲ್ಲಿ ಇರಲಿಲ್ಲ ಎಂದು ಮಲಿವಾಲ್ … Continued

300 ಕಿಮೀ ವೇಗದಲ್ಲಿ ಓಡಿಸು : ನಾಲ್ಕು ಜನರ ಸಾವಿಗೆ ಕಾರಣವಾದ ಬಿಎಂಡಬ್ಲ್ಯು ಕಾರು ಅಪಘಾತಕ್ಕೂ ಮುನ್ನ ಹೇಳುತ್ತಿರುವ ವೀಡಿಯೊ ವೈರಲ್‌ | ವೀಕ್ಷಿಸಿ

ಲಕ್ನೋ: ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇನಲ್ಲಿ ಮಾರಣಾಂತಿಕ ಅಪಘಾತಕ್ಕೆ ಮುಂಚೆ ಕಾರೊಂದು ಗಂಟೆಗೆ 230 ಕಿಲೋಮೀಟರ್ (ಕಿಮೀ) ವೇಗದಲ್ಲಿ ಚಲಿಸುವ ಲೈವ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದುರಂತವೆಂದರೆ, ಐಷಾರಾಮಿ ಕಾರಿನ ಸ್ಪೀಡೋಮೀಟರ್ ಅನ್ನು ಲೈವ್‌ಸ್ಟ್ರೀಮ್ ಮಾಡುವಾಗ “ಚಾರೋ ಮಾರೆಂಗೆ (ನಾವು ನಾಲ್ವರೂ ಸಾಯುತ್ತೇವೆ)” ಎಂದು ಮೃತಪಟ್ಟವರಲ್ಲಿ ಒಬ್ಬರು ಸಾಯುವ ಮುಂಚೆ ಒಬ್ಬರು ಕಾಮೆಂಟ್ … Continued

ಖರ್ಗೆ ಅಥವಾ ತರೂರ್? : ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಇಂದು ಮತದಾನ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಂದು (ಅಕ್ಟೋಬರ್ 17) ನಡೆಯಲಿರುವ ಮತದಾನಕ್ಕೆ ಕಾಂಗ್ರೆಸ್ ನಾಯಕರು ಉತ್ಸುಕರಾಗಿದ್ದಾರೆ. ಮತದಾನ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ಸಂಜೆ 4 ಗಂಟೆಗೆ ಮುಗಿಯಲಿದೆ.ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ನೇರ ಮುಖಾಮುಖಿಯಿದ್ದು, ಖರ್ಗೆಗೆ ಗಾಂಧಿ ಮನೆತನದ ಬೆಂಬಲವಿದೆ ಎಂದು ವದಂತಿಗಳಿವೆ. ಅಕ್ಟೋಬರ್ 19 ರಂದು ಮತದಾನದ ಫಲಿತಾಂಶ ಪ್ರಕಟವಾಗಲಿದೆ. … Continued

ಕೇರಳ ನರಬಲಿ ಪ್ರಕರಣ: ಫ್ರೀಜರ್‌ನಲ್ಲಿ 10 ಕೆಜಿ ಮಾನವ ಮಾಂಸ ಸಂಗ್ರಹಿಸಿಟ್ಟ ಆರೋಪಿ…!

ತಿರುವನಂತಪುರಂ: ಕೇರಳದ ಭೀಕರ ನರಬಲಿ ಪ್ರಕರಣದಲ್ಲಿ, ಎಳಂತೂರಿನ ಮನೆಯಲ್ಲಿ ಎಂಟು ಗಂಟೆಗಳ ಕಾಲ ನಡೆದ ಸಾಕ್ಷ್ಯ ಸಂಗ್ರಹದ ಕಾರ್ಯಾಚರಣೆಯಲ್ಲಿ ಪೊಲೀಸರು ಶಸ್ತ್ರಾಸ್ತ್ರಗಳು ಸೇರಿದಂತೆ ವಿವಿಧ ಪುರಾವೆಗಳನ್ನು ಪತ್ತೆ ಮಾಡಿದರು. ಈ ಸ್ಥಳದಲ್ಲಿಯೇ ಮೂವರು ಆರೋಪಿಗಳಾದ ಮೊಹಮ್ಮದ್ ಶಫಿ, ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ಆರ್ಥಿಕ ಲಾಭಕ್ಕಾಗಿ ಇಬ್ಬರು ಮಹಿಳೆಯರನ್ನು ನರಬಲಿ ನೀಡಲು ಭೀಕರವಾಗಿ … Continued