ಮೇಕೆದಾಟು ಯೋಜನೆಗೆ ಕರ್ನಾಟಕ ಸರ್ಕಾರದಿಂದ 1000 ಕೋಟಿ ರೂ.ಗಳು ನಿಗದಿ: ತಮಿಳುನಾಡು ವಿರೋಧ

ಚೆನ್ನೈ: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಎಂಬಲ್ಲಿ ಅಣೆಕಟ್ಟು ನಿರ್ಮಿಸಲು ಕರ್ನಾಟಕವು 1,000 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವಾಗ ಈ ಕ್ರಮವು ಒಕ್ಕೂಟ ನೀತಿಗೆ ವಿರುದ್ಧವಾಗಿದೆ ಎಂದು ತಮಿಳುನಾಡು ಸರ್ಕಾರ ಶನಿವಾರ ಹೇಳಿದೆ. ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್, 2022-23ರ ಕರ್ನಾಟಕ ಬಜೆಟ್‌ನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಮೊತ್ತವನ್ನು ಮೀಸಲಿಟ್ಟಿದ್ದು, … Continued

ಭಾರತ-ಶ್ರೀಲಂಕಾ ಮೊದಲ ಟೆಸ್ಟ್‌: ಕಪಿಲ್ ದೇವ್ ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ 2ನೇ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆದ ಅಶ್ವಿನ್

ಮೊಹಾಲಿ: ಭಾರತ ಕ್ರಿಕೆಟ್‌ ತಂಡದ ಲೆಗ್‌ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಭಾನುವಾರ ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ ಸರಣಿ-ಆರಂಭಿಕ ಟೆಸ್ಟ್ ಪಂದ್ಯದ 3ನೇ ದಿನದಂದು ಕಪಿಲ್ ದೇವ್ ಅವರನ್ನು ಹಿಂದಿಕ್ಕಿ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದು ಅಶ್ವಿನ್ ಅವರ ಟೆಸ್ಟ್‌ ವೃತ್ತಿಜೀವನದ ವಿಕೆಟ್‌ ಸಂಖ್ಯೆಯನ್ನು 435ಕ್ಕೆ ಒಯ್ದಿದೆ. ಮತ್ತು … Continued

ಶಿಕ್ಷಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೊಲೀಸ್‌ ಠಾಣೆಗೆ ಬಂದ ಪುಟ್ಟ ಬಾಲಕ.. ಪುಟ್ಟ ಮಗು ಕಂಡು ಪೊಲೀಸರಿಗೇ ಅಚ್ಚರಿ…!

ಹೈದರಾಬಾದ್‌: ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಬಯ್ಯಾರಂನ ಸ್ಥಳೀಯ ಶಾಲೆಯೊಂದರಲ್ಲಿ ಮೂರನೇ ತರಗತಿಯ ವಿದ್ಯಾರ್ಥಿ ಎಂಟು ವರ್ಷದ ಬಾಲಕ, ತನ್ನ ಶಿಕ್ಷಕನ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ..! ಬಯ್ಯಾರಂನಲ್ಲಿರುವ ಖಾಸಗಿ ಶಾಲೆಯ IIIನೇ ತರಗತಿ ವಿದ್ಯಾರ್ಥಿ ತನ್ನ ಗಣಿತ ಶಿಕ್ಷಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಸಂಪರ್ಕಿಸುವ ಮೂಲಕ ಎಲ್ಲರನ್ನೂ  ಬೆಚ್ಚಿ ಬೀಳಿಸಿದ್ದಾನೆ. ಶಿಕ್ಷಕ ತನಗೆ … Continued

ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ ಯೋಧ: 5 ಮಂದಿ ಬಿಎಸ್‌ಎಫ್ ಯೋಧರ ಸಾವು

ನವದೆಹಲಿ: ಭಾನುವಾರ ನಡೆದ ಆಘಾತಕಾರಿ ಘಟನೆಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧನೊಬ್ಬ ಐವರು ಸಹೋದ್ಯೋಗಿ ಯೋಧರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ವಿವರಗಳ ಪ್ರಕಾರ, ಘಟನೆಯು ಪಂಜಾಬ್‌ನ ಅಮೃತಸರದ ಖಾಸಾದಿಂದ ವರದಿಯಾಗಿದೆ. ಅಟ್ಟಾರಿ-ವಾಘಾ ಗಡಿಯಿಂದ 20 ಕಿಮೀ ದೂರದಲ್ಲಿರುವ ಕ್ಯಾಂಪ್‌ನ ಅಮೃತಸರದ ಹೆಚ್ಕ್ಯು 144 ಬಿಎನ್ ಖಾಸಾದಲ್ಲಿ ಕಾನ್‌ಸ್ಟೇಬಲ್ ಸತ್ತೆಪ್ಪ ಎಸ್‌ಕೆ ತನ್ನ ಐವರು … Continued

ಮಹಿಳಾ ವಿಶ್ವಕಪ್ 2022: ಕಟ್ಟಾ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ನವದೆಹಲಿ: ಭಾನುವಾರ ಮೌಂಟ್ ಮೌಂಗನುಯಿ ಬೇ ಓವಲ್‌ನಲ್ಲಿ ನಡೆದ ವಿಶ್ವಕಪ್‌ ಪಂದ್ಯಾವಳಿಯ ತನ್ನ ಆರಂಭಿಕ ಹಾಗೂ ಅತ್ಯಂತ ಮಹತ್ವದ ಪಂದ್ಯದಲ್ಲಿ ಭಾರತವು ತನ್ನ ಸಾಂಪ್ರದಾಯಿಕ ಕಟ್ಟಾ ಎದುರಾಳಿ ಪಾಕಿಸ್ತಾನವನ್ನು 107 ರನ್‌ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಸೋಲಿಸಿದ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತವು ತಮ್ಮ ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಹೆಚ್ಚು ಟೀಕೆಗೆ ಒಳಗಾಗಿದ್ದ ಬೌಲಿಂಗ್ ದಾಳಿಯ ಮೂಲಕ … Continued

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ವಾರಂಟ್: ವರದಿ

ಮುಂಬೈ: ವರದಿಗಳನ್ನು ನಂಬುವುದಾದರೆ ವಂಚನೆ ಪ್ರಕರಣದಡಿಯಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಆಯೋಜಕರಿಂದ ಮುಂಗಡವಾಗಿ 37 ಲಕ್ಷ ರೂ.ಗಳನ್ನು ಮುಂಗಡವಾಗಿ ಪಡೆದರೂ ಸೋನಾಕ್ಷಿ ಅವರು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಗೈರು ಹಾಜರಾಗಿದ್ದಾರೆ ಎಂಬ ಆರೋಪವಿದೆ, ಅದಕ್ಕಾಗಿ ಅವರು ಕಾರ್ಯಕ್ರಮದ ಆಯೋಜಕರಿಗೆ ಸೋನಾಕ್ಷಿ ಅವರ ಮ್ಯಾನೇಜರ್ ಹಣವನ್ನು ಹಿಂತಿರುಗಿಸಲು ನಿರಾಕರಿಸಿದ್ದಾರೆ … Continued

ಜನನಿಬಿಡ ಪ್ರದೇಶದಲ್ಲಿ ಚಿರತೆಯ ನಗರ ಸಂಚಾರ.. ಜನರಿಗೆ ದಿಗಿಲೋ ದಿಗಿಲು..! ದೃಶ್ಯ ವಿಡಿಯೊದಲ್ಲಿ ಸೆರೆ

ಇತ್ತೀಚಿಗೆ ಕಾಡುಮೃಗಗಳು ಜನವಸತಿ ಪ್ರದೇಶಗಳಿಗೆ ಬರುತ್ತಿವೆ. ಅಪಾಯಕಾರಿ ವನ್ಯಜೀವಿಗಳು ಕೆಲವೊಮ್ಮೆ ಜನರಲ್ಲಿ ಆತಂಕವನ್ನೂ ಉಂಟು ಮಾಡುತ್ತವೆ. ಇಂಥದ್ದೇ ಘಟನೆಯ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೀರತ್‌ನಲ್ಲಿ ಜನವಸತಿ ಬೀದಿಗಳಲ್ಲಿ ಚಿರತೆಯೊಂದು ಸುತ್ತು ಹಾಕಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೀರತ್‌ನ ಪಲ್ಲವಪುರಂ ಪ್ರದೇಶದ ಮನೆಯೊಂದರ ಬಳಿ ಶುಕ್ರವಾರ ಬೆಳಗ್ಗೆ ಚಿರತೆಯೊಂದು ಕಾಣಿಸಿಕೊಂಡಿತ್ತು. ಚಿರತೆ … Continued

ಆಘಾತಕಾರಿ… : ಅತ್ಯಾಚಾರ ಸಂತ್ರಸ್ತೆಗೆ ಪರಿಹಾರವಾಗಿ 70,000 ರೂ.ಗಳನ್ನು ನೀಡುವಂತೆ ಅತ್ಯಾಚಾರ ಆರೋಪಿಗೆ ಸೂಚಿಸಿದ ಪಂಚಾಯತ..!

ಪಾಟ್ನಾ : ಆಘಾತಕಾರಿ ಘಟನೆಯೊಂದರಲ್ಲಿ ಬಿಹಾರದ ಸಹರ್ಸಾ ಜಿಲ್ಲೆಯ ಪಂಚಾಯವೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರವಾಗಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ 70,000 ರೂ.ಗಳನ್ನು ನೀಡುವಂತೆ ಅತ್ಯಾಚಾರ ಆರೋಪಿಗೆ ಸೂಚಿಸಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಆರೋಪಿಯನ್ನು ಸರ್ಫರಾಜ್ ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನ ಅವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಹದಿನೈದು ದಿನಗಳ ಹಿಂದೆ ಬಸ್ನಾಹಿ ಪೊಲೀಸ್ … Continued

ಭಾರತದ ಎಲ್ಲ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವವರೆಗೆ ಉಕ್ರೇನ್‌ ತೊರೆಯುವುದಿಲ್ಲ ಎಂದ ಡಾ. ಪೃಥ್ವಿರಾಜ್ ಘೋಷ್

ನವದೆಹಲಿ: ಜನರು ಉಕ್ರೇನ್ ತೊರೆಯಲು ಪ್ರಯತ್ನಿಸುತ್ತಿರುವ ಸಮಯದಲ್ಲಿ, ಕೋಲ್ಕತ್ತಾದ 37 ವರ್ಷದ ಭಾರತೀಯ ವೈದ್ಯರೊಬ್ಬರು ಯುದ್ಧ ಪೀಡಿತ ದೇಶವನ್ನು ತೊರೆಯದಿರಲು ನಿರ್ಧರಿಸಿದ್ದಾರೆ…! ಉಕ್ರೇನ್‌ನಲ್ಲಿ ವೈದ್ಯ ಮತ್ತು ವಿದ್ಯಾರ್ಥಿ ಸಲಹೆಗಾರರಾಗಿರುವ ಡಾ ಪೃಥ್ವಿರಾಜ್ ಘೋಷ್ ಅವರು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಅಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ನಾನು ಇಲ್ಲಿ ಕೀವ್‌ನಲ್ಲಿ ಸಿಲುಕಿಕೊಂಡಿಲ್ಲ, ನಾನು ಹೊರಡುತ್ತಿಲ್ಲ ಅಷ್ಟೆ. ನಾನು ಉಕ್ರೇನ್‌ನಿಂದ … Continued

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಒಬಿಸಿ ಮೀಸಲಾತಿಗೆ ಶಿಫಾರಸು ಮಾಡಿದ್ದ ಮಧ್ಯಂತರ ವರದಿ ತಿರಸ್ಕರಿಸಿದ ಸುಪ್ರೀಂಕೋರ್ಟ್‌

ನವದೆಹಲಿ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಶಿಫಾರಸು ಮಾಡಿ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ್ದ ಮಧ್ಯಂತರ ವರದಿಗೆ ಸುಪ್ರೀಂ ಕೋರ್ಟ್‌ ಗುರುವಾರ ಅಸಮ್ಮತಿ ಸೂಚಿಸಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ. ಚುನಾವಣಾ ಮೀಸಲಾತಿ ಕಾಯ್ದಿರಿಸುವ ಮೊದಲು ತ್ರಿವಳಿ ಪರೀಕ್ಷಾ ಮಾನದಂಡ ಪೂರೈಸಬೇಕು ಎಂದು ತಾನು ವಿಕಾಸ್ … Continued