ಬಂಗಾಳದಲ್ಲಿ ಮುಸ್ಲಿಂ ಧರ್ಮಗುರು ಸಿದ್ದಿಕಿ ಪಕ್ಷದ ಜೊತೆ ಮೈತ್ರಿ: ಕಾಂಗ್ರೆಸ್‌ ನಾಯಕತ್ವದ ವಿರುದ್ಧ ತಿರುಗಿಬಿದ್ದ ಶರ್ಮಾ

ಪಶ್ಚಿಮ ಬಂಗಾಳದ ಮುಸ್ಲಿಂ ಧರ್ಮಗುರು ಅಬ್ಬಾಸ್ ಸಿದ್ದಿಕಿ ನೇತೃತ್ವದ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಒಂದಿಗೆ ಕಾಂಗ್ರೆಸ್‌ ಪಸ್ಚಿಮ ಬಂಗಾಳ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವುದನ್ನು ಕಾಂಗ್ರೆಸ್ಸಿನ ಹಿರಿಯ ಮುಖಂಡ ಆನಂದ್ ಶರ್ಮಾ ಸೋಮವಾರ ಖಂಡಿಸಿದ್ದು, ಇದು ಪಕ್ಷದ ಪ್ರಮುಖ ಸಿದ್ಧಾಂತ, ಗಾಂಧಿ ಮತ್ತು ನೆಹರೂ ಜಾತ್ಯತೀತತೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಪಕ್ಷವು ಕೋಮುವಾದಿಗಳ ವಿರುದ್ಧ ಹೋರಾಡುವಲ್ಲಿ … Continued

ಡ್ರಗ್ಸ್‌ ಪ್ರಕರಣದ ಹಿಂದೆ ನನ್ನ ಸಿಲುಕಿಸಲು ಮಮತಾ ಅಳಿಯ ಅಭಿಷೇಕ, ಪೊಲೀಸ್‌ ಅಧಿಕಾರಿ ಶರ್ಮಾ ಸಂಚು: ರಾಕೇಶ ಸಿಂಗ್‌

ಕೊಲ್ಕತ್ತಾ: ಕೊಕೇನ್ ಪ್ರಕರಣದ ಆರೋಪಿ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಅವರನ್ನು ಮಾರ್ಚ್ 9 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಸೋಮವಾರ ಅಲಿಪೋರ್ ಎನ್‌ಡಿಪಿಎಸ್ ನ್ಯಾಯಾಲಯದ ಮುಂದೆ ಹಾಜರಾದ ಬಿಜೆಪಿ ನಾಯಕ ಮತ್ತು ಅವರ ಆಪ್ತರಿಗೆ ಮಾರ್ಚ್ 9 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿ ಆದೇಶಿಸಿದೆ. ನ್ಯಾಯಾಲಯಕ್ಕೆ ಕರೆದೊಯ್ಯುವಾಗ, ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಇದು … Continued

ರಾಜಕಾರಣಿಗಳು ದಪ್ಪ ಚರ್ಮದವರೆಂದು ದಪ್ಪ ಸೂಜಿ ಬಳಸಲು ಯೋಜಿಸುತ್ತಿದ್ದೀರಾ: ಲಸಿಕೆ ನೀಡಿದ ದಾದಿಯರಿಗೆ ಪ್ರಧಾನಿ ಮೋದಿ ಪ್ರಶ್ನೆ

ರಾಜಕಾರಣಿಗಳು “ತುಂಬಾ ದಪ್ಪ ಚರ್ಮದವರೆಂದು ದಪ್ಪ ಸೂಜಿ ಬಳಸಲು ಯೋಜಿಸುತ್ತಿದ್ದೀರಾ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕೋವಿಡ್ -19 ಲಸಿಕೆ ನೀಡುವ ದಾದಿಯರನ್ನು ಕೇಳಿ ಹಾಸ್ಯ ಮಾಡಿದ ಪ್ರಸಂಗ ನಡೆಯಿತು. ಪ್ರಧಾನಿ ಮೋದಿ ತಮ್ಮ ಮೊದಲ ಡೋಸ್ ಕೊವಿಡ್‌-19 ಲಸಿಕೆಯನ್ನು ಸೋಮವಾರ ಇಲ್ಲಿನ ಏಮ್ಸ್‌ನಲ್ಲಿ ತೆಗೆದುಕೊಂಡರು. ಪುದುಚೇರಿಯವರಾದ ನರ್ಸ್ ಪಿ. ನಿವೇದ ಭಾರತ್ ಬಯೋಟೆಕ್‌ನ … Continued

ಬಿಜೆಪಿ ಭ್ರಷ್ಟಾಚಾರದ ಪರ ನಿಂತಿದೆ: ಸ್ಟಾಲಿನ್‌

ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಭ್ರಷ್ಟಾಚಾರದ ಪರ ನಿಂತಿದೆ ಎಂದು ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್‌ ಆರೋಪಿಸಿದರು. ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಪನ್ನೀರಸೆಲ್ವಂ ಕಮೀಶನ್‌, ಕಲೆಕ್ಷನ್‌, ಕರಪ್ಷನ್‌ ಮಾಡುವ ಮೂಲಕ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಬಿಜೆಪಿ ಇಂಥವರನ್ನು ಬೆಂಬಲಿಸುತ್ತಿದೆ ಎಂದರು. ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ರವಿವಾರದಿಂದ ಆರಂಭಗೊಂಡಿದೆ. … Continued

ನೀವು ಮಕ್ಕಳನ್ನು ಹೆತ್ತರೆ ಸರ್ಕಾರ ಅವರ ಶಿಕ್ಷಣ ಶುಲ್ಕ ಭರಿಸಬೇಕಾ?:ಉತ್ತರ ಪ್ರದೇಶದ ಬಿಜೆಪಿ ಶಾಸಕನ ಪ್ರಶ್ನೆ

ಖಾಸಗಿ ಶಾಲೆಯಲ್ಲಿ ಕಲಿಯುವ ಮಕ್ಕಳ ಶುಲ್ಕವನ್ನು ಮನ್ನಾ ಮಾಡುವಂತೆ ಕೋರಿದ ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಬಿಜೆಪಿ ಶಾಸಕ ರಮೇಶ ದಿವಾಕರ, ನೀವು ಮಕ್ಕಳನ್ನು ಹೆತ್ತು ಸರಕಾರ ಶಿಕ್ಷಣ ವೆಚ್ಚ ಭರಿಸಬೇಕೆಂದು ನಿರೀಕ್ಷಿಸುತ್ತೀರಾ? ಎಂದು ಕೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ನೀವು ಮಕ್ಕಳನ್ನು ಮಾಡಿಕೊಳ್ಳುತ್ತೀರಿ. ಸರಕಾರ ಅವರ ಶಿಕ್ಷಣವನ್ನು ಭರಿಸಬೇಕೆಂದರೆ ಹೇಗೆ ಎಂದು ಅವರು … Continued

ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್‌ ಬದಲಿಗೆ, ಜೂನ್ 21 ರಿಂದ ಜುಲೈ 5 ರ ವರೆಗೆ ನಡೆಯಲಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್‌ಕುಮಾರ್, ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಸಲಹೆ, ಮನವಿಗಳನ್ನು ಪರಿಗಣಿಸಿ … Continued

ಮುಂಬೈಯಲ್ಲಿ ವಿದ್ಯುತ್‌ ಸ್ಥಗಿತದಲ್ಲಿ ಚೀನಾ ಸೈಬರ್‌ ಯುದ್ಧದ ಪಾತ್ರ: ಶೀಘ್ರವೇ ವರದಿ ಸಲ್ಲಿಕೆ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುಂಬೈನಲ್ಲಿ ವಿದ್ಯುತ್‌ ಸ್ಥಗಿತಗೊಳ್ಳಲು ಚೀನಾದ ಸೈಬರ್‌ ದಾಳಿಯ ಪಾತ್ರ ಕುರಿತು ತನಿಖೆ ನಡೆಸಿದ ಸೈಬರ್‌ ಸೆಲ್‌ ಸರಕಾರಕ್ಕೆ ವರದಿ ನೀಡಲಿದೆ. ಮಹಾರಾಷ್ಟ್ರ ಇಂಧನ ಸಚಿವ ನಿತಿನ್ ರೌತ್ ಮಾತನಾಡಿ, ಸೈಬರ್ ಸೆಲ್ ತನಿಖೆ ಪೂರ್ಣಗೊಳಿಸಿದ್ದು ಶೀಘ್ರದಲ್ಲೇ ವರದಿ ನೀಡಲಿದೆ ಎಂದು ತಿಳಿಸಿದರು. ಕಳೆದ ವರ್ಷ ಅಕ್ಟೋಬರ್ 13 ರಂದು ಮುಂಬೈಯನ್ನು ಗುರಿಯಾಗಿಸಿಕೊಂಡು … Continued

ಹೈದರಾಬಾದ್‌ನಲ್ಲಿ ಕೊವಿಡ್‌ ಲಸಿಕೆ ಡೋಸ್‌ ಪಡೆದ ಶತಾಯುಷಿ..!

ಹೈದರಾಬಾದ್: ತೆಲಂಗಾಣದ ಶತಮಾನ ಕಂಡ ವಯೋವೃದ್ಧರೊಬ್ಬರು ಎಲ್ಲಾ ಆತಂಕಗಳನ್ನು ಬದಿಗೊತ್ತಿ ಹೈದರಾಬಾದ್‌ನಲ್ಲಿ ಶಾಟ್ ಕೊವಿಡ್‌ -೧೯ ಚುಚ್ಚುಮದ್ದು ತೆಗೆದುಕೊಂಡರು. ಹೈದರಾಬಾದ್ ನಿವಾಸಿ ಮತ್ತು ಮಾಜಿ ಉದ್ಯಮಿ ಜೈದೇವ್ ಚೌಧರಿ (100) ಸೋಮವಾರ ಮೆಡಿಕೋವರ್ ಆಸ್ಪತ್ರೆಗಳಲ್ಲಿ ಮೊದಲ ಶಾಟ್ ತೆಗೆದುಕೊಂಡರು. ಅಧಿಕಾರಿಗಳ ಪ್ರಕಾರ, ಅವರು ಸಂತಸದಿಂದ ಇದ್ದಾರೆ. ಮತ್ತು ಹೆಚ್ಚು ಸಾಮಾಜಿಕವಾಗಿ ಸಕ್ರಿಯ ಜೀವನವನ್ನು ಆನಂದಿಸಲು ಲಸಿಕೆ … Continued

ಗೃಹಸಾಲದ ಬಡ್ಡಿ ರಿಯಾಯಿತಿ ನೀಡಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್‌ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೋಮವಾರ ಗೃಹ ಸಾಲಗಳ ಬಡ್ಡಿ ರಿಯಾಯತಿಯನ್ನು ಪ್ರಕಟಿಸಿದ್ದು, ಇದು ಸೀಮಿತ ಕೊಡುಗೆಯ ಭಾಗವಾಗಿ ಮಾರ್ಚ್ ಅಂತ್ಯದವರೆಗೆ ಮುಂದುವರಿಯುತ್ತದೆ ಎಂದು ತಿಳಿಸಿದೆ. ಬ್ಯಾಂಕ್ ಈಗ 70 ಬೇಸಿಸ್ ಪಾಯಿಂಟ್‌ಗಳ (ಬಿಪಿಎಸ್) ಬಡ್ಡಿ ರಿಯಾಯತಿಯನ್ನು ನೀಡಲಿದ್ದು, ಬಡ್ಡಿದರಗಳು ಶೇಕಡಾ 6.70 ರಿಂದ ಪ್ರಾರಂಭವಾಗುತ್ತವೆ. ಇದು ಸೀಮಿತ … Continued

ಸೆಲ್ಫಿ ಹುಚ್ಚಿಗೆ ಆನೆಗೆ ಬಲಿಯಾದ

ರಾಯಘರ್:ಛತ್ತೀಸ್ಗಢ ದ ರಾಯಘರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಆನೆಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋದ 21 ವರ್ಷದ ಯುವಕನನ್ನು ಆನೆ ತುಳಿದು ಕೊಂದು ಹಾಕಿದೆ. ಮನೋಹರ್ ಪಾಟೀಲ್ ಎಂಬುವವನೇ ಮೃತಪಟ್ಟವ. ಹಳ್ಳಿಯಿಂದ ಆನೆಯನ್ನು ಕಾಡಿಗೆ ಓಡಿಸಲು ಅರಣ್ಯಾಧಿಕಾರಿಗಳು ಪ್ರಯತ್ನಿಸುತ್ತಿದ್ದಾಗ ಇಡೀ ಹಳ್ಳಿಯ ಜನರು ಆನೆಯನ್ನು ನೋಡಲು ಕಿಕ್ಕಿರಿದು ತುಂಬಿದ್ದರು. ಅದರಲ್ಲಿ ಮನೋಹರ್ ಪಾಟೀಲ್ ಮತ್ತು ಅವನ ಮೂವರು … Continued