ಗುಜರಾತ್ ತೂಗು ಸೇತುವೆ ದುರಂತದಲ್ಲಿ ಎರಡು ವರ್ಷದ ಮಗು ಸೇರಿ 47 ಮಕ್ಕಳು ಸಾವು

ಅಹ್ಮದಾಬಾದ್‌ : ಗುಜರಾತ್‌ನ ನದಿಯಲ್ಲಿ ನಿನ್ನೆ ಭಾನುವಾರ ತೂಗು ಸೇತುವೆಯೊಂದು ಮುರಿದು ಬಿದ್ದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ದಿನದ ಮಟ್ಟಿಗೆ ಹಿಂಪಡೆಯಲಾಗಿದ್ದು, ಮಂಗಳವಾರ ಬೆಳಿಗ್ಗೆ ಅದನ್ನು ಪುನರಾರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಮೃತದೇಹಗಳು ಕೆಸರಿನ ನೀರಿನಲ್ಲಿ ಸಿಲುಕಿರುವ ಆತಂಕವಿದೆ ಎಂದು ಅವರು ಹೇಳಿದ್ದಾರೆ. ಗುಜರಾತಿನ ಮೊರ್ಬಿಯಲ್ಲಿನ ಮಚ್ಚು ನದಿಯ ಮೇಲಿನ ಕೇಬಲ್ ಸೇತುವೆಯು … Continued

ಗುಜರಾತ್‌ ತೂಗು ಸೇತುವೆ ದುರಂತ : 9 ಮಂದಿ ಬಂಧನ

ಅಹ್ಮದಾಬಾದ್‌: ಗುಜರಾತ್‌ನ ಮೊರ್ಬಿಯಲ್ಲಿ ಸೇತುವೆ ಕುಸಿದು 130 ಕ್ಕೂ ಹೆಚ್ಚು ಜನರು ಸಾವಿಗೀಡಾದ ಒಂದು ದಿನದ ನಂತರ, ಒಂಬತ್ತು ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಸೇತುವೆಯನ್ನು ನವೀಕರಿಸಿದ ಓರೆವಾ ಕಂಪನಿಯ ವ್ಯವಸ್ಥಾಪಕರು, ಟಿಕೆಟ್ ಕಲೆಕ್ಟರ್‌ಗಳು, ಸೇತುವೆ ದುರಸ್ತಿ ಗುತ್ತಿಗೆದಾರರು ಮತ್ತು ಜನಸಂದಣಿಯನ್ನು ನಿಯಂತ್ರಿಸುವ ಮೂವರು ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಗುಜರಾತ್ ಮೂಲದ ಒರೆವಾ ಕಂಪನಿ ಬಹು ಸುರಕ್ಷತಾ … Continued

ಇಂದು ‘ಡಿಜಿಟಲ್ ರೂಪಾಯಿ’ ಪ್ರಾಯೋಗಿಕವಾಗಿ ಆರಂಭ, ಎಸ್‌ಬಿಐ ಸೇರಿ 9 ಬ್ಯಾಂಕ್‌ಗಳಿಗೆ ಮಾನ್ಯತೆ: ಡಿಜಿಟಲ್ ರೂಪಾಯಿ ಎಂದರೇನು?

ಮುಂಬೈ: ನವೆಂಬರ್ 1ರಿಂದ, ನಿರ್ದಿಷ್ಟ ಬಳಕೆಯ ಪ್ರಕರಣಗಳಿಗಾಗಿ ಡಿಜಿಟಲ್ ರೂಪಾಯಿ (eâ1)ಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೋಮವಾರ ಪ್ರಕಟಿಸಿದೆ. ಅಧಿಸೂಚನೆಯ ಪ್ರಕಾರ, ಮೊದಲ ಡಿಜಿಟಲ್ ರೂಪಾಯಿ ಪೈಲಟ್ ಸಗಟು ವಿಭಾಗದಲ್ಲಿ(e₹-W) ) ಆರಂಭವಾಗಲಿದ್ದು, ಮಂಗಳವಾರ ಪ್ರಾರಂಭವಾಗುತ್ತದೆ. ಆರ್‌ಬಿಐ ಪ್ರಕಾರ, ಆರಂಭವಾಗಲಿರುವ ಒಂಬತ್ತು ಬ್ಯಾಂಕ್‌ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, … Continued

ಜ್ಯೋತಿಷ್ಯದ ಮುನ್ಸೂಚನೆ: ಪ್ರಿಯಕರನಿಗೆ ವಿಷಪ್ರಾಶನ ಮಾಡಿದ್ದನ್ನು ಒಪ್ಪಿಕೊಂಡ ವಿದ್ಯಾರ್ಥಿನಿ…!

ತಿರುವನಂತಪುರಂ: ಕೇರಳದ ಗಡಿಯಲ್ಲಿರುವ ತಮಿಳುನಾಡಿನ ರಾಮವರ್ಮನ್ ಚಿರಾದ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬಳು ಆಯುರ್ವೇದ ಔಷಧದಲ್ಲಿ ವಿಷಕಾರಿ ರಾಸಾಯನಿಕವನ್ನು ಬೆರೆಸಿ ತನ್ನ ಪ್ರೇಮಿಗೆ ವಿಷವನ್ನು ನೀಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಕೇರಳ ಪೊಲೀಸರು ಭಾನುವಾರ ತಿಳಿಸಿದ್ದಾರೆ. 22 ವರ್ಷದ ಶರೋನ್ ರಾಜ್ ಎಂಬುವವರಿಗೆ ಅಕ್ಟೋಬರ್ 14 ರಂದು ತಾಮ್ರದ ಸಲ್ಫೇಟ್ ಮಿಶ್ರಿತ ಪಾನೀಯವನ್ನು ನೀಡಲಾಯಿತು ಮತ್ತು ಪಾನೀಯವನ್ನು ಸೇವಿಸಿದ ನಂತರ … Continued

ಅತ್ಯಾಚಾರ ಸಂತ್ರಸ್ತರಿಗೆ ಎರಡು-ಬೆರಳಿನ ಪರೀಕ್ಷಾ ನಿಷೇಧ ಪುನರುಚ್ಚರಿಸಿದ ಸುಪ್ರೀಂ ಕೋರ್ಟ್‌ : ಪರೀಕ್ಷೆಗೆ ಒಳಪಡಿಸುವವರು ತಪ್ಪಿತಸ್ಥರು ಎಂದ ಸರ್ವೋಚ್ಛ ನ್ಯಾಯಾಲಯ

ನವದೆಹಲಿ: ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಗೆ ಎರಡು ಬೆರಳಿನ ಪರೀಕ್ಷೆ ನಡೆಸುವ ಯಾವುದೇ ವ್ಯಕ್ತಿ ದುರ್ನಡತೆಯ ತಪ್ಪಿತಸ್ಥನಾಗುತ್ತಾನೆ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಅತ್ಯಾಚಾರ ಸಂತ್ರಸ್ತರು ಹಾಗೂ ಲೈಂಗಿಕ ದೌರ್ಜನಕ್ಕೆ ಒಳಗಾದವರನ್ನು ಎರಡು ಬೆರಳುಗಳ ಪರೀಕ್ಷೆಗೆ ಒಳಪಡಿಸದಂತೆ ತಡೆಯಬೇಕು ಹಾಗೂ ನಿಗಾ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ … Continued

ಮೊರ್ಬಿ ತೂಗು ಸೇತುವೆ ದುರಂತದಲ್ಲಿ 141 ಜನರು ಸಾವು : ಸೇತುವೆ ಕುಸಿದು ಬೀಳುವ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗುಜರಾತ್‌ನ ಮೊರ್ಬಿ ತೂಗು ಸೇತುವೆ ಭಾನುವಾರ ಕುಸಿದು 141 ಜನರ ಸಾವಿಗೆ ಕಾರಣವಾಯಿತು ಮತ್ತು ಅನೇಕರು ಗಾಯಗೊಂಡರು. ಮೋರ್ಬಿ ಸೇತುವೆ ಕುಸಿದುಬಿದ್ದ ಕ್ಷಣದ ವೀಡಿಯೊವೊಂದು ವೈರಲ್‌ ಆಗಿದ್ದು, ಸೇತುವೆ ಕುಸಿಯುವ ಮುನ್ನ ಜನರು ಅಲುಗಾಡುತ್ತಿರುವುದನ್ನು ಕಾಣಬಹುದು. ಸೆಕ್ಷನ್ 304, 308 ಮತ್ತು 114 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸೇತುವೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ “ಏಜೆನ್ಸಿ” … Continued

ಮೊರ್ಬಿಯಲ್ಲಿ ಕೆಲ ಯುವಕರು ಉದ್ದೇಶಪೂರ್ವಕವಾಗಿ ಸೇತುವೆ ಅಲ್ಲಾಡಿಸುತ್ತಿದ್ದರು…ನಡೆಯಲೂ ಸಾಧ್ಯವಿರಲಿಲ್ಲ, ಅರ್ಧದಲ್ಲೇ ವಾಪಸ್ಸಾದೆವು: ಕುಟುಂಬದ ಹೇಳಿಕೆ | ವೀಡಿಯೊ ವೈರಲ್

ಅಹ್ಮದಾಬಾದ್‌: ಗುಜರಾತ್‌ನ ಮೊರ್ಬಿಯಲ್ಲಿನ ಮಚ್ಚು ಅಣೆಕಟ್ಟಿನ ಮೇಲಿನ ತೂಗು ಸೇತುವೆ ಕುಸಿದಿದ್ದರಿಂದ ಮಕ್ಕಳು ಸೇರಿದಂತೆ 140 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಹಲವರಿಗಾಗಿ ಇನ್ನೂ ಹುಡುಕಾಟ ನಡೆದಿದೆ. ಇದೀಗ ಸೇತುವೆಯ ಮೇಲೆ ನೂರಾರು ಜನರು ಜಿಗಿಯುವುದ, ಓಡುವುದು ಮಾಡುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ. ಈ ವೇಳೆ ಕೇಬಲ್ ಸೇತುವೆ ಜೋರಾಗಿ ತೂಗಾಡುತ್ತಿರುವುದು ಕಂಡುಬಂದಿದೆ. ಕೆಲವು ಯುವಕರು ತೂಗು … Continued

140 ವರ್ಷದ ಹಳೆಯದಾದ ಗುಜರಾತ್ ಕೇಬಲ್‌ ಸೇತುವೆ ಕುಸಿತ : 141ಕ್ಕೆ ಏರಿದ ಸಾವಿನ ಸಂಖ್ಯೆ

ಅಹ್ಮದಾಬಾದ್: ಗುಜರಾತ್‌ನ ಮೊರ್ಬಿಯಲ್ಲಿ ಬ್ರಿಟಿಷರ ಕಾಲದ ಸೇತುವೆಯೊಂದು ನವೀಕರಣಗೊಂಡ ಒಂದು ವಾರದ ನಂತರ ಕುಸಿದು ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಸುಮಾರು 177 ಜನರನ್ನು ರಕ್ಷಿಸಲಾಗಿದೆ ಮತ್ತು ತಂಡಗಳು ಇನ್ನೂ ನಾಪತ್ತೆಯಾಗಿರುವ ಹಲವರಿಗಾಗಿ ಹುಡುಕಾಟ ನಡೆಸುತ್ತಿವೆ. ಶೋಧಕಾರ್ಯ ಹಾಗೂ ರಕ್ಷಣಾ ಕಾರ್ಯ ಮುಂದುವರಿದೆ. ಸ್ಥಳದಲ್ಲಿ ಸೇನೆ, ಎಸ್​ಡಿಆರ್​ಎಫ್, ಎನ್​ಡಿಆರ್​ಎಫ್​ ಬೀಡುಬಿಟ್ಟಿದೆ.ಭಾನುವಾರ ಸಂಜೆ 6:42ಕ್ಕೆ ತೂಗುಸೇತುವೆ ಕುಸಿಯುವ … Continued

ಆರ್‌ಎಸ್‌ಎಸ್ ನಿಜವಾದ ಕಾಫಿ, ಬಿಜೆಪಿ ಕೇವಲ ಮೇಲ್ಭಾಗದ ನೊರೆ: ಪ್ರಶಾಂತ್ ಕಿಶೋರ್ ವ್ಯಾಖ್ಯಾನ

ಪಾಟ್ನಾ: ರಾಜಕೀಯ ತಂತ್ರಜ್ಞ, ಕಾರ್ಯಕರ್ತ ಪ್ರಶಾಂತ್ ಕಿಶೋರ್ ಭಾನುವಾರ ಬಿಜೆಪಿ-ಆರ್‌ಎಸ್‌ಎಸ್ ಸಂಯೋಜನೆಯನ್ನು ಒಂದು ಕಪ್ ಕಾಫಿಗೆ ಹೋಲಿಸಿದ್ದಾರೆ. ಅದರಲ್ಲಿ ಬಿಜೆಪಿ ಪಕ್ಷವು ಕಾಫಿಯ ಮೇಲ್ಭಾಗದ ನೊರೆಯಂತಿದ್ದರೆ ಅದರ ಕೆಳಗಿರುವ ಕಾಫಿ ಮಾತೃ ಸಂಸ್ಥೆ ಆರ್‌ಆರ್‌ಎಸ್‌ ನಿಜವಾದ ವಿಷಯವಾಗಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಬಿಹಾರದಲ್ಲಿ 3500 ಕಿಲೋಮೀಟರ್ ಉದ್ದದ “ಪಾದ-ಯಾತ್ರೆ”ಯಲ್ಲಿರುವ ಪ್ರಶಾಂತ್‌ ಕಿಶೋರ್, ಪಶ್ಚಿಮ ಚಂಪಾರಣ್ … Continued

ಗುಜರಾತಿನಲ್ಲಿ 140 ವರ್ಷಗಳಷ್ಟು ಹಳೆಯ ಕೇಬಲ್ ಸೇತುವೆ ಕುಸಿದು ಕನಿಷ್ಠ 35 ಮಂದಿ ಸಾವು: ದುರಸ್ತಿ ಮಾಡಿ ಕಳೆದ ವಾರ ತೆರೆಯಲಾಗಿತ್ತು…

ಅಹ್ಮದಾಬಾದ್‌: ಗುಜರಾತ್‌ನ ಮೊರ್ಬಿ ಪ್ರದೇಶದಲ್ಲಿ ಇಂದು, ಭಾನುವಾರ ಮಚ್ಚು ನದಿಯಲ್ಲಿ ಕೇಬಲ್ ಸೇತುವೆ ಕುಸಿದ ಪರಿಣಾಮ ಕನಿಷ್ಠ 35 ಜನರು ಮೃತಪಟ್ಟಿದ್ದು, ಇನ್ನೂ ಹಲವರು ನೀರಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ, ಘಟನೆ ಸಂಭವಿಸಿದಾಗ ಸುಮಾರು 400 ಜನರು ಸೇತುವೆಯ ಮೇಲೆ ಇದ್ದರು ಮತ್ತು ಸುಮಾರು 100 ಜನರು ನದಿಗೆ ಬಿದ್ದಿದ್ದಾರೆ. ವರದಿಗಳ ಪ್ರಕಾರ, … Continued