ಸರ್ಕಾರದಿಂದ 40,000 ಕೋಟಿ ರೂ.ಗಳ ಬೆಂಬಲ ಕೋರಿದ ಬಿಎಸ್​ಎನ್​ಎಲ್

ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಅಲ್ಪಾವಧಿ ಸಾಲ ಮರುಪಾವತಿಸುವುದಕ್ಕೆ 40 ಸಾವಿರ ಕೋಟಿ ರೂ.ಗಳ ಹಣಕಾಸು ನೆರವನ್ನು ಕೇಂದ್ರ ಸರ್ಕಾರದ ಬಳಿ ಕೇಳಿದೆ. ಇದರಲ್ಲಿ ಅರ್ಧದಷ್ಟನ್ನು ಸಾವರಿನ್ ಗ್ಯಾರೆಂಟಿ ರೂಪದಲ್ಲಿ ನೀಡುವಂತೆ ವಿನಂತಿಸಲಾಗಿದೆ ಎಂದು ಕಂಪನಿ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಪಿ.ಕೆ. ಪುರ್ವಾರ್ ತಿಳಿಸಿದ್ದಾರೆ. ಈಗಿರುವ … Continued

ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೊಸ ಪಕ್ಷ ಕಟ್ಟುವ ಸಾಧ್ಯತೆ, ಹತ್ತಾರು ಪಂಜಾಬ್ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕ

ನವದೆಹಲಿ: ಪಂಜಾಬ್ ನಲ್ಲಿ ನಡೆಯುತ್ತಿರುವ ಅಧಿಕಾರದ ಜಗಳದ ನಡುವೆ, ಕ್ಯಾಪ್ಟನ್ ಅಮರಿಂದರ್ ಸಿಂಗ್ (Capt Amarinder Singh)  ಮುಂದಿನ ಹದಿನೈದು ದಿನಗಳಲ್ಲಿ ಹೊಸ ರಾಜಕೀಯ ಪಕ್ಷ ಕಟ್ಟಬಹುದು (may float new party) ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಸುಮಾರು ಒಂದು ಡಜನ್ ಕಾಂಗ್ರೆಸ್ ನಾಯಕರು ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ, ಅವರು … Continued

ಭಾರತದಲ್ಲಿ 26,727 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 26,727 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದರೊಂದಿಗೆ, ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,37,66,707 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 277 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆಯನ್ನು 4,48,339 ಕ್ಕೆ ಹೆಚ್ಚಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. … Continued

ಮುಂಬೈ : ಚಿರತೆಯೊಂದಿಗೆ ಹೋರಾಡಿ ಗೆದ್ದ ವೃದ್ಧ ಮಹಿಳೆ…! ದೃಶ್ಯ ಸಿಸಿಟಿವಿಯಲ್ಲಿ ಸೆರೆ…ವೀಕ್ಷಿಸಿ

ಮುಂಬೈ: ಗೋರೆಗಾಂವದ ಆರೆ ಮಿಲ್ಕ್ ಕಾಲೋನಿಯಲ್ಲಿ ಬುಧವಾರ ಸಂಜೆ 7: 45 ರ ಸುಮಾರಿಗೆ ವೃದ್ಧ ಮಹಿಳೆಯ ಮೇಲೆ ಚಿರತೆ ದಾಳಿ ಮಾಡಿದೆ. 60 ವರ್ಷದ ಮಹಿಳೆ ನಿರ್ಮಲಾದೇವಿ ಸಿಂಗ್ ತನ್ನ ಮನೆಯ ಬಾಗಿಲ ಹತ್ತಿರದ ಕಟ್ಟೆಯ ಕುಳಿತಿದ್ದಾಗ ಚಿರತೆ ಹಿಂದಿನಿಂದ ದಾಳಿ ಮಾಡಿದೆ. ಈ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾ ಘಟನೆಯನ್ನು ರೆಕಾರ್ಡ್ ಮಾಡಿದ್ದು, … Continued

ಸಿಎಂ ಚನ್ನಿ ಮನವೊಲಿಕೆ ಸಭೆ ಯಶಸ್ವಿ:ರಾಜೀನಾಮೆ ಹಿಂಪಡೆಯಲು ಸಿಧು ಒಪ್ಪಿಗೆ

ಚಂಡೀಗಡ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ( Navjot Singh Sidhu) ಮತ್ತು ಪಂಜಾಬ್‌ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಸಭೆ ಯಶಸ್ವಿಯಾಗಿದೆ ಎಂದು ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ, ನವಜೋತ್ ಸಿಂಗ್ ಸಿಧು ಹಾಕಿದ್ದ ಬಹುತೇಕ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಅಸ್ತು ಎಂದಿದ್ದಾರೆ. ಬೇಡಿಕೆ ಈಡೇರಿಸುವ ಕುರಿತು ಮೌಖಿಕ ಒಪ್ಪಿಗೆ ನೀಡಿರುವ ಮುಖ್ಯಮಂತ್ರಿ ಚನ್ನಿ, … Continued

ಕಪಿಲ್ ಸಿಬಲ್ ಟೀಕೆಯ ನಂತರ, ಶೀಘ್ರವೇ ಸಿಡಬ್ಲ್ಯುಸಿ ಸಭೆ ನಡೆಯಲಿದೆ ಎಂದ ಕಾಂಗ್ರೆಸ್

ನವದೆಹಲಿ: ಜಿ -23 ನಾಯಕರ ಬೇಡಿಕೆಯನ್ನು ಅನುಸರಿಸಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯೂಸಿ) ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಗುರುವಾರ ತಿಳಿಸಿದ್ದಾರೆ. ಜಿ -23 – ಕಾಂಗ್ರೆಸ್ ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ಕೋರಿ ಕಾಂಗ್ರೆಸ್ ಉನ್ನತಾಧಿಕಾರಿಗಳಿಗೆ ಪತ್ರ ಬರೆದ ನಾಯಕರ ಗುಂಪು -ಅದು ಪಕ್ಷದಲ್ಲಿ ಸಾಂಸ್ಥಿಕ ಚುನಾವಣೆಗೆ ಒತ್ತಾಯಿಸುತ್ತಿದೆ. … Continued

ಏಪ್ರಿಲ್​ನಿಂದ ಆಗಸ್ಟ್​ ಅವಧಿಯ ಕೇಂದ್ರದ ವಿತ್ತೀಯ ಕೊರತೆ 4.7 ಲಕ್ಷ ಕೋಟಿ ರೂ.

ನವದೆಹಲಿ: 2021ರ ಏಪ್ರಿಲ್​ನಿಂದ ಆಗಸ್ಟ್‌ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 4.7 ಲಕ್ಷ ಕೋಟಿ ರೂ.ಗಳು ಅಥವಾ ಪೂರ್ಣ ವರ್ಷದ ಬಜೆಟ್ ಅಂದಾಜಿನ ಶೇ 31ರಷ್ಟು ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ಶೇಕಡಾ 109ರಷ್ಟು ಆಗಿತ್ತು ಎಂದು ಸೆಪ್ಟೆಂಬರ್ 30ರಂದು ಅಧಿಕೃತ ಮಾಹಿತಿಯು ತೋರಿಸಿದೆ. ಈ ಬೆಳವಣಿಗೆಯು ಪ್ರಾಥಮಿಕವಾಗಿ ನೇರ ಮತ್ತು … Continued

ಆರ್‌ಬಿಐನ ಹೊಸ ಆಟೋ ಡೆಬಿಟ್ ನಿಯಮಗಳು ಅಕ್ಟೋಬರ್ 1ರಿಂದ ಆರಂಭ: ತಿಳಿದುಕೊಳ್ಳಬೇಕಾದದ್ದು

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವಿಸ್ತರಿಸಿದ ಗಡುವು ಅಂತ್ಯಗೊಳ್ಳಲಿದ್ದು, (RBI) ಕ್ರೆಡಿಟ್ ಕಾರ್ಡ್‌ಗಳ ಮೂಲಕ ಇ-ಆದೇಶಗಳು ಅಥವಾ ಮರುಕಳಿಸುವ ಪಾವತಿಗಳ (recurring payment) ಕುರಿತು ಹೊಸ ಮಾರ್ಗಸೂಚಿಗಳು ಅಕ್ಟೋಬರ್ 1, 2021ರಿಂದ ಜಾರಿಗೆ ಬರಲಿದೆ. ಹೊಸ ನಿಯಮವು ಈಗಾಗಲೇ ಆನ್‌ಲೈನ್ ಪಾವತಿಗಳಿಗಾಗಿ ತಮ್ಮ ಕಾರ್ಡ್‌ಗಳಲ್ಲಿ ಸ್ಥಾಯಿ ಸೂಚನೆಗಳನ್ನು ಹಾಕಿರುವ ಕಾರ್ಡುದಾರರ ಮೇಲೆ ಪ್ರಭಾವ ಬೀರುವ … Continued

ಕಾಂಗ್ರೆಸ್ಸಿನಲ್ಲಿ ಕಾಣುತ್ತಿರುವ ಬಿಕ್ಕಟ್ಟಿಗೆ ಮೂವರು ಗಾಂಧಿಗಳೇ ಹೊಣೆ: ಮಾಜಿ ಕೇಂದ್ರ ಸಚಿವ ನಟ್ವರ್ ಸಿಂಗ್ ವಾಗ್ದಾಳಿ

ನವದೆಹಲಿ: ಮಾಜಿ ವಿದೇಶಾಂಗ ಸಚಿವ ನಟ್ವರ್ ಸಿಂಗ್ ಕಾಂಗ್ರೆಸ್ ತೊರೆದಿದ್ದರೂ ಅದರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ವಿದ್ಯಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿನ ಬಿಕ್ಕಟ್ಟಿಗೆ ಸೋನಿಯಾ, ರಾಹುಲ್ ಹಾಗೂ ಪ್ರಿಯಾಂಕಾ ಈ ಮೂವರು ಗಾಂಧಿಗಳೇ ಹೊಣೆಗಾರರು ಎಂದು ವಾಗ್ದಾಳಿ ನಡೆಸಿರುವ ಅವರು, ರಾಹುಲ್ … Continued

ಪಾಟಿ ಸವಾಲಿನ ವೇಳೆ ಸಂತ್ರಸ್ತೆ ಮುಂದೆ ಅತ್ಯಾಚಾರ ಕೃತ್ಯದ ಇಂಚಿಂಚೂ ವಿವರ: ವಿಚಾರಣಾ ನ್ಯಾಯಾಲಯದ ಬಗ್ಗೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ

ಮುಂಬೈ: ವಿಚಾರಣಾ ನ್ಯಾಯಾಲಯವೊಂದರಲ್ಲಿ ಪಾಟಿ ಸವಾಲಿನ ವೇಳೆ ಪ್ರತಿವಾದಿ ಪರ ವಕೀಲರು ಅತ್ಯಾಚಾರ ಕೃತ್ಯದ ಇಂಚಿಂಚೂ ವಿವರಗಳನ್ನು ಸಂತ್ರಸ್ತೆಯ ಮುಂದೆ ಸಲಹೆಯ ಹೆಸರಿನಲ್ಲಿ ನಡೆಸಿರುವುದು ಬಾಂಬೆ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದೆ. ಸಂತ್ರಸ್ತೆಗೆ ಕೇಳಲಾದ ಪ್ರಶ್ನೆಗಳು ಸೂಕ್ತ ರೀತಿಯ ಪಾಟಿ ಸವಾಲು ಎಂದು ಕರೆಸಿಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಾಧನಾ ಎಸ್ ಜಾಧವ್ ಮತ್ತು ಎಸ್. ವಿ. ಕೊತ್ವಾಲ್ … Continued