ಟೋಕಿಯೊ ಪ್ಯಾರಾಲಿಂಪಿಕ್ಸ್‌: ಬ್ಯಾಡ್ಮಿಂಟನ್ ನಲ್ಲಿ ಐಎಎಸ್‌ ಅಧಿಕಾರಿ, ಕನ್ನಡಿಗ ಸುಹಾಸಗೆ ಬೆಳ್ಳಿ

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾನುವಾರ ಬೆಳಿಗ್ಗೆ ನಡೆದ ಪುರುಷರ ಬ್ಯಾಡ್ಮಿಂಟನ್‌ (ಎಸ್‌ಎಲ್‌-4) ಫೈನಲ್‌ನಲ್ಲಿ ಫ್ರಾನ್ಸ್‌ನ ಲೂಕಾಸ್‌ ಮಜೂರ್‌ ಎದುರು ಭಾರತದ ಸುಹಾಸ್ ಯತಿರಾಜ್ ಸೋಲು ಅನುಭವಿಸಿದರು. ಆದರೆ ಈ ಬೆಳ್ಳಿ ಪದಕ ಪಡೆದಿದ್ದಾರೆ. ಪ್ರಸ್ತುತ ನೋಯ್ಡಾದ ಗೌತಮ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿರುವ (ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್‌) ಕನ್ನಡಿಗ ಸುಹಾಸ್ ಯತಿರಾಜ್, ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಭಾರತದ ಮೊದಲ … Continued

ಟಿಎಂಸಿ ಸೇರಿದ ಬಿಜೆಪಿ ಶಾಸಕ ಸೌಮೆನ್ ರಾಯ್; 4 ವಾರಗಳಲ್ಲಿ ನಾಲ್ವರು ಬಿಜೆಪಿ ಶಾಸಕರು ಪಕ್ಷಾಂತರ..!

ಕೋಲ್ಕತ್ತಾ: ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮೂರು ವಿಧಾನಸಭಾ ಉಪಚುನಾವಣೆಯ ದಿನಾಂಕ ಘೋಷಿಸಿದ ದಿನವೇ ಬಿಜೆಪಿ ಶಾಸಕ ಸೌಮೆನ್ ರಾಯ್ ಶನಿವಾರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿಗೆ ಸೇರಿದ್ದಾರೆ. ಕಲಿಯಗಂಜ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಸೌಮೆನ್ ರಾಯ್ ಅವರು ಈ ಹಿಂದೆ ಟಿಎಂಸಿಯ ಸದಸ್ಯರಾಗಿದ್ದರು. “ಬಿಜೆಪಿ ಶಾಸಕ ಸೌಮೆನ್ ರಾಯ್ ಬಂಗಾಳ ಮತ್ತು ಉತ್ತರ ಬಂಗಾಳದ … Continued

ನಾಯಿಗಳ ಬಾಯಿಗೆ ಆ್ಯಸಿಡ್ ಹಾಕಿ ಕೊಲೆ: ಮಾನವೀಯತೆಯನ್ನೇ ಕೊಂದ ಪಾಪಿಗಳು

ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆದಿದೆ. ನಗರದ ಪ್ರಮುಖ ರಸ್ತೆಯಲ್ಲಿದ್ದ ಓಡಾಡುತ್ತಿದ್ದ ಬೀದಿ ನಾಯಿಗಳನ್ನು ಆ್ಯಸಿಡ್ ಹಾಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಈ ಬಗ್ಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾದ ನಂತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉಜ್ಜೈನಿಯ ನಾಗಜಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ಬೀದಿ ನಾಯಿಗಳ ಬಾಯಿಗೆ ಕೆಲವು ಅಪರಿಚಿತ ವ್ಯಕ್ತಿಗಳು ಆ್ಯಸಿಡ್ ಹಾಕಿದ್ದಾರೆ … Continued

ಅಕ್ರಮ ಮತಾಂತರ: ಉತ್ತರ ಪ್ರದೇಶ ಪೊಲೀಸರಿಂದ 8 ಮಂದಿ ಬಂಧನ, ಅಂಗವಿಕಲರೇ ಟಾರ್ಗೆಟ್

ಲಕ್ನೋ 1,000 ಕ್ಕಿಂತಲೂ ಹೆಚ್ಚು ಜನರನ್ನು ಅಕ್ರಮವಾಗಿ ಮತಾಂತರಗೊಳಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಉಗ್ರ ನಿಗ್ರಹ ಪಡೆ(ಎಟಿಎಸ್) ಜೂನ್ ನವರೆಗೆ 8 ಮಂದಿಯನ್ನು ಬಂಧಿಸಿದ್ದು, ಅವರ ವಿರುದ್ಧ “ದೇಶದ ವಿರುದ್ಧ ಯುದ್ಧ ಸಾರಿದ” ಆರೋಪ ಹೊರಿಸಲಾಗಿದೆ. ಎಟಿಎಸ್ ಮನವಿಯನ್ನು ಸ್ವೀಕರಿಸಿದ ಲಖನೌ ವಿಶೇಷ ನ್ಯಾಯಾಲಯವು, ಸೆಕ್ಷನ್ 121-ಎ ಮತ್ತು 123, ಐಪಿಸಿ ಸೆಕ್ಷನ್ 121 … Continued

ಸರ್ಕಾರಿ ನೌಕರರಿಗೆ ಕೆಲಸದ ಅವಧಿಯಲ್ಲಿ ಇನ್ಮುಂದೆ ಸಿಗಲಿದೆ “ಯೋಗ ವಿರಾಮ’..!

ನವದೆಹಲಿ : ಊಟದ ವಿರಾಮ ಮತ್ತು ಚಹಾ ವಿರಾಮದ ನಂತರ, ಸರ್ಕಾರಿ ಬಾಬುಗಳು ಈಗ ತಮ್ಮ ಕೆಲಸದ ವೇಳಾಪಟ್ಟಿಯಲ್ಲಿ ‘ಯೋಗ ವಿರಾಮ’ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಹೌದು, ಸರ್ಕಾರ ತನ್ನ ಎಲ್ಲ ಉದ್ಯೋಗಿಗಳಿಗೆ 5 ನಿಮಿಷಗಳ ‘ಯೋಗ ವಿರಾಮ’ ತೆಗೆದುಕೊಳ್ಳುವಂತೆ ಕೇಳಿದೆ. ಇದಕ್ಕಾಗಿ, ಆಯುಷ್ ಸಚಿವಾಲಯವು ಅಭಿವೃದ್ಧಿಪಡಿಸಿದ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು, ಇದು ಅಂತರ್ನಿರ್ಮಿತ ಐದು … Continued

ಇಂದು ಉತ್ತರ ಪ್ರದೇಶದಲ್ಲಿ ರೈತರ ಮಹಾಪಂಚಾಯತ್: ನಮ್ಮನ್ನು ತಡೆಯಲು ಬಂದರೆ ಬಲವಂತವಾಗಿ ನುಗ್ಗುತ್ತೇವೆ ಎಂದ ರಾಕೇಶ್ ಟಿಕಾಯತ್‌

ಲಖನೌ: ಕೇಂದ್ರದ ನೂತನ ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ಮಾಡುವ ಸಲುವಾಗಿ ಸೆಪ್ಟೆಂಬರ್ 5ರಂದು ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ರೈತರ ಮಹಾಪಂಚಾಯತ್ ಗೆ ಎಲ್ಲಾ ಸಿದ್ಧತೆಗಳು ಪೂರ್ಣವಾಗಿದೆ. ಏನೇ ಅಡೆತಡೆ ಬಂದರೂ ರೈತ ಮಹಾಪಂಚಾಯತ್‌ ನಿಲ್ಲಿಸುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಅಧ್ಯಕ್ಷ ರಾಕೇಶ್ ಟಿಕಾಯಿತ್ ಹೇಳಿದ್ದಾರೆ. ಮುಂಬರಲಿರುವ ಚುನಾವಣಾ ಸಮಯದಲ್ಲಿ ಕೇಂದ್ರ ವಿರುದ್ಧ … Continued

ಟೋಕಿಯೊ ಪ್ಯಾರಾಲಿಂಪಿಕ್ಸ್: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್ ತಲುಪಿದ ಕನ್ನಡಿಗ, ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್

ಟೋಕಿಯೊ: ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್​​ನಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಅವರು ಫೈನಲ್​ಗೆ ಪ್ರವೇಶಿಸಿದ್ದು, ಅವರಿಗೆ ಪದಕವಂತೂ ಖಚಿತವಾಗಿದೆ. ಶನಿವಾರ ಪುರುಷರ ಬ್ಯಾಡ್ಮಿಂಟನ್ ಎಸ್‌ಎಲ್4 ವಿಭಾಗದಲ್ಲಿ ಸೆಮಿಫೈನಲ್ ಮುಖಾಮುಖಿಯಲ್ಲಿ ಯತಿರಾಜ್ ಅವರು ತಮ್ಮ ಎದುರಾಳಿ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್ ವಿರುದ್ಧ 21-9, 21-15ರ ಅಂತರದಲ್ಲಿ ಗೆಲುವು ದಾಖಲಿಸಿದರು. ಒಟ್ಟು 31 ನಿಮಿಷಗಳ ಕಾಲ ಈ ಪಂದ್ಯ ನಡೆಯಿತು. ಭಾನುವಾರ … Continued

ಅಫ್ಘಾನ್ ಲೈಂಗಿಕ ಕೆಲಸಗಾರರ ಕೊಲೆ ಪಟ್ಟಿ ಸಿದ್ಧ ಮಾಡಲು ಅಶ್ಲೀಲ ಜಾಲತಾಣ ಹುಡುಕುತ್ತಿರುವ ತಾಲಿನಾಬ್‌: ವರದಿ

ಕಾಬೂಲ್: ಅಫ್ಘಾನಿಸ್ತಾನದಿಂದ ತಾಲಿಬಾನಿ ಕೈವಶವಾದ ನಂತರ ಕ್ರೂರ ನಿಯಮಗಳು ಜಾರಿಯಾಗುತ್ತಿದೆ.ಇದರ ಮಧ್ಯೆಯೇ ಈಗ ಮತ್ತೊಮದು ಆತಂಕಕಾರಿ ಸುದ್ದಿ ವರದಿಯಾಗಿದೆ. ತಾಲಿಬಾನ್ ಉಗ್ರರು ಲೈಂಗಿಕ ಕಾರ್ಯಕರ್ತೆಯರು, ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿರುವವರ ಪಟ್ಟಿ ಮಾಡುತ್ತಿದ್ದಾರಂತೆ. ಅವರ್ಯಾರೆಂದು ಪಟ್ಟಿ ಮಾಡಿ ಅವರನ್ನೆಲ್ಲ ಕೊಲ್ಲಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಒಂದು ವರದಿಯ ಪ್ರಕಾರ, ತಾಲಿಬಾನಿಗಳು ಅಫ್ಘಾನ್ ಲೈಂಗಿಕ ಕೆಲಸಗಾರರ “ಕೊಲ್ಲುವ … Continued

ಮುಂಬೈ 1 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ನೀಡಿದ ಭಾರತದ ಮೊದಲ ನಗರ

ಮುಂಬೈ: ಒಂದು ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಗಳನ್ನು ನೀಡಿದ ಭಾರತದ ಮೊದಲ ನಗರ ಮುಂಬೈ ಆಗಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಪ್ರಕಾರ ಮುಂಬೈ ಒಂದು ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸೇಜ್ ನೀಡಲಾಗುದೆ. ಆ ಮೂಲಕ ಹೊಸ ಮೈಲಿಗಲ್ಲನ್ನು ತಲುಪಿದ ದೇಶದ ಮೊದಲ ನಗರವಾಗಿದೆ. ಕೋವಿನ್ ಪೋರ್ಟಲ್‌ನ ಮಾಹಿತಿಯ ಪ್ರಕಾರ ನಗರವು ಇದುವರೆಗೆ 1,00,60,411 … Continued

ವಾಹನಗಳ ಹಾರ್ನಗಳ ಕರ್ಕಶ ಶಬ್ದ ತಪ್ಪಿಸಲು ಶೀಘ್ರದಲ್ಲೇ ಬರಲಿವೆ ತಬಲಾ, ಕೊಳಲು, ಪಿಟೀಲಿನ ನಾದದ ಹಾರ್ನಗಳು..!: ಸಚಿವ ಗಡ್ಕರಿ ಹೊಸ ಯೋಜನೆ

ಕಾರಿನ ಹಾರ್ನ್‌ಗಳು ಮಾಡುವ ಅವಡುಗಚ್ಚುವ ಕರ್ಕಶ ಶಬ್ದ ನಿಮಗೆ ಬೇಸರವಾಗಿದ್ದರೆ ಮತ್ತು ಅವುಗಳು ಹೆಚ್ಚು ಉತ್ಸಾಹಭರಿತ ಮತ್ತು ವರ್ಣಮಯವಾಗಿರಬೇಕೆಂದು ಬಯಸಿದರೆ, ಭಾರತದಲ್ಲಿ ಒಬ್ಬ ಮಂತ್ರಿಯು ನಿಮ್ಮಂತೆಯೇ ಚಿಂತನೆ ನಡೆಸಿದ್ದಾರೆ. ಲೋಕಮತ್ ವರದಿ ಮಾಡಿರುವಂತೆ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಇತ್ತೀಚೆಗೆ ಭಾರತದ ಸಂಗೀತ ವಾದ್ಯಗಳಂತೆ ಧ್ವನಿಸಲು ದೇಶದಲ್ಲಿ ವಾಹನ ಹಾರ್ನ್ ಮಾಡಲು ಸರ್ಕಾರಿ ಆದೇಶವನ್ನು ಪರಿಚಯಿಸಲು … Continued