ಒಂದು ವರ್ಷದ ಬಳಿಕ ಚೀನಾದಲ್ಲಿ ಕೋವಿಡ್​ನಿಂದ ಸಾವು, ಇಬ್ಬರ ಸಾವು ದೃಢಪಡಿಸಿದ ಅಧಿಕಾರಿಗಳು

ವುಹಾನ್‌: ಜಾಗತಿಕವಾಗಿ ಕೊರೊನಾ ವೈರಸ್​ ಪ್ರಕರಣ ತೀವ್ರ ಕುಸಿತ ಕಾಣುತ್ತಿರುವ ನಡುವೆಯೇ ಚೀನಾದಲ್ಲಿ ಈ ಸಾಂಕ್ರಾಮಿಕ ಉಲ್ಬಣಿಸಿದೆ. ಚೀನಾದಲ್ಲಿ 2021ರ ಜನವರಿ ನಂತರ ಕೊರೊನಾ ಸೋಂಕಿನಿಂದ ಮೊದಲ ಸಾವು ಸಂಭವಿಸಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಅಧಿಕಾರಿಗಳು ಶನಿವಾರ ಎರಡು ಕೊವೀಡ್ ಸಾವುಗಳನ್ನು ವರದಿ ಮಾಡಿದ್ದಾರೆ. ಚೀನಾದಲ್ಲಿ ಕೊರೊನಾ ರೂಪಾಂತರಿ ವೈರಸ್‌ ಒಮಿಕ್ರಾನ್​ ಸಮುದಾಯಕ್ಕೆ ಹರಡಿದ್ದು, ಶನಿವಾರ … Continued

ಮರಿಯುಪೋಲ್ ಥಿಯೇಟರ್ ಮೇಲೆ ರಷ್ಯಾ ಬಾಂಬ್ ದಾಳಿ: 130 ಜನರ ರಕ್ಷಣೆ, ಅವಶೇಷಗಳಡಿ ಇನ್ನೂ ಸಿಲುಕಿರುವ 1300 ಕ್ಕೂ ಹೆಚ್ಚು ನಾಗರಿಕರು

ಕೀವ್‌: ರಷ್ಯಾದ ಪಡೆಗಳಿಂದ ಬಾಂಬ್ ದಾಳಿಗೊಳಗಾದ ಮಾರಿಯುಪೋಲ್‌ನ ಥಿಯೇಟರ್‌ನಿಂದ 130 ಜನರನ್ನು ರಕ್ಷಿಸಲಾಗಿದೆ ಎಂದು ಉಕ್ರೇನಿಯನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಆದರೆ 1,300 ಜನರು ಇನ್ನೂ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಹೇಳಿದ್ದಾರೆ. ಆಕ್ರಮಣಕಾರರಿಂದ ನಾಶವಾದ ಮಾರಿಯುಪೋಲ್‌ನಲ್ಲಿರುವ ನಾಟಕ ಥಿಯೇಟರ್‌ನಿಂದ 130 ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ, ಆದರೆ 1,300 ಜನರು ಇನ್ನೂ ನೆಲಮಾಳಿಗೆಯಲ್ಲಿದ್ದಾರೆ” ಎಂದು ಉಕ್ರೇನಿಯನ್ ಸಂಸತ್ತಿನ ಮಾನವ … Continued

ರಷ್ಯಾ ಕುರಿತ ಅಮೆರಿಕ ಅಧ್ಯಕ್ಷರೊಂದಿಗಿನ ದೂರವಾಣಿ ಕರೆಯಲ್ಲಿ ಸಂಘರ್ಷದ ವಿರುದ್ಧ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ

ವಾಷಿಂಗ್ಟನ್‌: ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣದ ಪಾಶ್ಚಿಮಾತ್ಯ ಖಂಡನೆಗೆ ಬೀಜಿಂಗ್‌ ಸಹ ಸೇರುವಂತೆ ಅಮೆರಿಕದ ಅಧ್ಯಕ್ಷರು ಬೀಜಿಂಗ್‌ಗೆ ಒತ್ತಡ ಹೇರುವ ಗುರಿ ಹೊಂದಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರೊಂದಿಗಿನ ಶುಕ್ರವಾರದ ದೂರವಾಣಿ ಕರೆಯಲ್ಲಿ ಯುದ್ಧವು “ಯಾರ ಹಿತಾಸಕ್ತಿಯ ಪರವಾಗಿಯೂ ಇಲ್ಲ” ಎಂದು ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ. 1:50 ಗಂಟೆಗಳ ಅವಧಿಯ … Continued

ಢಾಕಾದ ಇಸ್ಕಾನ್ ರಾಧಾಕಾಂತ ದೇವಸ್ಥಾನ ಧ್ವಂಸಗೊಳಿಸಿ, ಲೂಟಿ ಮಾಡಿದ 200 ಕ್ಕೂ ಹೆಚ್ಚು ಜನರ ಗುಂಪು..!

ನವದೆಹಲಿ: ಗುರುವಾರ 200 ಜನರ ಗುಂಪೊಂದು ಬಾಂಗ್ಲಾದೇಶದ ಢಾಕಾದಲ್ಲಿರುವ ಇಸ್ಕಾನ್ ರಾಧಾಕಾಂತ ದೇವಸ್ಥಾನವನ್ನು ಧ್ವಂಸಗೊಳಿಸಿದೆ ಮತ್ತು ಲೂಟಿ ಮಾಡಿದೆ. ವರದಿಗಳ ಪ್ರಕಾರ, ಢಾಕಾದ ವಾರಿಯಲ್ಲಿನ 222, ಲಾಲ್ ಮೋಹನ್ ಸಹಾ ಸ್ಟ್ರೀಟ್‌ನಲ್ಲಿರುವ ದೇವಾಲಯದ ಅನೇಕ ಸದಸ್ಯರು ದಾಳಿಯಲ್ಲಿ ಗಾಯಗೊಂಡಿದ್ದಾರೆ. ಈ ಗುಂಪಿನ ನೇತೃತ್ವವನ್ನು ಹಾಜಿ ಶಫಿವುಲ್ಲಾ ವಹಿಸಿದ್ದರು ಎಂದು ವರದಿಯಾಗಿದೆ. ಕಳೆದ ವರ್ಷ, ಬಾಂಗ್ಲಾದೇಶದ ಕೊಮಿಲ್ಲಾ … Continued

ಇದೆಂಥ ಸೇಡು…7ನೇ ವಯಸ್ಸಿನಲ್ಲಿ ಶಿಕ್ಷಕಿ ಅವಮಾನಿಸಿದ್ದರೆಂಬ ಕಾರಣಕ್ಕೆ 30 ವರ್ಷಗಳ ನಂತರ ಅವರನ್ನು 101 ಬಾರಿ ಇರಿದು ಕೊಂದ ಹಳೆಯ ವಿದ್ಯಾರ್ಥಿ…!

ಬ್ರಸೆಲ್ಸ್ (ಬೆಲ್ಜಿಯಂ): 37 ವರ್ಷದ ವ್ಯಕ್ತಿಯೊಬ್ಬ 7 ವರ್ಷದನಾಗಿದ್ದಾಗ ತನ್ನ ಟೀಚರ್ ಕ್ಲಾಸಿನಲ್ಲಿ ಅವಮಾನ ಮಾಡಿದರೆಂಬ ಕಾರಣಕ್ಕೆ 30 ವರ್ಷಗಳ ನಂತರ ಅವರನ್ನು 101 ಬಾರಿ ಇರಿದು ಸೇಡು ತೀರಿಸಿಕೊಂಡ ಘಟನೆ ನಡೆದ ಬಗ್ಗೆ ವರದಿಯಾಗಿದೆ..! ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರೊಬ್ಬರಿಂದ ಅವಮಾನಿತನಾಗಿದ್ದೇನೆ ಎಂದು ಹೇಳಿಕೊಂಡ 37 ವರ್ಷದ ವ್ಯಕ್ತಿಯೊಬ್ಬ ಸೇಡು ತೀರಿಸಿಕೊಳ್ಳಲು ಮೂವತ್ತು ವರ್ಷಗಳ ನಂತರ … Continued

ಉಕ್ರೇನ್‌ ಮೇಲೆ ರಷ್ಯಾ ದಾಳಿ: ಶಾಲೆಯ ಮೇಲೆ ರಷ್ಯಾದ ದಾಳಿಯಲ್ಲಿ 21 ಮಂದಿ ಸಾವು

ಕೀವ್‌: ಖಾರ್ಕಿವ್ ಬಳಿಯ ಮೆರೆಫಾದಲ್ಲಿ ಶಾಲೆ ಮತ್ತು ಸಮುದಾಯ ಕೇಂದ್ರವನ್ನು ಧ್ವಂಸಗೊಳಿಸಿದ ರಷ್ಯಾದ ದಾಳಿಯಿಂದ 21 ಜನರು ಮೃತಪಟ್ಟಿದ್ದಾರೆ ಎಂದು ಎಪಿ ವರದಿ ಮಾಡಿದೆ. ಮೆರೆಫಾ ಮೇಯರ್ ವೆನಿಯಾಮಿನ್ ಸಿಟೋವ್ ಅವರು ಗುರುವಾರ ಬೆಳಗಿನ ಜಾವದ ಮೊದಲು ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಮಾರಿಯುಪೋಲ್‌ನಲ್ಲಿ ರಷ್ಯಾದ ವೈಮಾನಿಕ ದಾಳಿಯಿಂದ ಧ್ವಂಸಗೊಂಡ ಥಿಯೇಟರ್‌ನಲ್ಲಿ ನೂರಾರು ನಾಗರಿಕರು ಸಿಕ್ಕಿಹಾಕಿಕೊಂಡಿದ್ದಾರೆ … Continued

ಎಂಥಾ ಮಾತು…ಆತ್ಮಹತ್ಯಾ ಬಾಂಬರ್ ಆಗಲು ಬಯಸ್ತಾರಂತೆ ಪಾಕ್‌ ಸಚಿವರು..! ಕಾರಣ ..? ವೀಕ್ಷಿಸಿ

ಇಸ್ಲಮಾಬಾದ್:ಮಂಗಳವಾರ ಸ್ಫೋಟಕ ಹೇಳಿಕೆಯೊಂದರಲ್ಲಿ, ಪಾಕಿಸ್ತಾನದ ನಾಗರಿಕ ವಿಮಾನಯಾನ ಸಚಿವ ಗುಲಾಮ್ ಸರ್ವರ್ ಖಾನ್ ತಾವು ಆತ್ಮಹತ್ಯಾ ಬಾಂಬರ್ ಆಗಲು ಬಯಸಿದ್ದು, ಆ ಮೂಲಕ ಇಡೀ ವಿರೋಧ ಪಕ್ಷಗಳನ್ನು ಸ್ಫೋಟಿಸುವುದಾಗಿ ವಿರೋಧ ಪಕ್ಷಗಳಿಗೆ ಬೆದರಿಕೆ ಹಾಕಿದ್ದಾರೆ. ಇಸ್ಲಾಂನಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯನ್ನು ನಿಷೇಧಿಸಲಾಗಿದೆಯಾದರೂ, ಇಮ್ರಾನ್ ಖಾನ್ ಅವರನ್ನು ಕೆಳಗಿಳಿಸಲು ಪ್ರಯತ್ನಿಸಿದ್ದಕ್ಕಾಗಿ ಸಂಪೂರ್ಣ ವಿರೋಧ ಪಕ್ಷಗಳನ್ನು ಸ್ಫೋಟಿಸುತ್ತೇನೆ ಎಂದು … Continued

ನೀರು ಕುಡಿಯುವಾಗ ಹೆಬ್ಬಾವನ್ನು ಹಿಡಿದ ಜಾಗ್ವಾರ್‌…ವೀಕ್ಷಿಸಿ

ಜಾಗ್ವಾರ್‌ಗಳು ಬೇಟೆಗೆ ಹೆಸರುವಾಸಿಯಾಗಿವೆ ಮತ್ತು ಅವುಗಳು ಯಾವುದನ್ನಾದರೂ ಬೇಟೆಯಾಡಬಲ್ಲವು. ಮೀನುಗಳು, ಪಕ್ಷಿಗಳು, ಮೊಸಳೆಗಳು ಮತ್ತು ಹಾವುಗಳನ್ನೂ ಜಾಗ್ವಾರ್‌ಗಳು ಬೇಟೆಯಾಡುತ್ತವೆ. ಜಾಗ್ವಾರ್‌ಗಳು ಇತರ ದೊಡ್ಡ ಬೆಕ್ಕುಗಳಿಗಿಂತ ಹೆಚ್ಚು ಶಕ್ತಿಯುತವಾದ ಕಚ್ಚುವಿಕೆಯನ್ನು ಹೊಂದಿವೆ. ಅವುಗಳ ಹಲ್ಲುಗಳು ಮೊಸಳೆಗಳ ದಪ್ಪ ಚರ್ಮ ಮತ್ತು ಆಮೆಗಳ ಗಟ್ಟಿಯಾದ ಚಿಪ್ಪುಗಳ ಮೂಲಕ ಕಚ್ಚುವಷ್ಟು ಬಲವಾಗಿರುತ್ತವೆ. ಜಾಗ್ವಾರ್ ಹೆಬ್ಬಾವನ್ನು ಬೇಟೆಯಾಡುತ್ತಿರುವ ಈಗ ವೀಡಿಯೊವೊಂದು ಸಾಮಾಜಿಕ … Continued

ಯುದ್ಧ ಸ್ಥಗಿತಗೊಳಿಸಲು ರಷ್ಯಾಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ, ಇದನ್ನು ‘ಸಂಪೂರ್ಣ ವಿಜಯ’ ಎಂದು ಕರೆದ ಉಕ್ರೇನ್‌ ಅಧ್ಯಕ್ಷ

ಅಂತಾರಾಷ್ಟ್ರೀಯ ನ್ಯಾಯಾಲಯವು (ICJ) ರಷ್ಯಾವು ಉಕ್ರೇನ್‌ನಲ್ಲಿ ತಕ್ಷಣವೇ ಯುದ್ಧವನ್ನು ನಿಲ್ಲಿಸುವಂತೆ ಕರೆ ನೀಡಿದೆ, ರಷ್ಯಾದ ಬಲದ ಬಳಕೆಯಿಂದ ತೀವ್ರವಾಗಿ ಕಳವಳಗೊಂಡಿದೆ” ಎಂದು ಹೇಳಿದೆ. ಕೀವ್ ತಮ್ಮ ಪರವಾದ 13-2ರ ಅಂತಾರಾಷ್ಟ್ರೀಯ ನ್ಯಾಯಾಲಯವದ ತೀರ್ಪನ್ನು ವಿಜಯವೆಂದು ಶ್ಲಾಘಿಸಿದರೆ, ಮಾಸ್ಕೋ ಹೇಗ್ ಮೂಲದ ನ್ಯಾಯಾಲಯವು ಈ ಪ್ರಕರಣದ ಬಗ್ಗೆ ನಮ್ಮನ್ನು ಕೇಳಲು ‘ಅಧಿಕಾರವನ್ನು ಹೊಂದಿಲ್ಲ’ ಎಂದು ಸಮರ್ಥಿಸಿಕೊಂಡಿದೆ. ಕದನ … Continued

ಇಸ್ರೇಲ್​ನಲ್ಲಿ ಎರಡು ಹೊಸ ಕೊವಿಡ್ ರೂಪಾಂತರಿ ವೈರಸ್ ಪತ್ತೆ; ಇದು ಪ್ರಪಂಚದಾದ್ಯಂತ ಇನ್ನೂ ‘ಗೊತ್ತಿರದ’ ಸ್ಟ್ರೈನ್, ಹೆಚ್ಚಿದ ಆತಂಕ

ನವದೆಹಲಿ: ಎರಡು ವರ್ಷಗಳಿಂದ ಜಗತ್ತನ್ನೇ ಕಂಗೆಡಿಸಿರುವ ಕೊರೊನಾವೈರಸ್​ ಈಗಾಗಲೇ ಅನೇಕ ರೂಪಾಂತರಗಳನ್ನು ಪಡೆದಿದೆ. ಕೊವಿಡ್-19ನಿಂದ ಪಾರಾಗಲು ವಿಶ್ವಾದ್ಯಂತ ಕೊರೊನಾ ಲಸಿಕೆಗಳನ್ನು ಪಡೆದ ನಂತರ ಈಗ ರೋಗ ನಿಯಂತ್ರಣಕ್ಕೆ ಬರುತ್ತಿರುವಾಗಲೇ ಈಗ ಯಾರಿಗೂ ತಿಳಿದಿಲ್ಲದ ಹೊಸ ಕೊವಿಡ್ ರೂಪಾಂತರಿಯ 2 ಪ್ರಕರಣಗಳು ಇಸ್ರೇಲ್​ನಲ್ಲಿ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಇಸ್ರೇಲ್‌ನಲ್ಲಿ ಕಂಡುಬಂದ ಹೊಸ ಕೊವಿಡ್ ರೂಪಾಂತರಿಯ ಎರಡು ಪ್ರಕರಣಗಳು … Continued