ಹಮಾಸ್ ನಿಂದ ಹತ್ಯೆಗೀಡಾದ, ಸುಟ್ಟು ಹಾಕಿದ ಶಿಶುಗಳ ಫೋಟೋಗಳನ್ನು ಬಿಡುಗಡೆ ಮಾಡಿದ ಇಸ್ರೇಲ್

ಟೆಲ್‌ ಅವೀವ್‌ : ಹಮಾಸ್ ಉಗ್ರರಿಂದ ಹತ್ಯೆಗೀಡಾದ ಮತ್ತು ಸುಟ್ಟ ಶಿಶುಗಳ ಭಯಾನಕ ಚಿತ್ರಗಳನ್ನು ಇಸ್ರೇಲ್ ಗುರುವಾರ ಬಿಡುಗಡೆ ಮಾಡಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರಿಗೆ ಕೆಲವು ಚಿತ್ರಗಳನ್ನು ತೋರಿಸಿದ್ದಾರೆ. ಕೆಲವು ಚಿತ್ರಗಳು ಶಿಶುಗಳ ಕಪ್ಪು ಮತ್ತು ಸುಟ್ಟ ದೇಹಗಳನ್ನು ತೋರಿಸುತ್ತವೆ. ಶನಿವಾರ ಬೆಳಗ್ಗೆ … Continued

ಆಪರೇಷನ್​ ಅಜಯ​: ಇಸ್ರೇಲ್‌ನಿಂದ ಭಾರತೀಯರನ್ನು ಹೊತ್ತ ಮೊದಲ ವಿಮಾನ ಇಂದೇ ತಾಯ್ನಾಡಿಗೆ

ನವದೆಹಲಿ : ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ನಡುವಿನ ಸಮರದಿಂದಾಗಿ ಇಸ್ರೇಲಿನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಕರೆತರಲು ಕೇಂದ್ರ ಸರ್ಕಾರವು ‘ಆಪರೇಷನ್‌ ಅಜಯ’‌ ಆರಂಭಿಸಿದೆ. ಈ ಕಾರ್ಯಾಚರಣೆಯ ಮೊದಲ ಭಾಗವಾಗಿ ಇಂದು ಗುರುವಾರ ರಾತ್ರಿಯೇ ಭಾರತೀಯರನ್ನು ಹೊತ್ತ ಮೊದಲ ವಿಮಾನ ಭಾರತಕ್ಕೆ ಬರಲಿದೆ ಎಂದು ವಿದೇಶಾಂಗ ಸಚಿವಾಲಯದ ಅರಿಂದಮ್‌ ಭಾಗ್ಚಿ ತಿಳಿಸಿದ್ದಾರೆ. 230 ಭಾರತೀಯರು … Continued

‘ಅವರನ್ನು ಭೂಮಿ ಮೇಲಿಂದ ಅಳಿಸಿ ಹಾಕ್ತೇವೆ ‘: ಹಮಾಸ್ ‘ನಾಶ’ ಮಾಡುವ ಪ್ರತಿಜ್ಞೆ ಮಾಡಿದ ಇಸ್ರೇಲ್‌ ಪ್ರಧಾನಿ ನೆತನ್ಯಾಹು

ಟೆಲ್‌ಅವೀವ್‌ : ಬುಧವಾರ ಮಕ್ಕಳು ಮತ್ತು ಮಹಿಳೆಯರ ವಿರುದ್ಧ ಹಮಾಸ್ ಕ್ರೌರ್ಯ ಬಹಿರಂಗಗೊಂಡ ನಂತರ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಉಗ್ರಗಾಮಿ ಗುಂಪಿನ ಪ್ರತಿಯೊಬ್ಬ ಸದಸ್ಯರನ್ನು “ಸತ್ತ ವ್ಯಕ್ತಿ” ಎಂದು ಕರೆದಿದ್ದಾರೆ ಮತ್ತು “ಹಮಾಸ್ ಹೆಸರನ್ನು ಭೂಮಿಯಿಂದ ಅಳಿಸಿಹಾಕುವುದಾಗಿ” ಪ್ರತಿಜ್ಞೆ ಮಾಡಿದ್ದಾರೆ. “ಹಮಾಸ್ ಐಸಿಸ್ ಆಗಲಿದೆ – ಪ್ರಪಂಚವು ಐಸಿಸ್ ಅನ್ನು ಪುಡಿಮಾಡಿ ಮತ್ತು … Continued

ಬಿಹಾರ ರೈಲು ಅಪಘಾತ: 4 ಸಾವು, 70 ಮಂದಿಗೆ ಗಾಯ

ನವದೆಹಲಿ: ಬಿಹಾರದ ಬಕ್ಸಾರ್‌ನಲ್ಲಿ ಬುಧವಾರ ಸಂಜೆ ದೆಹಲಿ-ಕಾಮಾಖ್ಯ ಈಶಾನ್ಯ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿ ಕನಿಷ್ಠ ನಾಲ್ವರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ. ರಘುನಾಥಪುರ ನಿಲ್ದಾಣದ ಬಳಿ ರೈಲಿನ ಆರು ಬೋಗಿಗಳು ಹಳಿತಪ್ಪಿದ ನಂತರ 70 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರೈಲು ಹಳಿತಪ್ಪಿ ಮೃತಪಟ್ಟ ಸಂಬಂಧಿಕರಿಗೆ ರೈಲ್ವೆ ಇಲಾಖೆ ಗುರುವಾರ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಗೊಂಡವರಿಗೆ … Continued

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌: ಕ್ರಿಸ್ ಗೇಲ್ ದಾಖಲೆ ಮುರಿದ ರೋಹಿತ್ ಶರ್ಮಾ ; ಅತಿ ಹೆಚ್ಚು ಸಿಕ್ಸರ್‌ ಹೊಡೆದ ಟಾಪ್‌ 10 ಆಟಗಾರರ ಪಟ್ಟಿ

ನವದೆಹಲಿ: ಭಾರತದ ಬ್ಯಾಟರ್ ರೋಹಿತ್ ಶರ್ಮಾ ಬುಧವಾರ ದೆಹಲಿಯಲ್ಲಿ ನಡೆದ ಐಸಿಸಿ ವಿಶ್ವಕಪ್ 2023ರ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ ಅವರ ಹೆಸರಿನಲ್ಲಿದ್ದ ಅತಿ ಹೆಚ್ಚು ಸಿಕ್ಸರ್‌ ಹೊಡೆದ ದಾಖಲೆಯನ್ನು ಮುರಿದಿದ್ದಾರೆ, ಅತಿ ಹೆಚ್ಚು ಅಂತಾರಾಷ್ಟ್ರೀಯ ಸಿಕ್ಸರ್‌ಗಳ ಹೊಡೆದ ಆಟಗಾರ ಎಂದು ಅವರು ನೂತನ ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್‌ನ ಬಿರುಸಿನ ಬ್ಯಾಟರ್‌ ಕ್ರಿಸ್ … Continued

ಯುದ್ಧ ಪೀಡಿತ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ‘ಆಪರೇಷನ್ ಅಜಯ’ ಆರಂಭಿಸಿದ ಭಾರತ

ನವದೆಹಲಿ: ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ʼಆಪರೇಷನ್ ಅಜಯʼವನ್ನು ಪ್ರಾರಂಭಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ ಬುಧವಾರ ಪ್ರಕಟಿಸಿದ್ದಾರೆ. “ವಿಶೇಷ ಚಾರ್ಟರ್ ವಿಮಾನಗಳು ಮತ್ತು ಇತರ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ. ಇಸ್ರೇಲ್‌ನಿಂದ ಹಿಂದಿರುಗಲು ಬಯಸುವ ನಮ್ಮ ನಾಗರಿಕರಿಗೆ ಮರಳಲು ಅನುಕೂಲವಾಗುವಂತೆ ʼಆಪರೇಷನ್ ಅಜಯʼ ಪ್ರಾರಂಭಿಸಲಾಗುತ್ತಿದೆ. ವಿಶೇಷ ಚಾರ್ಟರ್ … Continued

ವಿಶ್ವಕಪ್ 2023: ರೋಹಿತ್ ಶರ್ಮಾ ದಾಖಲೆಯ ಶತಕ : ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 8 ವಿಕೆಟ್‌ಗಳ ಜಯ

ನವದೆಹಲಿ: ಬುಧವಾರ (ಅಕ್ಟೋಬರ್ 11) ನಡೆದ ಐಸಿಸಿ ವಿಶ್ವಕಪ್ 2023 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ಎಂಟು ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆಯ ಶತಕ ಸಿಡಿಸಿದರು ಮತ್ತು ಜಸ್ಪ್ರೀತ್ ಬುಮ್ರಾ ಅವರು ತಮ್ಮ ಅತ್ಯುತ್ತಮ ವಿಶ್ವ ಕಪ್ ಬೌಲಿಂಗ್ ಮಾಡಿ ದೆಹಲಿಯಲ್ಲಿ ಭಾರತದ ಗೆಲುವಿಗೆ … Continued

ರಾಜಸ್ಥಾನ ವಿಧಾನಸಭೆ ಚುನಾವಣೆ ದಿನಾಂಕ ಬದಲಾವಣೆ

ನವದೆಹಲಿ : ಕೇಂದ್ರ ಚುನಾವಣಾ ಆಯೋಗವು ರಾಜಸ್ಥಾನ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಬುಧವಾರ ಬದಲಾವಣೆ ಮಾಡಿದೆ. ೀಗ ಚುನಾವಣೆ ನವೆಂಬರ್ 23ರ ಬದಲಿಗೆ ನವೆಂಬರ್ 25ರಂದು ನಡೆಯಲಿದೆ. ನಿಗದಿಪಡಿಸಿದ ದಿನಕ್ಕಿಂತ ಎರಡು ದಿನ ತಡವಾಗಿ ಚುನಾವಣೆ ನಡೆಸಲು ಅದು ನಿರ್ಧರಿಸಿದೆ. ನವೆಂಬರ್ 23ರಂದು ರಾಜ್ಯದಲ್ಲಿ ಬಹಳಷ್ಟು ಮದುವೆ ಸಮಾರಂಭಗಳು ಹಾಗೂ ಕಾರ್ಯಕ್ರಮಗಳು ಆಯೋಜನೆಯಾಗಿರುವುದರಿಂದ ನವೆಂಬರ್ 25ಕ್ಕೆ … Continued

ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ರೋಡೆ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಎನ್ಐಎ

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ, ಪಂಜಾಬ್‌ನ ಮೋಗಾದಲ್ಲಿ ದಾಳಿ ನಡೆಸಿದ ನಂತರ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡ್‌ ಎಂಬಾತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ನಿಷೇಧಿತ ಸಂಘಟನೆ ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ (ಐಎಸ್‌ವೈಎಫ್) ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್ ಎಂಬಾತನನ್ನು ಕೇಂದ್ರ ಸರ್ಕಾರ ಭಯೋತ್ಪಾದಕ ಎಂದು ಗುರುತಿಸಿದೆ. ಆತ ಖಲಿಸ್ತಾನ್ ಚಳವಳಿಯ … Continued

ಆಘಾತಕಾರಿ ವೀಡಿಯೊ | ಕಾರು ದರೋಡೆ ಮಾಡಿ ರಸ್ತೆಯಲ್ಲಿ ಚಾಲಕನನ್ನು ಎಳೆದೊಯ್ದು ಸಾಯಿಸಿದ ದರೋಡೆಕೋರರು

ನವದೆಹಲಿ: ಬೆಚ್ಚಿ ಬೀಳಿಸಿದ ಪ್ರಕರಣದಲ್ಲಿ ಟ್ಯಾಕ್ಸಿ ಚಾಲಕನೊಬ್ಬನನ್ನು ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಸುಮಾರು 1.5 ಕಿಲೋಮೀಟರ್ ವರೆಗೆ ಕಾರೊಂದು ಎಳೆದೊಯ್ದು ನಂತರ ಆತ ಪ್ರಾಣ ಕಳೆದುಕೊಂಡಿರುವ ಘಟನೆ ದೆಹಲಿಯ ಮಹಿಪಾಲ್‌ಪುರ ಪ್ರದೇಶದಲ್ಲಿ ನಡೆದಿದೆ. ಮೃತರನ್ನು 43 ವರ್ಷದ ವಿಜೇಂದ್ರ ಎಂದು ಗುರುತಿಸಲಾಗಿದ್ದು, ವಸಂತಕುಂಜ ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ 11:30ರ ಸುಮಾರಿಗೆ ಈ … Continued