ಅಪರೂಪದ 11 ಹಲ್ಲಿಗಳ ಕಳ್ಳಸಾಗಾಣಿಕೆಗೆ ಯತ್ನಿಸಿ ಸಿಕ್ಕಿಬಿದ್ದ ಗ್ಯಾಂಗ್‌ ; ಒಂದು ಹಲ್ಲಿಗೆ 60 ಲಕ್ಷ ರೂ.ಗಳಂತೆ ಮಾರಾಟಕ್ಕೆ ಯತ್ನ..!

ಗುವಾಹತಿ : ಅಸ್ಸಾಂನ ದಿಬ್ರುಗಢದಲ್ಲಿ ಪೊಲೀಸರು ಶುಕ್ರವಾರ 11 ಅಪರೂಪದ ಟೋಕೆ ಗೆಕ್ಕೊ ಹಲ್ಲಿಗಳನ್ನು ವಶಪಡಿಸಿಕೊಂಡಿದ್ದು, ಮೂವರು ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಟೋಕೆ ಗೆಕ್ಕೊಗಳನ್ನು ಹೆಚ್ಚು ಅಳಿವಿನಂಚಿನಲ್ಲಿವ ಜೀವಿಗಳೆಂದು ಪಟ್ಟಿ ಮಾಡಲಾಗಿರುವುದರಿಂದ ಅವುಗಳ ರಫ್ತು ನಿಷೇಧಿಸಲಾಗಿದೆ. ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ, ಗರಿಷ್ಠ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ … Continued

“ಕ್ಷಮಿಸಿ, ಅದು…” : ಅರುಣಾಚಲ ಪ್ರದೇಶ, ಈಶಾನ್ಯ ರಾಜ್ಯಗಳ ಕುರಿತ ಪ್ರಶ್ನೆಗೆ ಉತ್ತರಿಸದೆ ನುಣುಚಿಕೊಂಡ ಚೀನಾದ ಡೀಪ್‌ ಸೀಕ್ ಎಐ

ಆರಿಟಿಫಿಶಿಯಲ್‌ ಇಂಟೆಲಿಜೆನ್ಸ್‌ ಚೀನಾದ ಡೀಪ್‌ಸೀಕ್‌ ಎಐ (DeepsSeek AI) ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಚಾಟ್‌ ಜಿಪಿಟಿ (GPT) ಯಂತಹ AI ಚಾಟ್‌ಬಾಟ್ ದೈತ್ಯರ ವಿರುದ್ಧ ಇದು ಸ್ಪರ್ಧೆಗೆ ಇಳಿದಿದೆ. ಓಪನ್​ ಎಐ, ಗೂಗಲ್, ಮೈಕ್ರೋಸಾಫ್ಟ್ ಮೊದಲಾದ ಸಂಸ್ಥೆಗಳು ಹೊಸ ಸ್ಪರ್ಧೆಗೆ ಸಜ್ಜಾಗಬೇಕಿದೆ. ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಅದು ಕಡಿಮೆ ಬೆಲೆಯ ಕಾರಣಕ್ಕೆ ಜನಪ್ರಿಯವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ … Continued

ಮುಯ್ಯಿಗೆ ಮುಯ್ಯಿ..: ಅರುಣಾಚಲದ ಕೆಲಸ್ಥಳಗಳಿಗೆ ಹೆಸರಿಟ್ಟ ಚೀನಾ ಕ್ರಮಕ್ಕೆ ಪ್ರತಿಯಾಗಿ ಟಿಬೆಟಿನ 30 ಸ್ಥಳಗಳಿಗೆ ಹೆಸರಿಡಲು ಭಾರತದ ನಿರ್ಧಾರ..

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸದಾಗಿ ಚುನಾಯಿತ ಎನ್‌ಡಿಎ ಸರ್ಕಾರವು ಟಿಬೆಟ್‌ನ 30 ಸ್ಥಳಗಳಿಗೆ ಮರುನಾಮಕರಣ ಮಾಡುವುದನ್ನು ಅನುಮೋದಿಸಿದೆ. ಭಾರತದ ರಾಜ್ಯವಾದ ಅರುಣಾಚಲ ಪ್ರದೇಶದ ಕೆಲ ಸ್ಥಳಗಳಿಗೆ ಚೀನಾದ ಹೆಸರಿಟ್ಟಿದ್ದಕ್ಕೆ ಪ್ರತಿಕ್ರಿಯೆಯಾಗಿ ಭಾರತವೂ ಟಿಬೆಟ್‌ನ ಕೆಲ ಸ್ಥಳಗಳಿಗೆ ಹೆಸರಿಡಲು ನಿರ್ಧರಿಸಿದೆ. ಐತಿಹಾಸಿಕ ಸಂಶೋಧನೆ ಮತ್ತು ಟಿಬೆಟ್ ಪ್ರದೇಶದ ಸಂಬಂಧವನ್ನು ಆಧರಿಸಿ ದೆಹಲಿಯಿಂದ ಅನುಮೋದಿಸಲ್ಪಟ್ಟ … Continued

ಎರಡು ವಿಧಾನಸಭೆ ಚುನಾವಣೆ ಫಲಿತಾಂಶ : ಅರುಣಾಚಲದಲ್ಲಿ ಬಿಜೆಪಿಗೆ ಮುನ್ನಡೆ , ಸಿಕ್ಕಿಂನಲ್ಲಿ ಬಹುಮತದತ್ತ ಎಸ್‌ ಕೆ ಎಂ

ನವದೆಹಲಿ: ಹಿಮಾಲಯದ ರಾಜ್ಯಗಳಾದ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಒಟ್ಟು   43  ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಅಥವಾ ಮುನ್ನಡೆ ಪಡೆದಿದೆ. ಅರುಣಾಚಲದಲ್ಲಿ ಹತ್ತು ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ 60 ವಿಧಾನಸಭಾ ಕ್ಷೇತ್ರಗಳ ಪೈಕಿ 50 ಸ್ಥಾನಗಳಿಗೆ ಮಾತ್ರ ಮತ ಎಣಿಕೆ … Continued

ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ…!

ಈಶಾನ್ಯದ ಅರುಣಾಚಲ ಪ್ರದೇಶದ ದೂರದ ಹಳ್ಳಿ, 40-ಕಿಮೀ ಚಾರಣ ಮಾಡಿ ಅಲ್ಲಿಗೆ ಹೋಗಬೇಕು. ಆದರೆ ಈ ಮತದಾನ ಕೇಂದ್ರದಲ್ಲಿರುವುದು ಒಬ್ಬರೇ ಒಬ್ಬರು ಮತದಾರರು..! ಲೋಕಸಭೆ ಚುನಾವಣೆ ಮತದಾನಕ್ಕಾಗಿ ಏಕೈಕ ಮತದಾರರು ಇರುವ ಮಲೋಗಮ್ ಗ್ರಾಮದ ಮತದಾನ ಕೇಂದ್ರಕ್ಕೆ ಚುನಾವಣಾ ಆಯೋಗದ (EC) ಅಧಿಕಾರಿಗಳು ಗುರುವಾರ ಶ್ರಮದಾಯಕ ಸುದೀರ್ಘ ಪಾದಯಾತ್ರೆಯನ್ನು ಕೈಗೊಂಡರು. ಕೇಂದ್ರದ ಏಕೈಕ ಮತದಾರರಾದ 44 … Continued

ಭಾರತದ ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳಿಗೆ ಹೊಸದಾಗಿ 30 ಹೆಸರುಗಳನ್ನು ನಾಮಕರಣ ಮಾಡಿದ ಚೀನಾ

ಬೀಜಿಂಗ್: ಭಾರತದ ಅರುಣಾಚಲ ಪ್ರದೇಶದ ಕುರಿತು ಚೀನಾ ಮತ್ತೆ ಕ್ಯಾತೆ ಮಾಡುತ್ತಿದ್ದು, ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳಿಗೆ ತಾನು ಹೆಸರಿಟ್ಟ 30 ಹೊಸ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಸ್ಥಳಗಳನ್ನು ಮರುನಾಮಕರಣ ಮಾಡುವುದನ್ನು ಭಾರತ ತಿರಸ್ಕರಿಸಿದೆ. ಅರುಣಾಚಲಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ. ಹೊಸ ಹೆಸರುಗಳನ್ನು ಇಡುವುದರಿಂದ ಅದು ವಾಸ್ತವತೆಯನ್ನು ಬದಲಾಯಿಸುವುದಿಲ್ಲ … Continued

ಅರುಣಾಚಲ ಪ್ರದೇಶ : ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಕಾಂಗ್ರೆಸ್, ಎನ್‌ಪಿಪಿಯ ನಾಲ್ವರು ಶಾಸಕರು

ಅಗರ್ತಲಾ : ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ, ವಿಪಕ್ಷವಾದ ಕಾಂಗ್ರೆಸ್‌ನ ಇಬ್ಬರು ಶಾಸಕರು ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಯ ಇಬ್ಬರು ಶಾಸಕರು ಮುಖ್ಯಮಂತ್ರಿ ಪೆಮಾ ಖಂಡು ಅವರ ಸಮ್ಮುಖದಲ್ಲಿ ಆಡಳಿತಾರೂಢ ಬಿಜೆಪಿ ಸೇರಿದ್ದಾರೆ. ಇಟಾನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಶಾಸಕರಾದ ನಿನೊಂಗ್ ಎರಿಂಗ್, ವಾಂಗ್ಲಿಂಗ್ ಲೋವಾಂಗ್‌ಡಾಂಗ್ ಮತ್ತು … Continued

ಅರುಣಾಚಲ-ಮ್ಯಾನ್ಮಾರ್ ಗಡಿ ಸಮೀಪ ವಿಶ್ವದ IIನೇ ಮಹಾಯುದ್ಧದ ವೇಳೆ ಮಿತ್ರಪಡೆಗಳು ಸಾರಿಗೆ ಕ್ಯಾಂಪ್‌ ಆಗಿ ಬಳಸಿದ್ದ ಗುಹೆ ಪತ್ತೆ…!

ವಿಶ್ವದ IIನೇ ಮಹಾಯುದ್ಧದ ಇತಿಹಾಸದಲ್ಲಿ ಮರೆತುಹೋಗಿರುವ ಅಧ್ಯಾಯವೊಂದು ಈಗ ಅನಿರೀಕ್ಷಿತ ಸ್ಥಳದಲ್ಲಿ ಮರುಕಳಿಸಿದೆ. ಟ್ಯಾಗಿಟ್ ಸೊರಾಂಗ್ ನೇತೃತ್ವದ 27 ಚಾರಣಿಗರ ತಂಡವು ಅರುಣಾಚಲ-ಮ್ಯಾನ್ಮಾರ್ ಗಡಿಯ ಭೂಪ್ರದೇಶದ ನಡುವೆ ವಿಶ್ವ ಮಹಾಯುದ್ಧ IIಕ್ಕೆ ಸಂಬಂಧಿಸಿದ ಗುಹೆಯೊಂದನ್ನು ಪತ್ತೆ ಮಾಡಿದೆ. IIನೇ ಮಹಾಯುದ್ಧದಲ್ಲಿ ಜಪಾನ್‌ ಸೈನ್ಯ ಮುಂದುವರಿಯುವುದನ್ನು ತಡೆಯಲು ಮಿತ್ರಪಡೆಗಳು ತಮ್ಮ ಕಾರ್ಯಾಚರಣೆಯ ಸಮಯದಲ್ಲಿ ಬಳಸಿದ ಸಾರಿಗೆ ಶಿಬಿರ … Continued