ಕೋ-ವಿನ್ ಪೋರ್ಟಲ್ ಸರಾಗವಾಗಿ ಕಾರ್ಯನಿರ್ವಹಿಸುತ್ತಿದೆ, ಕ್ರ್ಯಾಶ್‌ ಆಗಿದೆ ಎಂಬ ವರದಿಗಳು ತಪ್ಪು: ಕೇಂದ್ರ

ನವ ದೆಹಲಿ: ಮೇ 1 ರಿಂದ ಪ್ರಾರಂಭವಾಗಲಿರುವ ಲಸಿಕೆ ಅಭಿಯಾನದ ಮೂರನೇ ಹಂತಕ್ಕೆ ತಮ್ಮನ್ನು ನೋಂದಾಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ದೂರು ನೀಡಲು ಹಲವಾರು ನಾಗರಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ದೂರು ಸಲ್ಲಿಸಿದ್ದರ ಮಧ್ಯೆ, ಸರ್ಕಾರ ಅಂತಹ ವರದಿಗಳು “ತಪ್ಪಾಗಿದೆ” ಎಂದು ಬುಧವಾರ ಹೇಳಿದೆ. ಕೋ-ವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್ ಕ್ರ್ಯಾಶ್ ಆಗಿದೆ ಎಂದು ಮಾಧ್ಯಮಗಳು … Continued

ಬೆಂಗಳೂರಿನಿಂದ ನಾಪತ್ತೆಯಾದ 3000ಕ್ಕೂ ಹೆಚ್ಚು ಸೋಂಕಿತರು..!

ಬೆಂಗಳೂರು: ಕೊರೊನಾ ಸೋಂಕಿನ ಎರಡನೇ ಅಲೆ ಹರಡುವಿಕೆ ಆತಂಕದ ನಡುವೆ ಬೆಂಗಳೂರಿನಿಂದ 3000ಕ್ಕೂ ಹೆಚ್ಚು ಸೋಂಕಿತರು ಕಾಣೆಯಾಗಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಬಹುತೇಕ 3000ಕ್ಕೂ ಹೆಚ್ಚು ಕೊರೊನಾ ಸೋಂಕಿತರು ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ತಾವು ನೀಡಿರುವ ವಿಳಾಸದಿಂದಲೂ ನಾಪತ್ತೆ ಆಗಿದ್ದು,  ಪೊಲೀಸರು ಕಾಣೆಯಾಗಿರುವ ಸೋಂಕಿತರನ್ನು ಪತ್ತೆ … Continued

ಬಂಗಾಳದ ಚುನಾವಣೆಯ ಈ ಅಭ್ಯರ್ಥಿ ಕೇವಲ 50 ರೂ.ಗೆ ಡಯಾಲಿಸಿಸ್ ನಡೆಸುವ ವೈದ್ಯರು, 7 ಬಾರಿ ಪ್ಲಾಸ್ಮಾ ದಾನಿ..!

ಕೋಲ್ಕತಾ: ಒಂದು ವರ್ಷದ ಹಿಂದೆ, ಡಾ. ಫುವಾಡ್ ಹಲೀಮ್ ತಮ್ಮ ವಿಶಿಷ್ಟ ಹಾಗೂ ಅಪರೂಪದ ವ್ಯಕ್ತಿತ್ವದ ಮೂಲಕವೇ ಗಮನ ಸೆಳೆಯುತ್ತಾರೆ. ಅವರು ಜನಸಾಮಾನ್ಯರ ವೈದ್ಯ ಹಾಗೂ ರಾಜಕಾರಣಿ. ಹೆಚ್ಚಿನ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ 1,200 ರಿಂದ 2,000 ರೂ.ಗಳ ವರೆಗೆ ಖರ್ಚಾಗುವ ಡಯಾಲಿಸಿಸ್‌ಗೆ ರೋಗಿಗಳಿಂದ ಅವರು ಕೇವಲ 50 ರೂ.ಪಡೆಯುತ್ತಾರೆ…!! ರಾಜಕಾರಣಿಯೂ ಆಗಿರುವ ಮತ್ತು ನಡೆಯುತ್ತಿರುವ ಪಶ್ಚಿಮ … Continued

ಕರ್ನಾಟಕದಲ್ಲಿ 40 ಸಾವಿರದ ಸಮೀಪ ಬಂದ ದೈನಂದಿನ ಸೋಂಕು…! ಸಾವಿನ ಸಂಖ್ಯೆಯೂ ಹೆಚ್ಚಳ..!

ಬೆಂಗಳೂರು: ರಾಜ್ಯದಲ್ಲಿ ಬುಧವಾರ ಒಂದೇ ದಿನ 39,047 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೇ ಸಮಯದಲ್ಲಿ 229 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೊನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 22,596 ಜನರು ಸೇರಿದಂತೆ ರಾಜ್ಯಾಧ್ಯಂತ 39047 ಜನರಿಗೆ … Continued

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೋಂದಣಿ ಪ್ರಾರಂಭವಾಗುತ್ತಿದ್ದಂತೆ ಕೋ-ವಿನ್ ಸರ್ವರ್ ‘ಕ್ರ್ಯಾಶ್’, ಮೈನರ್ ಗ್ಲಿಚ್’ ಎಂದು ಆರೋಗ್ಯ ಸೇತು

ಕೋವಿಡ್ -19 ಲಸಿಕೆಗಳ ನೋಂದಣಿ ಬುಧವಾರ ಸಂಜೆ 4 ಗಂಟೆಗೆ ಪ್ರಾರಂಭವಾದ ನಂತರ ಕೋವಿನ್.ಗೊವ್.ಇನ್‌ ಸ್ಕ್ರೀನ್‌ಶಾಟ್‌ಗಳಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ತುಂಬಿ ತುಳುಕುತ್ತಿದ್ದವು. ಆರೋಗ್ಯ ಸೇತು ಅಪ್ಲಿಕೇಶನ್ ಮತ್ತು ಉಮಾಂಗ್ ಅಪ್ಲಿಕೇಶನ್ – ಕೋ-ವಿನ್ ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸಬಹುದಾದ ಇತರ ಎರಡು ಪ್ಲಾಟ್‌ಫಾರ್ಮ್‌ಗಳು ಸಹ ಸ್ಪಂದಿಸುವುದಿಲ್ಲ ಎಂದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ದೂರಿದ್ದಾರೆ. ಆರೋಗ್ಯ … Continued

ಟೈಮ್ ನಿಯತಕಾಲಿಕದ 100 ಅತ್ಯಂತ ಪ್ರಭಾವಶಾಲಿ ಕಂಪನಿಗಳ ಪಟ್ಟಿಯಲ್ಲಿ ಜಿಯೋ ಪ್ಲಾಟ್‌ಫಾರ್ಮ್‌, ಬೈಜುʼಸ್‌

2021 TIME 100 ಅತ್ಯಂತ ಪ್ರಭಾವಶಾಲಿ ಕಂಪನಿಗಳ ಪ್ರಕಾರ, ಜಿಯೋ ಪ್ಲಾಟ್‌ಫಾರ್ಮ್‌ಗಳು ಮತ್ತು ಎಜು-ಟೆಕ್ ಕಂಪನಿ ಬೈಜು ವಿಶ್ವದ ಅತ್ಯಂತ ಪ್ರಭಾವಶಾಲಿ 100 ಕಂಪನಿಗಳಲ್ಲಿ ಸೇರಿವೆ. ಟೈಮ್ ನಿಯತಕಾಲಿಕದ ಪ್ರಕಾರ, ಕಳೆದ ಕೆಲವು ವರ್ಷಗಳಿಂದ, ರಿಲಯನ್ಸ್ ಇಂಡಸ್ಟ್ರೀಸ್ ವಿಶ್ವದ ಅತಿ ಕಡಿಮೆ ಡೇಟಾ ದರಗಳನ್ನು ವಿಧಿಸುವ ಮೂಲಕ ಭಾರತದ ಅತಿದೊಡ್ಡ 4 ಜಿ ನೆಟ್‌ವರ್ಕ್ ನಿರ್ಮಿಸಿದೆ. … Continued

ಇದು ಮನಕಲಕುವ ಘಟನೆ.. ಕೊರೊನಾ ಪೀಡಿತ ಗಂಡನ ಉಳಿಸಲು ಪತ್ನಿಯ ಕೊನೆ ಪ್ರಯತ್ನದ ಫೋಟೋ ವೈರಲ್‌

ನವ ದೆಹಲಿ: ಭಾರತದಲ್ಲಿ ಕೊರೊನಾ ಉಲ್ಬಣದಿಂದ ಒಂದೆಡೆ ಸಾವು-ನೋವುಗಳು ಹೆಚ್ಚಾಗುತ್ತಿದ್ದರೆ      ಮತ್ತೊದೆಡೆ  ಒಂದೊಂದೇ ಅಂತಃಕರಣ ತಟ್ಟುವ, ಮನಕಲಕುವ ಘಟನೆಗಳೂ ವರದಿಯಾಗುತ್ತಿವೆ. ನಾಗ್ಪುರದಲ್ಲಿ ಎಂಬತೈದು ವರ್ಷದ ಆರೆಸ್ಸೆಸ್‌ ಸ್ವಯಂ ಸೇವಕರೊಬ್ಬರು ತನಗೆ ಸಿಕ್ಕ ಆಸ್ಪತ್ರೆಯ ಬೆಡ್‌ ಅನ್ನು ತನ್ನ ಅರ್ಧ ವಯಸ್ಸಿನ ಕೋವಿಡ್‌ ಸೋಂಕಿತನ ಪತ್ನಿ ಮತ್ತು ಮಕ್ಕಳ ಗೋಳಾಟ ನೋಡಲಾರದೆ ಅವರಿಗೆ ಬಿಟ್ಟುಕೊಟ್ಟು … Continued

ಭಾರತದಲ್ಲಿ 3.6 ಲಕ್ಷ ದಾಟಿದ ಹೊಸ ಕೊರೊನಾ ಸೋಂಕು..ಮೂರು ಸಾವಿರ ದಾಟಿದ ಸಾವು..!

ನವ ದೆಹಲಿ: ಕೋವಿಡ್‌-19 ಸಾಂಕ್ರಾಮಿಕ ರೋಗದ ವಿನಾಶಕಾರಿ ಎರಡನೇ ಅಲೆಯ ಮಧ್ಯೆ, ಭಾರತವು ಕಳೆದ 24 ಗಂಟೆಗಳಲ್ಲಿ 3.60 ಲಕ್ಷ ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ,ಮತ್ತು ಇದೇ ಸಮಯದಲ್ಲಿ 3,293 ಸಂಬಂಧಿತ ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ ಒಟ್ಟು 3,60,960 ಹೊಸ ಕೋವಿಡ್‌ -19 ಪ್ರಕರಣಗಳು ದಾಖಲಾಗಿವೆ. ಇದೇ ಸಂದರ್ಭದಲ್ಲಿ 2,61,162 ಜನರು … Continued

ದೆಹಲಿಯ ಸ್ಮಶಾನಗಳ ಎದುರು ಅಂತ್ಯ ಸಂಸ್ಕಾರಕ್ಕಾಗಿ 20 ತಾಸುಗಳಿಂದ ಸರದಿಯಲ್ಲಿ ಕಾಯುತ್ತಿವೆ ಮೃತದೇಹಗಳು..

ನವ ದೆಹಲಿ: ದೆಹಲಿಯ ಸ್ಮಶಾನವೊಂದರಲ್ಲಿ ಮಂಗಳವಾರ ಒಂದೇ ದಿನ ಸುಮಾರು 50ಕ್ಕೂ ಹೆಚ್ಚು ಕೊರೊನಾ ಸೋಂಕಿತ ಮೃತದೇಹಗಳನ್ನು ಸುಡಲಾಗಿದೆ. ಸ್ಮಶಾನದ ಹೊರಗೆ ಮತ್ತಷ್ಟು ಶವಗಳು ಸುಮಾರು 20 ಗಂಟೆಗಳಿಗೂ ಅಧಿಕ ಕಾಲ ಅಂತ್ಯ ಸಂಸ್ಕಾರಕ್ಕಾಗಿ ಸರದಿಯಲ್ಲಿ ನೆಲದ ಮೇಲೆ ಮಲಗಿಸಿದ್ದ ಹಾಗೂ ಸಂಬಂಧಿಗಳು ಸಹ ಅಲ್ಲೆ ಕಾಯುತ್ತಿದ್ದ ದೃಶ್ಯ ಎಲ್ಲರ ಮನ ಕರಗುವಂತೆ ಮಾಡಿದೆ. ದೆಹಲಿಯಲ್ಲಿ … Continued

ಸ್ವೀಕರ್‌ ಕಾಗೇರಿ, ಸಭಾಪತಿ ಹೊರಟ್ಟಿಗೆ ಕೊರೊನಾ ಸೋಂಕು

ಬೆಂಗಳೂರು : ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಸಭಾಪತಿ ಬಸವರಾಜ್ ಹೊರಟ್ಟಿ ಅವರ ಆಪ್ತ ಕಾರ್ಯದರ್ಶಿ ಮಾಹಿತಿ ಬಿಡುಗಡೆ ಮಾಡಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿಯವರು ಕೋವಿಡ್-19 ತಪಾಸಣೆ ಮಾಡಿಸಿದ್ದು, ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. … Continued