ಕೊರಾನಕ್ಕೆ ಭಾರತದಲ್ಲಿ ಬರಲಿದೆ ಮೂರನೇ ಲಸಿಕೆ..! ಸ್ಪುಟ್ನಿಕ್-ವಿ ತುರ್ತು ಬಳಕೆಗೆ ತಜ್ಞರ ಸಮಿತಿ ಅನುಮತಿ..!!

ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ನ ವಿಷಯ ತಜ್ಞರ ಸಮಿತಿಯು ಸ್ಪುಟ್ನಿಕ್-ವಿ ಲಸಿಕೆಯನ್ನು ಭಾರತದಲ್ಲಿ ಬಳಸಲು ಶಿಫಾರಸು ಮಾಡಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಶಿಫಾರಸು ಅನುಮೋದಿಸಿದರೆ ಸ್ಪುಟ್ನಿಕ್-ವಿ ಭಾರತದ ಮೂರನೇ ಅನುಮೋದಿತ ಕೋವಿಡ್ -19 ಲಸಿಕೆಯಾಗಲಿದೆ. ಲಸಿಕೆಯನ್ನು ಭಾರತದಲ್ಲಿ ಡಾ. ರೆಡ್ಡಿ ಕಂಪನಿ ತಯಾರಿಸಲಿದೆ. ಡಾ. ರೆಡ್ಡಿಗಳು ತೆಲಂಗಾಣದ ಹೈದರಾಬಾದ್ ಮೂಲದ ಬಹುರಾಷ್ಟ್ರೀಯ … Continued

ಮಹತ್ವದ್ದ ಸುದ್ದಿ.. ಇರುಮುಡಿ ಹೊತ್ತು ಚಾರಣ ಮಾಡಿ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದ ಅರಿಫ್‌ ಮೊಹಮ್ಮದ ಖಾನ್‌

ತಿರುವನಂತಪುರ: ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಎಲ್ಲ ಭಕ್ತರಂತೆ, ವ್ರತಧಾರಿಯಾಗಿ ಸಾಂಪ್ರದಾಯಿಕ “ಮಣಿ ಮಾಲಾ” ಧರಿಸಿ “ಇರುಮುಡಿ” ತಲೆಯ ಮೇಲೆ ಹೊತ್ತುಕೊಂಡು 5 ಕಿ.ಮೀ ಚಾರಣ ಮಾಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಬಗ್ಗೆ ಕೇರಳ ರಾಜಭವನ ಟ್ವೀಟ್‌ ಮಾಡಿದ್ದು, ಗೌರವಾನ್ವಿತ ರಾಜ್ಯಪಾಲ … Continued

ಅವಶ್ಯಕತೆ ಎದುರಾದರೆ ಲಾಕ್‌ಡೌನ್ ಜಾರಿ ಮಾಡ್ತೇವೆ ಎಂದ ಸಿಎಂ ಬಿಎಸ್‌ವೈ..!

ಬೀದರ: ಅವಶ್ಯಕತೆ ಎದುರಾದರೆ ಕರ್ನಾಟಕದಲ್ಲಿಯೂ ಲಾಕ್‌ಡೌನ್ ವಿಧಿಸಬಹುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಸೋಮವಾರ ಬೀದರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಒಳಿತಿಗಾಗಿ ಸ್ಪಂದಿಸಬೇಕಾಗಿದೆ. ಅವರು ಗಮನಹರಿಸದಿದ್ದರೆ ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು. ಅಗತ್ಯವಿದ್ದರೆ ಮತ್ತು ಅಗತ್ಯವಿದ್ದಲ್ಲಿ ನಾವು ಲಾಕ್‌ಡೌನ್ ವಿಧಿಸುತ್ತೇವೆ” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ … Continued

ಕುಂಭ ಮೇಳ:ಮಾಸ್ಕ್‌ ಇಲ್ಲದವರ ಮೇಲೆ ಝೂಮ್ ಮಾಡಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಯಾಮೆರಾಗಳು..!

ಕೋವಿಡ್ ಪ್ರಕರಣಗಳ ಉಲ್ಬಣದ ಮಧ್ಯೆ ಹರಿದ್ವಾರದಲ್ಲಿ ಕುಂಭ ಮೇಳ ಆರಂಭವಾಗಿದ್ದು, ಉತ್ತರಾಖಂಡ ಪೊಲೀಸರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಅನ್ನು ಮಾಸ್ಕ್‌ ಧರಿಸದವರ ಮೇಲೆ ಝೂಮ್‌ ಮಾಡಲು ಬಳಸುತ್ತಿದ್ದಾರೆ. 350ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಮೇಳ ಪ್ರದೇಶದ ವಿವಿಧ ಸ್ಥಳಗಳಲ್ಲಿ ಅಳವಡಿಸಲಾಗಿದ್ದು, ಇವುಗಳಲ್ಲಿ ಸುಮಾರು 100 ಸಂವೇದಕಗಳನ್ನು ಹೊಂದಿವೆ. ಇವು ಮಾಸ್ಕ್‌ ಇಲ್ಲದ ವ್ಯಕ್ತಿಯ ಚಿತ್ರವನ್ನು ಕ್ಯಾಮೆರಾ … Continued

ಸುಪ್ರೀಂಕೋರ್ಟಿನ 44 ಸಿಬ್ಬಂದಿಗೆ ಕೊರೊನಾ ಸೋಂಕು.. ಒಂದು ತಾಸು ತಡವಾಗಿ ವಿಚಾರಣೆ ಆರಂಭ..!!

ನವ ದೆಹಲಿ: ಸುಪ್ರೀಂಕೋರ್ಟ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನೇಕ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ನ್ಯಾಯಮೂರ್ತಿಗಳಿಗೂ ಆತಂಕ ಎದುರಾಗಿದೆ. ಶನಿವಾರ ಸುಪ್ರೀಂ ಕೋರ್ಟಿನ 44 ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿತ್ತು. ಹೀಗಾಗಿ ನ್ಯಾಯಮೂರ್ತಿಗಳು ಅವರ ನಿವಾಸದಿಂದಲೇ ವಿಚಾರಣೆ ನಡೆಸಲಿದ್ದು, ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಪ್ರಕರಣಗಳ ವಿಚಾರಣೆ ಆರಂಭವಾಗಲಿದೆ.10:30ಕ್ಕೆ ನಿಗದಿಯಾಗಿದ್ದ ನ್ಯಾಯಪೀಠವು 11:30ಕ್ಕೆ ಕಾರ್ಯಾರಂಭಿಸಲಿದೆ, 11ಕ್ಕೆ ನಿಗದಿಯಾಗಿದ್ದ … Continued

ಒಟ್ಟು ಕೊವಿಡ್‌ ಪ್ರಕರಣಗಳಲ್ಲಿ ಬ್ರೇಜಿಲ್‌ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿದ ಭಾರತ..1.70 ಲಕ್ಷದ ಸಮೀಪಕ್ಕೆ ಬಂದ ದೈನಂದಿನ ಸೋಂಕು..!

.ನವ ದೆಹಲಿ: ಭಾರತವು 168,912 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಇದರೊಂದಿಗೆ ಭಾರತವು ಬ್ರೆಜಿಲ್ ಅನ್ನು ಹಿಂದಿಕ್ಕಿ ಕೊರೊನಾ ವೈರಸ್ ಸೋಂಕಿನಲ್ಲಿ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ. ರಾಯಿಟರ್ಸ್ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಭಾರತದ ಒಟ್ಟಾರೆ ಮೊತ್ತವು 1.35 ಕೋಟಿ ತಲುಪಿದೆ, ಬ್ರೆಜಿಲ್ಲಿನ 1.34 ಕೋಟಿ … Continued

ಇನ್ನೂ ಅನೇಕ ದೇಶಗಳಿಗೆ ಒಂದೇ ಒಂದು ಕೋವಿಡ್ ಲಸಿಕೆ ಪೂರೈಕೆಯಾಗಿಲ್ಲ..!

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ವಿಶ್ವಾದ್ಯಂತ 600 ದಶಲಕ್ಷಕ್ಕೂ ಹೆಚ್ಚು ಕೊವಿಡ್‌ ಲಸಿಕೆಗಳನ್ನು ನೀಡಲಾಗಿದೆ. . ಆದರೆ ಜಿಬ್ರಾಲ್ಟರ್‌ನ ಜನಸಂಖ್ಯೆ ಬಹುತೇಕ 100% ನಷ್ಟು ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ, ಆದರೆ ಇದೇ ವೇಳೆ ನಿಕರಾಗುವಾದಂತಹ ದೇಶಗಳು ತಮ್ಮ ಮೊದಲ ಲಸಿಕೆಗಳನ್ನು ಸ್ವೀಕರಿಸಲು ಇನ್ನೂ ಕಾಯುತ್ತಿವೆ. ಡಬ್ಲ್ಯುಎಚ್‌ಒ ಪ್ರಧಾನ ಕಾರ್ಯದರ್ಶಿ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ … Continued

ಕರ್ನಾಟಕದಲ್ಲಿ 10 ಸಾವಿರ ದಾಟಿದ ಏಕದಿನದ ಕೊರೊನಾ ಸ್ಟ್ರೈಕ್‌..! ಬೆಂಗಳೂರಲ್ಲೇ 7 ಸಾವಿರ ದಾಟಿದ ಪ್ರಕರಣ..!!

ಬೆಂಗಳೂರು:‌ ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗುತ್ತಿದ್ದು, ಭಾನುವಾರ ದೈನಂದಿನ ಪ್ರಕರಣ 10 ಸಾವಿರ ದಾಟಿದೆ..! ಭಾನುವಾರ ಕರ್ನಾಟಕದಲ್ಲಿ ದೈನಂದಿನ 10,250 ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 10,65,290 ಕ್ಕೆ ಏರಿಕೆಯಾಗಿದೆ. ಭಾನುವಾರ ಕೊರೊನಾ ಸೋಂಕಿಗೆ 40 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 12,889 ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿನಿಂದ … Continued

ಬೆಂಗಳೂರಿನಲ್ಲಿ ಕ್ಯಾಮೆರಾದಲ್ಲಿ ಸೆರೆಸಿಕ್ಕ ಕೊವಿಡ್‌-19 ಪರೀಕ್ಷೆ ವಂಚನೆ, ನಕಲಿ ಸ್ವ್ಯಾಬ್ ಸಂಗ್ರಹ..!

ಬೆಂಗಳೂರಿನ ಕೊಡಿಗೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ಇಬ್ಬರು ಸಿಬ್ಬಂದಿ ನಕಲಿ ಸ್ವ್ಯಾಬ್ ಸಂಗ್ರಹದಲ್ಲಿ ಸಿಕ್ಕಿಬಿದ್ದಿದ್ದಾರೆ. ಕೊಡಿಗೆಹಳ್ಳಿ ಹಳ್ಳಿ ಪಿಎಚ್‌ಸಿಯ ವೈದ್ಯಕೀಯ ಅಧಿಕಾರಿ ದೂರಿನ ಆಧಾರದ ಮೇಲೆ ಕೊಡಿಗೆಹಳ್ಳಿ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ. ಈ ಕುರಿತು ನ್ಯೂಸ್‌ ಮಿನಿಟ್‌ ವರದಿ ಮಾಡಿದೆ. ವರದಿ ಪ್ರಕಾರ,   ಪಿಎಚ್‌ಸಿ ಸಿಬ್ಬಂದಿ ಹೊಚ್ಚ ಹೊಸ ಸ್ವ್ಯಾಬ್‌ಗಳನ್ನು ತೆರೆಯುವುದನ್ನು ಮತ್ತು … Continued

ಮಹತ್ವದ ನಿರ್ಧಾರ..ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸುವ ವರೆಗೆ ರೆಮ್ಡೆಸಿವಿರ್ ಔಷಧ-ಚುಚ್ಚುಮದ್ದು ರಫ್ತು ನಿಷೇಧ..!

ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದಂತೆ, “ದೇಶದಲ್ಲಿ ಕೊವಿಡ್‌-19 ಪರಿಸ್ಥಿತಿ ಸುಧಾರಿಸುವವರೆಗೆ” ರೆಮ್ಡೆಸಿವಿರ್ ಔಷಧ ಮತ್ತು ಚುಚ್ಚುಮದ್ದುಗಳ ರಫ್ತನ್ನು ಕೇಂದ್ರ ಸರ್ಕಾರ  ನಿಷೇಧಿಸಿ ಭಾನುವಾರ ಆದೇಶಿಸಿದೆ. ದೇಶದ ಕೊವಿಡ್‌-19 ಪರಿಸ್ಥಿತಿ ಸುಧಾರಿಸುವ ವರೆಗೆ ಇಂಜೆಕ್ಷನ್ ರೆಮ್ಡೆಸಿವಿರ್ ಮತ್ತು ರೆಮ್ಡೆಸಿವಿರ್ ಆಕ್ಟಿವ್ ಫಾರ್ಮಾಸ್ಯುಟಿಕಲ್ ಪದಾರ್ಥಗಳ (ಎಪಿಐ) ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ” ಎಂದು ಕೇಂದ್ರವು ಹೇಳಿಕೆಯಲ್ಲಿ ತಿಳಿಸಿದೆ. ಮುಂದಿನ … Continued