ಮಾತುಕತೆಗೆ ಕರೆಯಲ್ಲ, ಮುಷ್ಕರ ಕೈಬಿಡದ್ದರೆ ಶಿಸ್ತು ಕ್ರಮ:ಸಿಎಂ ಬಿಎಸ್‌ವೈ ಎಚ್ಚರಿಕೆ

ರಾಯಚೂರು:ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮುಷ್ಕರ ನಿರತ ಸಾರಿಗೆ ನೌಕರರಿಗೆ ಶಾಕ್‌ ನೀಡಿದ್ದಾರೆ. ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಇದ್ದಲ್ಲಿ ವೇತನ ಕಡಿತ ಮಾಡುವುದಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಾರಿಗೆ ನೌಕರರ ಮುಷ್ಕರ ವಿಚಾರಕ್ಕೆ ಸಂಬಂಧಿಸಿದಂತೆ ಯಾರನ್ನೂ ಕೂಡಾ ಮಾತುಕತೆಗೆ ಕರೆಯುವುದಿಲ್ಲ. ನೌಕರರು ಕರ್ತವ್ಯಕ್ಕೆ … Continued

ಸತ್ಯಮಂಗಲಂ ಕಾಡಿನಲ್ಲಿ ನಮ್ಮಪ್ಪ ಭಾರಿ ನಿಧಿ ಹುದುಗಿಸಿಟ್ಟಿದ್ದಾನೆ; ಸಂಚಲನ ತಂದ ಕಾಡುಗಳ್ಳ ವೀರಪ್ಪನ್ ಪುತ್ರಿ ಹೇಳಿಕೆ..!

ಚೆನ್ನೈ: ಸತ್ಯಮಂಗಲಂ ಅರಣ್ಯದಲ್ಲಿ ನಮ್ಮ ತಂದೆ ವೀರಪ್ಪನ್ ಭಾರಿ ಪ್ರಮಾಣದ ನಿಧಿ ಹುದುಗಿಸಿಟ್ಟಿದ್ದಾನೆ ಎಂದು ಕಾಡುಗಳ್ಳ ವೀರಪ್ಪನ್ ಪುತ್ರಿ ವಿಜಯಲಕ್ಷ್ಮೀ ನೀಡಿದ ಹೇಳಿಕೆ ಈಗ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಪ್ರಸ್ತುತ ವಾಲ್ಮುರಿಮಾಯಿ ಕಚ್ಚಿಯಲ್ಲಿ ವಾಸಿಸುತ್ತಿರುವ ವೀರಪ್ಪನ್ ಪುತ್ರಿ ವಿಜಯಲಕ್ಷ್ಮಿ ಅವರು ರನ್ ಪಿಳ್ಳೈ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಇದೇ ಚಲನಚಿತ್ರದ ತಂಡ ಚೆನ್ನೈನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ … Continued

ಕೋವಿಡ್ -19: ಭಾರತದಲ್ಲಿ ಬ್ರಿಟನ್‌, ಜರ್ಮನಿ, ಅಮೆರಿಕದ ಡಬಲ್ ರೂಪಾಂತರಿತ ತಳಿ ಪತ್ತೆ..!

ನವ ದೆಹಲಿ: ಬ್ರಿಟನ್‌, ಅಮೆರಿಕ, ಜರ್ಮನಿ, ಆಸ್ಟ್ರೇಲಿಯಾ ಮತ್ತು ಸಿಂಗಾಪುರಗಳಲ್ಲಿ ಈಗ ‘ಬಿ .1.617’ ಎಂದು ಕರೆಯಲ್ಪಡುವ ಎರಡು ಪ್ರಮುಖ ರೂಪಾಂತರಗಳನ್ನು ಹೊಂದಿರುವ ಕೊರೊನಾ ವೈರಸ್ಸಿನ ಭಾರತೀಯ ರೂಪಾಂತರ ಪತ್ತೆ ಹಚ್ಚಲಾಗಿದೆ ಮತ್ತು ಇದು ಪುನರಾವರ್ತನೆ ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ತಜ್ಞರ ವಿಶ್ಲೇಷಣೆಯು ಆರು ಸ್ಪೈಕ್ ಪ್ರೋಟೀನ್ ರೂಪಾಂತರಗಳು (ಆತಿಥೇಯ ಕೋಶಗಳಿಗೆ ಕೋವಿಡ್ -19 ಪ್ರವೇಶದ … Continued

ಭಾರತದಲ್ಲಿ 1.5 ಲಕ್ಷವನ್ನೂ ಮೀರಿದ ದೈನಂದಿನ ಹೊಸ ಪ್ರಕರಣಗಳು.. 6 ತಿಂಗಳಲ್ಲಿ ಹೆಚ್ಚು ಸಾವುಗಳು

ನವ ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 1,52,879 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಗೃಹ ಸಚಿವಾಲಯ ಭಾನುವಾರ ಬೆಳಿಗ್ಗೆ ತಿಳಿಸಿದೆ.ಭಾರತದಲ್ಲಿ ವೈರಸ್ ಹರಡಿದ ನಂತರ ಕಂಡ ದೈನಂದಿನ ಸೋಂಕುಗಳಲ್ಲಿ ಇದು ಅತಿದೊಡ್ಡ ಜಿಗಿತವಾಗಿದೆ. ವೈರಸ್ ಕಾಯಿಲೆಗೆ ಸಂಬಂಧಿಸಿದ ಸಾವುಗಳು ಸಹ ಹೆಚ್ಚುತ್ತಿವೆ, ಒಂದು ದಿನದಲ್ಲಿ 839 ಸಾವುಗಳು ವರದಿಯಾಗಿವೆ. ಇದು … Continued

6 ತಿಂಗಳಲ್ಲಿ 20-30% ಜನರು ಕೋವಿಡ್ ವಿರುದ್ಧ ನ್ಯೂಟ್ರಲೈಸೇಶನ್‌ ಆಕ್ಟಿವಿಟಿ ಕಳೆದುಕೊಳ್ಳುತ್ತಾರೆ: ಹೊಸ ಅಧ್ಯಯನ

ಕೊರೊನಾ ವೈರಸ್ ಕಾಯಿಲೆಯ ವಿರುದ್ಧ ನೈಸರ್ಗಿಕ ರೋಗ ನಿರೋಧಕ ಶಕ್ತಿ ಎಂದು ಕರೆಯಲ್ಪಡುವಿಕೆಯು ಎಷ್ಟು ಕಾಲ ಉಳಿಯುತ್ತದೆ? ಪ್ರತಿಯೊಬ್ಬರೂ, ವಿಶೇಷವಾಗಿ ಕೋವಿಡ್ -19 ಸಂಪರ್ಕಕ್ಕೆ ಬಂದವರು ಮತ್ತು ಚೇತರಿಸಿಕೊಂಡವರು ಕೇಳುವ ಪ್ರಶ್ನೆ ಇದು. ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ಸಂಶೋಧನೆಯ ಪ್ರಕಾರ, ಇದು ಕನಿಷ್ಠ 6-7 ತಿಂಗಳುಗಳ ವರೆಗೆ ಇರುತ್ತದೆ, ಆದರೆ … Continued

ಆರ್ಥಿಕ ವರ್ಷ 21ರಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹವು ಪರಿಷ್ಕೃತ ಅಂದಾಜಿಗಿಂತ ಶೇ.5ರಷ್ಟು ಹೆಚ್ಚಳ

ಮಾರ್ಚ್ 2021ಕ್ಕೆ ಕೊನೆಗೊಂಡ ಹಣಕಾಸು ವರ್ಷದ ನಿವ್ವಳ ನೇರ ತೆರಿಗೆ ಸಂಗ್ರಹವು 9.45 ಲಕ್ಷ ಕೋಟಿ ರೂ.ಗಳಾಗಿದ್ದು, ಪರಿಷ್ಕೃತ ಬಜೆಟ್ ಅಂದಾಜು 9.05 ಲಕ್ಷ ಕೋಟಿ ರೂ.ಗಳನ್ನುಮೀರಿದೆ. ಅಂದರೆ ಶೇಕಡಾ 5ರಷ್ಟು ಹೆಚ್ಚಾಗಿದೆ. ಆದಾಗ್ಯೂ, ಸಂಗ್ರಹಣೆಯು ಹಿಂದಿನ ಹಣಕಾಸು ವರ್ಷಕ್ಕಿಂತ ಶೇಕಡಾ 10ರಷ್ಟು ಕಡಿಮೆಯಾಗಿದೆ. ಒಟ್ಟು ತಾತ್ಕಾಲಿಕ ನಿವ್ವಳ ನೇರ ತೆರಿಗೆ ಸಂಗ್ರಹಗಳಲ್ಲಿ ಸುಮಾರು 4.57 … Continued

ಬಂಗಾಳ ಚುನಾವಣೆ ಹಿಂಸಾಚಾರ: 72 ಗಂಟೆಗಳ ಕಾಲ ಕೂಚ್ ಬೆಹಾರ್ ಜಿಲ್ಲೆಗೆ ರಾಜಕಾರಣಿಗಳ ಪ್ರವೇಶಕ್ಕೆ ಚುನಾವಣಾ ಆಯೋಗ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಸಂಬಂಧಿಸಿದ ಹಿಂಸಾಚಾರದ ಮಧ್ಯೆ, ಕಾನೂನು ಮತ್ತು ಸುವ್ಯವಸ್ಥೆ ಭುಗಿಲೆದ್ದಿರುವುದನ್ನು ತಡೆಗಟ್ಟಲು ಮುಂದಿನ 72 ಗಂಟೆಗಳ ಕಾಲ ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಗೆ ಎಲ್ಲ ರಾಜಕಾರಣಿಗಳ ಪ್ರವೇಶವನ್ನು ಚುನಾವಣಾ ಆಯೋಗ ಶನಿವಾರ ನಿಷೇಧಿಸಿದೆ. ಇದಲ್ಲದೆ, ಪಶ್ಚಿಮ ಬಂಗಾಳ ಚುನಾವಣೆಯ ಐದನೇ ಹಂತದ ಮೌನ ಅವಧಿಯನ್ನು (ಸೈಲೆನ್ಸ್‌ ಪಿರಿಯಡ್‌) 48 ಗಂಟೆಯಿಂದ 72 … Continued

ಮಹತ್ವದ ತೀರ್ಪು.. ಸಮಂಜಸ ಸಮಯದ ನಂತರ ಸಹಾನುಭೂತಿ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ನವ ದೆಹಲಿ: ಅನೇಕ ಸಂದರ್ಭಗಳಲ್ಲಿ, ಕರ್ತವ್ಯದ ಅವಧಿಯಲ್ಲಿ ಯಾವುದೇ ದುರಂತ ಎದುರಿಸಿದ ಅಥವಾ ವೈದ್ಯಕೀಯ ಆಧಾರದ ಮೇಲೆ ಅಥವಾ ಇತರ ಕಾರಣಗಳಿಂದ ನಿವೃತ್ತಿ ಹೊಂದಿದ ನೌಕರನ ಅವಲಂಬಿತ ಕುಟುಂಬ ಸದಸ್ಯರಿಗೆ ಸರ್ಕಾರ ಅಥವಾ ಸರ್ಕಾರಿ ಕಂಪನಿಗಳು ಸಹಾನುಭೂತಿಯ ನೇಮಕಾತಿ ನೀಡುತ್ತವೆ.ಆದರೆ ಸಮಂಜಸವಾದ ಅವಧಿಯ ನಂತರ ಸಹಾನುಭೂತಿಯ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ಈಗ ಸುಪ್ರೀಂ ಕೋರ್ಟ್ … Continued

ಕರಾವಳಿ, ಮಲೆನಾಡಿನಲ್ಲಿ ಎರಡು ದಿನ ಗುಡುಗು ಸಹಿತ ಮಳೆ: ಮುನ್ಸೂಚನೆ

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದಲ್ಲಿ ಎರಡು ದಿನ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 12 ರ ನಂತರ ಮಳೆ ಬಿರುಸುಗೊಳ್ಳಲಿದ್ದು, ಏಪ್ರಿಲ್ 14, 15 ರಂದು ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಹಿನ್ನಲೆಯಲ್ಲಿ ಯೆಲ್ಲೋ … Continued

ಮುಂದುವರಿದ ಮುಷ್ಕರ: ಸಾರಿಗೆ ಇಲಾಖೆ 334 ನೌಕರರ ವಜಾ

ಬೆಂಗಳೂರು: ನೋಟಿಸ್ ನೀಡಿದರೂ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯಿಂದ ಈವರೆಗೆ 334 ನೌಕರರನ್ನು ವಜಾಗೊಳಿಸಿ ಆದೇಶಿಸಲಾಗಿದೆ. ಶುಕ್ರವಾರ 118 ನೌಕರರನ್ನು ವಜಾಗೊಳಿಸಲಾಗಿತ್ತು. 216 ನೌಕರರನ್ನು ಶನಿವಾರ ವಜಾಗೊಳಿಸಿ ಆದೇಶ ಮಾಡಲಾಗಿದ್ದು, ಒಟ್ಟಾರೆ 334 ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. … Continued