1.6 ಕೋಟಿ ವರ್ಷಗಳಷ್ಟು ಹಿಂದಿನ ಬೃಹತ್‌ ʼಅಮೆಜಾನ್‌ ನದಿ ಡಾಲ್ಫಿನ್‌ʼ ತಲೆಬುರುಡೆ ಪತ್ತೆ ಮಾಡಿದ ವಿಜ್ಞಾನಿಗಳು : ಇದಕ್ಕೂ ಗಂಗಾ ನದಿಗೂ ನಂಟು…!

ಲಿಮಾ (ಪೆರು) : ವಿಜ್ಞಾನಿಗಳು ಬುಧವಾರ ಪೆರುವಿನಲ್ಲಿ 16 ಮಿಲಿಯನ್ (1.6 ಕೋಟಿ) ವರ್ಷಗಳಷ್ಟು ಹಳೆಯದಾದ ತಲೆಬುರುಡೆಯ ಪಳೆಯುಳಿಕೆಯನ್ನು ಅನಾವರಣಗೊಳಿಸಿದರು. ಈಗ ಅಳಿವಿನಂಚಿನಲ್ಲಿರುವ ಬೃಹತ್ ನದಿ ಡಾಲ್ಫಿನ್‌ನ ತಲೆಬುರುಡೆಯಾಗಿದೆ. ಡಾಲ್ಫಿನ್ 3.5 ಮೀಟರ್ ಉದ್ದವಿತ್ತು, ಇದು ಈವರೆಗೆ ಪತ್ತೆಯಾದ ಅತಿದೊಡ್ಡ ನದಿ ಡಾಲ್ಫಿನ್ ಆಗಿದೆ. ನದಿ ಡಾಲ್ಫಿನ್ ಒಂದು ಕಾಲದಲ್ಲಿ ಅಮೆಜಾನ್ ನೀರಿನಲ್ಲಿ ಈಜುತ್ತಿತ್ತು ಮತ್ತು … Continued

ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ಮೋದಿಯನ್ನು ರಷ್ಯಾ-ಉಕ್ರೇನ್‌ ಗೆ ಆಹ್ವಾನಿಸಿದ ಪುತಿನ್, ಝೆಲೆನ್ಸ್ಕಿ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರೊಂದಿಗೆ ಮಾತನಾಡಿದ ಕೆಲವೇ ಗಂಟೆಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದಾರೆ. ಪುತಿನ್ ಅವರು ರಷ್ಯಾದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಹಿನ್ನೆಲೆಯಲ್ಲಿ ಮತ್ತು ರಷ್ಯಾ-ಉಕ್ರೇನ್ ಯುದ್ಧ ವಿರಾಮದ ಯಾವುದೇ ಲಕ್ಷಣಗಳಿಲ್ಲದ ಹಿನ್ನೆಲೆಯಲ್ಲಿ ಉಭಯ ನಾಯಕರೊಂದಿಗಿನ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಉಭಯ ನಾಯಕರು … Continued

ಇನ್ನು ಈ ತಳಿಯ ನಾಯಿಗಳನ್ನು ಸಾಕುವಂತಿಲ್ಲ: ಪಿಟ್‌ಬುಲ್‌, ಬುಲ್‌ಡಾಗ್‌ ಸೇರಿದಂತೆ 23 ನಾಯಿ ತಳಿಗಳಿಗೆ ನಿಷೇಧ

ನವದೆಹಲಿ: ಪಿಟ್‌ಬುಲ್‌ಗಳು ಮತ್ತು ಬುಲ್‌ಡಾಗ್‌ಗಳು ಸೇರಿದಂತೆ 23 ಅಪಾಯಕಾರಿ ನಾಯಿ ತಳಿಗಳ ಆಮದು, ಸಂತಾನೋತ್ಪತ್ತಿ ಮತ್ತು ಮಾರಾಟವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ದೇಶದಲ್ಲಿ ಹೆಚ್ಚುತ್ತಿರುವ ನಾಯಿ ಕಡಿತದ ಪ್ರಕರಣಗಳ ಮಧ್ಯೆ, ಪಿಟ್‌ಬುಲ್ ಟೆರಿಯರ್, ಅಮೆರಿಕನ್ ಬುಲ್‌ಡಾಗ್, ರೊಟ್‌ವೀಲರ್ ಸೇರಿದಂತೆ ಹಲವಾರು ನಾಯಿ ತಳಿಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಕೇಂದ್ರವು 23 ನಾಯಿ … Continued

ವೀಡಿಯೊ…| ಭಾರತದ ಎಲ್ಲ ಮುಸ್ಲಿಮರು ‘ಸಿಎಎ’ ಸ್ವಾಗತಿಸಬೇಕು…: ಅಖಿಲ ಭಾರತ ಮುಸ್ಲಿಂ ಜಮಾತ್ ಮುಖ್ಯಸ್ಥ

ಬರೇಲಿ (ಉತ್ತರ ಪ್ರದೇಶ) : ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದ ಕೆಲವು ಗಂಟೆಗಳ ನಂತರ, ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಈ ಕಾನೂನನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ. ಹಾಗೂ ಅವರು ಮುಸ್ಲಿಂ ಸಮುದಾಯದ ಭಯ ನಿವಾರಿಸಲು ಪ್ರಯತ್ನಿಸಿದ್ದಾರೆ. ಇದು Bಆರತದ ಮುಸ್ಲಿಮರ ಪೌರತ್ವದ … Continued

ಉಕ್ರೇನ್‌ ಮೇಲೆ ‘ಸಂಭಾವ್ಯ ಪರಮಾಣು ದಾಳಿ’ ತಡೆದ ರಷ್ಯಾ ಅಧ್ಯಕ್ಷರ ಮೇಲಿನ ಪ್ರಧಾನಿ ಮೋದಿ ಪ್ರಭಾವ : ವರದಿ

ವಾಷಿಂಗ್ಟನ್ ಡಿಸಿ : ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವ, ವಿವಿಧ ದೇಶಗಳ ರಾಜತಾಂತ್ರಿಕ ಪ್ರಯತ್ನಗಳು, ಉಕ್ರೇನ್ ಮೇಲೆ “ಸಂಭಾವ್ಯ ಪರಮಾಣು ದಾಳಿ” ಮಾಡುವುದರಿಂದ ರಷ್ಯಾವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಸಿಎನ್ಎನ್ ವರದಿ ಶನಿವಾರ ತಿಳಿಸಿದೆ. ಸಿಎನ್‌ಎನ್ ವರದಿ ಮಾಡಿದಂತೆ, ಅಂತಹ ದಾಳಿಯಿಂದ ರಷ್ಯಾವನ್ನು ನಿರುತ್ಸಾಹಗೊಳಿಸಲು ಭಾರತ ಸೇರಿದಂತೆ ಮಿತ್ರರಾಷ್ಟ್ರಗಳಲ್ಲದವರ ಸಹಾಯವನ್ನು ಪಡೆಯಲು ಅಮೆರಿಕ … Continued

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ ನಲ್ಲಿ ನಂ.1ನೇ ಸ್ಥಾನಕ್ಕೆ ಜಿಗಿದ ಭಾರತ: ಎಲ್ಲ ಮಾದರಿಯಲ್ಲೂ ಭಾರತವೇ ಈಗ ನಂ.1…

ನವದೆಹಲಿ : ಭಾರತವು ಧರ್ಮಶಾಲಾದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು 4-1 ಅಂತರದಿಂದ ಗೆದ್ದ ಒಂದು ದಿನದ ನಂತರ, ರೋಹಿತ್ ಶರ್ಮಾ ತಂಡವು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೆ ಏರಿದೆ. ಭಾನುವಾರ ವಿಶ್ವ ಕ್ರಿಕೆಟ್ ಆಡಳಿತ ಮಂಡಳಿ(ಐಸಿಸಿ)ಯು ಬಿಡುಗಡೆ ಮಾಡಿದ ಇತ್ತೀಚಿನ ಪೆಕಿಂಗ್ ಆರ್ಡರ್‌ನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಹಿಂದಿಕ್ಕೆ ಅಗ್ರಸ್ಥಾನಕ್ಕೆ … Continued

ಶ್ರೇಯಸ್ ಅಯ್ಯರ್, ಇಶಾನ ಕಿಶನ್ ಮಾತ್ರವಲ್ಲದೆ ಇನ್ನೂ 4 ಅನುಭವಿ ಆಟಗಾರರು ಬಿಸಿಸಿಐ ಒಪ್ಪಂದದ ಪಟ್ಟಿಯಿಂದ ಹೊರಕ್ಕೆ…!

ನವದೆಹಲಿ : ರಣಜಿ ಟ್ರೋಫಿ ಆಡಬೇಕೆಂಬ ನಿರ್ದೇಶನವನ್ನು ನಿರ್ಲಕ್ಷಿಸಿದ ನಂತರ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಈ ವರ್ಷಕ್ಕೆ ಬಿಸಿಸಿಐ ತನ್ನ ಕೇಂದ್ರೀಯ ಒಪ್ಪಂದದಿಂದ ಹೊರಗಿಟ್ಟಿದೆ. ಆದರೆ ನಾಯಕ ರೋಹಿತ ಶರ್ಮಾ ಮತ್ತು ವಿರಾಟ ಕೊಹ್ಲಿ ಅವರನ್ನು ಬಿಸಿಸಿಐ ತನ್ನ ಕೇಂದ್ರೀಯ ಒಪ್ಪಂದದ ಅಗ್ರ ಬ್ರಾಕೆಟ್‌ನಲ್ಲಿ ಮುಂದುವರಿಸಿದೆ. 25ರ ಹರೆಯದ ಇಶಾಂತ ಕಿಶನ್ … Continued

ದಂಡ ಸಂಹಿತೆ ಬದಲಿಸುವ ನೂತನ ಕ್ರಿಮಿನಲ್ ಕಾನೂನುಗಳು ಜುಲೈ 1ರಿಂದ ಜಾರಿಗೆ

ನವದೆಹಲಿ : ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಮತ್ತು ಈ ಕಾನೂನುಗಳು ದೇಶದ ವಸಾಹತುಶಾಹಿ ಯುಗದ ಶಾಸನಗಳನ್ನು ಬದಲಿಸುತ್ತವೆ ಎಂದು ಸರ್ಕಾರ ಶನಿವಾರ ಪ್ರಕಟಿಸಿದೆ. ಭಾರತೀಯ ನ್ಯಾಯ (ಎರಡನೇ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ, ಮತ್ತು ಭಾರತೀಯ ಸಾಕ್ಷಿ (ಎರಡನೇ) ಮಸೂದೆಯು 1860ರ ಭಾರತೀಯ ದಂಡ … Continued

“ನಿಮ್ಮ ಬೌಲರ್ ಯಾರು?”: ಕಾಶ್ಮೀರದ ಗುಲ್ಮಾರ್ಗ ರಸ್ತೆಯಲ್ಲಿ ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ | ವೀಕ್ಷಿಸಿ

ಭಾರತದ ಕ್ರಿಕೆಟ್‌ ದಂತಕಥೆ ಸಚಿನ್ ತೆಂಡೂಲ್ಕರ್ ಪ್ರಸ್ತುತ ಕಾಶ್ಮೀರ ಮೊದಲ ಪ್ರವಾಸದಲ್ಲಿದ್ದು, ಅವರು ಅಲ್ಲಿನ ಗುಲ್ಮಾರ್ಗ್‌ನಲ್ಲಿ ಸ್ಥಳೀಯರೊಂದಿಗೆ ಗಲ್ಲಿ ಕ್ರಿಕೆಟ್ ಆಟದಲ್ಲಿ ತೊಡಗಿರುವ ವೀಡಿಯೊ ವೈರಲ್‌ ಆಗಿದೆ. ಗುಲ್ಮಾರ್ಗ್‌ದ ಸುಂದರವಾದ ಪರಿಸರದ ನಡುವೆ ಸಚಿನ್ ಒಂದು ಓವರ್ ಕ್ರಿಕೆಟ್‌ ಆಡಿದರು. ಸಾಮಾಜಿಕ ಮಾಧ್ಯಮದಲ್ಲಿ ತೆಂಡೂಲ್ಕರ್ ಅವರು ಸ್ಥಳೀಯರೊಂದಿಗೆ ಪಾಲ್ಗೊಂಡ ಮತ್ತು ಗಲ್ಲಿ ಕ್ರಿಕೆಟ್ ಆಟವನ್ನು ಆನಂದಿಸುವ … Continued

ಕ್ರಿಕೆಟ್‌ : ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳು…! ಇತಿಹಾಸ ನಿರ್ಮಿಸಿದ ಆಂಧ್ರದ ಯುವ ಆಟಗಾರ | ವೀಕ್ಷಿಸಿ

ಕ್ರಿಕೆಟ್‌ನಲ್ಲಿ, ಆಟಗಾರ ಒಂದು ಓವರ್‌ನಲ್ಲಿ ಬರೋಬ್ಬರಿ ಆರು ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ಮಾಡಿದ್ದಾರೆ. ಕರ್ನಲ್ CK ನಾಯುಡು ಟ್ರೋಫಿಯು U-23 ಕ್ರಿಕೆಟ್‌ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ವಂಶಿ ಕೃಷ್ಣ ಎಂಬ ಆಟಗಾರ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ದಂತಕಥೆ ಸರ್ ಗ್ಯಾರಿ ಸೋಬರ್ಸ್ 1968 ರಲ್ಲಿ ನಾಟಿಂಗ್‌ಹ್ಯಾಮ್‌ಶೈರ್‌ಗಾಗಿ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡುವಾಗ, ಗಾರ್ಫೀಲ್ಡ್ … Continued