ಲೋಕಸಭೆ ಚುನಾವಣೆ ಬಳಿಕ ಪ್ರಧಾನಿ ಮೋದಿಯನ್ನು ರಷ್ಯಾ-ಉಕ್ರೇನ್‌ ಗೆ ಆಹ್ವಾನಿಸಿದ ಪುತಿನ್, ಝೆಲೆನ್ಸ್ಕಿ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರೊಂದಿಗೆ ಮಾತನಾಡಿದ ಕೆಲವೇ ಗಂಟೆಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದಾರೆ. ಪುತಿನ್ ಅವರು ರಷ್ಯಾದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಹಿನ್ನೆಲೆಯಲ್ಲಿ ಮತ್ತು ರಷ್ಯಾ-ಉಕ್ರೇನ್ ಯುದ್ಧ ವಿರಾಮದ ಯಾವುದೇ ಲಕ್ಷಣಗಳಿಲ್ಲದ ಹಿನ್ನೆಲೆಯಲ್ಲಿ ಉಭಯ ನಾಯಕರೊಂದಿಗಿನ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಉಭಯ ನಾಯಕರು … Continued

ಉಕ್ರೇನ್‌ ಮೇಲೆ ‘ಸಂಭಾವ್ಯ ಪರಮಾಣು ದಾಳಿ’ ತಡೆದ ರಷ್ಯಾ ಅಧ್ಯಕ್ಷರ ಮೇಲಿನ ಪ್ರಧಾನಿ ಮೋದಿ ಪ್ರಭಾವ : ವರದಿ

ವಾಷಿಂಗ್ಟನ್ ಡಿಸಿ : ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವ, ವಿವಿಧ ದೇಶಗಳ ರಾಜತಾಂತ್ರಿಕ ಪ್ರಯತ್ನಗಳು, ಉಕ್ರೇನ್ ಮೇಲೆ “ಸಂಭಾವ್ಯ ಪರಮಾಣು ದಾಳಿ” ಮಾಡುವುದರಿಂದ ರಷ್ಯಾವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಸಿಎನ್ಎನ್ ವರದಿ ಶನಿವಾರ ತಿಳಿಸಿದೆ. ಸಿಎನ್‌ಎನ್ ವರದಿ ಮಾಡಿದಂತೆ, ಅಂತಹ ದಾಳಿಯಿಂದ ರಷ್ಯಾವನ್ನು ನಿರುತ್ಸಾಹಗೊಳಿಸಲು ಭಾರತ ಸೇರಿದಂತೆ ಮಿತ್ರರಾಷ್ಟ್ರಗಳಲ್ಲದವರ ಸಹಾಯವನ್ನು ಪಡೆಯಲು ಅಮೆರಿಕ … Continued

ಉಕ್ರೇನ್ ಬಳಿ ಅಪಘಾತಕ್ಕೀಡಾದ 65 ಯುದ್ಧ ಕೈದಿಗಳಿದ್ದ ರಷ್ಯಾದ ವಿಮಾನ ; ಎಲ್ಲರ ಸಾವು-ರಷ್ಯಾ

65 ಉಕ್ರೇನಿಯನ್ ಯುದ್ಧ ಕೈದಿಗಳಿದ್ದ (POWs) ರಷ್ಯಾದ IL-76, ಹೆವಿ-ಲಿಫ್ಟ್ ಮಿಲಿಟರಿ ಸಾರಿಗೆ ವಿಮಾನವು ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ ಪತನಗೊಂಡಿತು. ಇದು ಪ್ರದೇಶದ ಗಡಿಯಾಗಿದೆ. ಸ್ವಾಪ್‌ನಲ್ಲಿ ವಿನಿಮಯಕ್ಕಾಗಿ ಯುದ್ಧ ಕೈದಿ (POWs)ಗಳನ್ನು ಸಾಗಿಸಲಾಗುತ್ತಿತ್ತು. ವಿಮಾನ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ರಷ್ಯಾ ಹೇಳಿದೆ. ಅಪಘಾತದ ದೃಶ್ಯವು ದೂರದಿಂದ ಸೆರೆಯಾಗಿದೆ, ವಿಮಾನವು ನೇರವಾಗಿ ನೆಲದ ಕಡೆಗೆ ಸಾಗುತ್ತಿರುವುದನ್ನು … Continued

ಉಕ್ರೇನ್‌ನಿಂದ ಕರ್ನಾಟಕದ 372 ವಿದ್ಯಾರ್ಥಿಗಳು ವಾಪಸ್‌

ಬೆಂಗಳೂರು : ಉಕ್ರೇನ್‌ನಿಂದ ಈವರೆಗೆ ಕರ್ನಾಟಕಕ್ಕೆ ಈವರೆಗೆ 372 ವಿದ್ಯಾರ್ಥಿಗಳು ಹಿಂತಿರುಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್‌ ರಾಜನ್‌ ತಿಳಿಸಿದ್ದಾರೆ. ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, 300ಕ್ಕೂ ಹೆಚ್ಚು ಜನರು ಆಗಮಿಸುವುದು ಬಾಕಿ ಇದೆ. ಶನಿವಾರ 84 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ವಾಪಸ್‌ ಬಂದವರಿಗೆ ದೆಹಲಿಯ ಕರ್ನಾಟಕ ಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ … Continued

ಉಕ್ರೇನ್‌ನಲ್ಲಿ ಸಾವಿಗೀಡಾದ ನವೀನ್ ಮನೆಗೆ ಸಿಎಂ ಭೇಟಿ, ಸಾಂತ್ವನ: ಪರಿಹಾರ ಚೆಕ್‌ ವಿತರಣೆ

ಹಾವೇರಿ: ಯುದ್ಧಪೀಡಿತ ಉಕ್ರೇನ್​ನಲ್ಲಿ ರಷ್ಯಾ ಪಡೆ ನಡೆಸಿದ ಶೆಲ್​ ದಾಳಿಯಲ್ಲಿ ಮೃತಪಟ್ಟ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನವೀನಗೆ ಸಲ್ಲಿಸಿದ ಬೊಮ್ಮಾಯಿ, ಮೃತನ ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮೀ ಹಾಗೂ ಸಹೋದರನಿಗೆ ಸಾಂತ್ವನ ಹೇಳಿದರು. ರಾಜ್ಯ ಸರ್ಕಾರದಿಂದ … Continued