ವೀಡಿಯೊ…| ತನ್ನ ವಾಯುನೆಲೆಗಳ ಮೇಲೆ ಭಾರತ ದಾಳಿ ನಡೆಸಿದ್ದನ್ನು ಕೊನೆಗೂ ಬಹಿರಂಗವಾಗಿ ಒಪ್ಪಿಕೊಂಡ ಪಾಕಿಸ್ತಾನ…!

ನವದೆಹಲಿ: ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಭಾರತವು ತನ್ನ ಪ್ರಮುಖ ವಾಯುನೆಲೆಗಳ ಮೇಲಿನ ದಾಳಿ ನಡೆಸಿದೆ ಎಂದು ಪಾಕಿಸ್ತಾನವು ಮತ್ತೊಮ್ಮೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಭಾರತವು ಅಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ದೇಶದ ಗಮನಾರ್ಹ ವಾಯು ನೆಲೆಗಳು ಹಾನಿಗೊಳಗಾಗಿವೆ ಎಂದು ಪಾಕಿಸ್ತಾನ ದೃಢಪಡಿಸಿದೆ. ಪಾಕಿಸ್ತಾನದ ಉಪ ಪ್ರಧಾನಿ … Continued

ಆಪರೇಶನ್‌ ಸಿಂಧೂರ ವೇಳೆ ಭಾರತ ಅಮೆರಿಕದ ಮಧ್ಯಸ್ಥಿಕೆ ಕೋರಿಲ್ಲ : ದೂರವಾಣಿ ಕರೆ ವೇಳೆ ಟ್ರಂಪ್‌ ಗೆ ಪ್ರಧಾನಿ ಮೋದಿ

ನವದೆಹಲಿ: ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದಾಗ, ಭಾರತವು ಇತ್ತೀಚೆಗೆ ನಡೆಸಿದ ‘ಆಪರೇಷನ್ ಸಿಂಧೂರ’ ಸಂದರ್ಭದಲ್ಲಿ ಅಮೆರಿಕದ ಮಧ್ಯಸ್ಥಿಕೆ ಕೋರಿಲ್ಲ ಅಥವಾ ವ್ಯಾಪಾರದ ಬಗ್ಗೆ ಚರ್ಚಿಸಿಲ್ಲ ಎಂದು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ನಾಲ್ಕು ದಿನಗಳ ಸಂಘರ್ಷವನ್ನು ವ್ಯಾಪಾರವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಕೊನೆಗೊಳಿಸಿದೆ … Continued

ವೀಡಿಯೊಗಳು | ‘ನಿಮಗೆ ನಾಚಿಕೆಯಾಗಬೇಕು, ಸಾಮೂಹಿಕ ಕೊಲೆಗಾರ’: ವಾಷಿಂಗ್ಟನ್‌ನಲ್ಲಿ ಅಸಿಮ್ ಮುನೀರ್ ಗೆ ಪ್ರತಿಭಟನೆಯ ಬಿಸಿ-ವೀಕ್ಷಿಸಿ

ಪಾಕಿಸ್ತಾನಿ ಜನರಲ್ ಸೈಯದ್ ಅಸಿಮ್ ಮುನೀರ್ ವಾಷಿಂಗ್ಟನ್‌ನಲ್ಲಿದ್ದಾಗ ಅವರನ್ನು ನಿಂದಿಸಲಾಯಿತು. ಕೆಲವು ಪಾಕಿಸ್ತಾನಿ ಪ್ರತಿಭಟನಾಕಾರರು ಮತ್ತು ಪಾಕಿಸ್ತಾನಿ ಮೂಲದ ಜನರು ಮುನೀರ್ ಅವರ ಹೋಟೆಲ್ ಹೊರಗೆ ಜಮಾಯಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಮುನೀರ್ ಹೋಟೆಲ್‌ನಿಂದ ಹೊರಬರುವಾಗ ಪ್ರತಿಭಟನಾಕಾರರು – “ಪಾಕಿಸ್ತಾನಿಯೋಂ ಕೆ ಕಾತಿಲ್,” “ನೀವು ಹೇಡಿ,” ಮತ್ತು “ನಿಮಗೆ ನಾಚಿಕೆಯಾಗಬೇಕು” – ಎಂಬ ಘೋಷಣೆಗಳನ್ನು … Continued

ಭಾರತದ ವಾಯುನೆಲೆ ಹೊಡೆದಿದ್ದೇವೆ ಎಂದ ಪಾಕಿಸ್ತಾನದ ಹಸಿ ಸುಳ್ಳು ಬಯಲಿಗೆ …! ಅದು ನಕಲಿ ಉಪಗ್ರಹ ಚಿತ್ರ, ಕಟ್ಟು ಕಥೆ ಎಂದ ಡೇಮಿಯನ್ ಸೈಮನ್

ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಡಿ ಪಾಕಿಸ್ತಾನ ವಾಯು ನೆಲೆಗಳ ಮೇಲೆ ಭಾರತದ ನಿಖರವಾದ ದಾಳಿ ನಡೆಸಿದ ನಂತರ ಪಾಕಿಸ್ತಾನ ನಕಲಿ ಉಪಗ್ರಹ ಚಿತ್ರಗಳು, ಫೋಟೋಗಳನ್ನು ಹಂಚಿಕೊಂಡು ಭಾರತದ ಮೇಲೆ ದಾಳಿ ನಡೆಸಿದ್ದೇವೆ ಎಂದು ತಪ್ಪು ಮಾಹಿತಿ ನೀಡುತ್ತಿರುವುದು ಈಗ ಬಯಲಾಗಿದೆ. ಪಂಜಾಬ್‌ನ … Continued

ʼಆಪರೇಷನ್ ಸಿಂಧೂರʼ | ದೊಡ್ಡಮಟ್ಟದ ಹಾನಿಯಾಗಿದ್ದನ್ನು ಒಪ್ಪಿಕೊಂಡ ಪಾಕಿಸ್ತಾನ ; ಭಾರತ ಹೇಳಿದ್ದಕ್ಕಿಂತ ಇನ್ನೂ 8 ಕಡೆ ಹಾನಿ ಎಂದ ಪಾಕ್‌ ದಾಖಲೆ…!

ನವದೆಹಲಿ: ಮೇ 6 ಮತ್ತು 7 ರ ಮಧ್ಯರಾತ್ರಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ತಾನು ಈ ಹಿಂದೆ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನ ಹಾನಿಯಾಗಿದೆ ಎಂದು ಪಾಕಿಸ್ತಾನ ಈಗ ಒಪ್ಪಿಕೊಂಡಿದೆ. ತನ್ನ ಆಂತರಿಕ ಮಿಲಿಟರಿ ಕಾರ್ಯಾಚರಣೆ ‘ಬನ್ಯನ್ ಉನ್ ಮರ್ಸೂಸ್’ ಕುರಿತಾದ ಪಾಕಿಸ್ತಾನದ ಗೌಪ್ಯ ದಾಖಲೆಯ ಪ್ರಕಾರ, ಭಾರತೀಯ ದಾಳಿಯಲ್ಲಿ ಕನಿಷ್ಠ ಎಂಟು ಸ್ಥಳಗಳು ಹಾನಿಗೊಳಗಾಗಿವೆ. … Continued

ದೇಶಭಕ್ತನಾಗುವುದು ಅಷ್ಟು ಕಷ್ಟವೇ?: ಕಾಂಗ್ರೆಸ್ ನಾಯಕರಿಗೆ ಕುಟುಕಿದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್…!

ನವದೆಹಲಿ: ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ ನಂತರ ಪಾಲುದಾರ ರಾಷ್ಟ್ರಗಳಿಗೆ ತೆರಳಿರುವ ಸರ್ವಪಕ್ಷಗಳ ನಿಯೋಗದ ಸದಸ್ಯರಾಗಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್, ತಮ್ಮ ಪಕ್ಷ ಕಾಂಗ್ರೆಸ್‌ ಸೇರಿದಂತೆ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, “ಭಯೋತ್ಪಾದನೆಯ ವಿರುದ್ಧದ ಕಾರ್ಯಾಚರಣೆಯಲ್ಲಿ, ಜಗತ್ತಿಗೆ ಭಾರತದ ಸಂದೇಶವನ್ನು ಹೇಳುವುದರ ಬಗ್ಗೆಯೂ ಜನರು ರಾಜಕೀಯ ನಿಷ್ಠೆಯನ್ನು ಲೆಕ್ಕ … Continued

ಭಾರತದ 6 ಯುದ್ಧವಿಮಾನ ಹೊಡೆದಿದ್ದೇವೆ ಎಂಬ ಪಾಕ್‌ ಪ್ರಧಾನಿ ಹೇಳಿಕೆ ಶುದ್ಧ ಸುಳ್ಳು ; ಆರಂಭಿಕ ನಷ್ಟ ಸರಿಪಡಿಸಿಕೊಂಡು ಪಾಕ್ ಮೇಲೆ ನಿಖರ ದಾಳಿ-ಸಿಡಿಎಸ್ ಅನಿಲ ಚೌಹಾಣ

ನವದೆಹಲಿ: ಆಪರೇಷನ್ ಸಿಂಧೂರ ನಂತರದ ನಾಲ್ಕು ದಿನಗಳ ಮಿಲಿಟರಿ ಕಾರ್ಯಾಚರಣೆಯಲ್ಲಿ ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ ಚೌಹಾಣ ಸಾರಾಸಗಟಾಗಿ ನಿರಾಕರಿಸಿದ್ದಾರೆ. ಆದರೆ, ಅವರ ಮಾತುಗಳಿಂದ ಅನಿರ್ದಿಷ್ಟ ಸಂಖ್ಯೆಯ ಯುದ್ಧ ವಿಮಾನಗಳನ್ನು ಕಳೆದುಕೊಂಡಿರುವುದನ್ನು ಭಾರತದ ಸೇನೆ ಮೊದಲ ಬಾರಿಗೆ ಒಪ್ಪಿಕೊಂಡಂತಿದೆ. ಭಾರತವು “ಯುದ್ಧತಂತ್ರದ … Continued

ಭಾರತದ ಸಾಮರ್ಥ್ಯ ಬಹಿರಂಗ…| ಪಾಕಿಸ್ತಾನದ ಮುರಿದ್ ಸೇನಾ ನೆಲೆಯ ಭೂಗತ ಸೌಲಭ್ಯಗಳ ಮೇಲೆ ದಾಳಿ ನಡೆಸಿದ್ದನ್ನು ತೋರಿಸಿದ ಉಪಗ್ರಹ ಚಿತ್ರಗಳು…!

ನವದೆಹಲಿ: ಭಾರತದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಮುರಿಯದ್ ವಾಯುನೆಲೆಯ ಮೇಲೆ ನಡೆದ ವಾಯುದಾಳಿಗಳು ಭೂಗತ ಮಿಲಿಟರಿ ಸೌಲಭ್ಯವನ್ನು ಗುರಿಯಾಗಿರಿಸಿಕೊಂಡಿರಬಹುದು ಎಂದು ಹೊಸದಾಗಿ ಬಿಡುಗಡೆಯಾದ ಹೈ-ರೆಸಲ್ಯೂಶನ್ ಉಪಗ್ರಹ ಚಿತ್ರಗಳು ತೋರಿಸಿವೆ. ಬುಧವಾರದ ಹೈ-ರೆಸಲ್ಯೂಶನ್ ಉಪಗ್ರಹ ಚಿತ್ರಗಳು ಪಾಕಿಸ್ತಾನದ ಮುರಿಯದ್ ವಾಯುನೆಲೆಗೆ ವ್ಯಾಪಕ ಹಾನಿಯನ್ನು ಬಹಿರಂಗಪಡಿಸಿವೆ, ಪಾಕಿಸ್ತಾನ ವಾಯುಪಡೆಯ ಭೂಮಿ ಅಡಿಯ ಮಿಲಿಟರಿ ಸೌಲಭ್ಯದಿಂದ … Continued

ಪಾಕಿಸ್ತಾನಕ್ಕೆ ಭಾರತದ ಹೆದರಿಕೆ ; ಚೀನಾ ಜೊತೆ ಸೇರಿ ಪರಮಾಣು ಶಸ್ತ್ರಾಸ್ತ್ರಗಳ ಆಧುನೀಕರಣ : ಅಮೆರಿಕ ಗುಪ್ತಚರ ವರದಿ

ನವದೆಹಲಿ: ಪಾಕಿಸ್ತಾನವು ಭಾರತವನ್ನು “ಅಸ್ತಿತ್ವಕ್ಕೆ ಬೆದರಿಕೆ” ಎಂದು ಪರಿಗಣಿಸುತ್ತದೆ, ಆದರೆ ಭಾರತವು ಚೀನಾವನ್ನು ತನ್ನ “ಪ್ರಾಥಮಿಕ ಎದುರಾಳಿ” ಪರಿಗಣಿಸುತ್ತದೆ ಹಾಗೂ ಪಾಕಿಸ್ತಾನವನ್ನು ನಿರ್ವಹಿಸಬೇಕಾದ “ಭದ್ರತಾ ಸಮಸ್ಯೆ” ಎಂದು ಪರಿಗಣಿಸುತ್ತದೆ ಎಂದು ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆ 2025 ರ ತನ್ನ ವಿಶ್ವಾದ್ಯಂತ ಬೆದರಿಕೆ ಮೌಲ್ಯಮಾಪನ ವರದಿಯಲ್ಲಿ ತಿಳಿಸಿದೆ. 2025ರ ಮೇ 25ರಂದು ಬಿಡುಗಡೆಯಾದ ಅಮೆರಿಕ ಡಿಫೆನ್ಸ್ … Continued

ಪಹಲ್ಗಾಮ್ ದಾಳಿ : ಪ್ರವಾಸಿಗರು ಹೋರಾಡಬೇಕಿತ್ತು, ಮಹಿಳೆಯರು ‘ವೀರತ್ವʼ ತೋರಬೇಕಿತ್ತು ; ನಾಲಿಗೆ ಹರಿಬಿಟ್ಟ ಬಿಜೆಪಿ ಸಂಸದ

ಚಂಡೀಗಢ : ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪ್ರವಾಸಿಗರು ಭಯೋತ್ಪಾದಕರ ವಿರುದ್ಧ ಹೋರಾಡಬೇಕಿತ್ತು ಎಂದು ರಾಜ್ಯಸಭಾ ಸಂಸದ ರಾಮಚಂದರ ಜಂಗ್ರಾ ಶನಿವಾರ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ದಾಳಿಯಲ್ಲಿ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರಲ್ಲಿ “ಸ್ಫೂರ್ತಿಯ ಕೊರತೆ ಇತ್ತು” ಮತ್ತು ಅವರು ‘ವೀರಾಂಗನೆ'(ಯೋಧ ಮಹಿಳೆಯರು)ಯರಂತೆ ವರ್ತಿಸಬೇಕಾಗಿತ್ತು ಎಂದು ಅವರು … Continued