ʼಆಪರೇಷನ್ ಸಿಂಧೂರʼ ನಂತರ ʼಶಕ್ತಿಶಾಲಿ ರಾಷ್ಟ್ರʼಗಳ ಸೂಚ್ಯಂಕದಲ್ಲಿ ಜಾಗತಿಕವಾಗಿ 3ನೇ ಸ್ಥಾನಕ್ಕೆ ಏರಿದ ಭಾರತ…

ನವದೆಹಲಿ: ಏಷ್ಯಾ-ಪೆಸಿಫಿಕ್ ವಲಯದ ಶಕ್ತಿಯನ್ನು ಅಳೆಯುವ ಆಸ್ಟ್ರೇಲಿಯಾ ಮೂಲದ ಪ್ರಖ್ಯಾತ ಥಿಂಕ್ ಟ್ಯಾಂಕ್ ಲೋವಿ ಇನ್ಸ್ಟಿಟ್ಯೂಟ್‌ (Lowy Institute) ತನ್ನ ಇತ್ತೀಚಿನ ‘ಏಷ್ಯಾ ಪವರ್ ಇಂಡೆಕ್ಸ್ 2025’ ವರದಿಯಲ್ಲಿ ಭಾರತವನ್ನು ಮೊದಲ ಬಾರಿಗೆ ‘ಪ್ರಮುಖ ಶಕ್ತಿ’ (Major Power) ಎಂದು ಮಾನ್ಯ ಮಾಡಿದೆ. ಒಟ್ಟಾರೆ ಏಷ್ಯಾದಲ್ಲಿ ಅಮೆರಿಕ ಮತ್ತು ಚೀನಾದ ನಂತರ ಮೂರನೇ ಅತಿ ಹೆಚ್ಚು … Continued

ವೀಡಿಯೊಗಳು..| ಆಪರೇಷನ್ ‘ಸಿಂಧೂರ’ದಲ್ಲಿ ಪಾಕಿಸ್ತಾನದ 100ಕ್ಕೂ ಹೆಚ್ಚು ಸೈನಿಕರು ಸಾವು, 12 ವಿಮಾನ ನಾಶ: ಡಿಜಿಎಂಒ ರಾಜೀವ ಘಾಯ್‌

ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆ (LoC) ಯ ಉದ್ದಕ್ಕೂ ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ 100ಕ್ಕೂ ಹೆಚ್ಚು ಸೈನಿಕರು ಮತ್ತು 12 ವಿಮಾನಗಳು ನಾಶವಾಗಿವೆ ಎಂದು ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (DGMO) ಲೆಫ್ಟಿನೆಂಟ್ ಜನರಲ್ ರಾಜೀವ ಘಾಯಿ ಮಂಗಳವಾರ ಬಹಿರಂಗಪಡಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ಘಾಯಿ ಅವರು … Continued

ವೀಡಿಯೊಗಳು | ನಿಮ್ಮ ನಾಶವಾದ ರನ್‌ ವೇಗಳು ನಿಮಗೆ ʼವಿಜಯʼದಂತೆ ಕಾಣುತ್ತಿವೆಯೇ?”; ಪಾಕ್‌ ಪ್ರಧಾನಿ ಹೇಳಿಕೆಗೆ ಭಾರತ ವ್ಯಂಗ್ಯ

ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ “ಮತ್ತೊಮ್ಮೆ ಭಯೋತ್ಪಾದನೆಯನ್ನು ವೈಭವೀಕರಿಸಿದ್ದಕ್ಕಾಗಿ” ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರದ್ದು “ಅಸಂಬದ್ಧ ನಾಟಕ” ಎಂದು ಭಾರತ ಶನಿವಾರ ಟೀಕಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತ್ಯುತ್ತರ ನೀಡುವ ಹಕ್ಕನ್ನು ಚಲಾಯಿಸುವಾಗ, ಭಾರತದ ರಾಜತಾಂತ್ರಿಕರಾದ ಪೆಟಲ್ ಗಹ್ಲೋಟ್ ಭಯೋತ್ಪಾದನೆ “ಅವರ (ಪಾಕಿಸ್ತಾನದ) ವಿದೇಶಾಂಗ ನೀತಿಯ ಕೇಂದ್ರಬಿಂದುವಾಗಿದೆ” ಎಂದು ಹೇಳಿದರು. ಶುಕ್ರವಾರ ನಡೆದ ವಿಶ್ವಸಂಸ್ಥೆಯ … Continued

ವೀಡಿಯೊ..| ಜೈಶ್ ಒಪ್ಪಿಕೊಂಡ 2 ದಿನಗಳ ನಂತ್ರ ಭಾರತದ ದಾಳಿಯಲ್ಲಿ ತನ್ನ ಭಯೋತ್ಪಾದಕ ಶಿಬಿರವೂ ನಾಶವಾಗಿದೆ ಎಂದು ಒಪ್ಪಿಕೊಂಡ ಲಷ್ಕರ್ ಸಂಘಟನೆ..!

ಇಸ್ಲಾಮಾಬಾದ್: ಬಹಾವಲ್ಪುರ ಶಿಬಿರದ ಜೊತೆ ಜೆಇಎಂ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನ ಪಾಕಿಸ್ತಾನದ ಸಂಪರ್ಕದ ಬಗ್ಗೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಬಹಿರಂಗಪಡಿಸಿದ ಕೆಲವೇ ದಿನಗಳ ನಂತರ ಮತ್ತೊಂದು ಕುಖ್ಯಾತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್‌ ಮತ್ತೊಂದು ಬಾಂಬ್‌ ಸಿಡಿಸಿದ್ದಾನೆ. ಪಾಕಿಸ್ತಾನದ ಮುರಿಡ್ಕೆಯಲ್ಲಿರುವ ಮರ್ಕಜ್ ತೈಬಾದಲ್ಲಿರುವ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಪ್ರಧಾನ ಕಚೇರಿಯನ್ನು … Continued

ವೀಡಿಯೊ..| ಭಾರತದ ದಾಳಿಯಲ್ಲಿ ಸತ್ತ ಭಯೋತ್ಪಾದಕರಿಗೆ ಗೌರವ ಸೂಚಿಸಲು ಆದೇಶಿಸಿದ್ದ ಪಾಕ್‌ ಸೇನಾ ಮುಖ್ಯಸ್ಥ ; ಜೆಇಎಂ ಪ್ರಮುಖನ ಹೇಳಿಕೆಯಿಂದ ಪಾಕಿಸ್ತಾನದ ಸುಳ್ಳಾಟ ಬಯಲು…!

ಭಾರತದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಬಹಾವಲ್ಪುರದ ತನ್ನ ಶಿಬಿರದಲ್ಲಿ ಸಂಭವಿಸಿದ ಹಾನಿಯನ್ನು ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಒಪ್ಪಿಕೊಂಡ ಕೆಲವು ದಿನಗಳ ನಂತರ, ಅದೇ ಭಯೋತ್ಪಾದಕ ಸಂಘಟನೆಯ ಕಮಾಂಡರ್‌ನ ಮತ್ತೊಂದು ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಅದರಲ್ಲಿ ಆತ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಭಾರತದ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ … Continued

ವೀಡಿಯೊ | ಭಾರತದ ದಾಳಿಯಲ್ಲಿ ಪಾಕಿಸ್ತಾನದಲ್ಲಿ ಉಗ್ರ ಅಜರ್ ಕುಟುಂಬ ನಾಶವಾಗಿದ್ದನ್ನು ಒಪ್ಪಿಕೊಂಡ ಜೆಇಎಂ ಸಂಘಟನೆ ಕಮಾಂಡರ್‌

ಭಾರತದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಿಂದಾದ ಹಾನಿಯನ್ನು ದೃಢಪಡಿಸಿದ ಜೈಶ್-ಎ-ಮೊಹಮ್ಮದ್ (ಜೆಇಎಂ) ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ, ಮೇ 7 ರಂದು ಬಹಾವಲ್ಪುರದಲ್ಲಿ ಭಾರತ ನಡೆಸಿದ ನಿಖರ ದಾಳಿಯು ಜೆಎಎಂ ಮುಖ್ಯಸ್ಥ ಮಸೂದ್ ಅಜರ್ ಕುಟುಂಬವನ್ನು ಛಿದ್ರಗೊಳಿಸಿದೆ ಎಂದು ಕಾರ್ಯಕ್ರಮವೊಂದರಲ್ಲಿ ಒಪ್ಪಿಕೊಂಡಿದ್ದಾನೆ. ತಮ್ಮ ಅಡಗುಣತಾಣಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ಹೇಗೆ ಪ್ರವೇಶಿಸಿ ದಾಳಿ ಮಾಡಿದವು … Continued

ಭಾರತ-ಪಾಕ್‌ ಕದನ ವಿರಾಮ ಮಾತುಕತೆಯಲ್ಲಿ 3ನೇ ದೇಶದ ಮಧ್ಯಸ್ಥಿಕೆ ಇರಲಿಲ್ಲ : ಟ್ರಂಪ್ ಬೊಗಳೆ ಠುಸ್‌ ಮಾಡಿದ ಪಾಕ್‌ ಸಚಿವ…!

ನವದೆಹಲಿ: ಅಪರೂಪದ ಮತ್ತು ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ, ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಉಭಯ ದೇಶಗಳ ನಡುವಿನ ವಿವಾದಗಳಲ್ಲಿ ಭಾರತ ಎಂದಿಗೂ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ವಹಿಸುವುದನ್ನು ಸ್ವೀಕರಿಸಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇದು ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ತಮ್ಮನ್ನು ಆಹ್ವಾನಿಸಲಾಗಿದೆ ಎಂಬ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ … Continued

ವೀಡಿಯೊ..| T20 ಏಷ್ಯಾ ಕಪ್ : ನಾವು ಪಹಲ್ಗಾಂ ಮೃತರ ಕುಟುಂಬದ ಜೊತೆಗಿದ್ದೇವೆ ; ಪಾಕ್‌ ವಿರುದ್ಧದ ಭಾರತದ ಗೆಲುವು ಸೇನೆಗೆ ಅರ್ಪಣೆ- ಸೂರ್ಯಕುಮಾರ

ದುಬೈ: ದುಬೈನಲ್ಲಿ ನಡೆಯುತ್ತಿರುವ 2025 ರ T20 ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ತಂಡದ ಏಳು ವಿಕೆಟ್‌ಗಳ ಗೆದ್ದ ನಂತರ ಮಾತನಾಡಿದ ಬಾರತದ ತಂಡದ ನಾಯಕ ಸೂರ್ಯಕುಮಾರ ಯಾದವ್‌ ಅವರು ಈ ಗೆಲುವನ್ನು ಭಾರತದ ಸೇನಾ ಪಡೆಗಳಿಗೆ ಅರ್ಪಿಸಿದ್ದಾರೆ ಹಾಗೂ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸಾವಿಗೀಡಾದ ಕುಟುಂಬಗಳ ಜೊತೆ ನಾವು ನಿಲ್ಲುತ್ತೇವೆ ಎಂದು ಹೇಳಿದ್ದಾರೆ. … Continued

50ಕ್ಕಿಂತ ಕಡಿಮೆ ಶಸ್ತ್ರಾಸ್ತ್ರ ಬಳಸಿ ಪಾಕಿಸ್ತಾನ ಮಂಡಿಯೂರುವಂತೆ ಮಾಡಿದೆವು; ಆಪರೇಶನ್‌ ಸಿಂಧೂರ ಬಗ್ಗೆ ಭಾರತದ ವಾಯುಪಡೆಯ ಉಪಮುಖ್ಯಸ್ಥ

ನವದೆಹಲಿ : ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಮಂಡಿಯೂರುವಂತೆ ಮಾಡಲು ಮತ್ತು ಕದನ ವಿರಾಮಕ್ಕೆ ಒಪ್ಪಿಕೊಳ್ಳುವಂತೆ ಮಾಡಲುಸಮಯದಲ್ಲಿ ಭಾರತೀಯ ವಾಯುಪಡೆ (ಐಎಎಫ್) 50 ಕ್ಕಿಂತ ಕಡಿಮೆ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಹಾರಿಸಿತು ಎಂದು ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥ ನರ್ಮದೇಶ್ವರ ತಿವಾರಿ ಶನಿವಾರ ಹೇಳಿದ್ದಾರೆ. ಎನ್‌ಡಿಟಿವಿ ರಕ್ಷಣಾ ಶೃಂಗಸಭೆಯಲ್ಲಿ ಮಾತನಾಡಿದ ಏರ್ ಮಾರ್ಷಲ್ ನರ್ಮದೇಶ್ವರ … Continued

ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡದ್ದಕ್ಕೆ ಭಾರತದ ಸರಕುಗಳ ಮೇಲೆ 50% ಸುಂಕ: ಜೆಫರೀಸ್

ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಕಂಪನಿ ಜೆಫರೀಸ್ ವರದಿಯ ಪ್ರಕಾರ, ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡದ ಕಾರಣ ಅಮೆರಿಕ ಭಾರತದ ಮೇಲೆ ಶೇ. 50 ರಷ್ಟು ಹೆಚ್ಚಿನ ಸುಂಕಗಳನ್ನು ವಿಧಿಸಿದೆ. ಟ್ರಂಪ್ ಅವರ “ವೈಯಕ್ತಿಕ ದ್ವೇಷ”ದ “ಪರಿಣಾಮ”ವಾಗಿದೆ. ಮತ್ತು ದಕ್ಷಿಣ ಏಷ್ಯಾದ ಎರಡು … Continued