ಶಿರಸಿ : ಬೆಣಗಿಯಲ್ಲಿ ಜೇನು ಹಬ್ಬ ; ಪ್ರಾತ್ಯಕ್ಷಿಕೆ-ಸಂಭ್ರಮಪಟ್ಟ ಮಕ್ಕಳು

ಶಿರಸಿ : ತಾಲೂಕಿನ ಬೆಣಗಿಯಲ್ಲಿ ಶನಿವಾರ ಜೇನು ಹಬ್ಬ ಕಾರ್ಯಕ್ರಮ ನಡೆಯಿತು. ಇದರಲ್ಲಿ ಶಾಲಾ ಮಕ್ಕಳು ಪಾಲ್ಗೊಂಡು ಅವರೇ ಜೇನು ಹಬ್ಬ ಉದ್ಘಾಟಿಸಿ ಅದರಲ್ಲಿ ಪಾಲ್ಗೊಂಡು ಸಂಭ್ರಮಪಟ್ಟರು. ಪ್ರಕೃತಿ ಸಂಸ್ಥೆ, ಪೇವಾರ್ಡ್‌ ಸಂಸ್ಥೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡೇಬೈಲ್ ಶಾಲೆ, ವನಗಿರಿ ಇಕೋ ಕ್ಲಬ್‌, ರಾಷ್ಟ್ರೀಯ ಹಸಿರು ಪಡೆ ಸಹಯೋಗದಲ್ಲಿ ಬೆಣಗಿಯ ನಾಗರಾಜ ಹೆಗಡೆ … Continued

ಶಿರಸಿ ರೋಟರಿಗೆ 8 ಉತ್ಕೃಷ್ಟ ಪ್ರಶಸ್ತಿಗಳು

ಶಿರಸಿ: 2025-26ನೇ ಸಾಲಿಗೆ ಶಿರಸಿ ರೋಟರಿಯ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಖ್ಯಾತ ಪೆಥಾಲಾಜಿಸ್ಟ್ ಮತ್ತು ರಕ್ತನಿಧಿ ಅಧಿಕಾರಿ ಡಾ. ಸುಮನ್ ಹೆಗಡೆಗೆ ಲಭಿಸಿದ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ ಸೇರಿದಂತೆ ಒಟ್ಟೂ 8 ಉತ್ಕೃಷ್ಟ ಪ್ರಶಸ್ತಿಗಳನ್ನು ಶಿರಸಿ ರೋಟರಿ ಬಾಚಿಕೊಂಡಿದೆ. ಇದು ಶಿರಸಿ ರೋಟರಿಯ ಎಲ್ಲಾ ಸದಸ್ಯರ ಅಮೂಲ್ಯ ಸಹಕಾರ, ಮಾರ್ಗದರ್ಶನ ಮತ್ತು ಸೇವಾಭಾವನೆಯಿಂದ … Continued

ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಶಿರಸಿ: “ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಎಂದು ಹೇಳಿಕೊಂಡು ಅಡ್ಡದಾರಿಯಲ್ಲಿ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ನಕಲಿ ಪತ್ರಕರ್ತರನ್ನು ಹೊರಹಾಕಿ, ಸಂಘವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿರುವುದು ಇಂದಿನ ಅಗತ್ಯ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ. ​ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಟಿಆರ್‌ಸಿ ಸಭಾಭವನದಲ್ಲಿ ಭಾನುವಾರ ನಡೆದ ಉತ್ತರ ಕನ್ನಡ ಜಿಲ್ಲಾ … Continued

ಶಿರಸಿಯಲ್ಲಿ ಜ.22ರಿಂದ ಐದು ದಿನಗಳ ರೋಟರಿ ಆಹಾರ ಮೇಳ-ಆಲೆಮನೆ ಉತ್ಸವ

ಶಿರಸಿ : ನಾಲ್ಕನೇ ವರ್ಷದ ರೋಟರಿ ಆಹಾರ ಮೇಳ ಹಾಗೂ ಆಲೆಮನೆ ಉತ್ಸವವು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ವಿಕಾಸಾಶ್ರಮ ಮೈದಾನದಲ್ಲಿ ಜ.೨೨ರಿಂದ ೨೬ರವರೆಗೆ ನಡೆಯಲಿದೆ. ರೋಟರಿ ಸೆಂಟರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀನಿವಾಸ ನಾಯ್ಕ ಹಾಗೂ ಸಂಚಾಲಕ ಡಾ.ದಿನೇಶ ಹೆಗಡೆ ಮತ್ತಿತರರು ಈ ಬಗ್ಗೆ ಮಾಹಿತಿ ನೀಡಿದರು. ಆಲೆಮನೆ ಉತ್ಸವವು … Continued

ಬೇಡ್ತಿ ಅಘನಾಶಿನಿ ನದಿ ತಿರುವು ಯೋಜನೆಗೆ ಉತ್ತರ ಕನ್ನಡ ಜಿಲ್ಲೆ ಜನಪ್ರತಿನಿಧಿಗಳ ಒಕ್ಕೊರಲ ವಿರೋಧ

 ಶಿರಸಿ: “ಉತ್ತರ ಕನ್ನಡ ಜಿಲ್ಲೆಗೆ ಬೇಡವಾದ ಹಾಗೂ ಪರಿಸರಕ್ಕೆ ಮಾರಕವಾಗುವ ಯಾವುದೇ ಯೋಜನೆಗೂ ನಮ್ಮ ಸಂಪೂರ್ಣ ವಿರೋಧವಿದೆ.ಜಿಲ್ಲೆಯ ಅಸ್ತಿತ್ವಕ್ಕೆ ಧಕ್ಕೆ ತರುವ ಯೋಜನೆಗಳನ್ನು ಒಗ್ಗಟ್ಟಿನಿಂದ ವಿರೋಧಿಸಬೇಕು. ಈ ಯೋಜನೆಗಳನ್ನು ಕೈಬಿಡಬೇಕು ಎಂಬುದು ನಮ್ಮ ಆಗ್ರಹ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ನಗರದ ಎಂ.ಇ.ಎಸ್. ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ … Continued

ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ ; ಇದರ ವಿರುದ್ಧದ ಹೋರಾಟದಲ್ಲಿ ಜನಪ್ರತಿನಿಧಿಗಳೇ ಮುಂದೆ ನಿಲ್ಲಬೇಕು : ಸ್ವರ್ಣವಲ್ಲೀ ಶ್ರೀಗಳು

ಶಿರಸಿ: ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರದಲ್ಲಿ ಹರಿಯುವ ಬೇಡ್ತಿ ಮತ್ತು ಅಘನಾಶಿನಿ ನದಿಗಳ ತಿರುವು ಯೋಜನೆ ಸಂಪೂರ್ಣ ಅವೈಜ್ಞಾನಿಕ ಮತ್ತು ಅತಾರ್ಕಿಕವಾಗಿದೆ. ಪಶ್ಚಿಮ ಘಟ್ಟಕ್ಕೆ ಹಾಗೂ ಇಲ್ಲಿನ ಜನಜೀವನಕ್ಕೆ ಶಾಶ್ವತ ಹಾನಿ ಮಾಡುವ ಇಂತಹ ಯೋಜನೆಗಳನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಈ ಯೋಜನೆ ಸಂಪೂರ್ಣವಿನಾಶಕಾರಿಯಾಗಿದ್ದರಿಂದ ಇದರ ವಿರುದ್ಧದ ಹೋರಾಟದಲ್ಲಿ ಜನಪ್ರತಿನಿಧಿಗಳೇ ಮುಂದೆ ನಿಲ್ಲಬೇಕು ಎಂದು ಸೋಂದಾ … Continued

ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ : ಶಿರಸಿ ಸಮಾವೇಶದ 10 ನಿರ್ಣಯಗಳು…

ಶಿರಸಿ: ಪಶ್ಚಿಮ ಘಟ್ಟದ ಜೀವನಾಡಿಗಳಾದ ಬೇಡ್ತಿ, ಅಘನಾಶಿನಿ ಮತ್ತು ಶರಾವತಿ ಕಣಿವೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿಹತ್ತು ಪ್ರಮುಖ ನಿರ್ಣಯಗಳನ್ನು ಒಮ್ಮತದಿಂದ ಅಂಗೀಕರಿಸಿದೆ. * ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿ ಬೇಡ್ತಿ-ಅಘನಾಶಿನಿ ನದಿ ತಿರುವು ಹಾಗೂ ಶರಾವತಿ ಪಂಪ್ ಸ್ಟೋರೇಜ್ ಸೇರಿದಂತೆ ಯಾವುದೇ ಬೃಹತ್ ಜಲವಿದ್ಯುತ್ ಯೋಜನೆಗಳನ್ನು ಜಾರಿಗೊಳಿಸಬಾರದು. ಈ ಸಂದರ್ಭದಲ್ಲಿ ಎತ್ತಿನಹೊಳೆ ನದಿ ತಿರುವು ಯೋಜನೆಯ ವಿಫಲತೆಯನ್ನು … Continued

ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ ; ಜನರು ಚುನಾವಣೆ ಬಹಿಷ್ಕರಿಸುವ ಕಾಲವೂ ಬರಬಹುದು- ಸರ್ಕಾರಕ್ಕೆ ಸ್ವರ್ಣವಲ್ಲೀ ಶ್ರೀಗಳ ಎಚ್ಚರಿಕೆ

ಶಿರಸಿ: ನದಿಗಳ ರಕ್ಷಣೆಯ ಈ ಹೋರಾಟದಲ್ಲಿ ಉತ್ತರ ಜಿಲ್ಲೆಯ ಜನರಲ್ಲಿ ಒಗ್ಗಟ್ಟು ಅನಿವಾರ್ಯ. ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸದಿದ್ದರೆ, ಅವೈಜ್ಞಾನಿಕವಾಗಿ ಜಾರಿಗೆ ತರಲು ಉದ್ದೇಶಿಸಿರುವ ಅಘನಾಶಿನಿ ಮತ್ತು ಬೇಡ್ತಿ ನದಿ ತಿರುವು ಯೋಜನೆಯನ್ನು ಕೈಬಿಡದಿದ್ದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ. ಒಂದು ವೇಳೆ ರಾಜಕಾರಣಿಗಳು ಪಕ್ಷಾತೀತವಾಗಿ ಸಂಘಟಿತರಾಗದಿದ್ದರೆ, ಮುಂಬರುವ ದಿನಗಳಲ್ಲಿ ಸಾಮೂಹಿಕವಾಗಿ ಚುನಾವಣೆಗಳನ್ನು ಬಹಿಷ್ಕರಿಸುವ ಕಾಲ ಬರಬಹುದು ಎಂದು … Continued

ಬೇಡ್ತಿ, ಅಘನಾಶಿನಿ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಭಾನುವಾರ (ಜ.11) ಬೃಹತ್‌ ಸಮಾವೇಶ

ಶಿರಸಿ : ಪಶ್ಚಿಮಘಟ್ಟ ಪ್ರದೇಶದ ಪ್ರಮುಖ ನದಿಗಳಾದ ಬೇಡ್ತಿ, ಅಘನಾಶಿನಿ ನದಿಗಳ ಜೋಡಣೆ ಹಾಗೂ ಶರವಾತಿ ಭೂಗತ ಜಲವಿದ್ಯುತ್‌ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ಸ್ವರ್ಣವಲ್ಲೀ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಎಂಇಎಸ್ ಕಾಲೇಜು ಮೈದಾನದಲ್ಲಿ ಭಾನುವಾರ (ಜನವರಿ11) ಮಧ್ಯಾಹ್ನ 2 ಗಂಟೆಯಿಂದ ನಡೆಯುವ ಬೃಹತ್ ಜನಸಮಾವೇಶಕ್ಕೆ … Continued

ನದಿಗಳು ನಮ್ಮ ಜೀವ ವಿಮೆ : ನದಿ ಜೋಡಣೆ ಹೆಸರಿನಲ್ಲಿ ಇವನ್ನು ಒತ್ತೆ ಇಡಲು ಬಿಡೆವು

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಥಳೀಯ ಜನರ ವಿರುದ್ಧ ನಡೆಯಲು ಸಂವಿಧಾನದಲ್ಲಿ ಅವಕಾಶವಿಲ್ಲದಿದ್ದರೂ ಶತಾಯಗತಾಯ ಬೇಡ್ತಿ–ವರದಾ ನದಿಜೋಡಣೆ ಹಾಗೂ ಅಘನಾಶಿನೀ–ವೇದಾವತೀ ನದಿ ಜೋಡಣೆಗೆ ಕಂಕಣ ತೊಟ್ಟವರಂತೆಯೇ ಮುನ್ನುಗ್ಗುತ್ತಿರುವುದನ್ನು ತಡೆಯುವ ಹೋರಾಟಕ್ಕೆ ಸರ್ವ ಪ್ರಯತ್ನವನ್ನೂ ಮಾಡುವುದು ಅತ್ಯವಶ್ಯಕವಾದ ಕಾರ್ಯವಾಗಬೇಕಾಗಿದೆ. ಅದರ ತೀರ್ಮಾನ ಜನವರಿ 11ರಂದು ನಡೆಯಲಿರುವ ಬೃಹತ್ ಸಮಾವೇಶ.   ನದಿಯ ಹರಿವು ಮೇಲ್ನೋಟಕ್ಕೆ ಕಾಣುವುದೆಷ್ಟೋ ಅದರ … Continued