ಶಿರಸಿ : ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಪಥ ಸಂಚಿಕೆ ಬಿಡುಗಡೆ

ಶಿರಸಿ: ಉತ್ತರಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ 1974 ರಿಂದ ನಡೆದು ಬಂದ ದಾರಿಯ ಸಮಗ್ರವಾದ ಮಾಹಿತಿ ಇರುವ ಸುವರ್ಣ ಪಥ ಸ್ಮರಣ ಸಂಚಿಕೆಯನ್ನು ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು. ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಹಾಗೂ ಸ್ಕೊಡವೇಸ್ ಮುಖ್ಯ ಕಾರ್ಯನಿರ್ವಾಹಕರಾದ ಡಾ.ವೆಂಕಟೇಶ ನಾಯ್ಕ ಅವರು ಸುವರ್ಣ ಪಥ ಸ್ಮರಣ ಸಂಚಿಕೆಯನ್ನು … Continued

ನನ್ನ ಪುಸ್ತಕವು ಆರೋಗ್ಯದ ಎಲ್ಲ ಆಯಾಮಗಳ ಮೂಲಕ ದೀರ್ಘಕಾಲ ಉತ್ತಮವಾಗಿ ಬದುಕುವ ಬಗ್ಗೆ ಹೇಳುತ್ತದೆ ; ಡಾ.ರಾಮಚಂದ್ರ ಹೆಗಡೆ ಭಂಡೀಮನೆ

ವೈಯಕ್ತಿಕ ಅನುಭವ, ವೃತ್ತಿಜೀವನದ ಅನುಭವ ಮತ್ತು ನಾವು ನಿವೃತ್ತಿಯ ನಂತರದ ಬದುಕನ್ನು ಹೇಗೆ ಅನುಸರಿಸುತ್ತಿದ್ದೇವೆ ಎಂಬುದರ ಬಗ್ಗೆ ಹೆಚ್ಚುತ್ತಿರುವ ಕಾಳಜಿಯ ಸಮ್ಮಿಶ್ರಣದಿಂದ ಈ ಪುಸ್ತಕ ಬಂದಿದೆ. ಅನೇಕರು ನಿವೃತ್ತಿ ನಂತರ ಅನಿರೀಕ್ಷಿತ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕ್ಷೀಣಿಸುತ್ತಿರುವ ಆರೋಗ್ಯ, ಗೊಂದಲ, ಧ್ಯೇಯದ ಕೊರತೆ ಹಾಗೂ ನಿವೃತ್ತಿ ನಂತರ ಇನ್ನು ನಮ್ಮದೇನಿಲ್ಲ, ನಮ್ಮಿಂದ ಏನೂ ಸಾಧ್ಯವಿಲ್ಲ ಅಂದುಕೊಂಡು ತಮ್ಮ … Continued

ಶಿರಸಿ : ಕೆಡಿಸಿಸಿ ಬ್ಯಾಂಕ್‌ ಚುನಾವಣೆ ದಿನಾಂಕ ಘೋಷಣೆ

ಶಿರಸಿ: ರಾಜ್ಯದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಕೆಡಿಸಿಸಿ (KDCC) ಬ್ಯಾಂಕ್‌ನ ನಿರ್ದೇಶಕರ ಮಂಡಳಿ ಚುನಾವಣೆಯ ವೇಳಾಪಟ್ಟಿಯನ್ನು ಇಂದು ಗುರುವಾರ (ಸೆಪ್ಟೆಂಬರ್‌ 25) ಪ್ರಕಟಿಸಲಾಗಿದೆ. ಚುನಾವಣಾ ಅಧಿಕಾರಿ ಹಾಗೂ ಶಿರಸಿ ಉಪವಿಭಾಗಾಧಿಕಾರಿ (ಎಸಿ) ಕಾವ್ಯರಾಣಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಅಕ್ಟೋಬರ್ 25 ರಂದು ಮತದಾನ ನಡೆಯಲಿದೆ. ಚುನಾವಣೆ ಅಭ್ಯರ್ಥಿಗಳಿಗೆ ಅಕ್ಟೋಬರ್ 13 ರಿಂದ 17ರ … Continued

ಶಿರಸಿ : ಮನೆಯಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಯುವತಿ ಸಾವು

ಶಿರಸಿ : ಎಲ್‌ಪಿಜಿ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿ ಮಲಗಿದ್ದ ಯುವತಿಯೊಬ್ಬಳು ಸುಟ್ಟು ಕರಕಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುರ್ಕಿನಕೊಡ್ಡ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಶಿರಸಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದ ರಂಜನಾ ದೇವಾಡಿಗ ( 21 )ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ನಾಗಪ್ಪ ಹಾಗೂ ನಾಗವೇಣಿ ದೇವಾಡಿಗ … Continued

ಯಾವುದೇ ವಸ್ತು- ಸಂಗತಿ ವರ್ತಮಾನಕ್ಕೆ ಅನ್ವಯವಾದರೆ ಅದು ಪ್ರಸ್ತುತವಾಗುತ್ತದೆ ; ʼಪುರುಷ ಸೂಕ್ತ ಕೃತಿʼ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಾರಾಯಣ ಯಾಜಿ

ಶಿರಸಿ : ಯಾವುದೇ ಕೃತಿಗಳು, ವಸ್ತು- ಸಂಗತಿಗಳು ವರ್ತಮಾನಕ್ಕೆ ಅನ್ವಯವಾಗುವಂತಿದ್ದರೆ ಅದು ಎಲ್ಲ ಕಾಲಕ್ಕೂ ಪ್ರಸ್ತುತವಾಗುತ್ತವೆ. ರಘುಪತಿ ಹೆಗಡೆ ಬೆಳ್ಳಿಕೇರಿಯವರ ಕೃತಿಯಾದ “ಪುರುಷ ಸೂಕ್ತ” ಕೃತಿ ಪ್ರಸ್ತುತ ಕಾಲದಲ್ಲಿ ಅಗತ್ಯವಾಗಿ ತಿಳಿದುಕೊಳ್ಳಲೇ ಬೇಕಾದ ವೈಜ್ಞಾನಿಕ ವಿಷಯಗಳನ್ನು ಒಳಗೊಂಡ ಒಂದು ಕೃತಿಯಾಗಿದೆ. ಇದಕ್ಕೆ ಕಾರಣ ಅವರು ಆರಿಸಿಕೊಂಡಿರುವ ವಸ್ತು ಎಂದು ಲೇಖಕ, ಖ್ಯಾತ ತಾಳಮದ್ದಲೆ ಅರ್ಥಧಾರಿ ನಾರಾಯಣ … Continued

ವೀಡಿಯೊ..| ಶಿರಸಿ ; ಬಾವಿಗೆ ಬಿದ್ದ ಚಿರತೆಯ ರಕ್ಷಣೆ

ಶಿರಸಿ :ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೆರೆಕೊಪ್ಪದಲ್ಲಿ ತಡರಾತ್ರಿ ಬಾವಿಗೆ ಬಿದ್ದಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆಯವರು ದೀರ್ಘ ಕಾರ್ಯಾಚರಣೆಯ ನಂತರ ರಕ್ಷಿಸಿದ್ದಾರೆ. ಸ್ಥಳೀಯ ಸುರೇಶ ಹೆಗಡೆ ಎಂಬವರ ಮನೆಯ ಬಾವಿಗೆ ಬಿದ್ದಿದ್ದ ಚಿರತೆ ಕಂಡ ಮನೆಯವರು ಒಂದು ಕ್ಷಣ ಗಾಬರಿಗೊಂಡಿದ್ದರು. ನಂತರ ಈ ವಿಷಯವನ್ನು ಅರಣ್ಯ ಇಲಾಖೆಯವರ ಗಮನಕ್ಕೆ … Continued

ʼಪುರುಷ ಸೂಕ್ತʼ ಮಂತ್ರವು ವಿಜ್ಞಾನದ ʼಸೃಷ್ಟಿ ತತ್ವʼದ ಬಗ್ಗೆ ಹೇಳುತ್ತವೆ ; ಇದರ ಮಂತ್ರಗಳಲ್ಲಿದೆ ಖಗೋಳ ಭೌತ ವಿಜ್ಞಾನ : ನನ್ನ ಪುಸ್ತಕದಲ್ಲಿ ಇದರ ಬಗ್ಗೆ ಹೇಳಿದ್ದೇನೆ | ಆರ್‌.ಎಸ್‌.ಹೆಗಡೆ ಬೆಳ್ಳೆಕೇರಿ

ರಘುಪತಿ ಯಾಜಿ ಪುರುಷ ಸೂಕ್ತದ ಹಲವು ಮಂತ್ರಗಳು ವಿಶ್ವದ ಎಲ್ಲ ಭೌತಿಕ ಚೈತನ್ಯದ ಸೃಷ್ಟಿಗಳ ಕುರಿತಾಗಿ ವರ್ಣಿಸುತ್ತವೆ. ನಂತರ ಭೂಮಿಯ ಮೇಲಿನ ರಸೋತ್ಪತ್ತಿ -ಜೀವೋತ್ಪತ್ತಿಗಳ ವರ್ಣನೆ, ಉಪಾಸನೆ ಹಾಗೂ ಕರ್ಮಗಳ ಬಗ್ಗೆ ವಿವರಿಸುತ್ತವೆ. ಅಂತಿಮವಾಗಿ ‘ಮೋಕ್ಷ’ ಮಾರ್ಗದ ಬಗ್ಗೆ ಹೇಳುತ್ತದೆ. ಈ ಸೂಕ್ತದ ಮಂತ್ರಗಳಲ್ಲಿರುವ ವರ್ಣನೆಗಳು ಇಂದಿನ ಖಗೋಳ ಭೌತ ವಿಜ್ಞಾನ ಹಾಗೂ ಜೀವ ವಿಜ್ಞಾನ … Continued

ಶಿರಸಿ : ಬೆಣ್ಣೆಹೊಳೆ ಜಲಪಾತಕ್ಕೆ ಹೋಗಿದ್ದ ಓರ್ವ ನಾಪತ್ತೆ

ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಡಲ ಸಮೀಪದ ಬೆಣ್ಣೆಹೊಳೆ ಜಲಪಾತ ನೋಡಲು ಭಾನುವಾರ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ. ನಾಪತ್ತೆಯಾಗಿದ್ದಿನ್ನೋರ್ವ ವಿದ್ಯಾರ್ಥಿಯನ್ನು ಶೋಧ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಲಾಗಿದೆ ಎಂದು ಹೇಳಲಾಗಿದೆ. ನಗರದ ಅರಣ್ಯ ಪದವಿ ಕಾಲೇಜಿನ ರಾಹುಲ್ ಎಂಬಾತ ನೀರಿನಲ್ಲಿ ಕಣ್ಮರೆಯಾದ ವಿದ್ಯಾರ್ಥಿ. ಎನ್ನಲಾಗಿದೆ. … Continued

ಶಿರಸಿ : ಏರ್‌ ಗನ್‌ ನಿಂದ ಗುಂಡು ಹಾರಿ ಬಾಲಕ ಸಾವು

ಶಿರಸಿ: ಎರಡು ಮಕ್ಕಳು ಆಟವಾಡುತ್ತಿದ್ದಾಗ ಆಕಸ್ಮಾತ್‌ ಆಗಿ ಏರ್ ಗನ್ ಗುಂಡು ಹಾರಿ ಒಂಬತ್ತು ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಟ್ಟ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚಿಪಗಿ ಸಮೀಪದ ಸೋಮನಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ ಎಂದು ವರದಿಯಾಗಿದೆ. ಸೋಮನಳ್ಳಿಯ ರಾಘವೇಂದ್ರ ಹೆಗಡೆ ಎಂಬವರ ಮನೆಯಲ್ಲಿ ಕೆಲಸ ಮಾಡಲು ಬಸಪ್ಪ ಉಂಡಿಯರ್ ಕುಟುಂಬ … Continued

ಶಿರಸಿ : ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಶಿರಸಿ: ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಸಳೂರು ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ವಿದ್ಯಾರ್ಥಿನಿಯ ಮೃತ ದೇಹ ಇಸಳೂರು ಕೆರೆಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಮೃತ ವಿದ್ಯಾರ್ಥಿನಿಯನ್ನು ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸ್ನೇಹಾ (17) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು … Continued